ಯಾದಗಿರಿ : ಮಹಾ ಶಿವರಾತ್ರಿ ಹಬ್ಬದ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ರಥೋತ್ಸವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲಕ್ಕೆ ವಿಶೇಷ ಬಸ್ಗಳನ್ನು ಕಾರ್ಯಾಚರಣೆ ವಿಶೇಷ ಬಸ್ ವಾಹನಗಳು ಸಂಚರಿಸಲಿವೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.
2025ರ ಫೆಬ್ರವರಿ 22 ರಿಂದ 28ರ ವರೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ವಿಭಾಗದ ಯಾದಗಿರಿದಿಂದ ಮಧ್ಯಾಹ್ನ 3 ಗಂಟೆಗೆ ಶಹಾಪೂರದಿಂದ ಸಂಜೆ 4 ಗಂಟೆಗೆ ಸುರಪೂರದಿಂದ ಸಂಜೆ 4 ಗಂಟೆಗೆ ಗುರುಮಠಕಲ್ದಿಂದ 3 ಗಂಟೆಗೆ ವಿಶೇಷ (ಹೆಚ್ಚುವರಿ) ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ, ವಿಭಾಗದ ವ್ಯಾಪ್ತಿಯಲ್ಲಿನ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ಈ ವಿಶೇಷ ಬಸ್ ಕಾರ್ಯಾಚರಣೆಯ ಸದುಪಯೋಗ ಪಡೆದುಕೊಳ್ಳಬೇಕು.
ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ತಮ್ಮ ಸಾರಿಗೆ ಸೌಕರ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ಯಾದಗಿರಿ ದೂ.ಸಂ.7760992463, ಘಟಕ ವ್ಯವಸ್ಥಾಪಕರು ಶಹಾಪೂರ ದೂ.ಸಂ.7760992464, ಘಟಕ ವ್ಯವಸ್ಥಾಪಕರು ಸುರಪೂರ ದೂ. ಸಂ.7760992467, ಘಟಕ ವ್ಯವಸ್ಥಾಪಕರು ಗುರುಮಠಕಲ್ ದೂ.ಸಂ.7760992467ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment