ads

Search This Blog

Saturday, 22 February 2025

ಕಷ್ಟದ ಜೀವನ ಶಿಸ್ತಿನ ಪಾಠಶಾಲೆ: ಶ್ರೀ ರಂಭಾಪುರಿ ಜಗದ್ಗುರುಗಳು



ಸವಣೂರ : ನೋವನ್ನು ನುಂಗಿ ಜೀವನದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಕಷ್ಟದ ಜೀವನ ಶಿಸ್ತಿನ ಪಾಠಶಾಲೆಯಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕು ಜೊತೆಗೆ ಸಮರ್ಥ ಮಾರ್ಗದರ್ಶನ ನೀಡುವ ಗುರು ಇದ್ದಾಗ ಜೀವನ ಸಾರ್ಥಕ ಹೊಂದುತ್ತದೆ. ಡಾ.ಗುರುಪಾದಯ್ಯ ಸಾಲಿಮಠರು ಗುರು ಸೇವಾ ನಿಷ್ಠರಾಗಿ ಪೀಠ-ಮಠಗಳು ನೀಡುವ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವುದು ಅವರ ಧರ್ಮಾಭಿಮಾನಕ್ಕೆ ಕಾರಣವಾಗಿದೆ. ವೀರತಪಸ್ವಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ಭಾಗದಲ್ಲಿ ಮಾಡಿದ ಧರ್ಮ ಜಾಗೃತಿಯನ್ನು ಮರೆಯುವಂತಿಲ್ಲ. ವೀರಶೈವರಾದವರು ಇಷ್ಟಲಿಂಗ ಧಾರಿಗಳಾಗಿ ಪ್ರತಿ ದಿನ ಕನಿಷ್ಠ ೫ ನಿಮಿಷವಾದರೂ ಪೂಜೆಗೈದರೆ ಜನ್ಮ ಪಾವನಗೊಳ್ಳುತ್ತದೆ. ಇಂದು ಧರ್ಮದ ದಾರಿಯನ್ನು ತಪ್ಪಿಸಿ ಜನರನ್ನು ಧರ್ಮದಿಂದ ದೂರವಿರಿಸುವ ಕಾರ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂಥವರಿAದ ಭಕ್ತ ಶ್ರದ್ಧಾಳುಗಳು ಎಚ್ಚರಿಕೆಯಿಂದ ಇರಬೇಕೆಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರುವನ್ನು ನಂಬಿ ನಡೆದವರ ಬಾಳು ಉತ್ಕೃಷ್ಟವಾಗಿ ಬೆಳಗುತ್ತದೆ ಎಂದರು. ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರು ಕರುಣೆಯಿದ್ದಾಗ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಬೆಳೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಗುಣ ಹೊಂದಿದಾಗ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಲ್ಲಾಪುರದ ಡಾ. ಗುರುಮಹಾಂತಯ್ಯ ಆರಾಧ್ಯಮಠರು ರಚಿಸಿದ “ಗೀತ ಮಂದಾರ” ಕೃತಿ ಹಾಗೂ ದಾವಣಗೆರೆ ವೀರೇಶ ಪುರಾಣಿಕರು ತಮ್ಮ ಕೈ ಬರಹದಿಂದ ರಚಿಸಿದ ಶ್ರೀ ರಂಭಾಪುರಿ ಜಗದ್ಗುರುಗಳ ಭಾವಚಿತ್ರ ಬಿಡುಗಡೆಗೊಂಡವು. ಸಮಾರಂಭದಲ್ಲಿ ಡಾ.ರಾಜಗುರು ಗುರುಸ್ವಾಮಿ ಕಲಕೇರಿ, ಗಂಗಾಧರಸ್ವಾಮಿ ಸಾಲಿಮಠ, ಶಿವಮೂರ್ತಯ್ಯ ಚರಂತಿಮಠ, ಶಿವಯ್ಯ ನಾಲ್ವತ್ವಾಡಮಠ, ವೀರಭದ್ರಯ್ಯ ಮಠದ, ರಾಜಶೇಖರ ಹಾಲೇವಾಡಿಮಠ, ಮಂಜುನಾಥ ಗಾಣಿಗೇರ, ಮಲ್ಲಾರೆಪ್ಪ ತಳ್ಳಿಹಳ್ಳಿ, ವೀರಯ್ಯಶಾಸ್ತಿç ಹಿರೇಮಠ ಉಪಸ್ಥಿತರಿದ್ದರು. ಡಾ.ಗುರುಪಾದಯ್ಯ ಸಾಲಿಮಠರು ಸ್ವಾಗತಿಸಿದರು. ಶಿವಪ್ರಕಾಶ ಬಳಿಗಾರ ನಿರೂಪಿಸಿದರು. ವೀರಯ್ಯ ಸಾಲಿಮಠರು ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಿತು.



 

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...