ads

Search This Blog

Monday, 24 February 2025

ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ - ಮುಖ್ಯಮಂತ್ರಿ ಸಿದ್ದರಾಮಯ್ಯ


 ಬೆಂಗಳೂರು : ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದ್ದು, ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯ ಇರುವವಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದು ನಮ್ಮದೇ ಕಾಂಗ್ರೆಸ್ ಸರ್ಕಾರ ಎಂದರು.
ಬಸವಣ್ಣನವರ ವಿಚಾರ ಮತ್ತು ಹೋರಾಟ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕ. ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸಲ್ಲ. ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ. ಅದಕ್ಕೇ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ. ಜಾತಿ ವ್ಯವಸ್ಥೆ ಬಹಳ ಗಟ್ಟಿಯಾಗಿ ಬೇರೂರಿದೆ. ಇದಕ್ಕೆ ಪಟ್ಟಭದ್ರರು ನೀರು ಗೊಬ್ಬರ ಹಾಕುತ್ತಿದ್ದಾರೆ. ಜಾತ್ಯತೀತ, ಸಮ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ಹೋರಾಟ ಪೂರಕ. ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಜಾತಿ ಜಡತ್ವ, ಆರ್ಥಿಕ ಜಡತ್ವ ಇರುವ ಸಮಾಜದಲ್ಲಿ ಚಲನೆ ಸಾಧ್ಯವಿಲ್ಲ. ಬಸವಣ್ಣನವರ ವಿಚಾರಗಳೇ ಅಂಬೇಡ್ಕರ್ ವಿಚಾರಗಳಾಗಿದ್ದು ಇವೆಲ್ಲವೂ ಸಂವಿಧಾನದಲ್ಲಿ ಅಡಕವಾಗಿವೆ ಎಂದರು.
ಗೋರುಚ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿದ್ದು ನಾವು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ವೇದಿಕೆ. ಯಾರ ಒತ್ತಾಯವೂ ಇಲ್ಲದ ವೇಳೆಯಲ್ಲೇ ನಮ್ಮ ಸರ್ಕಾರ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿತ್ತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರ ಎಂದರು.

ಸ್ವಾಮೀಜಿಗಳ ನಿಯೋಗದ ಬೇಡಿಕೆಗಳು..
ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿತರಾಗಿರುವ ವಿಶ್ವಗುರು ಬಸವೇಶ್ವರರ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ನಲ್ಲಿ ರೂ 100 ಕೋಟಿ ನೀಡುವ ಜೊತೆಗೆ, ಮುಂದಿನ ನಾಲ್ಕು ವರ್ಷಗಳ ಬಜೆಟ್ ನಲ್ಲಿ ತಲಾ 100 ಕೋಟಿಯಂತೆ ಒಟ್ಟು ರೂ 500 ಕೋಟಿ ಅನುದಾನ ನೀಡಬೇಕು.
ಮುಖ್ಯಮಂತ್ರಿ ಭೇಟಿಗೂ ಮುನ್ನ ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ರೇಸ್ ಕೋರ್ಸ್ ರಸ್ತೆಯ ಅಧಿಕೃತ ನಿವಾಸದಲ್ಲಿ ಬೆಳಿಗ್ಗೆ ಮಠಾಧೀಶರು, ಸಮುದಾಯದ ಸಚಿವರು, ಶಾಸಕರು ಸಭೆ ನಡೆಸಿದರು. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಮುದಾಯದ ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು. ನಂತರ, ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ಕಾವೇರಿ’ಗೆ ತೆರಳಿ ಮನವಿ ಸಲ್ಲಿಸಿದರು.
ಯುವ ಪೀಳಿಗೆಗೆ ಬಸವಣ್ಣ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕೆಂದು ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ 13ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪರಮಪೂಜ್ಯರು, ಗಣ್ಯರು, ಚಿಂತಕರು, ಅಭಿಪ್ರಾಯಪಟ್ಟಿದ್ದಾರೆ. ನಂತರದಲ್ಲಿಯೂ ಈ ಕುರಿತು ಹಲವು ಸಭೆಗಳನ್ನು ನಡೆಸಿ ಹಿಂತಚಿಂತಕರೆಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಲಾಗಿದೆ. ಅದರಂತೆ, ಕಾರ್ಯಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಸಕ್ತ ಸಾಲಿನ ಬಜೆಟ್ ನಿಂದಲೇ ಅಗತ್ಯ ಅನುದಾನ ಒದಗಿಸಬೇಕು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವಣ್ಣನ ಬೃಹತ್ ಪ್ರತಿಮೆ ಪ್ರತಿμÁ್ಠಪಿಸಬೇಕು. ಜೊತೆಗೆ, ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ 'ಶರಣ ದರ್ಶನ' ಕೇಂದ್ರ ಸ್ಥಾಪಿಸಿ, ಅಲ್ಲಿ, ಉದ್ಯಾನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂಬುದನ್ನು ಬಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರು ಎಲ್ಲರ ಪರವಾಗಿ ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ಎಲ್ಲ ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ 'ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ' ರಚಿಸಬೇಕು.
ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಸದ್ಬಳಕೆಯಾಗಲು ಅಲ್ಲಿಯೇ 'ವಚನ ವಿಶ್ವವಿದ್ಯಾಲಯ' ಮತ್ತು ಸಂಶೋಧನ ಕೇಂದ್ರ ಆರಂಭಿಸಬೇಕು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 'ಬಸವಭವನ' ನಿರ್ಮಿಸಿ, ಅಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ನಿರಂತರವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಬೇಕು.
ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ಶರಣ ಸಾಹಿತ್ಯ ಮತ್ತು ಸಂಸ್ಕøತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸಬೇಕು ಎಂದರು.
ಮುಂದಿನ ಐದು ವರ್ಷಗಳಲ್ಲಿ 500 ಕೋಟಿ ಅನುದಾನ ಒದಗಿಸುವ ಮೂಲಕ ಸಾಂಸ್ಕøತಿಕ ನಾಯಕ ಬಸವಣ್ಣನವರನ್ನು ಮುಂಬರುವ ಪೀಳಿಗೆಗಳಿಗೆ ಪರಿಚಯಿಸುವುದಕ್ಕೆ ಸಂಬಂಧಿಸಿದ ಈ ಕಾರ್ಯಯೋಜನೆಗಳಿಗೆ ಚಾಲನೆ ನೀಡಿ, ಇತಿಹಾಸ ಸದಾ ನೆನಪಿಸಿಕೊಳ್ಳುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದರು. ನಿಯೋಗದಲ್ಲಿ ಗದುಗಿನ ತೊಂಟದ ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು. ಭಾಲ್ಕಿ ಹಿರೇಮಠದ ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು. ಮೊಟಗಿಯ ಚನ್ನಪ್ರಭು ಸ್ವಾಮಿಜಿ ಹಾಗೂ ಅನೇಕ ಮಠಾಧೀಶರು ಇದ್ದರು.

Saturday, 22 February 2025

ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಿದೆ: ಬಿ.ಕೆ ಶಕ್ತಿಕಾಂತ

 


ಬೀದರ್: ನಿತ್ಯ ಜೀವನದಲ್ಲಿ ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ರಾಜಸ್ಥಾನ ಮೌಂಟ್ ಅಬುದ ಅಂತರಾಷ್ಟ್ರೀಯ ಪ್ರೇರಣಾದಾಯಿ ಪ್ರವಚನಕಾರರಾದ ಬಿ.ಕೆ ಶಕ್ತಿಕಾಂತ ಭಾಯಿ ಜಿ ಹೇಳಿದರು.
ನಗರದ ಸಾಯಿ ಸ್ಕೂಲ್ ಅವರಣದಲ್ಲಿ ಸಂಜೆ ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮ ವತಿಯಿಂದ ಮೂರು ದಿವಸಗಳ ವರೆಗೆ ಜರುಗಲಿರುವ ಜೀವನೋತ್ಸವ ಪ್ರವಚನ ಮಾಲೆ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾಗಿ ಮಾತನಾಡಿದ ಅವರು, ನಿತ್ಯ 75 ಪ್ರತಿಶತದಷ್ಟು ರೋಗಗಳು ಮಾನಸಿಕ ಖಿನ್ನತೆಯಿಂದಲೇ ಬರುತ್ತವೆ ಎಂದರು.
ನಾವು ನಮ್ಮಲ್ಲಿ ಕೆಲಸಕ್ಕೆ ಬಾರದಷ್ಟು ಅದೆಷ್ಟೊ ಚಿಂತೆಗಳಳನ್ನು ಮನಸ್ಸಿನಲ್ಲಿ ಹಿಡಿದಿಟ್ಟು, ನಮ್ಮ ಮನಸ್ಸಿನ ಕಂಟ್ರೋಲ್ ಇನ್ಯಾರಿಗೊ ಕೊಟ್ಟು ಒದ್ದಾಡುತ್ತಿರುತ್ತೇವೆ. ಇಂದು ಒತ್ತಡದ ಬದುಕಿನಿಂದ ಹೃದಯರೋಗ, ಸಿಟ್ಟಿನಿಂದ ಕ್ಯಾನ್ಸರ್, ಗರ್ವದಿಂದ ವರ್ತಿಸುತ್ತಿದ್ದರೆ ಕುತ್ತಿಗೆ ನೋವು ಬರುವ ಸಂಭೌ ಇರುತ್ತದೆ. ಆದ್ದರಿಂದ ನಿತ್ಯ ಖುಷಿ, ಪ್ರೇಮ, ಆನಂದ, ಶಕ್ತಿ, ಶಾಂತಿ, ಜ್ಞಾನ, ಪವಿತ್ರತೆ ಎಂಬ ಸಪ್ತ ಗುಣಗಳನ್ನು ನಿತ್ಯ ಧರಿಸಿದಲ್ಲಿ ಒತ್ತಡ ಮುಕ್ತ ಬದುಕು ಸಾಧ್ಯವಿದೆ ಎಂದರು.
ನಾವು ಭೂತಕಾಲದೆಲ್ಲವನ್ನು ನೆನಪು ಮಾಡಿ ಚಿಂತೆಗೊಳಗಾತ್ತೇವೆ. ಆದರೆ ಅದು ಯಾವ ಪ್ರಯೊಜನವಿಲ್ಲ. ಸುಮ್ಮನ್ನೆ ಭವಿಷ್ಯದ ಕನಸ್ಸು ಕಾಣಿ ವರ್ತಮಾನದಲ್ಲಿ ಆಗುವ ಅದೆಷ್ಟೊ ಸತ್ಯ ಘಟನೆಗಳನ್ನು ಮರೆತು ಪಶ್ಚಾತ್ತಾಪ ಪಡುತ್ತೇವೆ. ಸದಾ ಪ್ರಸ್ತುತತೆಗೆ ಒತ್ತು ನೀಡಬೇಕು, ನಮ್ಮ ಬದುಕಿನಲ್ಲಿ ಧನಾತ್ಮಕವೆಂಬ ಚೆಂಡನ್ನು ಎಸೆದರೆ ನಮಗೆ ಸದಾ ಧನಾತ್ಮಕ ಶಕ್ತಿ ದೊರಕುತ್ತದೆ. ಕೆಲಸಕ್ಕೆ ಬಾರದ ಸಾವಿರಾರು ಮಾತುಗಳು ನಮ್ಮಲ್ಲಿ ಶೇಖರಿಸಿಕೊಂಡು ನಮ್ಮ ಮನಸ್ಸನ್ನು ಕಸದ ಪೆಟ್ಟಿಗೆಯನ್ನಾಗಿ ಮಾಡಿಕೊಂಡಿದ್ದೇವೆ. ಇದು ಹಾರ್ಟ್ ಬ್ಲಾಕೆಜ್‌ಗೆ ಕಾರಣವಾಗುತ್ತದೆ. ನಮ್ಮಲ್ಲಿ ಪರಮಾತ್ನ ಶಕ್ತಿ ಅಡಗಿದ್ದು, ಅದನ್ನು ಹೊರಗಡೆ ತರುವ ಅರಿವು ಬೆಳೆಸಿಕೊಳ್ಳಬೇಕು. ಎದುರಿನವರು ನಮಗೆ ಏನೆ ಜರಿದರೂ ನಾವು ಪ್ರತಿಕ್ರಿಯಿಸದೇ ಮುಗುಳ್ನಗುತ್ತ ಸಾಗಿದರೆ ಎದುರಿನವನ ಸಿಟ್ಟು ತಣ್ಣದಾಗಿ, ನಮಗೂ ಯಾವುದೇ ಒತ್ತಡವಾಗದೇ ನಿರಾಯಾಸವಾಗಿ ಮುಂದೆ ಸಾಗಬಹುದಾಗಿದೆ ಎಂದವರು ತಿಳಿಸಿದರು.
ಅಧ್ಯಾತ್ಮವಲ್ಲಿ ಆತ್ಮವನ್ನು 6ನೇ ಇಂದ್ರಿಯಕ್ಕೆ ಹೋಲಿಸಲಾಗುತ್ತದೆ. ತಾಯಿಯ ಗರ್ಭದಲ್ಲಿದ್ದಾಗಲೇ 4ನೇ ತಿಂಗಳಲ್ಲಿ ಒಳಗಿರುವ ಶರೀರಕ್ಕೆ ಆತ್ಮ ಸೇರಿಕೊಳ್ಳುತ್ತದೆ. ಆಗ ಆ ಶರೀರ ಎಕ್ಟಿವ್ ಆಗುತ್ತದೆ. ಅಲ್ಲಿಯ ವರೆಗೆ ಕೇವಲ ನಿರ್ಜಿವದ ಮುದ್ದೆಯಾಗಿರುತ್ತದೆ. ಹಿಂದಿನ ಜನ್ಮದ ನಮ್ಮ ಎಲ್ಲ ನೆನಹುಗಳು ಖಾಲಿಯಾಗಿ ಹೊಸ ಚೈತನ್ಯವಾಗಿ ಹೊರ ಹೊಮ್ಮುತ್ತದೆ. ಅಷ್ಟು ಪರಿಶುದ್ದವಿರುವ ನಮ್ಮ ಹೂವಿನಂಥ ಮನಸ್ಸಿನಲ್ಲಿ ಸಾವಿರಾರು ಚಿಂತೆಗಳು ತುಂಬಿ ಒತ್ತಡಯುಕ್ತ ಜೀವನಕ್ಕೆ ಜೋತು ಬಿಳುತ್ತೇವೆ. ಇದನ್ನು ದೂರ ಮಾಡಲು ಋಣಾತ್ಮಕ ಆಲೋಚನೆಗಳನ್ನು ಕ್ಯಾನ್ಸಲ್ ಮಾಡಿ ಕೇವಲ ಧನಾತ್ಮಕ ವಿಚಾರಗಳನ್ನು ಮನದಲ್ಲಿ ಭರಿಸಿ ಶಕ್ತಿಭರಿತ ಹಾಗೂ ಸಪ್ತಗುಣಲಕ್ಷಣಗಳನ್ನು ಮೈಗೂಡಿಸಿಕೊಂಡು ಸಂತೋಷದ ಬದುಕು ನಮ್ಮದಾಗಿಸಿಕೊಳ್ಳುವಂತೆ ಶಕ್ತಿಕಾಂತ ಭಾಯಿ ಜಿ ಕರೆ ನೀಡಿದರು.
ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸೆಕ ಡಾ.ಚಂದ್ರಕಾAತ ಗುದಗೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಉದ್ಯಮಿ ಬಸವರಾಜ ಧನ್ನುರ್, ರಮೇಶ ಗೋಯಲ್, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತೀಶ ಪಾಟೀಲ, ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಪ್ರವರ್ತಕರಾದ ಬಿ.ಕೆ ಪ್ರಭಾಕರ ಕೋರವಾರ ಹಾಗೂ ಇತರರು ವೇದಿಕೆಯಲ್ಲಿದ್ದರು.
ಆರಂಭದಲ್ಲಿ ನಾಸಿಕ್ ನ ಶಾಸ್ತ್ರೀಯ ಸಂಗೀತಗಾರರಾದ ಬಿ.ಕೆ ಓಂಕಾರ ಭಾಯಿ ಜಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಕು. ಸಂಯುಕ್ತಾ ಹಾಗೂ ಕು.ಅನನ್ಯಾ ಸ್ವಾಗತ ನೃತ್ಯಗೈದರು. ಬ್ರಹ್ಮಾಕುಮಾರಿ ಕೇಂದ್ರ ಪಾಚನದಸಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ಜಿ ಸರ್ವರನ್ನು ಸ್ಚಾಗತಿಸಿದರು. ನೌಬಾದ್ ಬ್ರಹ್ಮಾಕುಮಾರಿ ಕೇಂದ್ರದ ಬಿ.ಕೆ ಜ್ಯೋತಿ ಬಹೆನ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಆಗಮಿಸಿದ ಅತಿಥಿ ಗಣ್ಯರು ಆರತಿ ಬೆಳಗಿ ಸಹಸ್ರ ಜ್ಯೋತಿರ್ಲಿಂಗ ದರುಶನಕ್ಕೆ ಚಾಲನೆ ನೀಡಿದರು. ಬ್ರಹ್ಮಾಕುಮಾರಿಸ್ ಕೇಂದ್ರ ಶಿವಶಕ್ತಿ ಭವನದ ಬಿ.ಕೆ ಸುಮಂಗಲಾ ಬಹೆನ್ ಜಿ ಹಾಗೂ ಬಿ.ಕೆ ಸುನಂದಾ ಬಹೆನ್ ಜಿ, ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೇಶನ್ ಗೌರವಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರಡ್ಡಿ, ಬಿ.ಕೆ ಗುರುದೇವಿ ಅಕ್ಕನವರು ಸೇರಿದಂತೆ ನೂರಾರು ಬಿ.ಕೆ ಸಹೋದರ, ಸಹೋದರಿಯರು, ಸಾವಿರಾರು ಭಕ್ತಾದಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಶ್ರೀಶೈಲಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ : ಸೌಲಭ್ಯ ಪಡೆಯಲು ಸೂಚನೆ



ಯಾದಗಿರಿ : ಮಹಾ ಶಿವರಾತ್ರಿ ಹಬ್ಬದ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ರಥೋತ್ಸವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲಕ್ಕೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ವಿಶೇಷ ಬಸ್ ವಾಹನಗಳು ಸಂಚರಿಸಲಿವೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.  
 
     2025ರ ಫೆಬ್ರವರಿ 22 ರಿಂದ 28ರ ವರೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ವಿಭಾಗದ ಯಾದಗಿರಿದಿಂದ ಮಧ್ಯಾಹ್ನ 3 ಗಂಟೆಗೆ ಶಹಾಪೂರದಿಂದ ಸಂಜೆ 4 ಗಂಟೆಗೆ ಸುರಪೂರದಿಂದ ಸಂಜೆ 4 ಗಂಟೆಗೆ  ಗುರುಮಠಕಲ್‌ದಿಂದ 3 ಗಂಟೆಗೆ  ವಿಶೇಷ (ಹೆಚ್ಚುವರಿ) ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ, ವಿಭಾಗದ ವ್ಯಾಪ್ತಿಯಲ್ಲಿನ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ಈ ವಿಶೇಷ ಬಸ್ ಕಾರ್ಯಾಚರಣೆಯ ಸದುಪಯೋಗ ಪಡೆದುಕೊಳ್ಳಬೇಕು.  

     ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ತಮ್ಮ ಸಾರಿಗೆ ಸೌಕರ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ಯಾದಗಿರಿ ದೂ.ಸಂ.7760992463, ಘಟಕ ವ್ಯವಸ್ಥಾಪಕರು ಶಹಾಪೂರ ದೂ.ಸಂ.7760992464, ಘಟಕ ವ್ಯವಸ್ಥಾಪಕರು ಸುರಪೂರ ದೂ. ಸಂ.7760992467, ಘಟಕ ವ್ಯವಸ್ಥಾಪಕರು ಗುರುಮಠಕಲ್ ದೂ.ಸಂ.7760992467ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಿ* *ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ*

 

ಯಾದಗಿರಿ :  ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಡಿಯ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ಯಾದಗಿರಿ  ಹಾಗೂ ರಾಯಚೂರು ಜಿಲ್ಲೆಗಳು ಒಳಗೊಂಡಿದ್ದು, ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ  ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸುವಂತೆ ಭಾರತ ಸರ್ಕಾರದ ಹಣಕಾಸು ಸೇವೆಗಳ , ಜಂಟಿಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ  ಅವರು ಅಧಿಕಾರಿಗಳಿಗೆ ಸೂಚಿಸಿದರು.
   
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
ದೇಶದ ಹಿಂದುಳಿದ 112 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ವಿವಿಧ ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೀತಿ ಆಯೋಗ ಗುರಿ ನಿಗದಿಪಡಿಸಿದೆ.  ಜನರ ಆರೋಗ್ಯ ಮತ್ತು ಪೌಷ್ಟಿಕ, ಕೃಷಿ ಮತ್ತು ಜಲ ಸಂಪನ್ಮೂಲ, ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲಾಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕುರಿತು 49 ಸೂಚ್ಯಂಕ ನೀಡಲಾಗಿದೆ.ಇವುಗಳಲ್ಲಿ ಸೂಕ್ತ ಪ್ರಗತಿ  ಸಾಧಿಸಲು ಸಂಬಂಧಿಸಿದ ಅಧಿಕಾರಿಗಳು ಜವಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು. 

ವಿಶೇಷವಾಗಿ ಬಡಜನರು,ಮಧ್ಯಮ ವರ್ಗದವರಿಗಾಗಿ ಪಿ.ಎಮ್ ಸ್ವನಿಧಿ, ಮುದ್ರಾ, ಹಾಗೂ ವಿಶ್ವಕರ್ಮ ಯೋಜನೆಗಳತ್ತ ಹೆಚ್ಚಿನ ಗಮನಹರಿಸಬೇಕು .ಅದರಂತೆ ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಗಳು ಕಡುಬಡವರಿಗೆ ಉಪಯುಕ್ತವಾಗಿವೆ.ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳು  ವಿಶೇಷ ಅಭಿಯಾನದ ಮೂಲಕ ಅರಿವು ಮತ್ತು ಪ್ರೋತ್ಸಾಹ ನೀಡಬೇಕು.ಸರ್ಕಾರದ ಪ್ರತಿ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳೂ ಈ ಯೋಜನೆಗಳಡಿ ಬರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.


ಲೀಡ್ ಬ್ಯಾಂಕ್ ಮೂಲಕ ಮುದ್ರಾ ಯೋಜನೆಯಡಿ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಾಲ ಸೌಲಭ್ಯ ಕಲ್ಪಿಸಬೇಕು.ಈವರೆಗೆ ಸಾಧಿಸಿದ ಪ್ರಗತಿ ವರದಿ ಜಿ.ಪಂ ಸಿಇಓ ಅವರಿಗೆ ನೀಡಿ ಎಷ್ಟು ಜನ ಫಲಾನುಭವಿಗಳು ಈ ಯೋಜನೆಯಡಿ ಲಾಭ ಪಡೆದಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು.ಅದರಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಲೀಡ್ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯ ಗಳ ಬಗ್ಗೆ ಪರಿಶೀಲಿಸಿ ನಿಖರ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಯೋಜನೆಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಗಮನ ನೀಡುವಂತೆ ಅವರು ಸೂಚನೆ ನೀಡಿ ಫಲಿತಾಂಶ ಕಡಿಮೆ ಕುರಿತು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಪರಿಣಾಮಕಾರಿ ಯೋಜನೆ ರೂಪಿಸಲು ಅವರು ಸೂಚಿಸಿದರು. 

ಕಡಿಮೆ ತೂಕದ ಶಿಶುಗಳ ಜನನವನ್ನು ಶೇಕಡಾವಾರು ಕಡಿಮೆ ಮಾಡುವಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳು, ಅಪೌಷ್ಠಿಕತೆ ನಿವಾರಣೆ, ಐಸಿಡಿಎಸ್ ಕಾರ್ಯಕ್ರಮದ ಅಡಿಯಲ್ಲಿ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಪಡೆಯುವ ಮಹಿಳೆಯರ ಸಂಖ್ಯೆ ಮತ್ತು ರೋಗಿಗಳಿಗೆ ಒದಗಿಸಲಾದ ಪ್ರೋಟೀನ್-ಭರಿತ ಆಹಾರಗಳ ಕುರಿತು, ಶಿಕ್ಷಣ, ಕೃಷಿ ಮತ್ತು ಜಲಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಮೂಲಭೂತ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಮತ್ತು ಸವಾಲುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. 

ಇದಕ್ಕೂ ಮುನ್ನ ಅವರು ದೋರನಹಳ್ಳಿ ಅಂಗನವಾಡಿ ,ಹಾಗೂ ನಾಯ್ಕಲ್ ಗ್ರಾಮದ  ಗ್ರಂಥಾಲಯ, ಪರಿಶೀಲಿಸಿದರು. ಈ ಭೇಟಿ ವೇಳೆ ಹಾಗೂ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹಾಗೂ ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್  ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

ಕಷ್ಟದ ಜೀವನ ಶಿಸ್ತಿನ ಪಾಠಶಾಲೆ: ಶ್ರೀ ರಂಭಾಪುರಿ ಜಗದ್ಗುರುಗಳು



ಸವಣೂರ : ನೋವನ್ನು ನುಂಗಿ ಜೀವನದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಕಷ್ಟದ ಜೀವನ ಶಿಸ್ತಿನ ಪಾಠಶಾಲೆಯಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕು ಜೊತೆಗೆ ಸಮರ್ಥ ಮಾರ್ಗದರ್ಶನ ನೀಡುವ ಗುರು ಇದ್ದಾಗ ಜೀವನ ಸಾರ್ಥಕ ಹೊಂದುತ್ತದೆ. ಡಾ.ಗುರುಪಾದಯ್ಯ ಸಾಲಿಮಠರು ಗುರು ಸೇವಾ ನಿಷ್ಠರಾಗಿ ಪೀಠ-ಮಠಗಳು ನೀಡುವ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವುದು ಅವರ ಧರ್ಮಾಭಿಮಾನಕ್ಕೆ ಕಾರಣವಾಗಿದೆ. ವೀರತಪಸ್ವಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ಭಾಗದಲ್ಲಿ ಮಾಡಿದ ಧರ್ಮ ಜಾಗೃತಿಯನ್ನು ಮರೆಯುವಂತಿಲ್ಲ. ವೀರಶೈವರಾದವರು ಇಷ್ಟಲಿಂಗ ಧಾರಿಗಳಾಗಿ ಪ್ರತಿ ದಿನ ಕನಿಷ್ಠ ೫ ನಿಮಿಷವಾದರೂ ಪೂಜೆಗೈದರೆ ಜನ್ಮ ಪಾವನಗೊಳ್ಳುತ್ತದೆ. ಇಂದು ಧರ್ಮದ ದಾರಿಯನ್ನು ತಪ್ಪಿಸಿ ಜನರನ್ನು ಧರ್ಮದಿಂದ ದೂರವಿರಿಸುವ ಕಾರ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂಥವರಿAದ ಭಕ್ತ ಶ್ರದ್ಧಾಳುಗಳು ಎಚ್ಚರಿಕೆಯಿಂದ ಇರಬೇಕೆಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರುವನ್ನು ನಂಬಿ ನಡೆದವರ ಬಾಳು ಉತ್ಕೃಷ್ಟವಾಗಿ ಬೆಳಗುತ್ತದೆ ಎಂದರು. ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರು ಕರುಣೆಯಿದ್ದಾಗ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಬೆಳೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಗುಣ ಹೊಂದಿದಾಗ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಲ್ಲಾಪುರದ ಡಾ. ಗುರುಮಹಾಂತಯ್ಯ ಆರಾಧ್ಯಮಠರು ರಚಿಸಿದ “ಗೀತ ಮಂದಾರ” ಕೃತಿ ಹಾಗೂ ದಾವಣಗೆರೆ ವೀರೇಶ ಪುರಾಣಿಕರು ತಮ್ಮ ಕೈ ಬರಹದಿಂದ ರಚಿಸಿದ ಶ್ರೀ ರಂಭಾಪುರಿ ಜಗದ್ಗುರುಗಳ ಭಾವಚಿತ್ರ ಬಿಡುಗಡೆಗೊಂಡವು. ಸಮಾರಂಭದಲ್ಲಿ ಡಾ.ರಾಜಗುರು ಗುರುಸ್ವಾಮಿ ಕಲಕೇರಿ, ಗಂಗಾಧರಸ್ವಾಮಿ ಸಾಲಿಮಠ, ಶಿವಮೂರ್ತಯ್ಯ ಚರಂತಿಮಠ, ಶಿವಯ್ಯ ನಾಲ್ವತ್ವಾಡಮಠ, ವೀರಭದ್ರಯ್ಯ ಮಠದ, ರಾಜಶೇಖರ ಹಾಲೇವಾಡಿಮಠ, ಮಂಜುನಾಥ ಗಾಣಿಗೇರ, ಮಲ್ಲಾರೆಪ್ಪ ತಳ್ಳಿಹಳ್ಳಿ, ವೀರಯ್ಯಶಾಸ್ತಿç ಹಿರೇಮಠ ಉಪಸ್ಥಿತರಿದ್ದರು. ಡಾ.ಗುರುಪಾದಯ್ಯ ಸಾಲಿಮಠರು ಸ್ವಾಗತಿಸಿದರು. ಶಿವಪ್ರಕಾಶ ಬಳಿಗಾರ ನಿರೂಪಿಸಿದರು. ವೀರಯ್ಯ ಸಾಲಿಮಠರು ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಿತು.



 

ಶರಣರು ಸಾಧಿಸಿದ ಲಿಂಗಯೋಗವು ಸರ್ವಶ್ರೇಷ್ಠ ಯೋಗ: ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು

 


ಬಸವಕಲ್ಯಾಣ: “ಹನ್ನೆರಡನೇ ಶತಮಾನದಲ್ಲಿ ಗುರು ಬಸವಾದಿ ಶರಣರು ಸಾಧಿಸಿದ ಲಿಂಗಯೋಗ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಯೋಗವಾಗಿದೆ” ಎಂದು ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಅಭಿಮತ ವ್ಯಕ್ತಪಡಿಸಿದ್ದಾರೆ.

ಅವರು ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣದ ವತಿಯಿಂದ ಹಮ್ಮಿಕೊಂಡ ಅನುಭವ ಮಂಟಪ ಸಂಸತ್ತು 7ನೇ ಅದಿವೇಶನದ ಮೊದಲನೇ ಗೋಷ್ಟಿಯಲ್ಲಿ  ಮಾತನಾಡುತ್ತಾ. “ಲಿಂಗಯೋಗವೆಂದರೆ ಕೇವಲ ಆಧ್ಯಾತ್ಮಿಕ ಸಾಧನೆಗೆ ಮಾತ್ರ ಸೀಮಿತವಲ್ಲ. ಇದು ಜೀವನ ಪರಿವರ್ತನೆಯ ಶಕ್ತಿ ಹೊಂದಿರುವ ಪ್ರಾತ್ಯಕ್ಷಿಕ ಯೋಗವಾಗಿದೆ” ಎಂದು ಅವರು ವಿದ್ವತ್ತಿನಿಂದ ವಿವರಿಸಿದರು.

ಶರಣರು ವಚನಸಾಹಿತ್ಯದಲ್ಲಿ ಬೋಧಿಸಿದ ಷಟಸ್ಥಲವು ಅಂಗ ಲಿಂಗರ ಸಾಮರಸ್ಯಕ್ಕೆ ಭದ್ರ ಬುನಾದಿಯಾಗಿದೆಯಲ್ಲದೆ ಇದರಲ್ಲಿ ವಿಜ್ಞಾನ ಅಡಗಿದೆ. ಪ್ರತಿಯೊಬ್ಬ ಸಾಧಕರು ಶಿವಯೋಗ ಮಾರ್ಗವನ್ನು ಅನುಸರಿಸಿದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದೆಂದರು. 

ಇಷ್ಟಲಿಂಗ ಸಾಧನೆಯಿಂದ ದೇಹ ಶುದ್ಧಿಯಾಗುತ್ತದೆ. ಪ್ರಾಣಲಿಂಗ ಸಾಧನೆಯಿಂದ ಮನ ಶುದ್ಧಿಯಾಗುತ್ತದೆ. ಭಾವಲಿಂಗ ಸಾಧನೆಯಿಂದ ಆತ್ಮಶುದ್ಧಿಯಾಗಿ ಸಾಧಕನ ಇಡೀ ದೇಹ ಸರ್ವಾಂಗ ಲಿಂಗವಾಗಲು ಸಹಕಾರಿಯಾಗಿದೆ ಪ್ರತಿಯೊಬ್ಬರು ಸಾಧಿಸಲು ಮುಂದಾಗಬೇಕು ಎಂದರು. 

ಕೇವಲ ಧಾರ್ಮಿಕ ಕ್ರಿಯೆಗೆ ಸೀಮಿತರಾಗಬಾರದು ಎಂದು ಕಿವಿ ಮಾತು ಹೇಳಿದರಲ್ಲದೆ ಶಿವಯೋಗ ಸಾಧಿಸುವ ಸಾಧಕರಿಗೆ ವಿಶೇಷ ತರಬೇತಿ ನೀಡಲು ನಾವು ಕಾರ್ಯಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಶರಣರು ಮಠ ಸಂಸ್ಕೃತಿ ಹುಟ್ಟು ಹಾಕಿಲ್ಲ, ಜಗದ್ಗುರು ಪದವಿ ಹುಟ್ಟು ಹಾಕಿಲ್ಲ. ಶರಣರದು ಮಹಾಮನೆ ಕಲ್ಪನೆ ಇದೆ. ಮಹಾಮನೆ ಎಂಬುದು ವಿಶಾಲವಾಗಿತ್ತು, ಅದರೊಳಗೆ ಅನುಭವ ಮಂಟಪ ಚಿಂತನೆ ನಡೆಯುತ್ತಿತ್ತು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಗುಣತೀರ್ಥ ವಾಡಿ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ   “ಇಂದಿನ ಯುಗದಲ್ಲಿ ಮಾನವನಿಗೆ ಶಾಂತಿ, ಸಮಾನತೆ ಮತ್ತು ನೈತಿಕತೆಯ ಅವಶ್ಯಕತೆ ಇದೆ. ಶರಣರ ಲಿಂಗಯೋಗವೇ ಅದಕ್ಕೆ ಮೂಲ ಪರಿಹಾರ” ಎಂದು ಅವರು ಅಭಿಪ್ರಾಯಪಟ್ಟರು.

ಅನುಭವ ಮಂಟಪದ ಆಶಯವು ಸಂಸ್ಕಾರ, ಸಹೋದರ, ಸಮಾನತೆ, ಸಂಘಟನೆಯಿಂದ ಕೂಡಿತ್ತು. ಬಸವಣ್ಣನವರು ಒಬ್ಬ ಮನಃಶಾಸ್ತ್ರೀಯ ಗುಣ ಹೊಂದಿದ್ದರಿಂದಲೇ ಸರ್ವರನ್ನು ತನ್ನತ್ತ ಸೆಳೆದು ಸಮುದಾಯಿಕ ಲಿಂಗಯೋಗ ಸಾಧನೆ ಮಾಡಲು ಸಾಧ್ಯವಾಯಿತು. 

ಪೂಜ್ಯ ಶ್ರೀ ಡಾ. ಸಿದ್ಧರಾಮ ಬೆಲ್ದಾಳ ಶರಣರು ಶ್ರೇಷ್ಟ ಲಿಂಗಾನುಭಾವಿಗಳಾಗಿದ್ದು ಅವರ ಜ್ಞಾನಾನುಭವನ್ನು ಸಾಧಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು, ಸತ್ಯದೇವಿ ಮಾತಾಜಿ, ಗಂಗಾದಾರ ದೇವರು, ಸತ್ಯಕ್ಕ ಮಾತಾಜಿ ಬಂದವರ ಓಣಿ, ಬಸವ ದೇವರು ಸವದತ್ತಿ, ಶ್ರೀಕಾಂತ ಸ್ವಾಮಿ ಬೀದರ,   ಉಪಸ್ಥಿತರಿದ್ದರು.

Friday, 21 February 2025

ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು

 

 ಕಲ್ಯಾಣ ಕರ್ನಾಟಕದ ಮಠಗಳಲ್ಲಿ ಸಾಮರಸ್ಯ ಸೌಹಾರ್ದತೆ, ಸಮನ್ವಯತೆಯ ಕೇಂದ್ರವೆಂದು ಪ್ರಸಿದ್ಧವಾಗಿರುವುದು ಹಾರಕೂಡದ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನವಾಗಿದೆ. ಈ ಮಠಕ್ಕೆ ಪೂಜ್ಯ ಸಂಗನ ಬಸವರಿಂದ ಪ್ರಾರಂಭವಾಗಿ ಶ್ರೀ ಚನ್ನವೀರ ಶಿವಾಚಾರ್ಯರವರೆಗೆ ಏಳು ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಈಗ ಎಂಟನೇ ಪೀಠಾಧಿಪತಿಗಳಾಗಿ ಬಂದವರೇ ಪೂಜ್ಯ ಶ್ರೀ ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡದ ವೇದಮೂರ್ತಿ ಶ್ರೀ ಕರಬಸಯ್ಯ ಹಿರೇಮಠ ಮತ್ತು ಸುಭದ್ರ ತಾಯಿಯವರ ಮಗನಾಗಿ ೦೧-೦೭-೧೯೬೩ ರಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ರೇವಣಸಿದ್ದಯ್ಯ. ಶ್ರೀಗಳು ತಮ್ಮ ಶಿಕ್ಷಣಾ ಅಭ್ಯಾಸವನ್ನು ಹಾರಕೂಡದಲ್ಲಿ ಪ್ರಾರಂಭಿಸಿದರು. ಕಲಬುರ್ಗಿಯ ಶರಣಬಸವೇಶ್ವರ ಪ್ರೌಢಶಾಲೆ, ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ೨೯೮೪ ರಲ್ಲಿ ಬಿ.ಎ‌ ಪದವಿಯನ್ನು ಪೂರೈಸಿದರು. ಧಾರವಾಡ ವಿಶ್ವವಿದ್ಯಾಲಯದಿಂದ ೧೯೮೬ ಎಂ.ಎ.ಪದವಿ  ಪಡೆದರು. ಹುಬ್ಬಳ್ಳಿಯ ಮೂರು ಸಾವಿರಮಠದ ಡಾ.ಗಂಗಾಧರ ರಾಜ ಯೋಗೇಂದ್ರ ಜಗದ್ಗುರುಗಳು ಪ್ರಭಾವದಿಂದ ಸಾಹಿತ್ಯ ಆಸಕ್ತಿ. ಶಿವಯೋಗ ಮಂದಿರದಲ್ಲಿ ಸ್ವಾಮಿ ತರಬೇತಿ ಹೊಂದಿ ಕನ್ನಡ ಮತ್ತು ಸಂಸ್ಕೃತ ಭಾಷೆ- ಸಾಹಿತ್ಯ ಪ್ರೌಢಿಮೆ ಹೊಂದಿದರು.
      ಶ್ರೀ ರೇವಣಸಿದ್ಧರು ಚನ್ನವೀರರರಾಗಿ ಹಾರಕೂಡ ಹಿರೇಮಠ‌ ಸಂಸ್ಥಾನದ ಪಟ್ಟಾಧಿಕಾರವನ್ನು ೨೫-೦೪-೧೯ ೯೬ ರಲ್ಲಿ ಹೊಂದಿದರು.ಅಲ್ಲಿಂದ ಸಣ್ಣ ಮಠದ ಜವಾಬ್ದಾರಿ ಹೊತ್ತು ಮಠದ ಪರಂಪರೆಯನ್ನು ಮುಂದುವರಿಸುವ‌ ಸಾಮಥ್ರ್ಯ ಹೊಂದಿದರು.ಅಪಾರ ಭಕ್ತ ಆರಾಧ್ಯ ಗುರುಳಾದರು. ಮಠದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಲಿ.ಚನ್ನಬಸವ ಶಿವಯೋಗಿಗಳು, ಲಿಂ.ಗುರುಲಿಂಗ ಶಿವಾ ಚಾರ್ಯರನ್ನು, ಪಂಚಪೀಠ, ಆಚಾರ್ಯ ಪರಂಪರೆ, ಶರಣ ಪರಂಪರೆಯೊಂದಿಗೆ ಸರ್ವಧರ್ಮ, ಸರ್ವಜಾತಿ, ಸಕಲ ಮತಗಳನ್ನು ಒಳಗೊಂಡು ಸಕಲ ಜೀವಾತ್ಮರಿಗೆ ಲೇಸ ಬಯಸುವ ಕಾರ್ಯಕೈಗೊಂಡು ಸರ್ವ ಜನಾಂಗದ ಶಾಂತಿ‌ಯ ತೋಟವಾಗಿಸಿಕೊಂಡ ಮಹಾ ಮಾನವತಾವಾದಿಯಾದವರು.
      ಮಠದ ಆವರಣದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ, ದಾಸೋಹ ಮನೆ, ಶಾಲೆ,ಕುಸ್ತಿ, ಕ್ರೀಡಾಂಗಣ, ಕಲ್ಯಾಣ ಮಂಟಪ, ಕಳಸಾರೋಹಣ,ಮೂರ್ತಿ ಪ್ರತಿಷ್ಠಾನ, ತಂದೆ- ತಾಯಿ ಸ್ಮರಣೆ ಭವನ, ರಥೋತ್ಸವ, ಜಾತ್ರೆ, ದಪೂಜೆ ಪುನಸ್ಕಾರ, ಜಾನುವಾರು, ಶಿಬಿರಗಳು, ತರಬೇತಿ, ಕಲೆ, ಸಂಗೀತ ದರ್ಬಾರ್, ಭಜನೆ, ಜಾನಪದ ಕಲೆ- ಹಾಡು ಪ್ರದರ್ಶನ. ಸಾಹಿತ್ಯ ಸಮ್ಮೇಳನ ಆಯೋಜನೆ, ಸಂಗೀತ ಸಮ್ಮೇಳನ, ಧರ್ಮ ಗೋಷ್ಠಿ, ಅನುಭಾವ ಪ್ರಚಾರೋಪನ್ಯಾಸ, ೧೦೩ಕ್ಕೂ ಹೆಚ್ಚು ಪುಸ್ತಕ ಪ್ರಕಟ. ವಿಷಯ ವಚನ ೧೫ ಸಂಪುಟಗಳು. ಪುರಾಣ, ನಾಟಕ ಪ್ರದರ್ಶನ, ಹೀಗೆ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ, ಕನ್ನಡ ಪರಿಚಾರಕರಾಗಿದ್ದಾರೆ.
         ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಸುಲಭವಾಗಿ, ಉತ್ತಮ ಶಿಕ್ಷಣ ನೀಡಲು ಯುಕೆಜಿಯಿಂದ ಪದವಿ ಹಂತದವರೆಗೂ ಶಿಕ್ಷಣ ಕೇಂದ್ರವನ್ನು ಹಾರಕೂಡ, ಚಿಂಚೋಳಿ, ಭಾಲ್ಕಿ, ಮೊದಲಾದ ಕಡೆ ಶಿಕ್ಷಣ ಕೇಂದ್ರ ಅದರಲ್ಲೂ ಕನ್ನಡ ಮಾಧ್ಯ ಮದಲ್ಲಿ, ಉಚಿತ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪ್ರೇರೇಪಿಸಿದವರು. ಪಾಲಕರು, ಶಿಕ್ಷಕರ ಸ್ಮರಣೆ ಮಾಡಿಸುತ್ತಿದ್ದಾರೆ.
 


           ಪ್ರಶಸ್ತಿ ನೀಡುವ ಮಠವಾಗಿದೆ. ಕವಿ, ಸಾಹಿತಿ, ಕಲಾವಿ‌ದರು, ಬಡವರಾಗಬಾರದೆಂದು ಚನ್ನಶ್ರೀ ಪ್ರಶಸ್ತಿ, ಚನ್ನರತ್ನ, ಕಲ್ಯಾಣ ಕರ್ನಾಟಕ ಸಂಗೀತ ರತ್ನ, ಶಿಕ್ಷಣ ರತ್ನ, ಬಸವಭಾನು, ಕಲ್ಯಾಣ ಕರ್ನಾಟಕ ರತ್ನ, ಭಜನಾ ಪ್ರಶಸ್ತಿ, 
ಅಲ್ಲದೆ ಕನ್ನಡ ನಾಡಿನ ಪ್ರತಿಷ್ಠಿತ ೧ ಲಕ್ಷ, ೨ ತೊಲ ಚಿನ್ನದ ಪದಕ ಪ್ರಶಸ್ತಿ ಫಲಕ ಹೊಂದಿದೆ. ಇದುವರೆಗೆ ೧೨ ಜನರಲ್ಲಿ ಪ್ರದಾನ ಮಾಡಲಾಗಿದೆ. 
    ಪೂಜ್ಯರು ಸಾಹಿತಿಗಳು. ಅವರು ನೀಡುವ ಆಶೀರ್ವಚನ ಸಂದೇಶ, ಪ್ರವಚನ, ವಾಗ್ಮಿತನ, ಮೂಲಕ ಜನಸಾಮಾನ್ಯರಿಂದ ಹೀಡಿದು ವಿದ್ವಾಂಸರಿಗೂ ಅನ್ವಯವಾಗುವ‌ ಹಿತ ವಚನ ಬೋಧನೆ ಮಾಡುವರು. ಹಡಪದ ಅಪ್ಪಣ್ಣನ ನೂರ ವಚನ ಗಳ ಸಂಗ್ರಹ,ಚನ್ನ ಚಿಂತನ,ಚನ್ನಚಂದ್ರಹಾರ, ಚನ್ನಕಾಂತ ವಿಚಾರ ಬಿಂದುಗಳು, ಶ್ರೀಚನ್ನ ನುಡಿ ಎನ್ನುವ ಐದು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸಮನ್ವಯತೆ ಹೊಂದಿದೆ. ಸರಳವಾಗಿ ಸರ್ವರು ಓದುವ ಸಮತಾ ಭಾವ ನೀಡುವುದು.
   ಪೂಜ್ಯರ ಕುರಿತು ಚನ್ಮವೀರ, ಹಾರಕೂಡ ಸಿರಿ, ನಡೆದಾಡುವ ದೇವರು, ಚನ್ನ ಶ್ರೀನಿಧಿ, ಚನ್ನವೀರ ಪದನಮನ
ಚನ್ನ ಚಂದನ, ನುಡಿಚನ್ನ, ವಚನ ವಾರಿಧಿ, ಚನ್ನ ಸಂಭ್ರಮ, ಚನ್ನಶ್ರೀವಾಣಿ, ಅಲ್ಲದೇ ಮಠದ ಹಾಗೂ ಶ್ರೀಗಳ ಕುರಿತು ಎಂಫಿಲ್,ಪಿಎಚ್.ಡಿಗಳಾಗಿವೆ.  ಶಿವಾಚಾರ್ಯ ರತ್ನ, ಸದ್ಧರ್ಮ ಶಿಖಾಮಣಿ, ಮನುಕುಲ ರತ್ನ, ದಾಸೋಹ ಜ್ಯಾನ ರತ್ನ, ಆಧ್ಯಾತ್ಮ ಸಿರಿ, ಅನ್ನದಾನೇಶ್ವ‌ರ  ಪ್ರಶಸ್ತಿ, ಸ್ವರ ಮಾಧುರಿ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ರತ್ನ, ಕಲ್ಯಾಣ ಕರ್ನಾಟಕ ರತ್ನ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಕಲ್ಯಾಣ ಕರ್ನಾಟಕ ಎರಡನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಹೊಂದಿದ್ದರು ಈಗ ಬೇಲೂರು ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ‌ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ‌ಸಂದಿದೆ.

-ಡಾ. ರಾಜಕುಮಾರ ಮಾಳಗೆ ಕಲಬುರಗಿ

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...