ads

Search This Blog

Saturday, 22 February 2025

ಶ್ರೀಶೈಲಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ : ಸೌಲಭ್ಯ ಪಡೆಯಲು ಸೂಚನೆ



ಯಾದಗಿರಿ : ಮಹಾ ಶಿವರಾತ್ರಿ ಹಬ್ಬದ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ರಥೋತ್ಸವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲಕ್ಕೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ವಿಶೇಷ ಬಸ್ ವಾಹನಗಳು ಸಂಚರಿಸಲಿವೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.  
 
     2025ರ ಫೆಬ್ರವರಿ 22 ರಿಂದ 28ರ ವರೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ವಿಭಾಗದ ಯಾದಗಿರಿದಿಂದ ಮಧ್ಯಾಹ್ನ 3 ಗಂಟೆಗೆ ಶಹಾಪೂರದಿಂದ ಸಂಜೆ 4 ಗಂಟೆಗೆ ಸುರಪೂರದಿಂದ ಸಂಜೆ 4 ಗಂಟೆಗೆ  ಗುರುಮಠಕಲ್‌ದಿಂದ 3 ಗಂಟೆಗೆ  ವಿಶೇಷ (ಹೆಚ್ಚುವರಿ) ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ, ವಿಭಾಗದ ವ್ಯಾಪ್ತಿಯಲ್ಲಿನ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ಈ ವಿಶೇಷ ಬಸ್ ಕಾರ್ಯಾಚರಣೆಯ ಸದುಪಯೋಗ ಪಡೆದುಕೊಳ್ಳಬೇಕು.  

     ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ತಮ್ಮ ಸಾರಿಗೆ ಸೌಕರ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ಯಾದಗಿರಿ ದೂ.ಸಂ.7760992463, ಘಟಕ ವ್ಯವಸ್ಥಾಪಕರು ಶಹಾಪೂರ ದೂ.ಸಂ.7760992464, ಘಟಕ ವ್ಯವಸ್ಥಾಪಕರು ಸುರಪೂರ ದೂ. ಸಂ.7760992467, ಘಟಕ ವ್ಯವಸ್ಥಾಪಕರು ಗುರುಮಠಕಲ್ ದೂ.ಸಂ.7760992467ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಿ* *ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ*

 

ಯಾದಗಿರಿ :  ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಡಿಯ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ಯಾದಗಿರಿ  ಹಾಗೂ ರಾಯಚೂರು ಜಿಲ್ಲೆಗಳು ಒಳಗೊಂಡಿದ್ದು, ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ  ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸುವಂತೆ ಭಾರತ ಸರ್ಕಾರದ ಹಣಕಾಸು ಸೇವೆಗಳ , ಜಂಟಿಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ  ಅವರು ಅಧಿಕಾರಿಗಳಿಗೆ ಸೂಚಿಸಿದರು.
   
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
ದೇಶದ ಹಿಂದುಳಿದ 112 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ವಿವಿಧ ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೀತಿ ಆಯೋಗ ಗುರಿ ನಿಗದಿಪಡಿಸಿದೆ.  ಜನರ ಆರೋಗ್ಯ ಮತ್ತು ಪೌಷ್ಟಿಕ, ಕೃಷಿ ಮತ್ತು ಜಲ ಸಂಪನ್ಮೂಲ, ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲಾಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕುರಿತು 49 ಸೂಚ್ಯಂಕ ನೀಡಲಾಗಿದೆ.ಇವುಗಳಲ್ಲಿ ಸೂಕ್ತ ಪ್ರಗತಿ  ಸಾಧಿಸಲು ಸಂಬಂಧಿಸಿದ ಅಧಿಕಾರಿಗಳು ಜವಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು. 

ವಿಶೇಷವಾಗಿ ಬಡಜನರು,ಮಧ್ಯಮ ವರ್ಗದವರಿಗಾಗಿ ಪಿ.ಎಮ್ ಸ್ವನಿಧಿ, ಮುದ್ರಾ, ಹಾಗೂ ವಿಶ್ವಕರ್ಮ ಯೋಜನೆಗಳತ್ತ ಹೆಚ್ಚಿನ ಗಮನಹರಿಸಬೇಕು .ಅದರಂತೆ ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಗಳು ಕಡುಬಡವರಿಗೆ ಉಪಯುಕ್ತವಾಗಿವೆ.ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳು  ವಿಶೇಷ ಅಭಿಯಾನದ ಮೂಲಕ ಅರಿವು ಮತ್ತು ಪ್ರೋತ್ಸಾಹ ನೀಡಬೇಕು.ಸರ್ಕಾರದ ಪ್ರತಿ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳೂ ಈ ಯೋಜನೆಗಳಡಿ ಬರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.


ಲೀಡ್ ಬ್ಯಾಂಕ್ ಮೂಲಕ ಮುದ್ರಾ ಯೋಜನೆಯಡಿ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಾಲ ಸೌಲಭ್ಯ ಕಲ್ಪಿಸಬೇಕು.ಈವರೆಗೆ ಸಾಧಿಸಿದ ಪ್ರಗತಿ ವರದಿ ಜಿ.ಪಂ ಸಿಇಓ ಅವರಿಗೆ ನೀಡಿ ಎಷ್ಟು ಜನ ಫಲಾನುಭವಿಗಳು ಈ ಯೋಜನೆಯಡಿ ಲಾಭ ಪಡೆದಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು.ಅದರಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಲೀಡ್ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯ ಗಳ ಬಗ್ಗೆ ಪರಿಶೀಲಿಸಿ ನಿಖರ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಯೋಜನೆಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಗಮನ ನೀಡುವಂತೆ ಅವರು ಸೂಚನೆ ನೀಡಿ ಫಲಿತಾಂಶ ಕಡಿಮೆ ಕುರಿತು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಪರಿಣಾಮಕಾರಿ ಯೋಜನೆ ರೂಪಿಸಲು ಅವರು ಸೂಚಿಸಿದರು. 

ಕಡಿಮೆ ತೂಕದ ಶಿಶುಗಳ ಜನನವನ್ನು ಶೇಕಡಾವಾರು ಕಡಿಮೆ ಮಾಡುವಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳು, ಅಪೌಷ್ಠಿಕತೆ ನಿವಾರಣೆ, ಐಸಿಡಿಎಸ್ ಕಾರ್ಯಕ್ರಮದ ಅಡಿಯಲ್ಲಿ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಪಡೆಯುವ ಮಹಿಳೆಯರ ಸಂಖ್ಯೆ ಮತ್ತು ರೋಗಿಗಳಿಗೆ ಒದಗಿಸಲಾದ ಪ್ರೋಟೀನ್-ಭರಿತ ಆಹಾರಗಳ ಕುರಿತು, ಶಿಕ್ಷಣ, ಕೃಷಿ ಮತ್ತು ಜಲಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಮೂಲಭೂತ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಮತ್ತು ಸವಾಲುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. 

ಇದಕ್ಕೂ ಮುನ್ನ ಅವರು ದೋರನಹಳ್ಳಿ ಅಂಗನವಾಡಿ ,ಹಾಗೂ ನಾಯ್ಕಲ್ ಗ್ರಾಮದ  ಗ್ರಂಥಾಲಯ, ಪರಿಶೀಲಿಸಿದರು. ಈ ಭೇಟಿ ವೇಳೆ ಹಾಗೂ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹಾಗೂ ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್  ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

ಕಷ್ಟದ ಜೀವನ ಶಿಸ್ತಿನ ಪಾಠಶಾಲೆ: ಶ್ರೀ ರಂಭಾಪುರಿ ಜಗದ್ಗುರುಗಳು



ಸವಣೂರ : ನೋವನ್ನು ನುಂಗಿ ಜೀವನದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಕಷ್ಟದ ಜೀವನ ಶಿಸ್ತಿನ ಪಾಠಶಾಲೆಯಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕು ಜೊತೆಗೆ ಸಮರ್ಥ ಮಾರ್ಗದರ್ಶನ ನೀಡುವ ಗುರು ಇದ್ದಾಗ ಜೀವನ ಸಾರ್ಥಕ ಹೊಂದುತ್ತದೆ. ಡಾ.ಗುರುಪಾದಯ್ಯ ಸಾಲಿಮಠರು ಗುರು ಸೇವಾ ನಿಷ್ಠರಾಗಿ ಪೀಠ-ಮಠಗಳು ನೀಡುವ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವುದು ಅವರ ಧರ್ಮಾಭಿಮಾನಕ್ಕೆ ಕಾರಣವಾಗಿದೆ. ವೀರತಪಸ್ವಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ಭಾಗದಲ್ಲಿ ಮಾಡಿದ ಧರ್ಮ ಜಾಗೃತಿಯನ್ನು ಮರೆಯುವಂತಿಲ್ಲ. ವೀರಶೈವರಾದವರು ಇಷ್ಟಲಿಂಗ ಧಾರಿಗಳಾಗಿ ಪ್ರತಿ ದಿನ ಕನಿಷ್ಠ ೫ ನಿಮಿಷವಾದರೂ ಪೂಜೆಗೈದರೆ ಜನ್ಮ ಪಾವನಗೊಳ್ಳುತ್ತದೆ. ಇಂದು ಧರ್ಮದ ದಾರಿಯನ್ನು ತಪ್ಪಿಸಿ ಜನರನ್ನು ಧರ್ಮದಿಂದ ದೂರವಿರಿಸುವ ಕಾರ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂಥವರಿAದ ಭಕ್ತ ಶ್ರದ್ಧಾಳುಗಳು ಎಚ್ಚರಿಕೆಯಿಂದ ಇರಬೇಕೆಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರುವನ್ನು ನಂಬಿ ನಡೆದವರ ಬಾಳು ಉತ್ಕೃಷ್ಟವಾಗಿ ಬೆಳಗುತ್ತದೆ ಎಂದರು. ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರು ಕರುಣೆಯಿದ್ದಾಗ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಬೆಳೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಗುಣ ಹೊಂದಿದಾಗ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಲ್ಲಾಪುರದ ಡಾ. ಗುರುಮಹಾಂತಯ್ಯ ಆರಾಧ್ಯಮಠರು ರಚಿಸಿದ “ಗೀತ ಮಂದಾರ” ಕೃತಿ ಹಾಗೂ ದಾವಣಗೆರೆ ವೀರೇಶ ಪುರಾಣಿಕರು ತಮ್ಮ ಕೈ ಬರಹದಿಂದ ರಚಿಸಿದ ಶ್ರೀ ರಂಭಾಪುರಿ ಜಗದ್ಗುರುಗಳ ಭಾವಚಿತ್ರ ಬಿಡುಗಡೆಗೊಂಡವು. ಸಮಾರಂಭದಲ್ಲಿ ಡಾ.ರಾಜಗುರು ಗುರುಸ್ವಾಮಿ ಕಲಕೇರಿ, ಗಂಗಾಧರಸ್ವಾಮಿ ಸಾಲಿಮಠ, ಶಿವಮೂರ್ತಯ್ಯ ಚರಂತಿಮಠ, ಶಿವಯ್ಯ ನಾಲ್ವತ್ವಾಡಮಠ, ವೀರಭದ್ರಯ್ಯ ಮಠದ, ರಾಜಶೇಖರ ಹಾಲೇವಾಡಿಮಠ, ಮಂಜುನಾಥ ಗಾಣಿಗೇರ, ಮಲ್ಲಾರೆಪ್ಪ ತಳ್ಳಿಹಳ್ಳಿ, ವೀರಯ್ಯಶಾಸ್ತಿç ಹಿರೇಮಠ ಉಪಸ್ಥಿತರಿದ್ದರು. ಡಾ.ಗುರುಪಾದಯ್ಯ ಸಾಲಿಮಠರು ಸ್ವಾಗತಿಸಿದರು. ಶಿವಪ್ರಕಾಶ ಬಳಿಗಾರ ನಿರೂಪಿಸಿದರು. ವೀರಯ್ಯ ಸಾಲಿಮಠರು ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಿತು.



 

ಶರಣರು ಸಾಧಿಸಿದ ಲಿಂಗಯೋಗವು ಸರ್ವಶ್ರೇಷ್ಠ ಯೋಗ: ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು

 


ಬಸವಕಲ್ಯಾಣ: “ಹನ್ನೆರಡನೇ ಶತಮಾನದಲ್ಲಿ ಗುರು ಬಸವಾದಿ ಶರಣರು ಸಾಧಿಸಿದ ಲಿಂಗಯೋಗ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಯೋಗವಾಗಿದೆ” ಎಂದು ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಅಭಿಮತ ವ್ಯಕ್ತಪಡಿಸಿದ್ದಾರೆ.

ಅವರು ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣದ ವತಿಯಿಂದ ಹಮ್ಮಿಕೊಂಡ ಅನುಭವ ಮಂಟಪ ಸಂಸತ್ತು 7ನೇ ಅದಿವೇಶನದ ಮೊದಲನೇ ಗೋಷ್ಟಿಯಲ್ಲಿ  ಮಾತನಾಡುತ್ತಾ. “ಲಿಂಗಯೋಗವೆಂದರೆ ಕೇವಲ ಆಧ್ಯಾತ್ಮಿಕ ಸಾಧನೆಗೆ ಮಾತ್ರ ಸೀಮಿತವಲ್ಲ. ಇದು ಜೀವನ ಪರಿವರ್ತನೆಯ ಶಕ್ತಿ ಹೊಂದಿರುವ ಪ್ರಾತ್ಯಕ್ಷಿಕ ಯೋಗವಾಗಿದೆ” ಎಂದು ಅವರು ವಿದ್ವತ್ತಿನಿಂದ ವಿವರಿಸಿದರು.

ಶರಣರು ವಚನಸಾಹಿತ್ಯದಲ್ಲಿ ಬೋಧಿಸಿದ ಷಟಸ್ಥಲವು ಅಂಗ ಲಿಂಗರ ಸಾಮರಸ್ಯಕ್ಕೆ ಭದ್ರ ಬುನಾದಿಯಾಗಿದೆಯಲ್ಲದೆ ಇದರಲ್ಲಿ ವಿಜ್ಞಾನ ಅಡಗಿದೆ. ಪ್ರತಿಯೊಬ್ಬ ಸಾಧಕರು ಶಿವಯೋಗ ಮಾರ್ಗವನ್ನು ಅನುಸರಿಸಿದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದೆಂದರು. 

ಇಷ್ಟಲಿಂಗ ಸಾಧನೆಯಿಂದ ದೇಹ ಶುದ್ಧಿಯಾಗುತ್ತದೆ. ಪ್ರಾಣಲಿಂಗ ಸಾಧನೆಯಿಂದ ಮನ ಶುದ್ಧಿಯಾಗುತ್ತದೆ. ಭಾವಲಿಂಗ ಸಾಧನೆಯಿಂದ ಆತ್ಮಶುದ್ಧಿಯಾಗಿ ಸಾಧಕನ ಇಡೀ ದೇಹ ಸರ್ವಾಂಗ ಲಿಂಗವಾಗಲು ಸಹಕಾರಿಯಾಗಿದೆ ಪ್ರತಿಯೊಬ್ಬರು ಸಾಧಿಸಲು ಮುಂದಾಗಬೇಕು ಎಂದರು. 

ಕೇವಲ ಧಾರ್ಮಿಕ ಕ್ರಿಯೆಗೆ ಸೀಮಿತರಾಗಬಾರದು ಎಂದು ಕಿವಿ ಮಾತು ಹೇಳಿದರಲ್ಲದೆ ಶಿವಯೋಗ ಸಾಧಿಸುವ ಸಾಧಕರಿಗೆ ವಿಶೇಷ ತರಬೇತಿ ನೀಡಲು ನಾವು ಕಾರ್ಯಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಶರಣರು ಮಠ ಸಂಸ್ಕೃತಿ ಹುಟ್ಟು ಹಾಕಿಲ್ಲ, ಜಗದ್ಗುರು ಪದವಿ ಹುಟ್ಟು ಹಾಕಿಲ್ಲ. ಶರಣರದು ಮಹಾಮನೆ ಕಲ್ಪನೆ ಇದೆ. ಮಹಾಮನೆ ಎಂಬುದು ವಿಶಾಲವಾಗಿತ್ತು, ಅದರೊಳಗೆ ಅನುಭವ ಮಂಟಪ ಚಿಂತನೆ ನಡೆಯುತ್ತಿತ್ತು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಗುಣತೀರ್ಥ ವಾಡಿ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ   “ಇಂದಿನ ಯುಗದಲ್ಲಿ ಮಾನವನಿಗೆ ಶಾಂತಿ, ಸಮಾನತೆ ಮತ್ತು ನೈತಿಕತೆಯ ಅವಶ್ಯಕತೆ ಇದೆ. ಶರಣರ ಲಿಂಗಯೋಗವೇ ಅದಕ್ಕೆ ಮೂಲ ಪರಿಹಾರ” ಎಂದು ಅವರು ಅಭಿಪ್ರಾಯಪಟ್ಟರು.

ಅನುಭವ ಮಂಟಪದ ಆಶಯವು ಸಂಸ್ಕಾರ, ಸಹೋದರ, ಸಮಾನತೆ, ಸಂಘಟನೆಯಿಂದ ಕೂಡಿತ್ತು. ಬಸವಣ್ಣನವರು ಒಬ್ಬ ಮನಃಶಾಸ್ತ್ರೀಯ ಗುಣ ಹೊಂದಿದ್ದರಿಂದಲೇ ಸರ್ವರನ್ನು ತನ್ನತ್ತ ಸೆಳೆದು ಸಮುದಾಯಿಕ ಲಿಂಗಯೋಗ ಸಾಧನೆ ಮಾಡಲು ಸಾಧ್ಯವಾಯಿತು. 

ಪೂಜ್ಯ ಶ್ರೀ ಡಾ. ಸಿದ್ಧರಾಮ ಬೆಲ್ದಾಳ ಶರಣರು ಶ್ರೇಷ್ಟ ಲಿಂಗಾನುಭಾವಿಗಳಾಗಿದ್ದು ಅವರ ಜ್ಞಾನಾನುಭವನ್ನು ಸಾಧಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು, ಸತ್ಯದೇವಿ ಮಾತಾಜಿ, ಗಂಗಾದಾರ ದೇವರು, ಸತ್ಯಕ್ಕ ಮಾತಾಜಿ ಬಂದವರ ಓಣಿ, ಬಸವ ದೇವರು ಸವದತ್ತಿ, ಶ್ರೀಕಾಂತ ಸ್ವಾಮಿ ಬೀದರ,   ಉಪಸ್ಥಿತರಿದ್ದರು.

Friday, 21 February 2025

ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು

 

 ಕಲ್ಯಾಣ ಕರ್ನಾಟಕದ ಮಠಗಳಲ್ಲಿ ಸಾಮರಸ್ಯ ಸೌಹಾರ್ದತೆ, ಸಮನ್ವಯತೆಯ ಕೇಂದ್ರವೆಂದು ಪ್ರಸಿದ್ಧವಾಗಿರುವುದು ಹಾರಕೂಡದ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನವಾಗಿದೆ. ಈ ಮಠಕ್ಕೆ ಪೂಜ್ಯ ಸಂಗನ ಬಸವರಿಂದ ಪ್ರಾರಂಭವಾಗಿ ಶ್ರೀ ಚನ್ನವೀರ ಶಿವಾಚಾರ್ಯರವರೆಗೆ ಏಳು ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಈಗ ಎಂಟನೇ ಪೀಠಾಧಿಪತಿಗಳಾಗಿ ಬಂದವರೇ ಪೂಜ್ಯ ಶ್ರೀ ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡದ ವೇದಮೂರ್ತಿ ಶ್ರೀ ಕರಬಸಯ್ಯ ಹಿರೇಮಠ ಮತ್ತು ಸುಭದ್ರ ತಾಯಿಯವರ ಮಗನಾಗಿ ೦೧-೦೭-೧೯೬೩ ರಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ರೇವಣಸಿದ್ದಯ್ಯ. ಶ್ರೀಗಳು ತಮ್ಮ ಶಿಕ್ಷಣಾ ಅಭ್ಯಾಸವನ್ನು ಹಾರಕೂಡದಲ್ಲಿ ಪ್ರಾರಂಭಿಸಿದರು. ಕಲಬುರ್ಗಿಯ ಶರಣಬಸವೇಶ್ವರ ಪ್ರೌಢಶಾಲೆ, ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ೨೯೮೪ ರಲ್ಲಿ ಬಿ.ಎ‌ ಪದವಿಯನ್ನು ಪೂರೈಸಿದರು. ಧಾರವಾಡ ವಿಶ್ವವಿದ್ಯಾಲಯದಿಂದ ೧೯೮೬ ಎಂ.ಎ.ಪದವಿ  ಪಡೆದರು. ಹುಬ್ಬಳ್ಳಿಯ ಮೂರು ಸಾವಿರಮಠದ ಡಾ.ಗಂಗಾಧರ ರಾಜ ಯೋಗೇಂದ್ರ ಜಗದ್ಗುರುಗಳು ಪ್ರಭಾವದಿಂದ ಸಾಹಿತ್ಯ ಆಸಕ್ತಿ. ಶಿವಯೋಗ ಮಂದಿರದಲ್ಲಿ ಸ್ವಾಮಿ ತರಬೇತಿ ಹೊಂದಿ ಕನ್ನಡ ಮತ್ತು ಸಂಸ್ಕೃತ ಭಾಷೆ- ಸಾಹಿತ್ಯ ಪ್ರೌಢಿಮೆ ಹೊಂದಿದರು.
      ಶ್ರೀ ರೇವಣಸಿದ್ಧರು ಚನ್ನವೀರರರಾಗಿ ಹಾರಕೂಡ ಹಿರೇಮಠ‌ ಸಂಸ್ಥಾನದ ಪಟ್ಟಾಧಿಕಾರವನ್ನು ೨೫-೦೪-೧೯ ೯೬ ರಲ್ಲಿ ಹೊಂದಿದರು.ಅಲ್ಲಿಂದ ಸಣ್ಣ ಮಠದ ಜವಾಬ್ದಾರಿ ಹೊತ್ತು ಮಠದ ಪರಂಪರೆಯನ್ನು ಮುಂದುವರಿಸುವ‌ ಸಾಮಥ್ರ್ಯ ಹೊಂದಿದರು.ಅಪಾರ ಭಕ್ತ ಆರಾಧ್ಯ ಗುರುಳಾದರು. ಮಠದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಲಿ.ಚನ್ನಬಸವ ಶಿವಯೋಗಿಗಳು, ಲಿಂ.ಗುರುಲಿಂಗ ಶಿವಾ ಚಾರ್ಯರನ್ನು, ಪಂಚಪೀಠ, ಆಚಾರ್ಯ ಪರಂಪರೆ, ಶರಣ ಪರಂಪರೆಯೊಂದಿಗೆ ಸರ್ವಧರ್ಮ, ಸರ್ವಜಾತಿ, ಸಕಲ ಮತಗಳನ್ನು ಒಳಗೊಂಡು ಸಕಲ ಜೀವಾತ್ಮರಿಗೆ ಲೇಸ ಬಯಸುವ ಕಾರ್ಯಕೈಗೊಂಡು ಸರ್ವ ಜನಾಂಗದ ಶಾಂತಿ‌ಯ ತೋಟವಾಗಿಸಿಕೊಂಡ ಮಹಾ ಮಾನವತಾವಾದಿಯಾದವರು.
      ಮಠದ ಆವರಣದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ, ದಾಸೋಹ ಮನೆ, ಶಾಲೆ,ಕುಸ್ತಿ, ಕ್ರೀಡಾಂಗಣ, ಕಲ್ಯಾಣ ಮಂಟಪ, ಕಳಸಾರೋಹಣ,ಮೂರ್ತಿ ಪ್ರತಿಷ್ಠಾನ, ತಂದೆ- ತಾಯಿ ಸ್ಮರಣೆ ಭವನ, ರಥೋತ್ಸವ, ಜಾತ್ರೆ, ದಪೂಜೆ ಪುನಸ್ಕಾರ, ಜಾನುವಾರು, ಶಿಬಿರಗಳು, ತರಬೇತಿ, ಕಲೆ, ಸಂಗೀತ ದರ್ಬಾರ್, ಭಜನೆ, ಜಾನಪದ ಕಲೆ- ಹಾಡು ಪ್ರದರ್ಶನ. ಸಾಹಿತ್ಯ ಸಮ್ಮೇಳನ ಆಯೋಜನೆ, ಸಂಗೀತ ಸಮ್ಮೇಳನ, ಧರ್ಮ ಗೋಷ್ಠಿ, ಅನುಭಾವ ಪ್ರಚಾರೋಪನ್ಯಾಸ, ೧೦೩ಕ್ಕೂ ಹೆಚ್ಚು ಪುಸ್ತಕ ಪ್ರಕಟ. ವಿಷಯ ವಚನ ೧೫ ಸಂಪುಟಗಳು. ಪುರಾಣ, ನಾಟಕ ಪ್ರದರ್ಶನ, ಹೀಗೆ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ, ಕನ್ನಡ ಪರಿಚಾರಕರಾಗಿದ್ದಾರೆ.
         ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಸುಲಭವಾಗಿ, ಉತ್ತಮ ಶಿಕ್ಷಣ ನೀಡಲು ಯುಕೆಜಿಯಿಂದ ಪದವಿ ಹಂತದವರೆಗೂ ಶಿಕ್ಷಣ ಕೇಂದ್ರವನ್ನು ಹಾರಕೂಡ, ಚಿಂಚೋಳಿ, ಭಾಲ್ಕಿ, ಮೊದಲಾದ ಕಡೆ ಶಿಕ್ಷಣ ಕೇಂದ್ರ ಅದರಲ್ಲೂ ಕನ್ನಡ ಮಾಧ್ಯ ಮದಲ್ಲಿ, ಉಚಿತ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪ್ರೇರೇಪಿಸಿದವರು. ಪಾಲಕರು, ಶಿಕ್ಷಕರ ಸ್ಮರಣೆ ಮಾಡಿಸುತ್ತಿದ್ದಾರೆ.
 


           ಪ್ರಶಸ್ತಿ ನೀಡುವ ಮಠವಾಗಿದೆ. ಕವಿ, ಸಾಹಿತಿ, ಕಲಾವಿ‌ದರು, ಬಡವರಾಗಬಾರದೆಂದು ಚನ್ನಶ್ರೀ ಪ್ರಶಸ್ತಿ, ಚನ್ನರತ್ನ, ಕಲ್ಯಾಣ ಕರ್ನಾಟಕ ಸಂಗೀತ ರತ್ನ, ಶಿಕ್ಷಣ ರತ್ನ, ಬಸವಭಾನು, ಕಲ್ಯಾಣ ಕರ್ನಾಟಕ ರತ್ನ, ಭಜನಾ ಪ್ರಶಸ್ತಿ, 
ಅಲ್ಲದೆ ಕನ್ನಡ ನಾಡಿನ ಪ್ರತಿಷ್ಠಿತ ೧ ಲಕ್ಷ, ೨ ತೊಲ ಚಿನ್ನದ ಪದಕ ಪ್ರಶಸ್ತಿ ಫಲಕ ಹೊಂದಿದೆ. ಇದುವರೆಗೆ ೧೨ ಜನರಲ್ಲಿ ಪ್ರದಾನ ಮಾಡಲಾಗಿದೆ. 
    ಪೂಜ್ಯರು ಸಾಹಿತಿಗಳು. ಅವರು ನೀಡುವ ಆಶೀರ್ವಚನ ಸಂದೇಶ, ಪ್ರವಚನ, ವಾಗ್ಮಿತನ, ಮೂಲಕ ಜನಸಾಮಾನ್ಯರಿಂದ ಹೀಡಿದು ವಿದ್ವಾಂಸರಿಗೂ ಅನ್ವಯವಾಗುವ‌ ಹಿತ ವಚನ ಬೋಧನೆ ಮಾಡುವರು. ಹಡಪದ ಅಪ್ಪಣ್ಣನ ನೂರ ವಚನ ಗಳ ಸಂಗ್ರಹ,ಚನ್ನ ಚಿಂತನ,ಚನ್ನಚಂದ್ರಹಾರ, ಚನ್ನಕಾಂತ ವಿಚಾರ ಬಿಂದುಗಳು, ಶ್ರೀಚನ್ನ ನುಡಿ ಎನ್ನುವ ಐದು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸಮನ್ವಯತೆ ಹೊಂದಿದೆ. ಸರಳವಾಗಿ ಸರ್ವರು ಓದುವ ಸಮತಾ ಭಾವ ನೀಡುವುದು.
   ಪೂಜ್ಯರ ಕುರಿತು ಚನ್ಮವೀರ, ಹಾರಕೂಡ ಸಿರಿ, ನಡೆದಾಡುವ ದೇವರು, ಚನ್ನ ಶ್ರೀನಿಧಿ, ಚನ್ನವೀರ ಪದನಮನ
ಚನ್ನ ಚಂದನ, ನುಡಿಚನ್ನ, ವಚನ ವಾರಿಧಿ, ಚನ್ನ ಸಂಭ್ರಮ, ಚನ್ನಶ್ರೀವಾಣಿ, ಅಲ್ಲದೇ ಮಠದ ಹಾಗೂ ಶ್ರೀಗಳ ಕುರಿತು ಎಂಫಿಲ್,ಪಿಎಚ್.ಡಿಗಳಾಗಿವೆ.  ಶಿವಾಚಾರ್ಯ ರತ್ನ, ಸದ್ಧರ್ಮ ಶಿಖಾಮಣಿ, ಮನುಕುಲ ರತ್ನ, ದಾಸೋಹ ಜ್ಯಾನ ರತ್ನ, ಆಧ್ಯಾತ್ಮ ಸಿರಿ, ಅನ್ನದಾನೇಶ್ವ‌ರ  ಪ್ರಶಸ್ತಿ, ಸ್ವರ ಮಾಧುರಿ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ರತ್ನ, ಕಲ್ಯಾಣ ಕರ್ನಾಟಕ ರತ್ನ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಕಲ್ಯಾಣ ಕರ್ನಾಟಕ ಎರಡನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಹೊಂದಿದ್ದರು ಈಗ ಬೇಲೂರು ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ‌ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ‌ಸಂದಿದೆ.

-ಡಾ. ರಾಜಕುಮಾರ ಮಾಳಗೆ ಕಲಬುರಗಿ

ಗುರುದ್ರೋಹಿ ಕನ್ಹೇರಿ ಸ್ವಾಮಿಗಳು: ಬಹಿರಂಗ ಕ್ಷಮೆ ಯಾಚಿಸಲಿ : ಡಾ. ಚನ್ನಬಸವಾನಂದ ಜಗದ್ಗುರುಗಳು

 

ಬೀದರ: ಮಹಾರಾಷ್ಟçದ ಕೋಲ್ಹಾಪುರ ಸಮೀಪದ ಕನ್ಹೇರಿ ಮಠವು ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಮತ್ತು ಶೂನ್ಯ ಪೀಠದ  ಪರಂಪರೆಯ ಮಠ. ಶರಣರಾದ ಶ್ರೀ ಕನ್ಹೇರಿ ಕಾಡಸಿದ್ದೇಶ್ವರರು ಅಪ್ಪಟ ಬಸವ ಭಕ್ತರು. ಆದರೆ ಆ ಶರಣ ಪರಂಪರೆಯ ಪೀಠದ ಮೇಲೆ ಕುಳಿತಿರುವ ಈಗಿನ ಮಠಾಧೀಶರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಶರಣರ ಪರಂಪರೆಯನ್ನೇ ಅದೃಶ್ಯಗೊಳಿಸಿದ್ದಾರೆ. ಇತ್ತಿಚಿಗೆ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊAದರಲ್ಲಿ ಬಸವ ಭಕ್ತರನ್ನು ತಾಲಿಬಾನಿಗಳೆಂದು ಆರೋಪಿಸಿದ್ದು, ಭಕ್ತರೋಬ್ಬರು ನಿಮ್ಮ ಮಠವು ವೈದಿಕವೋ ಅಥವಾ ಅವೈದಿಕವೋ ಎಂದು ಪ್ರಶ್ನೆ ಕೇಳಿದಾಗ ಅದನ್ನು ಕೇಳಲು ನೀಯಾರು? ಎಂದು ಸ್ವಾಮಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ವಚನಗಳನ್ನು ಬೊಗಳು ಬರೀ ಹಂಗೆ ಪ್ರಶ್ನೆ ಕೇಳುತ್ತಿದ್ದಿಯಲ್ಲ ಎಂದು ದುರಹಂಕಾರದಿAದ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅವಮಾನ ಮಾಡಿದ್ದಾರೆ.

ಈ ಕನ್ಹೇರಿ ಮಠವು ವೈದಿಕ ಮಠವೋ ಅಥವಾ ಲಿಂಗಾಯತ ಧರ್ಮದ ಮಠವೋ ಎಂಬುದಕ್ಕೆ ಈ ಮಠದ ಕರ್ತೃ ಅಥವಾ ಮೂಲಪುರುಷ ಕಾಡಸಿದ್ದೇಶ್ವರ ವಚನಗಳಿಂದಲೇ ತಿಳಿದುಕೊಳ್ಳೋಣ.
ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಇವು ಲಿಂಗಾಯತ ಧರ್ಮದ ಅಂಗವಾಗಿವೆ. ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಮತ್ತು ಭೃತ್ಯಾಚಾರ ಪ್ರಾಣ ಸ್ವರೂಪವಾಗಿವೆ. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಆರು ಸ್ಥಲಗಳು ಲಿಂಗಾಯತ ಧರ್ಮ ಪುರುಷನ ಆತ್ಮದಂತಿವೆ. ಬಸವ ತತ್ವನಿಷ್ಠರಾದ ಕಾಡಸಿದ್ದೇಶ್ವರ ಶರಣರು ಸಹ ಈ ವಿಷಯ ಕುರಿತು ೫೦೦ ವಚನಗಳನ್ನು ರಚಿಸಿದ್ದಾರೆ. ಮತ್ತು ಅದರಂತೆ ನಡೆದುಕೊಂಡಿದ್ದಾರೆ. ಆದರೆ ಅದೇ ಮಠದ ಮಠಾಧೀಶರಾಗಿರುವ ಈ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಲಿಂಗಾಯತ ಧರ್ಮದ ಸಿದ್ದಾಂತಗಳನ್ನು ಗಾಳಿಗೆ ತೂರಿ ಸಂಪೂರ್ಣವಾಗಿ ಈ ಮಠವನ್ನು ಕಟ್ಟಾ ವೈದಿಕ ಮಠವನ್ನಾಗಿ ಬದಲಿಸಿದ್ದಾರೆ.
ಹಣೆಯ ಮೇಲೆ ವಿಭೂತಿಯಿಲ್ಲ. ಸದಾವಕಾಲ ಕುಂಕುಮ ಧರಿಸಿ ವೈದಿಕನಂತೆ ಪ್ರದರ್ಶಿಸುವ ಈ ಸ್ವಾಮಿಗಳ ಕೊರಳಲ್ಲಿ ಇಷ್ಟಲಿಂಗವಿದೆಯೋ ಇಲ್ಲವೋ ಅನುಮಾನವಿದೆ. ಶ್ರೀ ಕಾಡಸಿದ್ದೇಶ್ವರ ಶರಣರು ಬರೆದ ವಚನಗಳು ಗಣಾಚಾರ ತತ್ವದಿಂದ ಕೂಡಿವೆ.
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ
ಹೆಣ್ಣ ಮೆಚ್ಚವಿ ಲಿಂಗಕ್ಕೆ ಹೊರತಾದೆ
ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ………
ಎಂಬ ವಚನದಲ್ಲಿ ಬಸವೇಶ್ವರಾದಿಯಾಗಿ ಏಳ್ನೂರೆಪ್ಪತ್ತು ಶರಣರು ಹೇಳಿದ ತತ್ವಗಳು ಅಲ್ಲಗಳೆದರೆ ಅಂತಹ ಮತಿಭ್ರಷ್ಟರನ್ನು ಕಾಲು ಮೇಲಕ್ಕೆ ತಲೆ ಕೆಳಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತ ಕುರಿತಗಳ ಚರ್ಮ ಹರಿದ ಹಾಗೆ ಹರಿದು ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ. – ಕಾಡಸಿದ್ದೇಶ್ವರ ವಚನ ೨೬
ಇಷ್ಟಲಿಂಗಕ್ಕೆ ರೂಪು ಮೊದಲಾದ ಪದಾರ್ಥವ ಕೊಟ್ಟು ಸೇವಿಸಬೇಕು. ಪ್ರಾಣಲಿಂಗಕ್ಕೆ ರುಚಿ ಪದಾರ್ಥವ ನರ್ಪಿಸಿ ಸೇವಿಸಬೇಕು. ಭಾವಲಿಂಗಕ್ಕೆ ತೃಪ್ತಿ ಪದಾರ್ಥವ ನರ್ಪಿಸಿ ಸೇವಿಸಬೇಕು ಅವನೇ ಶರಣ ಸತಿ ಲಿಂಗಪತಿ ಎಂದು ಶರಣರು ತಮ್ಮ ೧೦೫ ನೇ ವಚನದಲ್ಲಿ ಹೇಳುತ್ತಾರೆ.
ಲಿಂಗ ಜಂಗಮ ಒಂದೆAದರಿಯದೆ
ಭಿನ್ನವಿಟ್ಟು ಅರ್ಚಿಸುವರು
ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೇ?
ಲಿAಗವೇ ಅಂಗ ಜಂಗಮವೇ ಪ್ರಾಣ ಎಂದು ಶ್ರೀ ಕಾಡಸಿದ್ದೇಶ್ವರರು ತಮ್ಮ ೯೭ನೇ ವಚನದಲ್ಲಿ ಹೇಳಿದ್ದಾರೆ. ಇಷ್ಟಲಿಂಗದ ಹೊರತು ಅನ್ಯದೇವತೆಗಳ ಪೂಜೆಯನ್ನು ಖಂಡಿಸಿದ್ದಾರೆ.
ಇಷ್ಟಲಿAಗದ ಮಹತ್ವ ಅರಿಯದೆ ದೇವರನ್ನು ಹೊರಗೆ ಹುಡುಕುವವರ ಕುರಿತು ಕಾಡಸಿದ್ದೇಶ್ವರ ಶರಣರು ಕುರುಡನ ಕೈಯಲ್ಲಿ ಕನ್ನಡಿಯ ಕೊಟ್ಟರೆ ನೋಡಬಲ್ಲನೇ? ಎಂದು ನೋವಿನಿಂದ ಹೇಳಿದ್ದಾರೆ. ಅಂತಹ ಮಹಾನ್ ಶರಣರ ಸ್ಥಾನದಲ್ಲಿ ಕುಳಿತ ಸ್ವಾಮಿಗಳು ಇಷ್ಟಲಿಂಗದ ಮಹತ್ವ ಅರಿಯದೆ ವೈದಿಕರ ಬೆನ್ನು ಹತ್ತಿರುವುದು ಲಿಂಗಾಯತರ ದುರ್ದೈವ ಸರಿ. ಕಾಡಸಿದ್ದೇಶ್ವರ ಶರಣರು ತಮ್ಮ ಇನ್ನೊಂದು ವಚನ ಸಂ. ೪೨೭ ರಲ್ಲಿ ಲೌಕಿಕ ಯಾರು ಎಂಬುದನ್ನು ವಿವರಿಸುತ್ತ
ಹೊನ್ನು ಹೆಣ್ಣು ಮಣ್ಣನ್ನು ಹಿಡಿದು
ಆಚರಿಸುವುದು ಲೌಕಿಕವಲ್ಲ
ಸತಿಸುತರ ಹಿಡಿದು ಮನೆಮಾರು ಕಟ್ಟಿ
ಪ್ರಪಂಚ ಮಾಡುವುದು ಲೌಕಿಕವಲ್ಲ
ಯಾವುದು ಲೌಕಿಕವೆಂದರೆ ಶ್ರೀ ಗುರು ಕರುಣದಿಂದ ಪಡಕೊಂಡ ಕರಕಮಲದ ಲಿಂಗಾAಗ ಸಮರಸವನರಿಯದೆವರು ಲೌಕಿಕರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿAಗ – ಕಾಡಸಿದ್ದೇಶ್ವರ ವಚನ ಈಗಿನ ಸ್ವಾಮಿಗಳು ಇಷ್ಟಲಿಂಗ ಯೋಗದ ಮರ್ಮವನರಿಯದೆ ಲೌಕಿಕವಾಗಿ ತಿರುಗುತ್ತಿರುವುದು ಮಹಾದುರಂತವೆAದೇ ಹೇಳಬೇಕಾಗುತ್ತದೆ
ಗುರುವಿನಿಂದ ಇಷ್ಟಲಿಂಗ ಧರಿಸಿ ಕಲ್ಲು ಕಟ್ಟಿಗೆ ಮಣ್ಣನ್ನು ಪೂಜಿಸುವವರು ಹುಟ್ಟು ಕುರುಡರು ಎಂದು ಶರಣ ಕಾಡಸಿದ್ದೇಶ್ವರರು ಕುಟುಕಿದ್ದಾರೆ. ತಮ್ಮ ಮಠದ ಮೂಲ ಕರ್ತೃಗಳ ಆಶಯಕ್ಕೆ ತತ್ವಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಈ ಅದೃಶ್ಯ ಸ್ವಾಮಿಗಳು ಬಸವ ಭಕ್ತರಿಗೆ ತಾಲಿಬಾನಿಗಳು ಎಂದು ಹೇಳುವುದು ಹಾಸ್ಯಾಸ್ಪದ. ಗುರುಲಿಂಗ ಜಂಗಮಕ್ಕೆ ದ್ರೋಹ ಮಾಡಿ ಬಸವಾದಿ ಶರಣರ ಮಠವನ್ನು ವೈದಿಕ ಮಠವನ್ನಾಗಿ ಮಾಡಿ ತಾನೂ ವೈದಿಕನಾವುಗುವುದು ಧರ್ಮದ್ರೋಹದ ಕೆಲಸ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಬಸವ ಭಕ್ತರಲ್ಲಿ ಬಹಿರಂಗ ಕ್ಷಮೆ ಯಾಚಿಸಿ ಇನ್ನು ಮುಂದೆ ಲಿಂಗಾಯತ ಧರ್ಮದಂತೆ ನಡೆಯುತ್ತೇನೆಂದು ಮಾತು ಕೊಡಬೇಕು. ಇಲ್ಲವಾದರೆ ಲಿಂಗಾಯತರು ಮಠ ಬಿಟ್ಟು ತೊಲಗಿ ಎಂದು ಚಳುವಳಿ ಮಾಡಬೇಕಾದೀತು…!

Thursday, 13 February 2025

ಧರ್ಮಾಚರಣೆಗಳು ಬೇರೆಯಾದರೂ ಆತ್ಮ ಚೈತನ್ಯ ಒಂದೆ - ಹಾರಕೂಡ ಶ್ರೀ

 ಚಿಂಚೋಳಿ : ನಾವು ಆಚರಿಸುವ, ಅನುಸರಿಸುವ, ಧರ್ಮಾಚರಣೆಗಳು ಬೇರೆ ಬೇರೆಯಾದರೂ ಎಲ್ಲರೊಳಗಿರುವ ಆತ್ಮ ಚೈತನ್ಯ ಒಂದೆ ಆಗಿರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಬಹುತ್ವ ನಮ್ಮ ದೇಶದ ವೈಶಿಷ್ಟ್ಯ 
 ಆಧ್ಯಾತ್ಮ ಸಾಧನೆಗಾಗಿ, ಆರಾಧನೆಗಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಿದರೂ ದೈವತ್ವದ ವಾರಿಧಿ ಒಂದೆ ಆಗಿರುತ್ತದೆ.
ಕಷ್ಟದುಳಿಯ ಸಹಸ್ರ ಪೆಟ್ಟು ಸಹಿಸಿದವನೇ ನಿಜವಾದ ಸಾಧಕನಾಗಿ ಹೊರಹೊಮ್ಮುತ್ತಾನೆ.
 ಲೋಕ ನಿಂದೆಗಳಿಗೆ ಕಿವಿಗೊಡದೆ, ಆತ್ಮ ಸಾಕ್ಷಿಯಿಂದ ಪ್ರಯತ್ನ ಶೀಲನಾದರೆ ಯಶಸ್ಸು ಲಭಿಸುತ್ತದೆ.
 ಭಾರತೀಯ ಪರಂಪರೆಯಲ್ಲಿ ವಾರಕಾರಿ ಭಕ್ತಿ ಪಂಥ ಒಂದು ವಿಶೇಷವಾದ ಆರಾಧನಾ ಪಂಥವಾಗಿದ್ದು ಪಂಡರಪುರ ವಿಠಲನ ನಾಮಸ್ಮರಣೆಯಿಂದ ಶಾಶ್ವತ ಶಾಂತಿ ಪಡೆಯಬಹುದಾಗಿದೆ.
 ಭಕ್ತಿಯಲ್ಲಿ ದೃಢತೆ ಇದ್ದರೆ ನಮ್ಮ ಹೃದಯ ವಿಠಲನ ಆವಾಸಸ್ಥಾನವಾಗಿರುತ್ತದೆ.
 ಸೌಹಾರ್ದತೆಯ ತೊಟ್ಟಿಲಿನಂತಿರುವ ಸಾಲೆ ಬೀರನಳ್ಳಿ ಗ್ರಾಮದ ಜನತೆ ಬದುಕು ಯಾವತ್ತೂ ಶ್ರೇಯಸ್ಸಿನಿಂದ ಕೂಡಿರಲಿ, ಈ ನಿಟ್ಟಿನಲ್ಲಿ ಹಾರಕೂಡ ಚೆನ್ನಬಸವರ ಆಶೀರ್ವಾದ ಸದಾ ಎಲ್ಲರನ್ನೂ ಕಾಪಾಡಲಿ ಎಂದು ಶುಭ ಹಾರೈಸಿದರು.
ವೀರೇಶ್ವರ ಶಿವಾಚಾರ್ಯರು ಧನಶ್ರೀ ಹಾಗೂ  ಸುಭಾಷ ರಾಥೋಡ ಮಾತನಾಡಿದರು.
ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
 ಜಗನ್ನಾಥ ರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ರೇವಣಸಿದ್ದಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
 ನವಲಿಂಗ ಪಾಟೀಲ ನಿರೂಪಿಸಿದರು.



ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ವೀರೇಶ್ವರ ಶಿವಾಚಾರ್ಯರು ಧನಶ್ರೀ, ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಸುಭಾಷ ರಾಥೋಡ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ, ಜಗನ್ನಾಥ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...