ads

Search This Blog

Wednesday, 5 March 2025

ಏಪ್ರಿಲ್ 5 ಹಾಗೂ 6 ರಂದು ತೃತೀಯ ಶರಣ ಸಮಾಗಮ. ಶರಣ ಜ್ಞಾನ ಶಿಬಿರ. ಶರಣೆ ದಾನಮ್ಮ ಉತ್ಸವಕ್ಕೆ ಪೂಜ್ಯ ಬಸವಪ್ರಭು ಸ್ವಾಮಿ ಕರೆ


ಬಸವಕಲ್ಯಾಣ : ಬರುವ ಏಪ್ರಿಲ್ ತಿಂಗಳ ಮೊದಲನೆಯ ವಾರದಲ್ಲಿ ಎರಡು ದಿನಗಳ ಶರಣ ಸಮಾಗಮ ಹಾಗೂ ಶರಣೆ ದಾನಮ್ಮ ಉತ್ಸವವನ್ನು ಪ್ರತಿ ವರ್ಷ ದಂತೆ ಈ ವರ್ಷ ಸಹ ಎರಡು ದಿನ ಶರಣ ಜ್ಞಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಪೂಜ್ಯ ಬಸವಪ್ರಭು ಸ್ವಾಮಿಜಿಯರು ತಿಳಿಸಿದರು.

       ಅವರು ಶೋಧವಾಣಿಯೊಂದಿಗೆ ಮಾತನಾಡುತ್ತ ವಿವರ ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಅನೇಕ ಸಂಸ್ಕಾರ ಮತ್ತು ಸಂಸ್ಕೃತಿ ಹಿನ್ನೆಲೆ ಇಟ್ಟುಕೊಂಡು   ಗುಣ ತೀರ್ಥ ವಾಡಿಯ ಕಲ್ಯಾಣ ಮಹಾಮನೆಯಲ್ಲಿ ಏಪ್ರಿಲ್ ೫ ಹಾಗೂ ೬ ರಂದು ತೃತೀಯ ಶರಣ ಸಮಾಗಮ ಹಾಗೂ ದಾನಮ್ಮ ಉತ್ಸವ ನಡೆಯುತ್ತದೆ ಎಂದು ಪೂಜ್ಯ ರು ನುಡಿದರು.

     ಈ ವರ್ಷ ಅನೇಕ ಸಾಮಾಜಿಕ ಹಾಗೂ ಸಾಹಿತಿಕವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಸಮಾರಂಭದಲ್ಲಿ ಕರ್ನಾಟಕದ ಅನೇಕ ಜಿಲ್ಲೆಯಿಂದ ಮತ್ತು ಮಹಾರಾಷ್ಟ್ರ. ತೆಲಂಗಾಣ ರಾಜ್ಯದಿಂದ ಸಹ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಪೂಜ್ಯ ಬಸವಪ್ರಭು ಸ್ವಾಮಿ ಜಿಯವರು ತಿಳಿಸಿದರು. 

       ಈ ಉತ್ಸವಕ್ಕೆ ದಾನಮ್ಮ ಜ್ಯೋತಿ ಯಾತ್ರೆಯನ್ನು ಮೆರಗು ನೀಡಲಿದೆ. ೧೩ ವರ್ಷಗಳ ಕಾಲ ನಿರಂತರವಾಗಿ ಗುಡ್ಡಾಪುರ ಶರಣೆ ದಾನಮ್ಮ ಜ್ಯೋತಿ ಯಾತ್ರೆಯನ್ನು  ಜ್ಯೋತಿ ಹೊತ್ತಿಸಿಕೊಂಡು ಬೀದರ. ಕಲಬುರಗಿ. ವಿಜಯಪುರ. ಸೋಲಾಪುರ. ಸಾಂಗಲಿ ಕೊಲ್ಲಾಪುರ.ಮೂಲಕ ಬಸವಕಲ್ಯಾಣ ಕಲ್ಯಾಣ ಮಹಾಮನೆಗೆ ಬರುತ್ತದೆ ಈ ಜ್ಯೋತಿ ಯಾತ್ರೆ ಯಲ್ಲಿ ಭಕ್ತರು ಭಕ್ತಿ ನಿಷ್ಠೆ ಶ್ರದ್ಧೆ ಆಸಕ್ತಿ ಹೊಂದಿ ಈ ಸಮಾರಂಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ನುಡಿದರು.

     ಈ ಉತ್ಸವದಲ್ಲಿ ಅನೇಕ ಹಿರಿಯ ಸಾಹಿತಿಗಳು. ಜನ ನಾಯಕರು. ಬಸವ ಅನುಯಾಯಿಗಳು ಪಾಲ್ಗೊಂಡು ದಾನಮ್ಮನ ಭಕ್ತಿಗೆ ಕೃಪೆಯಾಗಲಿದ್ದಾರೆ‌ ಹಾಗೂ ಈ ಎರಡು ದಿನಗಳ ಉತ್ಸವದಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ವಿಗೊಳ್ಳಿಸಬೇಕೆಂದು ಪೂಜ್ಯ ಬಸವಪ್ರಭು ಸ್ವಾಮಿಜಿ ಮನವಿ ಮಾಡಿದರು.

Monday, 3 March 2025

ಮರಾಠಾ ಸಮಾಜದ ಅಭಿವೃದ್ಧಿಗೆ ಶ್ರಮಸುವೆ: ಸಾಗರ ಖಂಡ್ರೆ

 

ಬೀದರ: ಮರಾಠಾ ಸಮಾಜದ ಅಭಿವೃದ್ಧಿಗೆ ನಾನು ನಿರಂತರವಾಗಿ ಶ್ರಮಿಸುವೆ. ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಬೀದರ ಜಿಲ್ಲೆಗೆ ನೀಡಬೇಕೆಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಲು ಪ್ರಯತ್ನಿಸುವೆ ಎಂದು ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ತಿಳಿಸಿದರು.
ಸಕಲ ಮರಾಠಾ ಸಮಾಜದ ವತಿಯಿಂದ ಪ್ರತಾಪ ನಗರದ ಸರ್ಕಾರಿ ನೌಕರರ ಸಮುದಾಯ ಭವನದ ಸಭಾಂಗಣದಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ಷತ್ರೀಯ ಮರಾಠಾ ಸಮುದಾಯದ ಭವನ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಕೂಡಲೇ ಈ ಭವನಕ್ಕೆ ಸಂಸದರ ಅನುದಾನದಲ್ಲಿ ರೂ. ೨೫ ಲಕ್ಷ ನೀಡುವುದಾಗಿ ಭರವಸೆ ನೀಡಿದರು.


ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಮರಾಠಾ ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಬೇಕಾಗಿರುವುದು ಅತಿ ಅವಶ್ಯಕತೆಯಿದೆ. ಹಾಗಾಗಿ ಲೋಕಸಭೆಯಲ್ಲಿ ಈ ಕುರಿತು ಅಧಿವೇಶನದ ಸಂದರ್ಭದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು. ಬೀದರ ನಗರದಲ್ಲಿ ಮರಾಠಾ ಸಮುದಾಯ ಭವನಕ್ಕೆ ೨ ಎಕರೆ ಜಮೀನು ನೀಡಬೇಕೆಂಬ ಬೇಡಿಕೆ ಈಡೇರಿಸುವೆ ಜೊತೆಗೆ ಪ್ರತಿಯೊಂದು ತಾಲೂಕಿನಲ್ಲಿ ಶಿವಸೃಷ್ಟಿ ಹೆಸರಿನ ಶಿವಾಜಿ ಮಹಾರಾಜರ ಸಾಧನೆಗಳನ್ನು ತಿಳಿಸುವ ವಸ್ತುಪ್ರದರ್ಶನ ನಿರ್ಮಾಣ ಮಾಡಲು ಪ್ರಯತ್ನಿಸುವೆ ಎಂದು ಸಾಗರ ಖಂಡ್ರೆ ಹೇಳಿದರು.
ಅಭಿನಂದನಾ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶೋಕಕುಮಾರ ಕಣಜಿಕರ್ ಅವರು ಸಂಸದ ಸಾಗರ ಖಂಡ್ರೆಯವರಿಗೆ ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮೂಳೆ ಮಾತನಾಡಿ ಮರಾಠಾ ಸಮಾಜವನ್ನು ೨ಎಗೆ ಸೇರ್ಪಡೆ ಮಾಡಬೇಕು. ಕರ್ನಾಟಕ ಮರಾಠ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಸ್ಥಾನದ ಭರ್ತಿ ಮಾಡಬೇಕು. ಮರಾಠಾ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದರೆ ನಿಗಮದ ವತಿಯಿಂದ ರೂ. ೫೦ ಲಕ್ಷ ಅನುದಾನವಿದೆ. ಈಗಾಗಲೇ ಬೀದರ ಜಿಲ್ಲೆಯ ಒಬ್ಬ ವಿದ್ಯಾರ್ಥಿಗೆ ಹಣ ಬಿಡುಗಡೆ ಸರ್ಕಾರ ಮಾಡಿದೆ. ಹೀಗಾಗಿ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮರಾಠ ನಿಗಮ ಮಂಡಳಿ ವತಿಯಿಂದ ಅನೇಕ ಸೌಲಭ್ಯಗಳನ್ನು ಸಮಾಜದ ಜನರಿಗೆ ಸರ್ಕಾರ ನೀಡುತ್ತಿದ್ದು, ಸಮಾಜದ ಜನರು ಈ ಕುರಿತು ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು. ಅರ್ಥವಾಗದಿದ್ದರೆ ನಾನು ಜನರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಮೂಳೆ ತಿಳಿಸಿದರು.
ಬೆಂಗಳೂರಿನ ಪೂಜ್ಯ ಶ್ರೀ ಜಗದ್ಗುರು ವೇದಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ ಮರಾಠ ಸಮಾಜದ ಇದೊಂದು ಕ್ಷತ್ರೀಯ ಸಮಾಜವಾಗಿದ್ದು, ಇದು ಎಲ್ಲರನ್ನೂ ಇಂಬಿಟ್ಟುಕೊAಡು ಸಮಾನತೆಯಿಂದ ಸಾಗುವ ಸಮಾಜವಾಗಿದೆ. ಎಲ್ಲರೂ ಐಕ್ಯತೆಯಿಂದ ಬದುಕಬೇಕು. ಪರಸ್ಪರ ಪ್ರೀತಿ ವಿಶ್ವಾಸ ಮತ್ತು ನಂಬಿಕೆಯಿAದ ಸಮಾಜದ ಏಳ್ಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸದಾ ಜಾಗೃತರಾಗಿ ಸಮಾಜದ ಸೇವೆಯ ಜೊತೆಗೆ ಸ್ವಯಂ ಏಳ್ಗೆಗೆ ಸಮಯ ನೀಡಬೇಕೆಂದು ತಿಳಿಸಿದರಲ್ಲದೆ, ಕಾರವಾರ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಶ್ರೀಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲ ಸ್ಥಾಪಿಸಲಾಗುತ್ತಿದೆ. ಅಲ್ಲಿ ಸಮಾಜದ ಮಕ್ಕಳಿಗೆ ಶಿಕ್ಷಣ, ಸಂಗೀತ, ವೇದಾಂತ, ಸಂಸ್ಕೃತ, ಸಂಸ್ಕಾರ, ಭಾಷಾ ಜ್ಞಾನ ಸೇರಿದಂತೆ ಮಕ್ಕಳ ಏಳ್ಗೆಗೆ ಬೇಕಾಗುವ ಸಂಸ್ಕಾರ ಇಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ ಮಾನಕಾರಿ, ಸ್ವಾಗತ ಮತ್ತು ಸತ್ಕಾರ ಸಮಿತಿ ಕಾರ್ಯದರ್ಶಿ ವೆಂಕಟರಾವ ಮಾಯಿಂದೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಬುರಾವ ಮಾನಕಾರಿ, ಸಕಲ ಮರಾಠಾ ಸಮಾಜದ ಮುಖಂಡರಾದ ಜನಾರ್ಧನ ಬಿರಾದಾರ, ಪಂಚಶೀಲ ಪಾಟೀಲ, ಜನಾರ್ಧನ ವಾಘಮಾರೆ, ಸಕಲ ಮರಾಠಾ ಸಮಾಝದ ಸಂಯೋಜಕರಾದ ಪ್ರದೀಪ ಬಿರಾದಾರ, ಪ್ರಮುಖರಾದ ಪ್ರಕಾಶ ಪಾಟೀಲ, ಕಿರಣ ಬಿರಾದಾರ, ತಾತ್ಯಾರಾವ ಪಾಟೀಲ ಬಸವಕಲ್ಯಾಣ, ರಘುನಾಥರಾವ ಜಾಧವ್, ಪಾಂಡುರAಗ ಕಣಜಿ, ಮೀನಾಕ್ಷಿ ಕಾಳೆ, ಹಣಮಂತರಾವ ಚವ್ಹಾಣ, ಸತೀಶ ಪಾಟೀಲ, ಕಿಶನರಾವ ಪಾಟೀಲ, ಬನಸಿಲಾಲ್ ಬೊರೊಳೆ, ನಾರಾಯಣ ಪಾಟೀಲ, ವಿದ್ಯಾವಾನ್ ಪಾಟೀಲ, ಶಾಹುರಾಜ್ ಪವಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮೂಳೆ ಅವರನ್ನು ಸಕಲ ಮರಾಠಾ ಸಮಾಜದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಮರಾಠಾ ಸಮಾಜದ ಸುಮಾರು ೫ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

Sunday, 2 March 2025

ಭಾರತ ಸಾಂಸ್ಕೃತಿಕ ಇತಿಹಾಸಕ್ಕೆ ಕೋಲಿ ಜನಾಂಗದ ಕೊಡುಗೆ ಅಪಾರವಾಗಿದೆ.


 ಬಸವಕಲ್ಯಾಣ : ಕೋಲಿ ಜನಾಂಗ ಶ್ರಮಜೀವಿಗಳ, ಸಾಹಸಿಗಳ ಜನಾಂಗವಾಗಿದೆ. ಕಾಯಕ, ದಾಸೋಹ ಪ್ರಧಾನ ಜನಾಂಗವಾಗಿದೆ. ಜ್ಞಾನ ಶೌರ್ಯ ಸಾಹಸಗಳು ಇವರಲ್ಲಿ ರಕ್ತಗತವಾಗಿ ಹಾಸುಹೊಕ್ಕಾಗಿವೆ. ಅಧ್ಯಾತ್ಮದಲ್ಲೂ ಈ ಜನಾಂಗದವರ ಸಿದ್ಧಿ ಸಾಧನೆ ಸೇವೆಗಳು ಮಾದರಿಯಾಗಿವೆ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದರು. ಅವರು ಬಸವಕಲ್ಯಾಣ ಹತ್ತಿರದ ಸಸ್ತಾಪೂರ ಬಂಗ್ಲಾದಲ್ಲಿರುವ ಅಂಬಿಗರ ಚೌಡಯ್ಯ ಜಾಗೃತ ಪೀಠದ ಜಾತ್ರಾ ಮಹೋತ್ಸವದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಮುಂದುವರೆದು, 12ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ಶರಣ ಸಂಕುಲದಲ್ಲಿ ನಿಜ ಶರಣರಾಗಿ ಗುರುತಿಸಿಕೊಂಡಿದ್ದ. ಆತನ ವಚನಗಳು ಸತ್ಯ ನೇರ ದಿಟ್ಟ ನೈಜತನಕ್ಕೆ ಸಾಕ್ಷಿಯಾಗಿವೆ. ಹಾಗಾಗಿಯೇ ಆತನ ವಚನಗಳು ಪ್ರಭಾವಕಾರಿಯಾಗಿವೆ. ಓದುಗರ ಮೇಲೆ ದಟ್ಟ ಪರಿಣಾಮ ಬೀರುತ್ತವೆ ಎಂದರು. ಸ್ವತಂತ್ರö್ಯ್ರ ನಂತರ ಶಿಕ್ಷಣ ಸಂಘಟನೆ ಹೋರಾಟದಲ್ಲಿ ಈ ಜನಾಂಗ ಹಿಂದೆ ಬಿದ್ದಿದ್ದರಿಂದ, ಈ ಜನಾಂಗ ನಿರ್ಲಕ್ಷಕ್ಕೊಳಪಟ್ಟು ಹಿನ್ನಡೆಯನ್ನು ಅನುಭವಿಸಿದೆ. ಬಸವಕಲ್ಯಾಣದ ಸಸ್ತಾಪೂರ ಬಂಗ್ಲಾದಲ್ಲಿ ಸ್ಥಾಪನೆಗೊಂಡ ಈ ಅಂಬಿಗರ ಚೌಡಯ್ಯ ಜಾಗೃತ ಪೀಠದ ಪೀಠಾಧಿಪತಿಗಳಾದ ರತ್ನಕಾಂತ ಶಿವಯೋಗಿಗಳ ಕೆಲಸ ಕಾರ್ಯಗಳು ಜನಾನುರಾಗಿ ದೇವಾನುರಾಗಿ ಆಗಿವೆ. ಹಾಗಾಗಿಯೇ ಈ ಮಠ ನಾಲ್ಕಾರು ವರ್ಷಗಳಲ್ಲೇ ಅದ್ವಿತೀಯವಾದ ಬೆಳವಣಿಗೆ ಕಂಡಿದೆ. ಬಾಗಲಕೋಟೆ ಬಿಜಾಪುರ ಕಲಬುರಗಿ ಬೀದರನಲ್ಲಿ ರತ್ನಕಾಂತ ಶಿವಯೋಗಿಗಳು ದಣಿವರಿಯದೇ ಓಡಾಡಿ ಜನರನ್ನು ಸಂಘಟಿಸಿ ಸರಿದಾರಿಗೆ ತರುತ್ತಿದ್ದಾರೆ. ಶರಣರ ಸಂತರ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಹಾಗಾಗಿ ಕಲ್ಯಾಣ ನಾಡಿನವರಾದ ನಾವೆಲ್ಲಾ ಇವರಿಗೆ ಸಾಥ್ ನೀಡುವುದು ಜರೂರಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತೊನಸನಳ್ಳಿ ಅಲ್ಲಮಪ್ರಭು ಮಠಾಧೀಶರಾದ ಡಾ. ಮಲ್ಲಣಪ್ಪ ಸ್ವಾಮಿಗಳು ಮಾತನಾಡುತ್ತಾ, ಇತಿಹಾಸದಲ್ಲಿ ವೇದವ್ಯಾಸ ಅಗಸ್ತö್ಯ ವಾಲ್ಮಿಕಿರಂತಹ ಅಸಂಖ್ಯ ಋಷಿಮುನಿಗಳು ಈ ಜನಾಂಗದಲ್ಲಿ ಆಗಿ ಹೋಗಿದ್ದಾರೆ. ಈಗಲೂ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಹಾಗೂ ಬಿಜಾಪೂರ ಜಿಲ್ಲೆಯ ದೂಡಿಹಾಳದ ಸಮರ್ಥ ಸದ್ಗುರು ಭೀಮಾಶಂಕರರAತಹ ಅನೇಕ ಯೋಗಿ, ಯೋಗಿಣಿಯರು ಈ ಜನಾಂಗದಲ್ಲಿ ಈಗಲೂ ಆಗಿ ಹೋಗುತ್ತಿದ್ದಾರೆ. ದಿವ್ಯ ಜ್ಞಾನಿಗಳು, ದಿವ್ಯ ಯೋಗಿಗಳನ್ನು ನೀಡಿದ ಶ್ರೇಯ ಈ ಜನಾಂಗಕ್ಕಿದೆ. ಭಾರತದ ಸಾಂಸ್ಕೃತಿಕವಾದ ಇತಿಹಾಸ ಬೆಳವಣಿಗೆಯಲ್ಲಿ ಈ ಜನಾಂಗದ ಕೊಡುಗೆ ಅಪಾರವಾದುದಾಗಿದೆ. ಹಾಗಾಗಿ ಈ ಜನಾಂಗದವರು ತಮ್ಮ ಇತಿಹಾಸ ಮತ್ತು ತಮ್ಮ ಚರಿತ್ರೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿ, ತಮ್ಮ ಜನಾಂಗದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ತಮ್ಮ ಇತಿಹಾಸ ಪುರುಷರ ಹಾದಿಯಲ್ಲಿ ಸಾಗಬೇಕು. ರತ್ನಕಾಂತ ಶಿವಯೋಗಿಗಳು ಮೌನಸಾಧಕರು ಮತ್ತು ಮಿತಭಾಷಿಗರು ಆಗಿದ್ದಾರೆ. ಇವರು ಏಕಾಂತ ಪ್ರೀಯರು, ಪೂಜಾನಿಷ್ಠರು ಆಗಿದ್ದಾರೆ. ತಾವು ಸ್ಥಾಪಿಸಿದ ಈ ಪೀಠಕ್ಕೆ ಜಾಗೃತ ಆಶ್ರಮವೆಂದು ಸೂಕ್ತ ಹೆಸರಿಟ್ಟು ಕಾರ್ಯತತ್ಪರಾಗಿದ್ದಾರೆ. ಬಿಜಾಪುರದಿಂದ ಕಲ್ಯಾಣದ ಈ ನೆಲಕ್ಕೆ ಬಂದು ಇವರು ಸಾಮಾಜಿಕ ಕ್ರಾಂತಿಗೈಯುತ್ತಿರುವುದು ಸಕಾಲಿಕವಾದುದಾಗಿದೆ. ಇವರ ಜನಜಾಗೃತಿ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವರು ಸ್ವತ: ಕ್ರಿಯಾಶೀಲರು ಸಜ್ಜನ ಸಾತ್ವಿಕರು ಸಚ್ಚಾರಿತ್ರö್ಯರು ಆಗಿದ್ದಾರೆ. ತಮ್ಮ ಸಂಪರ್ಕದ ಎಲ್ಲರಿಗೂ ತಮ್ಮ ಈ ಮಾರ್ಗ ಅನುಸರಿಸಲು ಪ್ರೇರೇಪಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ರತ್ನಕಾಂತ ಶಿವಯೋಗಿಗಳು ಮಾತನಾಡುತ್ತಾ, ಈ ಮಠದ ಬೆಳವಣಿಗೆಯಲ್ಲಿ ಅನೇಕರ ಅನನ್ಯವಾದ ಯೋಗದಾನವಿದೆ. ಈ ಮಠ ದೇಶಪ್ರೇಮ ಸಂಸ್ಕೃತಿಪ್ರೇಮ ಜಾಗೃತಿಗೊಳಿಸುವ ಮಠವಾಗಿದೆ. ಈ ಮಠದ ಒಡನಾಟಕ್ಕೆ ಬಂದವರು ತಾವು ಒಳ್ಳೆಯವರಾಗಿ ಬದಲಾಗುತ್ತಿದ್ದಾರಲ್ಲದೇ, ಬೇರೆಯವರಿಗೂ ಒಳ್ಳೆಯರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಠ ಆಧುನಿಕ ಕಲ್ಯಾಣದಲ್ಲಿ ಅದ್ಭುತ ಕಲ್ಯಾಣಕರ ಕೆಲಸ ಮಾಡುತ್ತಲಿದೆ. ಇದರ ಜನೋಪಯೋಗಿ ಕಾರ್ಯಗಳು ಸಮಾಜದಲ್ಲಿ ಸತ್ಪರಿಣಾಮ ಬೀರುವಂತಹವುಗಳಾಗಿವೆ. ಸರ್ವರ ಕಲ್ಯಾಣವಾಗಬೇಕೆಂಬುದು ಈ ಮಠದ ಸದಾಶಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗನಾಥ ಚಾಮಲೆ ಇವರು ಮಾತನಾಡುತ್ತಾ ಈಗಿನ ಕಾಲದಲ್ಲಿ ಯುವಜನರು ಆಧುನಿಕ ಆಶಾಪಾಶಗಳಿಗೆ ಬಲಿಬಿದ್ದು, ತಮ್ಮ ಜೀವನ ದುರಂತವಾಗಿಸಿಕೊಳ್ಳುತ್ತಿದ್ದಾರೆ. ತಮ್ಮ 30 ವರ್ಷ ವಯಸ್ಸಿನ ಒಳಗಡೆಯೇ ಅಪಘಾತ ಆಘಾತಕ್ಕೊಳಪಟ್ಟು ಸಾವನ್ನಪ್ಪಿ ತಮ್ಮ ಮನೆತನವನ್ನು ಕಷ್ಠನಷ್ಠಕೀಡು ಮಾಡುತ್ತದ್ದಾರೆ. ಈಗಿನ ಯುವಕರು ದುಶ್ಚಟಗಳು, ದುರ್ವ್ಯವಹಾರಗಳಿದಾಗಿ ಇವರು ಮುಂದೆ ಬರಲು ಆಗುತ್ತಿಲ್ಲ. ಹಾಗಾಗಿ ಸಮಾಜದ ಹಿರಿಯ ಬಾಂಧವರು ತಮ್ಮ ಪೀಳಿಗೆಯ ದುಶ್ಚಟಗಳನ್ನು, ಹಿಂಸೆಗಳನ್ನು, ದ್ವೇಷಗಳನ್ನು ಅಜ್ಞಾನವನ್ನು ತೊಲಗಿಸಿಕೊಂಡು ಮನೆಯೊಳಗಡೆ ಮನೆ ಹೊರಗಡೆ ಶಾಸ್ತೊçÃಕ್ತ ಜೀವನ ನಡೆಸಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ ಸಾಹಿತಿ ರುಕ್ಮೊದ್ದೀನ್ ಇಸ್ಲಾಂಪೂರ ಅವರು ಮಾತನಾಡುತ್ತಾ, ರತ್ನಾಕರ ಶಿವಯೋಗಿಗಳು ಜ್ಞಾನಿಗಳನ್ನು ಸಾಧಕರನ್ನು ಕಲಾವಿದರನ್ನು ಅಪಾರವಾಗಿ ಪ್ರೀತಿಸುತ್ತಾರೆ ಗೌರವಿಸುತ್ತಾರೆ ಆಶ್ರಯವಿಯುತ್ತಾರೆ. ಇವರಿಂದಾಗಿ ಅನೇಕರು ದುಶ್ಚಟ ದುರ್ಭಾವ ತೊರೆದು ಸರಿ ದಾರಿ ಹಿಡಿದಿದ್ದಾರೆ. ಇಲ್ಲಿನ ಪರಿಸರ ಅಧ್ಯಾತ್ಮ ಸಾಧನೆಗೆ ಯೋಗ್ಯ ಸ್ಥಳವಾಗಿದೆತಿ ಈ ಪೀಠವಿರುವ ಸ್ಥಳದಲ್ಲಿ ಲಾಲಧರಿ ಶ್ರೀಗಳು ಕಠೀಣ ತಪಸ್ಸು ಗೈದಿದ್ದಾರೆ. ಈ ಅಂಬಿಗರ ಚೌಡಯ್ಯ ಮಠದ ಹತ್ತಿರದಲ್ಲೇ ಬಂದವರ ಓಣಿ ಎನ್ನುವ ಐತಿಹಾಸಿಕ ಸುಕ್ಷೇತ್ರವಿದೆ. ರತ್ನಕಾಂತ ಶಿವಯೋಗಿಗಳು ತಪೋನಿಷ್ಠರಾಗಿದ್ದಾರೆ ಅಧ್ಯಾಯನಶೀಲರಾಗಿದ್ದಾರೆ. ಇವರಲ್ಲಿ ಅಪರಿಮಿತವಾದ ಸಂಘಟನಾಶಕ್ತಿ ವಾಕ್‌ಶಕ್ತಿ ಯೋಗಶಕ್ತಿ ಇದೆ. ಇವರ ಈ ಕಲ್ಯಾಣ ಪರಿಸರದಲ್ಲಿ ನೆಲೆ ನಿಂತು ಸತ್ಕಾರ್ಯ ಗೈಯುತ್ತಿರುವುದು ಶ್ಲಾಘ್ಯವಾದುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸಮಾಜ ಮುಖಂಡರಾದ ತುಕಾರಾಮ ರೊಡ್ಡೆ ರವರು ಮಾತನಾಡುತ್ತಾ, ವಾಲ್ಮಿಕಿ ಜನಾಂಗದವರು ಮುಂದೆ ಬರಬೇಕಾದರೆ ತಮ್ಮ ಮನೆಗಳನ್ನು ಸಂಸ್ಕಾರ ಕೇಂದ್ರಗಳನ್ನಾಗಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮನೆಯಲ್ಲಿ ನಿರಂತರ ಪೂಜೆ, ಪುನಸ್ಕಾರಗಳು ಗೈಯಬೇಕು. ಮತ್ತು ಮನೆಯಲ್ಲಿ ಗ್ರಂಥಾಲಯ ಇಟ್ಟುಕೊಳ್ಳಬೇಕು. ಅಧ್ಯಾತ್ಮಿಕಕೇಂದ್ರಗಳಿಗೆ ಸತ್ಸಂಗಗಳಿಗೆ ಕಲಾಕೇಂದ್ರಗಳಿಗೆ ಶಿಕ್ಷಣಕೇಂದ್ರಗಳಿಗೆ ಹಾಜರಾಗಿ ಸದಾ ಸೇವೆ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರತ್ನಕಾಂತ ಶಿವಯೋಗಿಗಳಿಗೆ ಮುದ್ರಿಕಾ ಷಣ್ಮುಖಪ್ಪ ಬೊಕ್ಕೆ ದಂಪತಿಗಳಿ0ದ ಕಡಿಸಕ್ಕರೆಯಲ್ಲಿ ತುಲಾಭಾರ ನಡೆಯಿತು ಹಾಗೂ ವಿದ್ಯಾವತಿ ಸೋಮು ಪರಂಡೆ ದಂಪತಿಗಳಿ0ದ ಹಣದಿಂದ ತುಲಾಭಾರ ನಡೆಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಸುಭಾಷ ಕಲಖೋರಾ, ಮಾರುತಿ ಚಿಕನಾಗಾಂವ ವಾಡಿ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಕೋಲಾಟ, ನೃತ್ಯ ನಡೆದವು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಧನೆಗೈದ ಜಯಶ್ರೀ ಹಣಮಂತ ದೇವುಬಾ ಗದ್ಲೆಗಾಂವ(ಬಿ), ಅಕ್ಷತಾ ತುಕಾರಾಮ ರೊಡ್ಡೆ, ಮಹೇಶ್ವರಿ ಮಾಣಿಕರಾವ ಗೋರಮುಡೆರವರಿಗೆ ಸತ್ಕರಿಸಲಾಯಿತು, ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು, ಸೇವಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಸ್ತಾಪೂರದ ಬಂಗ್ಲಾದ ಯಲ್ಲಾಲಿಂಗ ಮಠದ ಮಾತಾ ಮಹಾದೇವಿ, ಹಳ್ಳಿಖೇಡ (ಕೆ) ವಾಲ್ಮೀಕಿರಾಮ ಮಹಾರಾಜ, ಕೌಡಿಯಾಳ (ಎಸ್)ನ ಭಾಗ್ಯವಂತಿ ದೇವಿ, ನಗರಸಭೆ ಅಧ್ಯಕ್ಷ ಸಗಿರೊದ್ದೀನ್,ಉಪಾಧ್ಯಕ್ಷರಾದ ಲಕ್ಷಿö್ಮಬಾಯಿ ಭೀಮಾಪುಲೆ, ಅಝರ ಅಲಿ, ಪಿಂಟು ಜಮಾದಾರ, ಸಿದ್ರಾಮ ದೇವಬಾ, ಪೀರಪ್ಪಾ ಶಣಮೆ, ಪ್ರಕಾಶ ನಾಗೂರೆ, ವಾಲ್ಮಿಕಿ ಕೊಂಡಗೆ, ಸಂಜುಕುಮಾರ ಸುಣಗಾರ, ಮಲ್ಲಿಕಾರ್ಜುನ ನರನಾಳ, ಬಾಬುರಾವ ಚೆಂಗಟಾ, ತಿಮ್ಮಣ್ಣಾ ಮುಸ್ತಾಪೂರ, ಅನೀಲಕುಮಾರ  ಯರಬಾಗ, ದತ್ತು ಪದ್ಮೆ, ಗೋವಿಂದ ಚಾಮಲೆ, ಚನ್ನವೀರ ಜಮಾದಾರ, ಮಲ್ಲಿಕಾರ್ಜುನ ಬೊಕ್ಕೆ, ಗೋವಿಂದ ಗುರೂಜಿ, ದಿಲಿಪ ಗಿರಗಂಟೆ, ರಾಮಣ್ಣಾ ಮಂಠಾಳೆ, ಚಂದ್ರಕಾAತ ಮೇತ್ರೆ ಮುಂತಾದವರು

ಲಿಂಗಸುಗೂರಲ್ಲಿ ನೂತನ ನ್ಯಾಯಾಲಯದ ಕಟ್ಟಡ ಲೋಕಾರ್ಪಣೆ; ಇ-ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ

 

ರಾಯಚೂರು : ಲಿಂಗಸುಗೂರು ಐತಿಹಾಸಿಕ ಪಟ್ಟಣವಾಗಿದ್ದು, ರಾಷ್ಟ್ರಕೂಟರು, ಚಾಲುಕ್ಯರು ಹಾಗೂ ಮೌರ್ಯ ವಂಶಸ್ಥರು ಆಳ್ವಿಕೆ ಮಾಡಿದ ನೆಲ ಇದಾಗಿದೆ. ಇಲ್ಲಿನ ಜನರಿಗೆ ಉತ್ತಮ ರೀತಿಯಲ್ಲಿ ನ್ಯಾಯ ನೀಡುವ ನಿಟ್ಟಿನಲ್ಲಿ ವಕೀಲರು ಶ್ರಮಿಸಬೇಕೆಂದು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ಅವರು ಹೇಳಿದರು.      
ಮಾ.01ರ ಶನಿವಾರ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯದ ಕಟ್ಟಡ, ವಕೀಲರ ಭವನ, ನ್ಯಾಯಾದೀಶರ ವಸತಿಗೃಹ ಲೋಕಾರ್ಪಣೆ ಹಾಗೂ ಇ-ಸೇವಾ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೇರವರಿಸಿ ಅವರು ಮಾತನಾಡಿದರು.      
ಅಶೋಕನ ಶಿಲಾಶಾಸನ ದೊರಕಿರುವುದು ಇದೇ ಮಸ್ಕಿಯಲ್ಲಿ. ಬ್ರಿಟಿಷ್ ಆಳ್ವಿಕೆಯಲ್ಲಿ ಲಿಂಗಸುಗೂರು ಪಟ್ಟಣವು ಆಡಳಿತ ಹಾಗೂ ಕಾನೂನು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿತ್ತು. ಈ ಐತಿಹಾಸಿಕ ಹಿನ್ನೆಲೆ ಹೊಂದಿದ ಇಲ್ಲಿನ ಈ ಹೊಸ ನ್ಯಾಯಾಂಗ ಸಂಕೀರ್ಣ ಪ್ರಜಾಪ್ರಭುತ್ವ ಮತ್ತು ನ್ಯಾಯದ ತತ್ವಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಸಂಕೀರ್ಣ ಅತ್ಯಾಧುನಿಕ ನ್ಯಾಯಾಂಗ ಕೊಠಡಿಗಳು, ಡಿಜಿಟಲ್ ಮೂಲ ಸೌಕರ್ಯಗಳು, ಇ-ನ್ಯಾಯಾಲಯಗಳು, ವೀಡಿಯೋ ಕಾನ್ಫರೆನ್ಸ್ ಹಾಗೂ ವಿವಿಧ ನ್ಯಾಯಾಂಗ ಕಾರ್ಯ ವಿಧಾನಗಳನ್ನು ಸುಗಮಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ  ತ್ವರಿತವಾಗಿ ನ್ಯಾಯ ಒದಗಿಸಲು ಅನುವಾಗಲಿದೆ ಎಂದರು.
ಈ ವೇಳೆ ಸುಪ್ರಿಂಕೋರ್ಟನ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾ.ಡಾ.ಶಿವರಾಜ ವಿ.ಪಾಟೀಲ್ ಅವರು ಮಾತನಾಡಿ, ಆಸ್ಪತ್ರೆ ಮತ್ತು ಕೋರ್ಟಗಳು ಪ್ರೇಕ್ಷಣೀಯ ಸ್ಥಳಗಳಲ್ಲ. ಬದಲಿಗೆ ನೋವು ಮತ್ತು ಸಮಸ್ಯೆಗಳನ್ನು ಹೊತ್ತು ಬಂದವರಿಗೆ ಸ್ಪಂದನೆ ನೀಡಲಿವೆ. ಕಕ್ಷಿದಾರರ ಹಿತ ಕಾಪಾಡುವಲ್ಲಿ ಬದ್ಧತೆ, ಅನುಕಂಪ ಇರಬೇಕು. ನೋವಿನಿಂದ ಬಂದವರು ನಗುವಿನಂದ ಹೋಗುಬೇಕು. ಸೋತವರು ಸಮಾಧಾನ ದಿಂದ, ಗೆದ್ದವರು ಸಂತೋಷದಿAದ ಹೋಗುವಂತೆ ವಕೀಲರು ಕಾರ್ಯನಿರ್ವಹಿಸಬೇಕು. ಉತ್ತಮ ನ್ಯಾಯಾಧೀಶರಾಗಲು ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಕೀಲರಿಗೆ ಕಿವಿಮಾತು ಹೇಳಿದರು.  
ಈ ವೇಳೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ಮಾತನಾಡಿ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ಪ್ರಜಾಪ್ರಭುತ್ವದ ಹೃದಯವಾಗಿ ಕಾರ್ಯನಿರ್ವಹಿಸುತ್ತಿವೆ. ಸಂವಿಧಾನದ ಹಕ್ಕುಗಳನ್ನು ರಕ್ಷಿಸುವ ಮೂಲಕ ನ್ಯಾಯಾಂಗವು ಅದರ ಕಿರೀಟವಾಗಿ ನಿಂತಿದ್ದು, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪ್ರಮುಖವಾಗಿದೆ ಎಂದರು.
ಜನಸ್ನೇಹಿ ಮತ್ತು ಜನಪರವಾದ ಆಡಳಿತ ವ್ಯವಸ್ಥೆಯನ್ನು ಖಾತ್ರಿಪಡಿಸುವಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯವು ಮಹತ್ವದ್ದಾಗಿದೆ. ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದ್ದು, 371(ಜೆ) ಜಾರಿಯಿಂದ ಕಲ್ಯಾಣ ಕರ್ನಾಟಕ್ಕಕ್ಕೆ ವಿಶೇಷ ಸೌಲಭ್ಯಗಳನ್ನು ಕೊಡುವಂತ ಅವಕಾಶವನ್ನು ಒದಗಿಸಿಕೊಡಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರ ಸತತ ಪ್ರಯತ್ನದಿಂದ 371 (ಜೆ) ಜಾರಿ ಆಯಿತು ಎಂದರು.  
ಇದೇ ಸಂದರ್ಭದಲ್ಲಿ ಗೌರವಾನ್ವಿತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಎಮ್.ಜಿ. ಉಮಾ, ಹೈಕೋರ್ಟ್ ರಿಜಿಸ್ಟರ್ ಜನರಲ್ ಭರತ ಕುಮಾರ, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾರುತಿ ಬಗಾಡೆ, ನ್ಯಾಯಾಧೀಶರಾದ ಮಂಜುಳಾ, ಲಿಂಗಸೂಗೂರ ವಕೀಲರ ಸಂಘದ ಅಧ್ಯಕ್ಷರಾದ ಭೂಪನಗೌಡ ವಿ. ಪಾಟೀಲ್, ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸೇರಿದಂತೆ ವಿವಿಧ ನ್ಯಾಯಾಧೀಶರು, ವಕೀಲರು ಸೇರಿ ಇತರರು ಇದ್ದರು.


ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿಸಿರುವ ಡಿ.ಕೆ.ಶಿವಕುಮಾರ್ ನಡೆ...!

 

ಹೌದು... ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಷನ್‌ನಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅವರು ಭಾಗವಹಿಸುತ್ತಿದ್ದಂತೆಯೇ ಅವರ ನಡೆಯ ಕುರಿತು ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇಶಾ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊAಡಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು, ಡಿ.ಕೆ ಶಿವಕುಮಾರ್ ಅವರಿಗೆ ಯಾವುದೇ ಸಿದ್ಧಾಂತ ಇಲ್ಲವೇ ಎಂದು ಕೆಲವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಡಿಕೆ ಶಿವಕುಮಾರ ಅವರ ಇತ್ತೀಚಿನ ನಡೆಗಳು ಕಾಂಗ್ರೆಸ್ ಹೈಕಮಾಂಡ್ ವಿರೋಧವಾಗಿಯೇ ನಡೆಯುತ್ತಿರುವುದನ್ನು ಗಮನಿಸಬಹುದು. ಗಂಗಾ ನದಿಯಲ್ಲಿ ಮುಳುಗಿದರೆ ಬಡತನ ನಿವಾರಣೆಯಾಗುತ್ತದೆಯೇ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಹಿಂದೂಗಳ ಕೇಂಗಣ್ಣಿಗೆ ಗುರಿಯಾದರು. ಎಐಸಿಸಿ ಅಧ್ಯಕ್ಷರ ಟೀಕೆಯ ಬೆನ್ನಲ್ಲೇ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪತ್ನಿ ಸಮೇತ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಮುಳುಗುಹಾಕಿ ಬಂದರು. ಇದಕ್ಕೂ ಮುಂಚೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಅವರೂ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ವಿರೋಧದ ನಡುವೆಯೂ ದೇಶದಾದ್ಯಂತದಿAದ ಸಾಲು ಸಾಲು ಕಾಂಗ್ರೆಸ್ ನಾಯಕರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಎಷ್ಟೊಂದು ದುರ್ಬಲವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.


ಬಿಜೆಪಿಯವರೊಂದಿಗೆ ವೇದಿಕೆ:

ಇನ್ನು ಡಿ.ಕೆ.ಶಿವಕುಮಾರ ವಿಷಯಕ್ಕೆ ಬಂದರೆ, ಇಶಾ ಫೌಂಡೇಶನ್‌ನಿAದ ಪ್ರತಿ ವರ್ಷವೂ ಮಹಾಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಅದೇ ರೀತಿ ಈ ವರ್ಷವೂ ಕೊಯಮತ್ತೂರಿನಲ್ಲಿ ರಾತ್ರಿ ಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಆಧ್ಯಾತ್ಮಿಕ ಗುರುಗಳು ಸಂಗೀತ ಕಾರ್ಯಕ್ರಮ, ಧ್ಯಾನ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅವರು ವೇದಿಕೆ ಹಂಚಿಕೊAಡಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ಒಳಗೇ ಅಸಮಾಧಾನ ಭುಗಿಲೆದ್ದಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿ ಪಿ.ವಿ ಮೋಹನ್ ಅವರು, ಡಿ.ಕೆ ಶಿವಕುಮಾರ್ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರ ನಡೆಯು ಪಕ್ಷದ ಮೂಲಕ್ಕೇ, ಪಕ್ಷದ ಸಿದ್ಧಾಂತಗಳಿಗೆ ಹಾನಿಯನ್ನುಂಟು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರೊಂದಿಗೆ ವೇದಿಕೆ ಹಂಚಿಕೊAಡಿರುವುದು ಕಾಂಗ್ರೆಸ್ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.  ಜಾತ್ಯತೀತ ಪಕ್ಷದ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ, ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಿದವರಿಗೆ ನೀವು ಯಾವ ರೀತಿ ಧನ್ಯವಾದ ಹೇಳಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ. ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸುವಂತೆ ಜಗ್ಗಿ ವಾಸುದೇವ ಅವರು ದೇವರಲ್ಲಿ ನಂಬಿಕೆ ಇರುವ ತಾವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿಶೇಷ ಆಹ್ವನ ನೀಡಿದ್ದರು. ಆಹ್ವಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಡಿ.ಕೆ ಶಿವಕುಮಾರ್ ಅವರು ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಶಾ ಫೌಂಡೇಶನ್ ಹಾಗೂ ಜಗ್ಗಿ ವಾಸುದೇವ್ ಅವರ ಸಿದ್ಧಾಂತಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಪೂರಕವಾಗಿವೆ. ಕಾಂಗ್ರೆಸ್ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಸಂಪೂರ್ಣವಾಗಿ ವಿರೋಧಿಸಿಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಪಾಲಿಸುವವರು ಯಾರೇ ಇದ್ದರೂ ಪಕ್ಷವನ್ನು ಬಿಟ್ಟು ಹೋಗಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೇವಾಲಯಗಳಿಗೆ ಭೇಟಿ ಕೊಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಅವರು ನಡೆದುಕೊಳ್ಳುವ ರೀತಿಯು ಪಕ್ಷದ ಮೌಲ್ಯಗಳನ್ನು ಪ್ರತಿಬಿಂಬಿಸುವAತೆ ಇರಬೇಕು ಎಂದು ಕಾಂಗ್ರೆಸ್ ಟೀಕಿಸಿದೆ.


ಸಂತೋಷ ವ್ಯಕ್ತಪಡಿಸಿದ ಡಿಕೆ

ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಂತೋಷ ಹಂಚಿಕೊAಡಿದ್ದು, ಸದ್ಗುರು ಅವರ ಮಾತುಗಳಲ್ಲಿ ಆಳವಾದ ತತ್ವಗಳ ಜೊತೆ ಸೌಮ್ಯವಾದ ಹಾಸ್ಯದ ಸಂಯೋಜನೆ ಇರುತ್ತದೆ. ಅವರೊಂದಿಗೆ ಬದುಕಿನ ಒಳಹುಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದೆವು. ಗಂಭೀರ ವಿಚಾರಗಳ ಮಧ್ಯೆ, ಹಾಸ್ಯದ ಝಲಕ್‌ಗಳು ಮನಸ್ಸಿಗೆ ಹಿತ ನೀಡಿದವು. ಜೀವನವೆಂದರೆ ಅನಂತ ಯಾತ್ರೆ. ಪ್ರತಿ ಕ್ಷಣವೂ ಒಂದು ಅಧ್ಯಾಯ, ಪ್ರತಿ ನಗುವೂ ಮತ್ತು ಆಲೋಚನೆಯೂ ನಮ್ಮ ಆಂತರಿಕ ಬೆಳಕಿಗೆ ಪೂರಕ. ನಿಜವಾದ ಸಂಪತ್ತು ಅಂದರೆ, ಆಂತರಿಕ ಶಾಂತಿ, ಆತ್ಮಸಾಕ್ಷಾತ್ಕಾರ ಮತ್ತು ಆ ಭಾವನೆ, ಬದುಕಿನ ಪ್ರತಿಯೊಂದು ಕ್ಷಣದಲ್ಲಿ ಜೀವಂತವಾಗಿರುವ ಸತ್ಯ ಎಂಬ ಡಿಕೆ ಶಿವಕುಮಾರ ಅವರ ಹೇಳಿಕೆ, ಅವರ ಒಲವು ಯಾವ ಕಡೆಗೆ ಎಂಬುದು ಸಪಷ್ಟವಾಗುತ್ತದೆ.

ಹೌದು... ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದದ್ದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಎಂಬುದು ನಿರ್ವಿವಾದ. ಅವರು ೨೦೨೦ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ನಂತರದಿAದಲೂ ಅಂದಿನ ಬಿಜೆಪಿ ಸರ್ಕಾರವನ್ನು ವಿವಿಧ ಆಯಾಮಗಳ ಮೂಲಕ ಟೀಕೆಗೆ ಗುರಿಮಾಡಿ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಒಂದು ಅಲೆ ಎಬ್ಬಿಸಿದ್ದು ಡಿಕೆ ಶಿವಕುಮಾರ. ಅನಂತರ ಇಡೀ ರಾಜ್ಯದಲ್ಲಿ ಸಂಚರಿಸಿ ಪಂಚವನ್ನು ಸಂಘಟಿಸಿ, ಕಾರ್ಯಕರ್ತರಲ್ಲಿ ಅಧಿಕಾರಕ್ಕೆ ಬರುವ ಭರವಸೆ ಮೂಡಿಸುವುದರೊಂದಿಗೆ ೨೦೨೩ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೂ ಡಿ.ಕೆ.ಶಿವಕುಮಾರ. ಅಲ್ಲದೇ ನೆರೆಯ ತೆಲಂಗಾಣ ರಾಜ್ಯದಲ್ಲಿ ಚುನಾವಣೆ ನಡೆದಾಗ ಅಲ್ಲೇ ಕ್ಯಾಂಪ್ ಮಾಡಿ ಗೆಲುವಿನ ತಂತ್ರಗಾರಿಕೆ ರೂಪಿಸಿದ್ದು ಇದೇ ಡಿಕೆ ಶಿವಕುಮಾರ.


ಅಧಿಕಾರದಿಂದ ದೂರವಿಡುವ ಯತ್ನ:

ಇಷ್ಟೆಲ್ಲ ಆದ ನಂತರವೂ ಡಿ.ಕೆ.ಶಿವಕುಮಾರ ಅವರನ್ನು ಅಧಿಕಾರದಿಂದ ದೂರವಿಟ್ಟು, ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಸಿಎಂ ಮಾಡಿದ್ದು ಇದೇ ಕಾಂಗ್ರೆಸ್ ಹೈಕಮಾಂಡ್ ಅಲ್ಲವೇ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಅತ್ಯಂತ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ ಹಲವು ಸಂಕಷ್ಟಗಳನ್ನು ಎದುರಿಸಿದರೂ, ತಮ್ಮ ನಿಷ್ಠೆಯನ್ನು ಬದಲಿಸದೇ ಗಾಂಧಿ ಕುಟುಂಬದ ನಾಯಕತ್ವವನ್ನು ನೆಚ್ಚಿಕೊಂಡು ಬಂದವರು. ಇಷ್ಟೆಲ್ಲ ನಿಷ್ಠೆ ಹೊಂದಿರುವ ಡಿಕೆ ಶಿವಕುಮಾರಗೆ ಅನ್ಯಾಯವಾಗುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಬರಲಿಲ್ಲವೇ?

ಹಿಂದೊಮ್ಮೆ ಡಿಕೆ ಶಿವಕುಮಾರ ಹೇಳಿದ್ದರು. ನಾವೇನು ರಾಜಕೀಯಕ್ಕೆ ಕಿವಿಯಲ್ಲಿ ಹೂವಿಟ್ಟುಕೊಂಡು ಬಂದವರಲ್ಲ. ನಮಗೂ ಅಧಿಕಾರ ಬೇಕು. ಅದಕ್ಕಾಗಿಯೇ ಪಕ್ಷಕ್ಕೆ ನಿಷ್ಠೆಯಿಮದ ದುಡಿಯುತ್ತಿದ್ದೇವೆ. ನಾನೇನು ಬೇರೆ ಪಕ್ಷದಿಂದ ವಲಸೆ ಬಂದು ಕಾಂಗ್ರೆಸ್ಸಿನಲ್ಲಿ ಆಶ್ರಯ ಪಡೆದು ಆಕ್ರಮಿಸಿಕೊಂಡವನಲ್ಲ. ನಾನು ಮೂಲ ಕಾಂಗ್ರೆಸ್ಸಿಗ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿರುವ ನನ್ನನ್ನೇ ಮೂಲೆಗುಂಪು ಮಾಡುತ್ತಿರುವುದು ಹೈಕಮಾಂಡ್ ಗಮನಕ್ಕೆ ಬಂದಿಲ್ಲವೇ? ಸಕಾಲಕ್ಕೆ ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಿದ ಡಿಕೆ ಶಿವಕುಮಾರಗೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದ ನಂತರವಾದರೂ ತಮಗೆ ಅಧಿಕಾರ ದೊರೆಯಬಹುದೆಂಬ ನಂಬಿಕೆಯಲ್ಲಿದ್ದರು.

ಆದರೆ ಈಗ ಆಗುತ್ತಿರುವುದೇನು? ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಏನನ್ನೂ ಹೇಳುವದಿಲ್ಲ. ಆದರೆ, ಅವರ ಬೆಂಬಲಿಗರ ಮೂಲಕ ಎಲ್ಲವನ್ನೂ ಮಾಡಿಸುತ್ತಿದ್ದಾರೆ. ಮುಂದಿನ ಐದು ವರ್ಷಗಳ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಅರ್ಹ, ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನೂ ಸಮರ್ಥವಾಗಿ ನಿಭಾಯಿಸುವ ತಾಕತ್ತು ನನಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರೆ, ಇನ್ನೊಮ್ಮೆ ಮುಂದಿನ ೨೦೨೮ಕ್ಕೆ ಸಿಎಂ ಅಭ್ಯರ್ಥಿ ನಾನೇ ಎಂದೂ ಹೇಳುತ್ತಿದ್ದಾರೆ. ಅಂದರೆ ಮುಂದಿನ ಬಾರಿಯೂ ಡಿಕೆ ಶಿವಕುಮಾರಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ನೀಡುತ್ತಿದ್ದಾರೆ. ಸಚಿವರುಗಳಾದ ಡಾ.ಎಚ್.ಸಿ.ಮಹಾದೇವಪ್ಪ, ರಾಜಣ್ಣ ಮುಂತಾದವರು ದಿನಕ್ಕೊಂದು ಹೇಳಿಕೆ ನೀಡುತ್ತ ರಾಜ್ಯದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. 

ಬಾಯ್ಮುಚ್ಚಿಕೊಂಡು ಕೆಲಸ ಮಾಡಿ ಎಂದೊಮ್ಮೆ ಎಐಸಿಸಿ ಅಧ್ಯಕ್ಷರು ಹೇಳಿಕೆ ನೀಡಿದ್ದು ಬಿಟ್ಟರೆ, ಅನಂತರ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳೂ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಬಂದರೂ, ಡಿಕೆ ಶಿವಕುಮಾರ ಅವರನ್ನು ರಆಜ್ಯದಲ್ಲಿ ಮೂಲೆಗುಂಪು ಮಾಡುವ ನಿರಂತರ ಪ್ರಯತ್ನ ನಡೆಯುತ್ತಿದ್ದರೂ ಹೈಕಮಾಂಡರ್ ಯಾರ ವಿರುದ್ಧವೂ ಕ್ರಮ ಕೈಕೊಳ್ಳದಂಥ ದುರ್ಬಲ ನಾಯಕತ್ವದ ಬೇಸರ ಡಿಕೆ ಶಿವಕುಮಾರ ಅವರಿಗೆ ತಮ್ಮದೇ ಹೊಸ ದಾರಿ ಕಂಡುಕೊಳ್ಳುವAತೆ ಮಾಡಿರುವುದರಲ್ಲಿ ಅನುಮಾನವಿಲ್ಲ.


ದೈವಭಕ್ತ ಡಿಕೆಶಿ

ಡಿಕೆ ಶಿವಕುಮಾರ ಮೊದಲಿಂದಲೂ ದೈವ ಭಕ್ತರು. ಅವರು ಹೋದಲ್ಲೆಲ್ಲ ಅನೇಕ ದೇವಸ್ಥಾನ, ಮಠ ಮಂದಿರಗಳಿಗೆ ಭೇಟಿ ನೀಡುವುದು, ಪೂಜೆ ಪುನಸ್ಕಾರ ಮಾಡುವ ಮೂಲಕ ದೇವರು ಮತ್ತು ದೈವದಲ್ಲಿ ನಂಬಿಕೆ ಹೊಂದಿದವರು. ಇದುವರೆಗೂ ಮುಸ್ಲಿಮರನ್ನು ನಮ್ಮ ಬ್ರರ‍್ಸ್ ಎನ್ನುತ್ತಿದ್ದ ಡಿಕೆ ಶಿವಕುಮಾರ, ಇದೀಗ ಹಿಂದೂಗಳೂ ತಮ್ಮವರೆಂದು ಒಪ್ಪಿಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಈ ಹೊಸ ಬೆಳವಣಿಗೆಯ ಮುಂದುವರಿದ ಭಾಗವಾಗಿ, ಇಶಾ ಫೌಂಡೇಶನ್ ಆಂತ್ರಣ ಸ್ವೀಕರಿಸಿ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಇದ್ದಾರೆಂದು ಗೊತ್ತಿದ್ದೂ ಭಾಗವಹಿಸಿದ್ದು ಡಿಕೆ ಶಿವಕುಮಾರ ಅವರ ತಲೆಯಲ್ಲಿ ಏನೋ ಓಡುತ್ತಿದೆ ಎಂದು ಅರ್ಥೈಸಲಾಗುತ್ತಿದೆ. ಅದನ್ನು ಕಾರ್ಯಗತಗೊಳಿಸುವ ದಿಸೆಯಲ್ಲಿ ಅವರು ಏನೋ ಗುಪ್ತ ಸೂಚಿ ಹೊಂದಿದ್ದಾರೆ. ಅದಕ್ಕೆ ಪೂರಕವಾದ ಬೆಳವಣಿಗೆಗಳು ಕೊಯಿಮತ್ತೂರಿನಲ್ಲಿ ನಡೆದಿವೆ. ಈ ಮೂಲಕ ಡಿಕೆ ಶಿವಕುಮಾರ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶವನ್ನು ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ ಕರ್ನಾಟಕದ ಏಕನಾಥ್ ಶಿಂಧೆ ಆಗುತ್ತಾರೆಯೇ? ಎಂಬ ಅನುಮಾನಗಳು ಮೂಡುವುದು ಸಹಜ. ಹಾಗೇನಾದರೂ ಆಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋದರೆ, ಅದಕ್ಕೆ ಕಾಂಗ್ರೆಸ್ ಹೈಕಮಾಂಡ್‌ನ ದುರ್ಬಲ ನಾಯಕತ್ವವೇ ಹೊಣೆಯಾಗಬೇಕಾಗುತ್ತದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರಕ್ಕೂ ಆಪತ್ತು ಬರಲಿದೆ. ಇದರಿಂದ ದಕ್ಷಿಣ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಬಿದ್ದು ಹೋಗುವುದರಲ್ಲಿ ಅನುಮಾನವಿಲ್ಲ.


ಮುಸ್ಲಿಮರನ್ನು ನನ್ನ ಬ್ರರ‍್ಸ್ ಎಂದು ಕರೆಯುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಇದೀಗ ಹಿಂದೂಗಳ ಬಹುದೊಡ್ಡ ಹಬ್ಬ ಮಹಾಶಿವರಾತ್ರಿ ಹಬ್ಬಕ್ಕೆ ಕೊಯಿಮತ್ತೂರಿನ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊAಡು ನಾನು `ಹಿಂದೂ-ಮಸ್ಲಿಮ್' ಧರ್ಮಗಳನ್ನು ಏಕತೆಯಿಂದ ನೋಡುತ್ತೇನೆ ಎಂದು ಹೇಳುವ ಮೂಲಕ ನಾನು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂಬ ಹೇಳಿಕೆ ಕಾಂಗ್ರೆಸ್ ನಾಯಕರು ಪತರಗುಟ್ಟುವಂತೆ ಮಾಡಿದ್ದಾರೆ. ಹಾಗಾದರೆ ಅವರ ಮುಂದಿನ ನಡೆ ಏನು? 

Wednesday, 26 February 2025

ಪ್ರಯಾಗರಾಜ್ ಅಪಘಾತ ಪ್ರಕರಣ; ಗಾಯಾಳು ಹಾಗೂ ಮೃತರ ಕುಟುಂಬಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ


 ಬೀದರ  : ಪ್ರಯಾಗರಾಜ್‍ಗೆ ಹೋಗಿ ಮರಳಿ ಬರುವಾಗ ಅಪಘಾತ ಸಂಭವಿಸಿ ಮೃತಪಟ್ಟವರ ಕುಟುಂಬಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು ಸಂಪೂರ್ಣವಾಗಿ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದರು. ಹಾಗೆಯೇ ಇಬ್ಬರು ಗಾಯಾಳುಗಳ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ವೈದ್ಯರಿಗೆ ತಿಳಿಸಿದರು.
ನಂತರ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೃತರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಒಂದು ವಾರದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಮೃತ ಕುಟುಂಬಸ್ಥರು ಅತ್ಯಂತ ಕಡು ಬಡವರಿದ್ದಾರೆ. ಹಾಗಾಗಿ ಅವರಿಗೆ ಇನ್ನು ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಮಾಡಲಾಗುವುದು. ಸರಕಾರ ಅವರ ಜೊತೆ ಇದೆ. ಇನ್ನೊಬ್ಬ ಗಾಯಾಳು ಇನ್ನು ಅಲ್ಲೇ ಇದ್ದಾರೆ. ಅವರನ್ನು ಶಿಫ್ಟ್ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಈಗಾಗಲೇ ಹೇಳಿದ್ದೇನೆ ಎಂದರು.
ಫೆ.21 ರಂದು ನಗರದ ಲಾಡಗೇರಿ ನಿವಾಸಿಗಳು ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಹೋಗಿ ಬರುತ್ತಿದ್ದಾಗ ವಾರಾಣಸಿ ಜಿಲ್ಲೆಯ ಮಿರ್ಜಾ ಮುರಾರ್ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೂಪಾಪುರ್ ಬಳಿ ಇವರು ಸಾಗುತ್ತಿದ್ದ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.


ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ್ ಡಿ.ಜೆ. ಮಹೇತ್, ಬೀದರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪೂರೆ, ಸುನಿಲ್ ಭಾವಿಕಟ್ಟಿ, ಮುಖಂಡರಾದ ಧನರಾಜ ಹಂಗರಗಿ, ರೇಖಾ, ಚಂದ್ರಕಾಂತ ಹಳ್ಳಿಖೇಡಕರ್, ಶರಣು ಲಾಡಗೇರಿ, ರಮೇಶ ಜಮಾದಾರ್, ಜಗದೀಶ ಭಾವಿಕಟ್ಟಿ, ವಿಜಯಕುಮಾರ ಭಂಡೆ ಸೇರಿದಂತೆ ಇತರರು ಇದ್ದರು.


























































































































































































































































































































































ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ್ ಡಿ.ಜೆ. ಮಹೇತ್, ಬೀದರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪೂರೆ, ಸುನಿಲ್ ಭಾವಿಕಟ್ಟಿ, ಮುಖಂಡರಾದ ಧನರಾಜ ಹಂಗರಗಿ, ರೇಖಾ, ಚಂದ್ರಕಾಂತ ಹಳ್ಳಿಖೇಡಕರ್, ಶರಣು ಲಾಡಗೇರಿ, ರಮೇಶ ಜಮಾದಾರ್, ಜಗದೀಶ ಭಾವಿಕಟ್ಟಿ, ವಿಜಯಕುಮಾರ ಭಂಡೆ ಸೇರಿದಂತೆ ಇತರರು ಇದ್ದರು.

Monday, 24 February 2025

ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪತ್ರಿಕೆಗಳು ಸಹಕಾರಿ

 ಪತ್ರಿಕೆ ಓದುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶಕ್ಕೆ ಚಾಲನೆ

ಕಲಬುರಗಿ: ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಳವಾಗಲಿದೆ ಎಂದು ಪತ್ರಕರ್ತ- ಲೇಖಕ ಡಾ.‌ ಶಿವರಂಜನ ಸತ್ಯಂಪೇಟೆ ತಿಳಿಸಿದರು.

ಕಲಬುರಗಿಯ ಪತ್ರಕರ್ತರ ಸಭಾಂಗಣದಲ್ಲಿ ಸೋಮವಾರ ಜರುಗಿದ  ಪ್ರಜಾ ಸುದ್ದಿ ಕನ್ನಡ ದಿನಪತ್ರಿಕೆ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಕಷ್ಟಪಟ್ಟು ಸಂಪಾದಿಸಿದ ಜ್ಞಾನ ಗಳಿಸಿದ ಸಂಪತ್ತಿಗಿಂತ ಮಿಗಿಲಾದುದಾಗಿದೆ. ಪತ್ರಿಕೆಗಳನ್ನು ಓದುವುದರಿಂದ ಐಎಎಸ್‌ ಮತ್ತು ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು. 

ಸಮಾಜ ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಿ ವೈಚಾರಿಕತೆಯನ್ನು ಬೆಳೆಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಜಾ ಸುದ್ದಿ ಪತ್ರಿಕೆಯ ಸಂಪಾದಕ ಶರಣಬಸಪ್ಪ ಕೆ.‌ಸೂಗೂರ ಮಾತನಾಡಿ, ಓದುಗರ ಸಮಾವೇಶ ಮಾಡುವ ಮೂಲಕ ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡಬೇಕು ಎಂದು ವಿವರಿಸಿದರು.


ಸಾಮಾಜಿಕ ಕಾರ್ಯಕರ್ತ ಬಾವರಾಜ ಎಂ. ರಾವೂರ ಮುಖ್ಯ ಅತಿಥಿಯಾಗಿದ್ದರು. ಇದೇವೇಳೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ  ಪ್ರಭು ಸೋನಿ,‌ ಶೇಖರ್ ಸೇಡಂ, ದೇವೇಂದ್ರಪ್ಪ ಕಟ್ಟಿಮನಿ, ಅಯಾಜುದ್ದೀನ್, ಧನರಾಜ್ ದೊಡ್ಡಮನಿ,  ರಾಜಕುಮಾರ  ದಣ್ಣೂರ, ರವಿ ಪೂಜಾರಿ,   ಬಸವರಾಜ್ ಪಾಸ್ವಾನ್ ,  ಸುರೇಶ್ ದೇವಿಂದ್ರಪ್ಪ, ಅವಿನಾಶ್ ದೇವನೂರ್ ಅವರನ್ನು ಸತ್ಕರಿಸಲಾಯಿತು. ಡಾ. ಸುಖದೇವಿ ಗಂಟೆ ನಿರೂಪಿಸಿ ವಂದಿಸಿದರು. ಸೈದಮ್ಮ ಶಿವಗಂಗಾ ಪ್ರಾರ್ಥನೆಗೀತೆ ಹಾಡಿದರು.

ಪತ್ರಿಕೆ ಓದುವ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಡಿ ಪ್ರಶಿಕ್ಷಣಾರ್ಥಿಗಳು ದಿನಪತ್ರಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ವಿನೂತನವೆನಿಸಿತು. ಇದಕ್ಕೂ ಮುನ್ನ ನಮಗೆಷ್ಟು ಗೊತ್ತು ಕನ್ನಡ ದಿನಪತ್ರಿಕೆ ಓದುಗರ ಮಾದರಿ ಸ್ಪರ್ಧೆ ನಡೆಸಿದ್ದು ಕೂಡ ವಿಶೇಷವೆನಿಸಿತು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...