ads

Search This Blog

Monday, 27 January 2025

ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ–ಡಿ.ಕೆ.ಶಿವಕುಮಾರ

ಬೆಂಗಳೂರು :ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಣದ ಜೊತೆ ಜೊತೆಯಲ್ಲಿಯೇ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮಾರ್ಗದರ್ಶನವನ್ನು ಶಿಕ್ಷಕರು ನೀಡಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿಬೇಕು. ಅವರನ್ನು ದೇಶದ ಆಸ್ತಿಯನ್ನಾಗಿ ತಯಾರು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.


ಇಂದು ಸೆಂಟ್ರಲ್ ಕಾಲೇಜು ಕ್ಯಾಂಪಸ್‍ನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ನೂತನವಾಗಿ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ  “ಹೊಸ ಹಾದಿ” ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಗಳು ಪ್ರಮುಖವಾದ ನಾಲ್ಕು ಅಂಗಗಳು.  ಅದೇ ರೀತಿ ಶಿಕ್ಷಕ, ರೈತ, ಸೈನಿಕ, ಕಾರ್ಮಿಕರು ಸಮಾಜದ ಅಂಗಗಳು ಎಂದು ಶ್ಲಾಘಿಸಿದರು.

ಶಿಕ್ಷಣ ಎಂದರೆ ಜ್ಞಾನ, ಕೌಶಲ್ಯ, ಬೋಧನೆ, ಸಂಶೋಧನೆಗಳ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ವ್ಯವಸ್ಥೆ ಇದರಲ್ಲಿ ಕಲಿಕೆಯೂ ಒಂದು. ಇಂತಹ ಶಿಕ್ಷಣ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧ್ಯಾಪಕರುಗಳಾಗಿರುವುದು ಹೆಮ್ಮೆಯ ವಿಷಯ. ನಮ್ಮ ರಾಜ್ಯದಲ್ಲಿ 200ಕ್ಕೂ ಹೆಚ್ಚು ಇಂಜಿನಿಯರ್ ಕಾಲೇಜು, 70 ಮೆಡಿಕಲ್ ಕಾಲೇಜುಗಳಿವೆ. ನಮ್ಮ ರಾಜ್ಯದಲ್ಲಿ ಶಿಕ್ಷಣವು ಉತ್ತಮ ಗುಣಮಟ್ಟದಿಂದ ಕೂಡಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲೂ ಸಹ ಗುಣಮಟ್ಟದಿಂದಲೇ ಕೂಡಿದೆ. ಗ್ರಾಮೀಣ ಪ್ರದೇಶದ ಮಕ್ಕಳೂ ಕೂಡ ಇಂದು ಇಂಜಿನಿಯರ್, ಡಾಕ್ಟರ್ ಕೋರ್ಸ್‍ಗಳನ್ನು ಓದುತ್ತಿದ್ದಾರೆ ಹಾಗೂ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಾಧ್ಯಾಪಕರುಗಳು ತಮ್ಮ ವಾಕ್‍ಚಾತುರ್ಯದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದು ಅವರಿಗೆ ಜ್ಞಾನಾರ್ಜನೆಯನ್ನು ನೀಡಬೇಕು. ಅವರಲ್ಲಿ ಸಕಾರತ್ಮಾಕವಾಗಿ ಚಿಂತನೆ ಮಾಡುವ ಮನೋಭಾವ, ಆತ್ಮವಿಶ್ವಾಸ ತುಂಬಬೇಕು ಹಾಗೂ ನಮ್ಮ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಮುಂದೆ ಮಾಲೀಕರಾಗಿ ಬೇರೆಯವರಿಗೆ ಉದ್ಯೋಗವಕಾಶವನ್ನು ನೀಡುವಂತವರಾಗಬೇಕು ಎಂದು ಪ್ರಾಧ್ಯಾಪಕರಿಗೆ ಕಿವಿಮಾತು ಹೇಳಿದರು.

ನಾನು ಪದವೀಧರನಾದಾಗ ಆದ ಸಂತೋಷ ಕ್ಯಾಬಿನೇಟ್ ಮಂತ್ರಿಯಾದಾಗ, ಉಪಮುಖ್ಯಮಂತ್ರಿ ಆದಾಗ ನನಗೆ ದೊರಯಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಕ್ಷಕರು ಸರ್ಕಾರದ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ಇಲಾಖೆಯಲ್ಲಿ  ಸಹಾಯಕ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶ ನೀಡುವವರೆಗೆ ಇದ್ದ ಸವಾಲುಗಳ ಕುರಿತು ವಿವರಿಸಿದರು. ನ್ಯಾಯಾಲಯದ ತಡೆಯಾಜ್ಞೆಯನ್ನು  ಶೀಘ್ರವಾಗಿ ಬಗೆಹರಿಸಿ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯು ಅಪ್ರೆಂಟಿಶಿಪ್ ಎಂಬೆಡೆಟ್ ಡಿಗ್ರಿ ಪ್ರೋಗ್ರಾಮ್ ಪ್ರಾರಂಭ ಮಾಡಿದೆ.  ಬಿಕಾಂ ಕೋರ್ಸ್‍ನ ಮೊದಲನೆ ಹಂತದಲ್ಲಿ ಪ್ರಾರಂಭ ಮಾಡಲಾಗಿದ್ದು, ರಾಜ್ಯದಲ್ಲಿ ಪ್ರಥಮ ಬಾರಿಗೆ 45 ಸರ್ಕಾರಿ ಪ್ರಥಮ ದರ್ಜೆ ಪಿಯು ಕಾಲೇಜುಗಳಲ್ಲಿ  ಅನುಷ್ಠಾನಕ್ಕೆ ತರಲಾಗಿದೆ. ಎರಡು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ 5 ಮತ್ತು 6ನೇ ಸೆಮಿಸ್ಟರ್‍ಗಳಲ್ಲಿ ಕಂಪೆನಿಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಅವರಿಗೆ ಸ್ಟೈಫಂಡ್‍ಅನ್ನು ನೀಡಲಾಗುತ್ತದೆ. ಪದವಿ ಮುಗಿಯುವುದರೊಳಗೆ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ತರಬೇತಿ ಪಡೆದು ಮುಂದಿನ ಉದ್ಯೋಗವಕಾಶಕ್ಕೆ ಸನ್ನದ್ದನಾಗಿರುತ್ತಾನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 60 ಸರ್ಕಾರಿ ಕಾಲೇಜುಗಳಿಗೆ ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

310 ಪ್ರಾಂಶುಪಾಲರ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅಂತಿಮ ಹಂತದಲ್ಲಿ ತಾಂತ್ರಿಕ ಸಮಸ್ಯೆ ನಿವಾರಣೆಯನ್ನು ಮುಂದಿನ ತಿಂಗಳ ಅಂತ್ಯದೊಳಗೆ ಪೂರ್ಣ ಮಾಡುವ ಭರವಸೆ ನೀಡಿದರು. ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಆಯುಕ್ತಾಲಯದಿಂದ 21 ದಿನಗಳ ಕಾಲ ಸಹಾಯಕ ಪ್ರಾಧ್ಯಾಪಕರುಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ತರಬೇತಿಯಲ್ಲಿ ಭಾಗವಹಿಸಿ  ಖಾಸಗಿ ಕ್ಷೇತ್ರದ ಸ್ಪರ್ಧೆಗೆ ತಾವುಗಳು ಸಕಲ ಸನ್ನದ್ದರಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನರ್ಜನೆಯ ಲಾಭವಾಗಬೇಕು ಎಂದರು.

ಕೆಸೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 10 ವರ್ಷ ಶಿಕ್ಷಕನಾಗಿ ಕಾರ್ಯನಿರ್ವಹಿಸಿರುತ್ತೇನೆ. ಅನುಭವವಿದೆ. ಶಿಕ್ಷಕರ ಕಷ್ಟವೇನಿದೆ ಎಂದು ತಿಳಿದಿದೆ. ಕೌಶಲ್ಯ ತರಬೇತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 2024 ರಲ್ಲಿ 6 ವಿಶ್ವವಿದ್ಯಾಲಯದ ಆಯ್ದ 30 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು. ಈಸ್ಟ್ ಲಂಡನ್ ಆಫ್ ಯೂನಿವರ್ಸಿಟಿಗೆ ಹೋಗಿ ಶೈಕ್ಷಣಿಕ ಜ್ಞಾನ ಪಡೆದಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 450 ರಿಂದ 500 ಮಂಜೂರಾದ ಹುದ್ದೆಗಳು ತುಂಬುವುದರ ಜೊತೆಗೆ ಹೊಸದಾಗಿ ಹುದ್ದೆಗಳನ್ನು ಮಂಜೂರು ಮಾಡಲು ಪ್ರಯತ್ನ ಮಾಡಲಾಗುತ್ತಿದೆ.  ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೊಸ ಹುದ್ದೆಯ ಸೃಷ್ಟಿಯ ಜೊತೆಗೆ ಹಳೆಯ ಹುದ್ದೆಗಳು ಭರ್ತಿ ಮಾಡುವ ಜವಾಬ್ದಾರಿ ಇದೆ ಎಂದರು.

ಹೊಸದಾಗಿ ನೇಮಕಾತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಚಲುವರಾಜು ಮಾತನಾಡಿ, ಕಾಯ ಅಳಿದರೂ ಕಾಯಕ ಉಳಿಯುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರವೆಸಗದೆ  ನಮಗೆಲ್ಲ ನೇಮಕಾತಿ ಪತ್ರವನ್ನು ಮನೆಬಾಗಿಲಿಗೆ ತಲುಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಮುಖ್ಯಮಂತ್ರಿಗಳ ಗ್ಯಾರಂಟಿ ಯೋಜನೆಯನ್ನು ಶ್ಲಾಘಿಸಿದರು.

ಹೊಸದಾಗಿ ನೇಮಕಾತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಶ್ರೀಮತಿ ನಾಗಲಕ್ಷ್ಮಿ ಜಿ. ಮಾತನಾಡಿ  ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಆದೇಶ ಪತ್ರವು ಸಿಗಬೇಕಾದರೆ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ನ್ಯಾಯಾಲಯದ ತಡಯಾಜ್ಞೆಯನ್ನು ಶೀಘ್ರವಾಗಿ ಬಗೆಹರಿಸಿ, ಶೀಘ್ರವಾಗಿ ಪರಿಶೀಲನಾ ಕಾರ್ಯವನ್ನು ಮುಗಿಸಿ ನಮಗೆ ನೇವiಕಾತಿ ಪತ್ರವನ್ನು ನೀಡಿರುವುದು ಅಭಿನಂದನೀಯ ಎಂದು ತಿಳಿಸಿ, ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ  ಕುಮಾರಿ ಮಂಜುಶ್ರೀ ಎನ್. ಅವರು ಸ್ವಾಗತ ಭಾಷಣ ಮಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಶ್ರೀಕರ್, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ. ಶೋಭಾ .ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Sunday, 26 January 2025

ಸಂವಿಧಾನದ ಆಶಯಗಳನ್ನು ನೆಲೆಗೊಳಿಸಲು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆದಿವೆ-ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

 
ಬೆಂಗಳೂರು : ಕರ್ನಾಟಕ ಸರ್ಕಾರವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ, ಒಕ್ಕೂಟ ಸಿದ್ಧಾಂತಗಳ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂವಿಧಾನದ ಮಹತ್ವದ ಆಶಯವಾದ ಸಾಮಾಜಿಕ, ಆರ್ಥಿಕ ನ್ಯಾಯ ನೆಲೆಗೊಳಿಸಲು ಶಕ್ತಿ ಮೀರಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ ಎಂದು ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಹೇಳಿದರು.

76 ನೇ ಗಣರಾಜ್ಯೋತ್ಸವ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್μÁ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.


76 ವರ್ಷಗಳ ಹಿಂದೆ ಇದೇ ದಿನದಂದು ಭಾರತೀಯರಾದ ನಾವು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಮೂಲಕ ಈ ದೇಶದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಆಡಳಿತಕ್ಕೆ ಇತಿಶ್ರೀ ಹಾಡಿ ಜನಾಡಳಿತದ ಹೊಸ ಪರ್ವ ಪ್ರಾರಂಭಿಸಿದೆವು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚಿಸಿದ ಎಲ್ಲ ಮಹನೀಯರನ್ನು ಸ್ಮರಿಸೋಣ ಎಂದರು.

ವಿವಿಧ ಗ್ಯಾರೆಂಟಿ ಯೋಜನೆಯಡಿ ಆರ್ಥಿಕ ನೆರವು :
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳಂತೆ 2023 ರ ಆಗಸ್ಟ್‍ನಿಂದ ಇಲ್ಲಿಯವರೆಗೆ ಒಟ್ಟು 35,180.20 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 1.62 ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದು ವಿದ್ಯುತ್ ಸರಬರಾಜು ಕಂಪನಿಗಳಿಗೆ 13,409 ಕೋಟಿ ರೂ.ಸಬ್ಸಿಡಿ ಮೊತ್ತ ನೀಡಲಾಗಿದೆ.

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 9,051 ಕೋಟಿ ರೂ. ವಿನಿಯೋಗಿಸಲಾಗಿದೆ.
ಯುವನಿಧಿ ಯೋಜನೆಯಡಿ 2,18,214 ಜನ ನೋಂದಣಿ ಮಾಡಿಕೊಂಡಿದ್ದು ಈವರೆಗೆ 1,24,176 ಅರ್ಹರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಯುವನಿಧಿ ಪ್ಲಸ್ ಉಪಕ್ರಮದಡಿ ಯುವಜನರ ಉದ್ಯೋಗ ಸಾಮಥ್ರ್ಯ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.

ಜನರ ಹಸಿವನ್ನು ನೀಗಿಸುವ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ಗಳಂತೆ 4,48,12,382 ಫಲಾನುಭವಿಗಳಿಗೆ 9,775 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ರಾಜ್ಯದ ಹಣಕಾಸು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಿರುವ ಆದಾಯ ಸಂಗ್ರಹದಲ್ಲಿ ಶೇ.13 ರಷ್ಟು ಪ್ರಗತಿ ಸಾಧಿಸಿದೆ. ರಾಜ್ಯಗಳು ಸಂಗ್ರಹಿಸುವ ಜಿಎಸ್‍ಟಿ ಆದಾಯದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಬಲಪಡಿಸಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 13 ಸಾವಿರಕ್ಕೂ ಅಧಿಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹಾಸನದಲ್ಲಿ 142 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ, ಕಲಬುರ್ಗಿಯಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆ, ಕೆಕೆಆರ್‍ಡಿಬಿಯ 304 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಕಾಪಾಡಿಕೊಳ್ಳಲು ರಾಜ್ಯದಲ್ಲಿ 79 ಪ್ರಯೋಗಾಲಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದ ಸಮತೋಲಿತ, ಸಮಗ್ರ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುμÁ್ಠನ ಮಾಡಲಾಗಿದೆ. ಉದ್ದೇಶಿತ ಗುರಿಗಳ ಸಾಧನೆ ಮಾಡಲಾಗಿದೆಯೆ ಎಂಬುದನ್ನು ಅರಿಯಲು ಪೆÇ್ರ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ 371(ಜೆ) ಅನುಚ್ಛೇದ ಜಾರಿಗೊಳಿಸಲಾಗಿದೆ.

ಬೆಂಗಳೂರು ಮೆಟ್ರೊ ರೈಲು ಯೋಜನೆಯ ‘ಹಂತ 2ಎ’ ದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡಿನಿಂದ ಕೃಷ್ಣರಾಜಪುರದವರೆಗೆ, ‘ಹಂತ 2 ಬಿ’ ಯಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58 ಕಿ.ಮೀ.ಉದ್ದದ ಕಾಮಗಾರಿಯನ್ನು 14,788 ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. “ಹಂತ 3” ರಲ್ಲಿ 76 ಕಿ.ಮೀ.ಉದ್ದದ ಕಾಮಗಾರಿಯನ್ನು 15,611 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ರೈತರ ಆದಾಯ ಹೆಚ್ಚಿಸಲು ಕಾರ್ಬನ್ ಹೀರಿಕೊಳ್ಳುವ ತೋಟಗಾರಿಕೆ ಬೆಳೆಗಳನ್ನು ಗುರುತಿಸುವ ಕಾರ್ಬನ್ ಕ್ರೆಡಿಟ್ ಫ್ರೇಮ್‍ವರ್ಕ್ (ಸಿಸಿಎಫ್) ಹೊಸ ಕಾರ್ಯಕ್ರಮ ಪರಿಚಯಿಸಲಾಗಿದೆ. 2024-25 ನೇ ಸಾಲಿನಲ್ಲಿ ಸುಮಾರು ರೂ. 16,700 ಕೋಟಿಗೂ ಅಧಿಕ ಮೊತ್ತದ ಅಲ್ಪಾವಧಿ ಬೆಳೆ ಹಾಗೂ ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲಗಳನ್ನು ವಿತರಿಸಲಾಗಿದೆ. ಹಾಲು ಉತ್ಪಾದಕರ ಪೆÇ್ರೀತ್ಸಾಹ ಯೋಜನೆಯಡಿ ರಾಜ್ಯದ ಸುಮಾರು 9 ಲಕ್ಷ ಹಾಲು ಉತ್ಪಾದಕರಿಗೆ 1124 ಕೋಟಿ ರೂ. ಪೆÇ್ರೀತ್ಸಾಹ ಧನ ವರ್ಗಾವಣೆ ಮಾಡಲಾಗಿದೆ ಎಂದರು.

ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಒತ್ತು:
ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದೊಂದಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಕೆಎಸ್‍ಆರ್‍ಟಿಸಿ ನೌಕರರಿಗೆ 1 ಕೋಟಿ ರೂ.ಮೌಲ್ಯದ ಅಪಘಾತ ವಿಮಾ ಯೋಜನೆ ಸೌಲಭ್ಯ ಒದಗಿಸಲಾಗಿದೆ ರಾಜ್ಯದ ಅಭಿವೃದ್ಧಿಯ ಅಂಶಗಳ ಮೇಲೆ ವಿಸ್ತøತವಾಗಿ ಬೆಳಕು ಚೆಲ್ಲಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕರ್ನಾಟಕ ಪೆÇಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬಿಬಿಎಂಪಿ ಮುಖ್ಯ ಆಯುಕ್ತ ತುμÁರ್ ಗಿರಿನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಐಕ್ಯತೆ, ಸಮಗ್ರತೆ ಬಿಂಬಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು:

ಬೆಂಗಳೂರಿನ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಸುಮಾರು 800 ಮಕ್ಕಳು ಪ್ರದರ್ಶಿಸಿದ ನಾವೆಲ್ಲರೂ ಒಂದೇ ನಾವು ಭಾರತೀಯರು, 4/8 ಗೋರ್ಖಾ ರೈಫಲ್ಸ್‍ನ ಖುಕ್ರಿ ನೃತ್ಯ, ಪಂಜಾಬ್ ಪರಂಪರೆ ಬಿಂಬಿಸುವ ಭಾಂಗ್ರ ನೃತ್ಯ, ಹೇರೋಹಳ್ಳಿ ಸಂಯುಕ್ತ ಪ.ಪೂ.ಕಾಲೇಜಿನ 650 ಮಕ್ಕಳಿಂದ ಅರಿವೇ ಅಂಬೇಡ್ಕರ್ ನೃತ್ಯರೂಪಕ, ಮೈಸೂರು ಕೆಎಸ್‍ಆರ್‍ಪಿ ಮೌಂಟೆಡ್ ಪೆÇಲೀಸ್ ತಂಡದ ಟೆಂಟ್ ಪೆಗ್ಗಿಂಗ್, ಪೆÇಲೀಸ್ ಗರುಡ ಪಡೆಯಿಂದ ಭಯೋತ್ಪಾದಕರಿಂದ ಹೈಜಾಕ್ ಆದ ಬಸ್ ಪ್ರಯಾಣಿಕರ ರಕ್ಷಣೆ ಸೇರಿದಂತೆ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಅಂಶಗಳನ್ನು ಸಾರಿದವು. ವಿವಿಧ ತುಕಡಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು.

ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಸುಮಾರು 800 ಮಕ್ಕಳು ಪ್ರದರ್ಶಿಸಿದ “ನಾವೆಲ್ಲರೂ ಒಂದೇ ನಾವು ಭಾರತೀಯರು” ತಂಡಕ್ಕೆ ಪ್ರಥಮ ಬಹುಮಾನ, ಬಿಬಿಎಂಪಿ ಹೇರೋಹಳ್ಳಿ ಸಂಯುಕ್ತ ಪ.ಪೂ.ಕಾಲೇಜಿನ 650 ಮಕ್ಕಳಿಂದ ಅರಿವೇ ಅಂಬೇಡ್ಕರ್ ನೃತ್ಯರೂಪಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣಾ ಶಾಖೆಯ ಜಂಟಿ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಸಾಂಸ್ಕøತಿಕ ಕಾರ್ಯಕ್ರಮಗಳ ತೀರ್ಪುಗಾರರಾಗಿ ಭಾಗವಹಿಸಿದ್ದರು.

2025 ನೇ ಗಣರಾಜ್ಯೋತ್ಸವ ದಿನಾಚರಣೆ ಕವಾಯತಿನಲ್ಲಿ ಭಾಗವಹಿಸಿದ ಗ್ರೂಪ್ -1 ಆರ್ಮಿ ತಂಡಕ್ಕೆ ಪ್ರಥಮ ಬಹುಮಾನ, ಬಿಎಸ್‍ಎಫ್ ತಂಡಕ್ಕೆ ದ್ವಿತೀಯ ಬಹುಮಾನ, ಏರ್‍ಪೋರ್ಸ್ ತಂಡಕ್ಕೆ ತೃತೀಯ ಬಹುಮಾನ ಹಾಗೂ ಕೆಎಸ್‍ಆರ್‍ಪಿ ತಂಡಕ್ಕೆ ನಾಲ್ಕನೇ ಬಹುಮಾನ ದೊರೆತಿದೆ.

ಗ್ರೂಪ್-2 ರಲ್ಲಿ ಅಗ್ನಿಶಾಮಕ ದಳ ತಂಡಕ್ಕೆ ಪ್ರಥಮ ಬಹುಮಾನ, ನ್ಯಾಷನಲ್ ಕೆಡಿಟ್ ಕ್ರಾಫ್ಸ್ (ಎನ್‍ಸಿಸಿ) ದ್ವಿತೀಯ ಬಹುಮಾನ, ಅಬಕಾರಿ ದಳಕ್ಕೆ ತೃತೀಯ ಬಹುಮಾನ, ನ್ಯಾಷನಲ್ ಸರ್ವೀಸ್ ಸ್ಕೀಂ (ಎನ್‍ಎಸ್‍ಎಸ್) ನಾಲ್ಕನೇ ಬಹುಮಾನ ದೊರೆತಿದೆ.

ಗ್ರೂಪ್ -3 ನಲ್ಲಿ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಪ್ರಥಮ ಬಹುಮಾನ, ಮಿತ್ರ ಅಕಾಡೆಮಿ ದ್ವಿತೀಯ ಬಹುಮಾನ ಪಡೆದಿದೆ.

ಗ್ರೂಪ್ -4 ರಲ್ಲಿ ಬಾಪು ಹೈಸ್ಕೂಲ್ ಪ್ರಥಮ ಬಹುಮಾನ, ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್ ದ್ವಿತೀಯ ಬಹುಮಾನ ಪಡೆದಿದೆ.

ಗ್ರೂಪ್-6 ರಲ್ಲಿ ಧಾರವಾಡದ ಎನ್.ಎ.ಮುತ್ತಣ್ಣ ಮೆಮೋರಿಯಲ್ ಸ್ಕೂಲ್ ಪ್ರಥಮ ಬಹುಮಾನ, ನಂದಿನಿ ಲೇಔಟ್‍ನ ಪ್ರೆÀ್ರಸಿಡೆನ್ಸಿ ಶಾಲೆ ದ್ವಿತೀಯ ಬಹುಮಾನ ಪಡೆದಿದೆ.

ಗ್ರೂಪ್ -7 ಬ್ಯಾಂಡ್ ತಂಡಗಳಲ್ಲಿ ನಾರಾಯಣಪುರದ ಕ್ರಿಸ್ತೂ ಜಯಂತಿ ಸ್ಕೂಲ್ ಪ್ರಥಮ ಬಹುಮಾನ, ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ ಬಹುಮಾನ ಪಡೆದಿದೆ.


ದೇಶದ ಅಖಂಡತೆ ಹಾಗೂ ಭದ್ರ ಬುನಾದಿಗೆ ಸಂವಿಧಾನವೇ ಮುಖ್ಯ-ಸಚಿವ ಈಶ್ವರ ಬಿ.ಖಂಡ್ರೆ

 

ಬೀದರ :- ವಿಶ್ವಕ್ಕೆ ಮಾದರಿಯಾದ ಭಾರತದ ಲಿಖಿತ ಸಂವಿಧಾನದಂತೆ ನಡೆಯುವುದೇ ನಮ್ಮೆಲ್ಲರ ಜವಾಬ್ದಾರಿ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಅವರು ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಸಂವಿಧಾನದಲ್ಲಿ ಎಲ್ಲರಿಗೂ ಅಗತ್ಯವಾದ ಸ್ವಾತಂತ್ರ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ. ದೇಶದ ಅಖಂಡತೆಗೆ ಹಾಗೂ ಭದ್ರ ಬುನಾದಿಗೆ ಸಂವಿಧಾನವೇ ಮುಖ್ಯಯೆಂದರು.
ಸ್ವಾತಂತ್ರ್ಯ ಹೊಂದಿದ ನಂತರ ಡಾ.ಬಾಬಾ ಸಾಹೇಬ ಅಂಬೇಡ್ಕರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ. 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಹಸಿರು ಕ್ರಾಂತಿಯ ನಂತರ ದೇಶ ಆಹಾರ ಧಾನ್ಯಗಳನ್ನು ರಫ್ತು ಮಾಡಲು ಆರಂಭಿಸಿತು. ಔದ್ಯೋಗಿಕ ಕ್ರಾಂತಿ, ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ ಬದಲಾವಣೆಗೆ ಹಲವಾರು ಹಿರಿಯ ನಾಯಕರು ಶ್ರಮಿಸಿದರು. ಜವಹರಲಾಲ ನೆಹರು, ಲಾಲಬಹುದ್ದೂರ ಶಾಸ್ತ್ರೀ, ಮುರಾರ್ಜಿ ದೇಸಾಯಿ, ವಿ.ಪಿ.ಸಿಂಗ್, ಇಂದಿರಾಗಾಂಧಿ, ನರಸಿಂಹರಾವ್, ಮನಮೋಹನ ಸಿಂಗ್ ಸೇರಿದಂತೆ ಅನೇಕರು ಈ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಿದರು ಎಂದು ಸಚಿವರು ನುಡಿದರು.
ಈಗಲೂ ಸಾಕಷ್ಟು ಸಮಸ್ಯೆಗಳಿವೆ, ಜಾತಿ ಧರ್ಮಗಳ ಸಂಘರ್ಷ, ಅಸಮಾನತೆ, ಬಡತನ ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳಿವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹಿಳಾ ಅಭಿವೃದ್ಧಿಗೆ, ಬಡತನ ನಿರ್ಮೂಲನೆಗೆ ಹಲವಾರು ದೃಷ್ಟಿಯಿಂದ ಶ್ರಮಿಸಲಾಗುತ್ತಿದೆಯೆಂದರು.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಇತರೇ ರಾಜ್ಯಗಳು ಅನುಕರಣೆ ಮಾಡುತ್ತಿವೆ. ಐದು ಗ್ಯಾರಂಟಿಗಳಿಗೆ ಪ್ರತಿವರ್ಷ 54 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ರಾಜ್ಯದ ಜಿ.ಡಿ.ಪಿ. ಸಹ ಹೆಚ್ಚಾಗಿದೆಯೆಂದು ತಿಳಿಸಿದರು.
ಹಸಿವು ಮುಕ್ತ ಕರ್ನಾಟಕ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ 05 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡುವ ಬದಲಾಗಿ ನೇರ ನಗದು ಹಣ ಪಾವತಿಸಲು ಸೆಪ್ಟೆಂಬರ್-2024ರ ಮಾಹೆಗೆ ಜಿಲ್ಲೆಗೆ ರೂ.1887.06 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಒಟ್ಟು 307802 ಅರ್ಹ ಪಡಿತರ ಚೀಟಿಗಳ 1155837 ಫಲಾನುಭವಿಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ರೂ.18,87,06,630 ಗಳನ್ನು ಪಾವತಿಸಲಾಗಿರುತ್ತದೆ. ಜುಲೈ-2023 ರಿಂದÀ ಸೆಪ್ಟೆಂಬರ್-2024ರ ವರೆಗೆ ಒಟ್ಟು ರೂ.2,75,24,69,320.00 ಗಳನ್ನು ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ಜಮೆ ಮಾಡಲಾಗಿದೆ ಎಂದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಬಾಲಕಿಯರು ಒಟ್ಟು ಸೇರಿ 6.54 ಕೋಟಿ ಜನರು ಈ ಸೌಲಭ್ಯವನ್ನು ಪಡೆದಿರುತ್ತಾರೆ. ಹಾಗೂ ವಿಭಾಗದ ವಾಹನಗಳಲ್ಲಿ ಪ್ರತಿ ದಿನ ಸರಾಸರಿ 1.15 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಸದರಿ ಮಹಿಳಾ ಮತ್ತು ಬಾಲಕಿಯರು ಒಟ್ಟು ಸಏರಿ ರೂ. 180.57 ಕೋಟಿ ಸಂದಾಯವಾಗಿರುತ್ತದೆ. ಪ್ರತಿ ದಿನ ಪ್ರಯಾಣಿಕರಿಂದ ಸರಾಸರಿ ರೂ. 35.68 ಲಕ್ಷ ಸಾರಿಗೆ ಆದಾಯ ಸಂದಾಯವಾಗುತ್ತಿದೆ ಎಂದರು.  
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 8057 ವಿಧ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಸದರಿ ವಿದ್ಯಾರ್ಥಿಗಳ ಖಾತೆಗೆ ರೂ. 93234000 ನ್ನು ಜಮೆ ಮಾಡಲಾಗಿರುತ್ತದೆ ಎಂದರು.
ಗೃಹಜ್ಯೋತಿ ಯೋಜನೆಯಡಿಯಲ್ಲಿ ಗರಿಷ್ಠ 200 ಯುನಿಟ್‍ವರೆಗೆ ವಿದ್ಯುತ್ ಉಚಿತವಾಗಿ ಪಡೆಯುತಿದ್ದು, ಒಟ್ಟು 3,56,648 ಗ್ರಾಹಕರು ಇದರ ಲಾಭ ಪಡೆಯುತ್ತಿದ್ದು, ಈ ಯೋಜನೆಯು ಇಲ್ಲಿಯವರಗೆ ಶೇ.97 ಆಗಿದ್ದು, ಇನ್ನೂ ನೋಂದಣಿ ಪ್ರಕ್ರೀಯೆ ಚಾಲ್ತಿಯಲಿರುತ್ತದೆ. ಆಗಸ್ಟ್.2023 ರಿಂದ ಡಿಸೆಂಬರ್.2024 ರ ಅಂತ್ಯದವರೆಗೆ ಸರ್ಕಾರದಿಂದ 263.23 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,45,713 ಅರ್ಹ ಫಲಾನುಭವಿಗಳು ನೋಂದಣಿಯಾಗಿದ್ದು, ಇಲ್ಲಿಯವರೆಗೆ ಪ್ರತಿ ಯಜಮಾನಿಗೆ ಮಾಹೆಯಾನ ತಲಾ ರೂ. 2000 ರಂತೆ ಒಟ್ಟು ರೂ. 929,88,20,000 ಗಳನ್ನು ಡಿ.ಬಿ.ಟಿ. ಮುಖಾಂತರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಈಗಾಗಲೇ 18.224 ಲಕ್ಷ ಸಸಿಗಳನ್ನು ನೆಡಲಾಗಿರುತ್ತದೆ. 2025-26ನೇ ಸಾಲಿನಲ್ಲಿ 8.150 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಕರ್ನಾಟಕ ಅರಣ್ಯ ಕಾಯ್ದೆ 1963 ರನ್ವಯ ಒಟ್ಟು 1177.00 ಎಕರೆ ಒತ್ತುವರಿಯಾದ ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಇಲಾಖಾ ವಶಕ್ಕೆ ಪಡೆದುಕೊಳ್ಳಲಾಗಿದೆ. ಹೊನ್ನಿಕೇರಿ ಮಿಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗಾಗಿ ರೂ. 15,00 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದ್ದು ಟೆಂಡರ್ ಹಂತದಲ್ಲಿರುತ್ತದೆ. ಕಲ್ಯಾಣ ಕರ್ನಾಟಕದ ಎಲ್ಲ 7 ಜಿಲ್ಲೆಗಳಲ್ಲಿ ಹಸಿರು ಹೊದಿಕೆ ಮತ್ತು ಅರಣ್ಯ ವ್ಯಾಪ್ತಿ ಹೆಚ್ಚಳಕ್ಕೆ ವಿಶೇಷ ಯೋಜನೆಯೊಂದನ್ನೂ ರೂಪಿಸಲಾಗುತ್ತಿದೆ. 100 ಕೋಟಿ ವೆಚ್ಚದಲ್ಲಿ ಬೀದರನ 5 ಜಿಲ್ಲೆಯಲ್ಲಿ ರಸ್ತೆ ಬದಿ ಎತ್ತರದ ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು ಪ್ರತಿ ಸಸಿಗೆ ಜಿಯೋಟ್ಯಾಗ ಅಳವಡಿಸಲಾಗುವುದು ಎಂದರು.
ಕಂದಾಯ ಇಲಾಖೆಯಲ್ಲಿ ಭೂ ಮಂಜೂರಾತಿ ಪ್ರಕರಣಗಳಲ್ಲಿ ಸರಳೀಕರಣವಾದ ದರಖಾಸ್ತು ಪೆÇೀಡಿ ಅಭಿಯಾನ ಮಾಡಲು ಜಿಲ್ಲಾಡಳಿತ ಬೀದರ ಕ್ರಮ ಕೈಗೊಂಡಿದ್ದು,  ಒಟ್ಟು 18 ಜನ ಫಲಾನುಭವಿಗಳಿಗೆ ಪೆÇೀಡಿ ದುರಸ್ತಿ / ಹೊಸ ಪಹಣಿ ಇಂದು ವಿತರಿಸಲಾಗಿದೆ. ಹಳೆಯ ದಾಖಲಾತಿಗಳ ಡಿಜಿಟಲೀಕರಣಗೊಳಿಸಲು ಭೂ ಸುರಕ್ಷಾ ಯೋಜನೆಯಡಿ ಬೀದರ, ಭಾಲ್ಕಿ, ಚಿಟಗುಪ್ಪಾ, ಬಸವಕಲ್ಯಾಣ, ಹುಲಸೂರ, ಕಮಲನಗರ ಮತ್ತು ಔರಾದ (ಬ) ತಾಲ್ಲೂಕುಗಳಲ್ಲಿ  ಕಾರ್ಯಕೈಗೊಳ್ಳಲಾಗಿದೆ ಎಂದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 4,15,569 ಹೆಕ್ಟರ್ ಗುರಿ ಇದ್ದು, ಶೇ. 100 ರಷ್ಟು ಬಿತ್ತನೆಯಾಗಿರುತ್ತದೆ.  2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 4,33,603 ರೈತರ ತಾಕುಗಳ ಮಾಹಿತಿಯನ್ನು ಬೆಳೆ ಸಮೀಕ್ಷೆ ಮಾಡಲಾಗಿರುತ್ತದೆ. 98 % ಪ್ರಗತಿ ಸಾಧಿಸಲಾಗಿರುತ್ತದೆ. ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಗತಿಯಲ್ಲಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,96,966 ರೈತರು ಹಾಗೂ ಹಿಂಗಾರು ಹಂಗಾಮಿನಲ್ಲಿ 3178 ರೈತರು ಬೆಳೆ ಮೀಮೆ ಯೋಜನೆಯಡಿ ನೊಂದಾಯಿಸಿಕೊಂಡಿರುತ್ತಾರೆ. ಮುಂಗಾರು ಹಂಗಾಮಿನಲ್ಲಿ ಐoಛಿಚಿಟizeಜ ಅಚಿಟಚಿmiಣಥಿ ಯಡಿ 28,131 ರೈತರಿಗೆ ಒಟ್ಟು 12.43 ಕೋಟಿ ರೂ.ಗಳ ಬೆಳೆ ವಿಮಾ ಪರಿಹಾರ ನೀಡಲು ಅಂದಾಜಿಸಲಾಗಿದೆ ಎಂದರು.
ಜಿಲ್ಲೆಯ ಜನರ ಆರೋಗ್ಯಪೂರ್ಣ ಬದುಕಿಗಾಗಿ ಸರ್ಕಾರವು ಬದ್ಧವಾಗಿದ್ದು, ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎಂಬ ಧ್ಯೆಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ತಾಯಿ ಮತ್ತು ಮಕ್ಕಳ ಸುರಕ್ಷತೆಗಾಗಿ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ನಗು-ಮಗು ಆರೋಗ್ಯ ಕವಚ, ಜನನಿ ಸುರಕ್ಷಾವಾಹಿನಿಯಂತಹ ಹಲವಾರು ಆರೋಗ್ಯ ಕಾರ್ಯಕ್ರಮಗಳು ಪರಿಣಾಮವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸದಾಗಿ ಪ್ರಸ್ತಾಪಿಸಿರುವ ನಗರ ಆರೋಗ್ಯ ಸಂಸ್ಥೆಗಳು ಹುಮನಾಬಾದ ಮತ್ತು ಭಾಲ್ಕಿ. ಜನವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.  ಬೀದರ ನಗರಕ್ಕೆ ಹೊಸದಾಗಿ ಪ್ರಸ್ತಾಪಿಸಿರುವ ನಗರ ಸಮುದಾಯ ಆರೋಗ್ಯ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿವಿಧ ಆರೋಗ್ಯ ಸಂಸ್ಥೆಗಳನ್ನು ಮೇಲ್ದರ್ಜೆರಿಸಲಾಗಿದೆ. ಹುಲಸೂರು, ಕಮಲನಗರ, ಚಿಟಗುಪ್ಪಾ, ಮನ್ನಾಎಖೆಳ್ಳಿ, ನಿಟ್ಟೂರ(ಬಿ), ರಾಜೇಶ್ವರ ಸಮುದಾಯ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಯಿಂದ 50 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು. ಭಾಲ್ಕಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದಕ್ಕೆ ಪ್ರಸ್ತಾಪಿಸಲಾಗಿದೆ. ಬಸವಕಲ್ಯಾಣ ಉಪವಿಭಾಗಿಯ ಆಸ್ಪತ್ರೆಯನ್ನು 300 ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಡಿ ಜಿಲ್ಲೆಗೆ 3 ಸಾವಿರ ಇದ್ದ ಅನುದಾನವನ್ನು 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ 2024-25 ರವರೆಗೆ 2436.26 ಕೋಟಿ ಮೊತ್ತದಲ್ಲಿ 4764 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ ರಸ್ತೆ ಸುಧಾರಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್.ಹೆಚ್.ಡಿ.ಪಿ.) ಅಡಿಯಲ್ಲಿ ರೂ. 90.00 ಕೋಟಿಗಳು ಮಂಜೂರಾಗಿ ಈಗಾಗಲೇ ಗುತ್ತಿಗೆ ನೇಮಿಸಿದ್ದು, ಸುಮಾರು 30.00 ಕಿ.ಮೀ. ಉದ್ದದ ರಸ್ತೆಯನ್ನು ಸುಧಾರಣೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಮಾಡಲು 27 ಕಾಮಗಾರಿಗಳು ಒಟಟು ರೂ. 62.00 ಕೋಟಿಗಳಿಗೆ ಮಂಜೂರಾಗಿದ್ದು, ಟಎಂಡರ್ ಪ್ರಕ್ರಿಯೆ ಹಂತದಲ್ಲಿದೆ. ಬೀದರ ಪಟ್ಟಣದಲ್ಲಿ ರೂ. 59.80 ಕೋಟಿಗಳಿಗೆ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಿಸಲು ಸಚಿವ ಸಂಪುಟದಿಂದ ಮಂಜೂರಾಗಿದ್ದು, ಟೆಂಡರ್ ಕರೆಯುವ ಹಂತದಲ್ಲಿದ್ದು ಮಾರ್ಚ ತಿಂಗಳಲ್ಲಿ ಮುಖ್ಯಮಂತ್ರಿಗಳಿಂದ ಅಡಿಗಲ್ಲು ನೆರವೇರಿಸಲಾಗುವುದು. ಭಾಲ್ಕಿ ಪಟ್ಟಣದಲ್ಲಿ ರೂ. 16.60 ಕೋಟಿಗಳಿಗೆ ಕ್ರೀಡಾಂಗಣ ಕಟ್ಟಡ ನಿರ್ಮಿಸಲು ಮಂಜೂರಾಗಿ ಟೆಂಡರ ಹಂತದಲ್ಲಿದೆ ಎಂದರು.
ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗಿದ್ದು, ಭಾಲ್ಕಿ ಏತ ನೀರಾವರಿ ಹಾಗೂ ಔರಾದ್ ತಾಲ್ಲೂಕಿನ 504 ಕೋಟಿ ವೆಚ್ಚದ 36 ಕೆರೆ ತುಂಬುವ ಯೋಜನೆಗೆ ಸಿದ್ಧಗೊಂಡಿದೆ. 876 ಜನವಸತಿ ಪ್ರದೇಶಗಳಲ್ಲಿ ಬಹುಗ್ರಾಮ ಯೋಜನೆಯಡಿ 900 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಬೀದರ ಜಿಲ್ಲೆಯ ಯುವಕರಿಗೆ ಕೌಶಲ್ಯ ಅಭಿವೃದ್ದಿಗಾಗಿ ಶೀಘ್ರವೇ ಇನ್ನೊಂದು ಜೆ.ಟಿ.ಟಿ.ಸಿ. ಟೂಲ್ಸ್ ಆಂಡ ಟ್ರೇನಿಂಗ್ ಸ್ಥಾಪಿಸಲಾಗುವುದು. ಹೈದ್ರಾಬಾದ್ ಹತ್ತಿರವಾಗುವುದರಿಂದ ಇಂಕುಬೇಷನ್ ಕೇಂದ್ರ ಸ್ಥಾಪಿಸಲು ಚರ್ಚಿಸಲಾಗಿದೆ. ತಾರಾಲಯ ನಿರ್ಮಾಣ, ವಿಜ್ಞಾನ ಕೇಂದ್ರ ಸ್ಥಾಪನೆಗೂ ಸಹ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ವಿವರ:- ಪತ್ರಿಕಾ ರಂಗ (ಮುದ್ರಣ) ಕ್ಷೇತ್ರದಲ್ಲಿ ಚಂದ್ರಕಾತ ತಂದೆ ಹಣಮಂತಪ್ಪಾ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ರಾಮಕೃಷ್ಣ ಎಸ್.ಎಲ್. ಶಿಕ್ಷಣ ಕ್ಷೇತ್ರದಲ್ಲಿ ಮಾಣಿಕಪ್ಪಾ ಗೋರನಾಳೆ, ಅಂಗವಿಕಲ/ಶಿಕ್ಷಣ ಕ್ಷೇತ್ರದಲ್ಲಿ ಖಾಜಾ ಫರಿದೋದ್ದಿನ್, ಜನಪದ ಕ್ಷೇತ್ರದಲ್ಲಿ ಶ್ರೀಮತಿ ಡಿಲೈಮಾ ಗಂಡ ಅಮೃತ, ಸಂಗೀತ ಕ್ಷೇತ್ರದಲ್ಲಿ ಕಲ್ಯಾಣರಾವ ತಂದೆ ಮಾಣಿಕರಾವ, ಆರೋಗ್ಯ ಕ್ಷೇತ್ರದಲ್ಲಿ ಅರವಿಂದಕುಮಾರ ತಂದೆ ದತ್ತಾತ್ರೇಯರಾವ ಕುಲಕರ್ಣಿ, ಕ್ರೀಡಾ ಕ್ಷೇತ್ರದಲ್ಲಿ ಸುದೇಶ ತಂದೆ ಸೂರ್ಯಕಾಂತ ಮೊರೆ, ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರೀಧರ ಬಾಂಗ್ಲೆ ತಂದೆ ಶ್ರೀಪೌಲ ಬಾಂಗ್ಲೆ, ಕೃಷಿ ಕ್ಷೇತ್ರದಲ್ಲಿ ಜಿಜಾಬಾಯಿ ಗಂಡ ದಿ.ನಾಗಪ್ಪಾ ಮಚಕೂರಿ ಹಾಗೂ ಕ್ರೀಡೆ ಸೈಕಲಿಂಗ ಕ್ಷೇತ್ರದಲ್ಲಿ ಕು.ಲತಿಕಾ ತಂದೆ ಜೈಭೀಮ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಮಾರುತಿರಾವ ಮೂಳೆ, ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Saturday, 25 January 2025

ಡಾ ಚೆನ್ನಬಸವ ಪಟ್ಟದೇವರು ಕಟ್ಟಿದ ಬಸವ ತತ್ವ ಕನ್ನಡ ಮಠ ವೈದಿಕ ಕಡೆ ಜಾರುತ್ತಿದೆಯ?

 

ಡಾ ಚೆನ್ನಬಸವ ಪಟ್ಟದೇವರು ಕಟ್ಟಿದ ಬಸವ ತತ್ವ ಕನ್ನಡ ಮಠ ವೈದಿಕ ಕಡೆ ಜಾರುತ್ತಿದೆಯ?

ಹಿರಿಯ ಮತ್ತು ಕಿರಿಯ ಮಠಾಧೀಶರ ದ್ವಂದ್ವ ನಿಲುವು ಬಸವ ಭಕ್ತರಿಗೆ ಆಘಾತ: 

ಬೀದರ : ಜಿಲ್ಲೆಯಲ್ಲಿ ಇಂದು ಬಸವ ತತ್ವದ ಸತ್ವ ಪರೀಕ್ಷೆಯ ಪರ್ವ ಕಾಲದಲ್ಲಿ ಲಿಂಗಾಯತ ಧರ್ಮದ ಅನೂಯಾಯಿಗಳ ಅಘಾತಕಾರಿ ಸನ್ನಿವೇಶವನ್ನು ಎದುರಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಕಿರೀಟ ಪ್ರಾಯವಾದ ಬೀದರ ಜಿಲ್ಲೆಯ ಹೆಸರಾಂತ ಏಕೈಕ ಕನ್ನಡ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ ಭಾಲ್ಕಿ ಸಂಸ್ಥಾನ ಹಿರೇಮಠದ ಇಂದಿನ ಮಠಾಧೀಶರ ನಡೆಯನ್ನು ನೋಡಿದರೆ ವೈದಿಕ ಸಂಪ್ರದಾಯಕ್ಕೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂಬುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಮಠದಲ್ಲಿರುವ ಹಿರಿಯ, ಕಿರಿಯ ಸ್ವಾಮಿಜಿಗಳ ದ್ವಂದ್ವ ನಿಲ್ಲುವೇ ಮೂಲಕಾರಣವಾಗಿದೆ ಇಂದು. ಇಬ್ಬರಲ್ಲಿ ಒಬ್ಬರು ಬಸವತತ್ವಕ್ಕೆ ನಾವು ಒತ್ತು ನೀಡುತ್ತೇವೆ ಎಂದರೆ ಇನ್ನೊಬ್ಬರು ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದು ಇಂದು ಎಲ್ಲೆಡೆ ಬಸವ ಭಕ್ತರಲ್ಲಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. 


ಭಾಲ್ಕಿಯಲ್ಲಿ  ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದು

      ಇದಕ್ಕೆಲ್ಲ ಕಾರಣ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸೇಡಂ ಪರ ಮತ್ತು ವಿರೋಧ ದ್ವಂದ್ವ ನಿಲುವು: ದಿನಾಂಕ ೧೯ ರಂದು ಕಲಬುರ್ಗಿಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ ಮಠಾಧೀಶರು ಮತ್ತು ಚಿಂತಕರು  ಆಯೋಜಿಸಿದ್ದ " ಬಹುತ್ವ ಸಂಸ್ಕೃತಿ ಭಾರತೋತ್ಸವ "ದಲ್ಲಿ ಲಿಂಗಾಯತ ಧರ್ಮದ ಮಠಾಧೀಶರು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗಾಯತ ಬಸವ ವಿರೋಧಿ ಸಂಘಟನೆ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ವಿರೋಧ ಮಾಡುವದು, ಬುದ್ಧ ಬಸವ ಅಂಬೇಡ್ಕರ್ ಗಾಂಧಿವಾದಿಗಳು ಪ್ರಗತಿಪರ ವಿಚಾರ ಧಾರೆಯ ವಿರೋಧಿ ಕಾರ್ಯಕ್ರಮಕ್ಕೆ  ಪ್ರಗತಿಪರರು ಚಿಂತಕರು ಯಾರು ಹೋಗಬಾರದು ಎಂದು ಎಲ್ಲರೂ ಭಾಷಣ ಮುಖಾಂತರ ಆಹ್ವಾನ ಮಾಡಿದ್ದರು. ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಮಠಾಧೀಶ ಒಕ್ಕೂಟದ ಅಧ್ಯಕ್ಷ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ಭಾಲ್ಕಿ ಇವರು ಭಾಗವಹಿಸಿ ಮಾತನಾಡಿ ಈ ಒಂದು ಕಾರ್ಯಕ್ರಮ ಬಸವ ವಿರೋಧಿ ಕಾರ್ಯಕ್ರಮ ಯಾರು ಭಾಗವಹಿಸಬಾರದು ಎಂದು ಕರೆ ಕೊಟ್ಟಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮದ ಹೆಸರಾಂತ ಮಠಾಧೀಶರು ಅಕ್ಕ ಮಾತೆಯವರು ಭಾಗವಹಿಸಿ ಮಾತನಾಡಿದ್ದರು, ಪೂಜ್ಯ ಸಾಣೇಹಳ್ಳಿ ಸ್ವಾಮೀಜಿ, ಪೂಜ್ಯ ಹುಲಸೂರು ಸ್ವಾಮೀಜಿ, ಪೂಜ್ಯ ಕೋರ್ಣೇಶ್ವರ ಸ್ವಾಮೀಜಿ, ಪೂಜ್ಯ ಅಕ್ಕ ಗಂಗಾAಬಿಕೆ ಮುಂತಾದವರು ಭಾಗವಹಿಸಿದರು. 

ವಿಪರ್ಯಾಸ ಅಂದರೆ ಮಾರನೇ ದಿನವೇ ೨೦/೦೧/೨೦೨೫ ರಂದು ಕಲ್ಬುರ್ಗಿ ಕಾರ್ಯಕ್ರಮದಲ್ಲಿ ವಿರೋಧ ಮಾಡಿದ್ದ ಪೂಜ್ಯ ಅಕ್ಕ ಗಂಗಾAಬಿಕೆ ಮತ್ತೆ ಅವರೇ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು, ಲಿಂಗಾಯತರ ಬಸವಾದಿ ಶರಣರ ಕೆಂಗಣ್ಣಿಗೆ ಗುರಿಯಾದರು.

ದಿನಾಂಕ ೨೪/೦೧/೨೦೨೫ ರಂದು ಭಾಲ್ಕಿಯಲ್ಲಿ ಮಠದ ಮಠಾಧೀಶ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು. ಭಾಲ್ಕಿ ಹಿರೇಮಠದ ಹಿರಿಯ ಕಿರಿಯ ಮಠಾಧೀಶರು ದ್ವಂದ್ವ ನಿಲುವು ದಿಗ್ಭ್ರಮೆಗೊಳಿಸಿದೆ. ಇವರಿಬ್ಬರಲ್ಲಿ ತತ್ವ ಸಿದ್ದಾಂತದಲ್ಲಿ ಭೇದ ಉಂಟಾಗಿದೆಯ ಎನ್ನುವ ಸಂಶಯ ನಿರಂತರ ಕಂಡು ಬರುತ್ತಿದೆ. ಬಸವಲಿಂಗ ಪಟ್ಟದೇವರು ಪೂಜ್ಯ ಚೆನ್ನಬಸವ ಪಟ್ಟದೇವರ ತತ್ವ ಸಿದ್ದಾಂತ ದಾರಿಯಲ್ಲಿ ನಿಷ್ಠೆಯಿಂದ ನಿರಂತರ ಸಾಗುತ್ತಿದ್ದಾರೆ, ಬಸವ ತತ್ವ ಸಿದ್ದಾಂತ ತಮ್ಮ ಉಸಿರು ಮಾಡಿಕೊಂಡಿದ್ದಾರೆ. ಆದರೆ ವ್ಯವಹಾರಿಕ ಮನಸ್ಥಿತಿ ಇರುವ ಗುರುಬಸವ ಪಟ್ಟದೇವರು ಯಾವಾಗಲೂ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಎಡವಿ ಮಠದ ತತ್ವ ಸಿದ್ದಾಂತಗಳನ್ನು ಪಾಲಿಸುತ್ತಿಲ್ಲ ಅನ್ನೋದು ಮಠದ ಭಕ್ತರ ಅಳಲು. ಗುರುಬಸವ ಪಟ್ಟದೇವರು ಯಾರ ಮಾತು ಕೇಳಲ್ಲ, ಬಸವಲಿಂಗ ಪಟ್ಟದೇವರನ್ನು ಮಾತು ಕೇಳಲ್ಲ, ಅವರಿಗೆ ನಿಯಂತ್ರಣ ಮಾಡುತ್ತಾರೆ, ಆಧ್ಯಾತ್ಮಿಕ ಜ್ಞಾನದ ಕೊರತೆ ಇದೆ, ಸರಿಯಾದ ಶಿಕ್ಷಣ ಆಗಿಲ್ಲ, ಬಸವಾದಿ ಶರಣರ ಸಾಹಿತ್ಯದ ಸಂಪೂರ್ಣ ಅಧ್ಯಯನವು ಇಲ್ಲ, ಅಧ್ಯಯನ ಮಾಡುವ ಮನಸ್ಸು ಇಲ್ಲ ಎಂದು ಮಠದ ಶಿಷ್ಯರ ಅಳಲು. ಆದರೆ ತಮ್ಮ ಮಠದ ವ್ಯವಹಾರ ಆಸ್ತಿ ಹೇಗೆ ವೃದ್ಧಿ ಮಾಡಬೇಕು ಎನ್ನುವ ಸಂಪೂರ್ಣ ವ್ಯವಹಾರಿಕ ಜ್ಞಾನ ಇದೆ. ರಾಜಕೀಯ ಇಚ್ಛಾಶಕ್ತಿ ಇರುವ ಗುರುಬಸವ ಪಟ್ಟದೇವರು ದಿನಾಲು ಸರಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ತಮ್ಮವರ ಕೆಲಸ ಮಾಡುವಂತೆ ಒತ್ತಾಯಿಸುತ್ತಾರಂತೆ, ಹಲವಾರು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಾರದಲ್ಲಿ ಒಂದೆರಡು ಸಲ ಬೆಂಗಳೂರು ವಿಧಾನ ಸೌಧ ಭೇಟಿ ಕೊಟ್ಟು ಅಲ್ಲಿಯ ಸಚಿವರ ಕಚೇರಿಗೆ ಅಲೆದಾಡುತ್ತಾರೆ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೋಳು ಹೊಡೆಯುತ್ತಾರೆ. ರಾಜಕೀಯ ನಾಯಕರನ್ನು ಮತ್ತು ಅಧಿಕಾರಿಗಳನ್ನು ತಮ್ಮ ಮಠದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿ ಅವರ ಸಂಬAಧ ಬೆಳೆಸಿಕೊಳ್ಳುವದೆ ಇವರ ಮೂಲ ಉದ್ದೇಶ, ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುವದು ಕಿಂಚಿತ್ತೂ ಇಚ್ಛೆ ಇಲ್ಲ. 

ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಥೆ ಮತ್ತು ಸನ್ಮಾನ್ಯ ಶ್ರೀ ಬಸವರಾಜ ಪಾಟಿಲ ಸೇಡಂ ಮುಖಾಂತರ ಆರೆಸಸ್ ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದ ಲಿಂಗಾಯತ ಮಠಗಳನ್ನು ತೆಕ್ಕೆಗೆ ತೆಗೆದುಕೊಂಡು ಬಸವ ತತ್ವ ಸಿದ್ದಾಂತ ಮಸುಕು ಮಾಡುವ ಹುನ್ನಾರ: 

ಎರಡು ದಶಕಗಳಿಂದ  ಶ್ರೀ ಬಸವರಾಜ ಪಾಟಿಲ ಸೇಡಂ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್, ಪಠ್ಯ ಪುಸ್ತಕ, ಇನ್ನಿತರ ಸಾಮಗ್ರಿಗಳು ಪೂರೈಸಿ ಈ ಭಾಗದ ಶಿಕ್ಷಣ ಸಂಸ್ಥೆಗಳ ಪ್ರಭಾವ ಬಿರುತ್ತಿದ್ದಾರೆ. ಹಲವಾರು ಮಠ ಮಾನ್ಯಗಳು, ಲಿಂಗಾಯತ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚಿ ಅವರನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಇವರನ್ನು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘಟನೆ ಮಾಡಿ ಸೇಡಂ ಅವರಿಗೆ ಅಧ್ಯಕ್ಷ ಮಾಡಿದ್ದರು, ಇದಕ್ಕೆ ಬಜೆಟ್ ಕೊಡಲಾಗಿತ್ತು, ಇವರ ಕೆಲಸ ಇಷ್ಟೇ ಹಿಂದೂ ಧರ್ಮದ ದೇವಾಲಯಗಳು ಅಭಿವೃದ್ದಿ ಪಡಿಸುವುದು, ಬಸವಾದಿ ಶರಣರ ಇತಿಹಾಸ ಹಾಳು ಮಾಡುವದು, ಲಿಂಗಾಯತ ಮಠಾಧೀಶರಿಗೆ ಬಜೆಟ್ ಕೊಟ್ಟು ಅವರನ್ನು ತಮ್ಮ ಕಡೆ ಸೆಳೆದುಕೊಳ್ಳುವದು.ಹೊಸ ಅನುಭವ ಮಂಟಪದ ಕಟ್ಟಡ ಭೂಮಿ ಪೂಜೆ ಮಾಡುವ ಆಹ್ವಾನ ಪತ್ರಿಕೆಯಲ್ಲಿ ಸನಾತನ ಪರಂಪರಯ ಪುನರುತ್ಥಾನ ಬಸವ ತತ್ವ ಎಂದು ಬರೆದಿದ್ದರು, ಆವಾಗ ಮಠಾಧೀಶರು ಯಾರು ವಿರೋಧ ಮಾಡಿಲ್ಲ. ವೇದಿಕೆಯ ಮೇಲೆ ಗೊ.ರು.ಚ ಅವರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಚಾರ ರಥಗಳಿಗೆ ಚಾಲನೆ ಕೊಡುತ್ತಿರುವವರು ಸೇಡಂ ಅವರ ಹಂಗಿನಲ್ಲಿ ಇದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಕೆಲವು ಲಿಂಗಾಯತ ಮಠಾಧೀಶರು ಬಸವ ತತ್ವ ಸಿದ್ದಾಂತ ವಿರೋಧಿ ಆದ ಕುಂಭಮೇಳದಲ್ಲಿ ಸ್ನಾನಕ್ಕೆ ಪ್ರಯಗರಾಜ್  ಪ್ರಯಾಣ ಬೆಳೆಸಿದ್ದಾರೆ, ಕೆಲವರು ಸ್ನಾನ ಮಾಡಿ ಬಂದಿದ್ದಾರೆ, ಇನ್ನು ಕೆಲವರು ಪ್ರಯಾಗರಾಜ್ ಪ್ರಯಾಣಕ್ಕೆ ಸಜ್ಜಾಗಿದ್ದಾರೆ, ಇವರಿಗೆಲ್ಲ ಆರೆಸಸ್ ಸಂಪೂರ್ಣ ಅಂದರೆ ವಿಮಾನ ಟಿಕೆಟ್, ತಂಗುವ ಸವಲತ್ತು, ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುತ್ತಿದೆ. ಎಂಬ ವದಂತಿ ಹರಿದಾಡುತ್ತಿವೆ.

೯೦% ಪ್ರತಿಶತ ಲಿಂಗಾಯತ ಮಠಗಳು ವ್ಯವಹಾರಿಕ ಆಗಿದ್ದು, ಹಣದ ಆಮಿಷಕ್ಕೆ ಒಳಗಾಗಿ, ಪ್ರಶಸ್ತಿಗಳ ಬಯಕೆಯಲ್ಲಿ ರಾಜಕೀಯ ಪಕ್ಷಗಳ ಹಂಗಿನಲ್ಲಿ ತತ್ವ ಸಿದ್ದಾಂತ ಗಾಳಿಗೆ ತುರುತ್ತಿದ್ದಾರೆ. ಈ ಮಠಗಳು ಕೇವಲ ಲಾಭಕ್ಕಾಗಿ ಬಸವಣ್ಣನವರ ಫೋಟೋ ಬಳಸಿಕೊಳ್ಳುತ್ತಿದ್ದಾರೆ, ಆಂತರಿಕ ಹಿಂದೂ ಬಾಹ್ಯ ಲಿಂಗಾಯತ.ಇವರು ಹಣದ ವ್ಯಾಮೋಹದಲ್ಲಿ ಮಠಗಳನ್ನು ಆರೆಸಸ್ ಸುಪರ್ದಿಗೆ ವಹಿಸಿಕೊಡಲು ಹಿಂಜರಿಯಲ್ಲ. ಕೆಲವೊಂದು ಮಠಗಳು ಸಂಪೂರ್ಣ ಬಸವ ತತ್ವ ಸಿದ್ದಾಂತ ಮೇಲೆ ಸಾಗುತ್ತಿವೆ, ಆ ಮಠಗಳು ತಮ್ಮ ತಮ್ಮ ಧರ್ಮ ಪ್ರಚಾರ ಮಾಡುತ್ತಾ ಯಾವುದೇ ಹಂಗಿಗೂ ಪ್ರಚಾರಕ್ಕೂ ಪ್ರಶಸ್ತಿಗಳಿಗೂ ಹಾತೋರೈದೆ ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಿವೆ.

ಪೂಜ್ಯ ಡಾ ಮಾತೆ ಮಹಾದೇವಿ, ಪೂಜ್ಯ ತೋಟದಾರ್ಯ ಶ್ರೀಗಳು, ಇಲ್ಲಕಲ್ ಶ್ರೀಗಳು ಐಕ್ಯ ಆದ ಮೇಲೆ ಗಟ್ಟಿಯಾಗಿ ಮಾತಾಡುವರು ಯಾರು ಇಲ್ಲ, ಹೋರಾಟ ಮಾಡುವವರು ಯಾರು ಇಲ್ಲ , ಕೆಲವು ಲಿಂಗಾಯತ ಸಂಘಟನೆ ಮುಖಂಡರು ಮಠಾಧೀಶರೆ ರಾಷ್ಟ್ರೀಯ ಬಸವ ದಳ ಒಡೆದಿದ್ದಾರೆ, ಬಸವ ಪ್ರತಿಷ್ಠಾನ ಅಕ್ಕವರ ಮಧ್ಯ ಜಗಳ ಹಚ್ಚಿದ್ದಾರೆ, ಪೂಜ್ಯ ಚಿತ್ರದುರ್ಗ ಶ್ರೀಗಳ ಮೇಲೆ ಹುಸಿ ಕೇಸ್ ಮಾಡಿ ಜೈಲು ಕಳಿಸಿದ್ದಾರೆ. ಇವೆಲ್ಲದರ ಹಿಂದೆ ಕಾಣದ ಕೈಗಳು ಇವೆ, ಅದಕ್ಕೆ ಆರೆಸಸ್ ಬಿಜೆಪಿ ನಾಯಕರ ಕುಮ್ಮಕ್ಕು ಇದೆ. 

ಭಾಲ್ಕಿ ಶ್ರೀಗಳು ಪೂರ್ವದಿಂದಲೂ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯನ್ನು ಕಟುವಾಗಿ ವಿರೋಧಿಸುವ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಠಗಳು ಯಾರನ್ನೂ ದೂರವಿಡಬಾರದುˌ ಮಠ ಎಲ್ಲರಿಗೂ ಸೇರಿದ್ದು ಎಂದು ನೆಪ ಹೇಳುತ್ತಲೆ ತಮ್ಮ ತಮ್ಮ ಮಠಗಳಲ್ಲಿ ಬಹುತೇಕ ಮಠಾಧೀಶರು ಹಿಂದುತ್ವವಾದಿ ಹಾಗೂ ಕೋಮುವಾದಿಗಳ ಹಿಂದೂತ್ವ ಬಿತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಉದಾಹರಣೆಗಳು ಇವೆ. -ಡಾ. ಜೆ ಎಸ್ ಪಾಟೀಲ

ಇದು ಕೇವಲ ಭಾಲ್ಕಿ ಮಠ ಒಂದರ ಸಮಸ್ಯೆ ಮಾತ್ರವಲ್ಲ. ನಾಡಿನ ಬಹುತೇಕ ಲಿಂಗಾಯತ ಮಠಗಳು ಮನುವಾದಿಗಳಿಗೆ ಶರಣಾಗತರಾಗಿ ದಶಕಗಳೆ ಕಳೆದುಹೋಗಿವೆ. ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.

ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.

ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳನ್ನು ನಾಶಗೊಳಿಸದ ಹೊರತು ಕರ್ನಾಟಕದಲ್ಲಿ ಹಿಂದುತ್ವವನ್ನು ಬೆಳೆಸಲು ಸಾಧ್ಯವಿಲ್ಲವೆಂದು ಮನಗಂಡಿರುವ ಹಿಂದುತ್ವವಾದಿಗಳು ಅವುಗಳ ನಾಶಕ್ಕೆ ೨೦ ವರ್ಷಗಳ ಹಿಂದೆಯೆ ಯೋಜನೆಯೊಂದನ್ನು ರೂಪಿಸಿ ಅದರಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇದರಲ್ಲಿ ಹಿಂದುತ್ವವಾದಿಗಳದೇನೂ ತಪ್ಪಿಲ್ಲ. ಕರ್ನಾಟಕದಲ್ಲಿ ತಮ್ಮ ಪ್ರಮುಖ ವೈರಿಗಳು ಲಿಂಗಾಯತರುˌ ಹಿಂದುತ್ವವನ್ನು ಮುನ್ನೆಲೆಗೆ ತರಬೇಕಾದರೆ ಲಿಂಗಾಯತರನ್ನು ನಾಶಗೊಳಿಸಬೇಕು ಎನ್ನುವ ಹಿಂದುತ್ವವಾದಿಗಳ ಯೋಜನೆ ಅವರ ಪ್ರಕಾರ ಸರಿಯಾದದ್ದೆ.

ಲಿಂಗಾಯತರನ್ನು ನಾಶಗೊಳಿಸುವುದು ಸುಲಭವಲ್ಲವಾದ್ದರಿಂದ ಅವರನ್ನು ಅಪ್ಪಿಕೊಂಡೆ ನಾಶಗೊಳಿಸಬೇಕು ಎನ್ನುವ ಅವರ ಹುನ್ನಾರವೂ ಸರಿಯಾದದ್ದೆ. ಆದರೆ ಅದನ್ನು ತಿಳಿದುಕೊಳ್ಳುವಲ್ಲಿ ಲಿಂಗಾಯತ ಮಠಗಳು ಹಾಗೂ ರಾಜಕಾರಣಿಗಳು ಮತ್ತವರ ಅನುಯಾಯಿಗಳು ಸೋತಿದ್ದಾರೆ.

ಲಿಂಗಾಯತ ತತ್ವಜ್ಞಾನˌ ಸಿದ್ಧಾಂತ ಹಾಗೂ ಸಂಸ್ಕೃತಿಯ ಪರಂಪರಾಗತ ವೈರಿಗಳು ಯಾರು ಎನ್ನುವ ಕನಿಷ್ಠ ಪ್ರಜ್ಞೆ ಲಿಂಗಾಯತ ಮಠಗಳಿಗೆˌ ರಾಜಕಾರಣಿಗಳಿಗೆ ಹಾಗೂ ಜನಸಾಮಾನ್ಯರಿಗೆ ಇಲ್ಲದಿರುವದು ಆ ಸಮುದಾಯದ ದೌರ್ಭಾಗ್ಯವೆ ಹೊರತು ಹಿಂದುತ್ವವಾದಿಗಳ ತಪ್ಪಲ್ಲ. ಹಿಂದುತ್ವವಾದಿಗಳು ತಮಗನ್ನಿಸಿದ್ದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಪರಮ ಸ್ವಾರ್ಥ ಲಿಂಗಾಯತ ಮಠಾಧೀಶರ ಈ ನಡೆಗೆ ಮುಖ್ಯ ಕಾರಣ ತಾತ್ವಿಕ ಬದ್ದತೆಯ ಕೊರತೆ ಹಾಗೂ ಪರಮ ಸ್ವಾರ್ಥ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಡೀ ಲಿಂಗಾಯತ ಸಂಸ್ಕೃತಿಯು ನಾಶಗೊಳ್ಳುವಲ್ಲಿ ಯಾವುದೆ ಅನುಮಾನವಿಲ್ಲ. ಈಗಾಗಲೆ ಹಿಂದುತ್ವದ ನಶೆಯ ಕಾರಣ ಲಿಂಗಾಯತ ಯುವಕರು ಶಿಕ್ಷಣ ಪೂರೈಸುವಲ್ಲಿ ಹಾಗೂ ಉದ್ಯೋಗ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗದ ಲಿಂಗಾಯತರ ಕುರಿತು ಮಠಾಧೀಶರಿಗಾಗಲಿˌ ರಾಜಕಾರಣಿಗಳಿಗಾಗಲಿ ಯಾವದೆ ಕಾಳಜಿ ಇಲ್ಲ. ಇನ್ನು ಮುಂದೆಯೂ ಕೂಡ ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.

ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.

ಈಗಾಗಲೇ ಆರೆಸಸ್ ಲಿಂಗಾಯತ ಧರ್ಮ ಮಾನ್ಯತೆ ಅಲ್ಪಸಂಖ್ಯಾತ ಸೌಲಭ್ಯ ಕೇಂದ್ರ ಸರ್ಕಾರ ಮುಖಾಂತರ ತಿರಸ್ಕಾರ ಮಾಡಿಸಿತ್ತು. ಆರೆಸಸ್ ಬಸವಕಲ್ಯಾಣದಲ್ಲಿ ಜರುಗಿದ ಲಿಂಗಾಯತ ಮಹಾಸಮಾವೇಶಕ್ಕೂ ಸಹಾಯ ಸಹಕಾರ ಕೊಟ್ಟು ಪ್ರಚಾರ ಮಾಡಿ ಬೀದರ ಜಿಲ್ಲೆಯ ನಾಲ್ಕು ಶಾಸಕರು ಗೆಲ್ಲುವ ಹಾಗೆ ರೂಪು ರೇಷಗಳನ್ನು ಹಾಕಿ ಜಯ ಸಾಧಿಸಿತ್ತು. ಆರೆಸಸ್ ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಮಾಡಲು ಜಗದ್ಗುರು ಪೂಜ್ಯ ಜಯ ಮೃತ್ಯುಂಜಯ ಸ್ವಾಮೀಜಿ ಕುಮ್ಮಕ್ಕು ಕೊಟ್ಟು ಲಿಂಗಾಯತ ಧರ್ಮ ಹೋರಾಟಕ್ಕೆ ಹೊಡೆತ ಕೊಟ್ಟಿದೆ. ಪ್ರಸ್ತಾವ ತಿರಸ್ಕಾರ ಆಗಿ ಏಳು ವರ್ಷ ಆದರೂ ಕೂಡ ಯಾವುದೇ ಸಂಘಟನೆ ಆಗಲಿ ಮಠಾಧೀಶರಾಗಲಿ ಹೋರಾಟ ಮಾಡುವ ಮನಸ್ಸು ಮಾಡುತ್ತಿಲ್ಲ. ಇವಾಗ ಭಾರತೀಯ ಸಂಸ್ಕೃತಿ ಉತ್ಸವ ಕೂಡ ಬಸವ ತತ್ವ ಸಿದ್ದಾಂತ ಪ್ರಚಾರ ಹೊಡೆತ ಕೊಡುವ ಉದ್ದೇಶ ಆಗಿದೆ. ಇನ್ಮುಂದೆ ಲಿಂಗಾಯತರು ಬಸವಾದಿ ಶರಣರ ಅನುಯಾಯಿಗಳು ಯಾವ ಮಠಗಳ ಮೇಲೆ ಅವಲಂಬಿತ ಆಗದೆ ಲಿಂಗಾಯತ ಧರ್ಮ ಪ್ರಚಾರ ಮಾಡಬೇಕು, ಆರೆಸಸ್ ಮಾಡುತ್ತಿರುವ ಲಿಂಗಾಯತ ವಿರೋಧಿ ಬಸವ ತತ್ವ ವಿರೋಧ ನಿಲುವುಗಳಿಗೆ ಗುರಿ ಆಗಬಾರದು. ಮಠಾಧೀಶರು ಭಾರತೀಯ ಸಂಸ್ಕೃತಿ ಉತ್ಸವ ಸೇಡಂ ಹೋದರೆ ಹೋಗಲಿ ಬಿಡಲಿ, ಆದರೆ ಲಿಂಗಾಯತರು ಬಸವ ಅನುಯಾಯಿಗಳು ಯಾರು ಹೋಗಬಾರದು, ಈ ನಿಲುವಿನಿಂದ ಆರೆಸಸ್ ಹುನ್ನಾರಕ್ಕೆ ಮತ್ತು ಮಠಾಧೀಶರ ದ್ವಂದ ನಿಲುವಿಗೆ ಹೊಡೆತ ಬೀಳುತ್ತದೆ.

ಪ್ರತಿದಿನ ಬೆಳಿಗ್ಗೆ ಸೂರ್ಯ ಪೂರ್ವದಲ್ಲಿ ಉದಯ ಆಗುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ತಮ್ಮ ಅಭಿಪ್ರಾಯ. ಮಠಾಧೀಶರು ಅಷ್ಟೇ ಅಲ್ಲ ನಮ್ಮ ಜಾಗತಿಕ ಲಿಂಗಾಯತ ಮಹಾಸಭಾದ ಬಹು ಸಂಖ್ಯಾತ ಪದಾಧಿಕಾರಿಗಳ ಬದ್ಧತೆ ಬಸವ ತತ್ವಗಳಿಗಿಂತ ಮನುವಾದಿ ವೈರಸ್ ಅಂಟಿಸಿಕೊಂಡ ಬಿಜೆಪಿ ಪಕ್ಷಕ್ಕೆ ಎಂಬುದು ಸ್ಪಷ್ಟ. ಜಾಗತಿಕ ಲಿಂಗಾಯತ ಮಹಾಸಭಾ ಬಲಿಷ್ಠ ಸಂಘಟನೆ ಆಗಬೇಕಾದರೆ ಮನುವಾದಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದರೆ ಮಾತ್ರ ಸಾಧ್ಯ. ನಾನು ಕುರುಡುತನದಿಂದ ಮನುವಾದಿಗಳು ವಿರೋಧಿಸುತ್ತಿಲ್ಲ. ನಾನು ಆರ್.ಎಸ್.ಎಸ್ ಮತ್ತು ಬಿಜೆಪಿ ಒಳಗೆ ಹೋಗಿ ನೋಡಿಕೊಂಡು ಅವರ ಚಿಂತನೆಗಳು ಇಷ್ಟವಾಗದೆ ಹೊರಗೆ ಬಂದಿದ್ದೇನೆ. ಮೊದಲು ನಮ್ಮೆಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಬಸವ ತತ್ವದ ಬಗ್ಗೆ ಸೈದ್ಧಾಂತಿಕ ಬದ್ಧತೆ ಬರಬೇಕು.  

 -ಪ್ರೂ.ವೀರಭದ್ರಯ್ಯ.ಬೆಂಗಳೂರು

ಗುರು ಬಸವಣ್ಣ ಅವರ ತತ್ವ ಸಿದ್ದಾಂತ ಮೇಲೆ ಇಂತ ಇಂತ ಮಠಾಧಿಪತಿ ಗಳಿಂದ ಒಳಗೆ ದ್ರೋಹ ಅಗತ ಇದೆ ಇಂಥ ಗುರು ದ್ರೋಹಿ ಧರ್ಮ ದ್ರೋಹಿ ಗಳಿಗೆ ಅಪ್ಪ ಬಸವಣ್ಣ ಕೊಟ್ಟ ಲಿಂಗ ಸಮಾನತೆ ಇವರ ಸ್ವಾರ್ಥ ಸಾಧನೆಗಾಗಿ ಬಳಕೆ ಅಗತಾ ಇದೆ ಇಂತ ಧರ್ಮ ದ್ರೋಹಿ ಗೆ ದಿಕ್ಕಾರ ಅಕುವ ಮನಸ್ಥಿತಿ ಯಾರಿಗೂ ಇಲ್ವಾ ನಮ್ಮ ಬಸವ ಧರ್ಮ ಯಾರೇ ತಪ್ಪು ಮಾಡಿದರೂ ಅದನ್ನು ಸಕಾರಾತ್ಮಕವಾಗಿ ಕಂಡಿಸುವ ಸಿದ್ದಾಂತ ಅಕ್ಕ ಗಂಗಾಬಿಕ್ ಮೇಲೆ ವಾಗ್ದಾಳಿ ಆಯ್ತು ಆದ್ರೆ ಈ ಸ್ವಾಮೀಜಿ ಕೇಳುವ ದೈರ್ಯ ಯಾರಿಗೂ ಇಲ್ವಾ ನಮ್ಮ ಧರ್ಮದಲ್ಲಿ ಇಂತ ಗುರು ಗಳಿಂದ ಇನ್ನು ಅಪ್ಪಟ ಬಸವ ಧರ್ಮ ಅನುಯಾಯಿ ಶ್ರೀಗಳು ದೊಡ್ಡವರೆ ಹಾಗೆ ಇನ್ನು ನಾವು ಯಾಕ್ ಪಾಲನೆ ಮಾಡ್ ಬೇಕು ಅಂತ ತಿಳಿದು ಇವರಂತೆ ಅವರು ಮನುವಾದಿಗಳ ಜೊತೆ ಸೇರಿದರೆ ಒಳ್ಳೆಯದು ಅನ್ನೋ ಅನಿಸಿಕೆ ಬರ್ತಾ ಇದೆ ಆದಷ್ಟು ಇಂತ ನಾಟಕ ಕಂಡರೆ ತಕ್ಕ ಪಾಠ ಕಲಿಸಿ           

      -ಶ್ರೀ ಓಂಕಾರೇಶ್ವರ ಸ್ವಾಮೀಜಿ ಕಲ್ಯಾಣ ಬಸವಣ್ಣ ಮಠ ಮಂಡ್ಯ


ರಾಯಚೂರ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ-2025

 
ರಾಯಚೂರ ಜನವರಿ 25 : 'ಮತದಾನ ಜಾಗೃತಿ ಸಂದೇಶ', 'ಪ್ರತಿಜ್ಞಾ ವಿದಿ ಬೋಧನೆ', 'ಗುರುತಿನ ಚೀಟಿ ವಿತರಣೆ'ಯಂತಹ ನಾನಾ ಚಟುವಟಿಕೆಗಳ ಮೂಲಕ ಜನವರಿ 25ರಂದು ಭಾರತ ಚುನಾವಣಾ ಆಯೋಗ, ರಾಯಚೂರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ 2025ರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ರಾಯಚೂರಿನ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್ ಎ ಸಾತ್ವಿಕ್ ಅವರು ಮಾತನಾಡಿ, ಭಾರತದ ಸಂವಿಧಾನವು ಅತ್ಯಂತ ಮಹತ್ವದ್ದಾಗಿದೆ. ಈ ಸಂವಿಧಾನವು ನಮಗೆ ಓಟು ಮಾಡುವ ಹಕ್ಕು ನೀಡಿದೆ. ಇದನ್ನರಿತು ನಾವೆಲ್ಲರೂ ಮುಂದಿನ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುವ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗಬೇಕು ಎಂದರು.


ಸAವಿಧಾನವು ಒಂದು ಜೀವಂತ ದಾಖಲೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ನಾವೆಲ್ಲ ಅರಿಯಬೇಕು. ಸಂವಿಧಾನದತ್ತವಾಗಿ ನಮ್ಮೆಲ್ಲರ ಹಕ್ಕಾದ ಓಟನ್ನು ಹಣ ಮತ್ತು ಮತ್ತೀತರ ಆಮೀಷದಿಂದ ಮಾರಬಾರದು. ಜಾತಿ ನೋಡಿ ಮತ ಹಾಕುವುದು ನಡೆಯುತ್ತಿದೆ. ಇದು ಸರಿಯಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುವ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ, ಜಾತಿ ಧರ್ಮ ಬೇಧಭಾವ ಮಾಡದೇ ಎಲ್ಲರೂ ಒಂದೇ ಎಂದು ತಿಳಿದು ಸದಾಕಾಲ ಸಮಾಜದ ಏಳ್ಗೆ ಬಯಸುವ, ಸಂವಿಧಾನದ ಬಗ್ಗೆ ತಿಳಿವಳಿಕೆ ಹೊಂದಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಓಟು ಮಾಡಿ ಚುನಾವಣಾ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ,
ಚುನಾವಣೆಯ ಸಂದರ್ಭದಲ್ಲಿ ಓಟು ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಸಮಾಜದ ಬಗ್ಗೆ ಕಾಳಜಿ ಹೊಂದಿ ಸಮಾಜ ಸುಧಾರಣೆಗೆ ಶ್ರಮಿಸಬೇಕು ಎಂಬುದನ್ನು ವಿದ್ಯಾರ್ಥಿ ಯುವಜನರು ಅರಿಯಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲಾದರು ಅವ್ಯವಸ್ಥೆ ಕಂಡುಬAದಲ್ಲಿ ಅದನ್ನು ನೋಡಿದಾಗ ಸರಿಯಿಲ್ಲ; ಸರಿ ಮಾಡಿ ಎಂದು ಹೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ರಾಯಚೂರ ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗಬೇಕು. ಈ ಬಗ್ಗೆ ವಿದ್ಯಾರ್ಥಿ ಯುವಜನರು ಸಹ ಯೋಚಿಸಬೇಕು. ರಾಯಚೂರಗೆ ಕೆಲವೇ ವರ್ಷಗಳಲ್ಲಿ ವಿಮಾನಯಾನ ಸೌಲಭ್ಯ ಮತ್ತು ಎರಡು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೌಕರ್ಯ ಲಭ್ಯವಾಗಲಿದೆ. ಜಿಲ್ಲೆಯ ಅಭಿವೃದ್ಧಿಯ ಇಂತಹ ಒಳ್ಳೆಯ ಕಾರ್ಯಕ್ಕೆ ಯುವಜನರು ಸ್ಪಂದನೆ ಮಾಡಬೇಕು; ಪ್ರೋತ್ಸಾಹಿಸಬೇಕು ಎಂದರು.
ವಿದ್ಯಾರ್ಥಿಗಳು ಸರಿಯಾಗಿ ಅಧ್ಯಯನ ಮಾಡಬೇಕು. ಪಿಯುಸಿ, ಪದವಿ ಹಂತ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ್ದಾಗಿದ್ದು ವಿದ್ಯಾರ್ಥಿ ಹಂತದಲ್ಲಿ ಸರಿಯಾಗಿ ಅಧ್ಯಯನ ಮಾಡಿದಲ್ಲಿ ಉತ್ತಮವಾಗಿ ಜೀವನ ಸಾಧಿಸಬಹುದಾಗಿದೆ ಎಂದರು.
ಸ್ಚೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಸಿಇಓ ತುಕಾರಾಂ ಪಾಂಡ್ವೆ ಅವರು ಮಾತನಾಡಿ, ಸಂವಿಧಾನ ಬದ್ಧವಾದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಮಹತ್ವದ ಸ್ಥಾನವಿದೆ. ಚುನಾವಣೆ ಹೇಗೆ ನಡೆಯಬೇಕು; ನಡೆಸಬೇಕು ಎಂಬುದರ ಬಗ್ಗೆ ನಮಗೆ ಮಾರ್ಗದರ್ಶಿ ಅಂಶಗಳಿವೆ. ಅದರಂತೆ ಚುನಾವಣೆಗಳು ನಡೆಯಲು, ಯುವ ಮತದಾರರು ತಪ್ಪದೇ ಓಟು ಮಾಡಬೇಕು ಎಂದು ತಿಳಿಸಿದರು.
ಗುರುತಿನ ಚೀಟಿ ಹಂಚಿಕೆ: 18 ವರ್ಷ ತುಂಬಿದ ಯುವ ಮತದಾರರಿಗೆ ಸಮಾರಂಭದಲ್ಲಿ ಗುರುತಿನ ಚೀಟಿ ವಿತರಿಸಲಾಯಿತು. ಐದು ಜನ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನ: ಮತದಾರರ ಸಾಕ್ಷರತಾ ಕ್ಲಬ್ ಕಾರ್ಯಚಟುವಟಿಕೆಯಲ್ಲಿ ಉತ್ತಮವಾಗಿ ಕಾರ್ಯ ಮಾಡುತ್ತಿರುವ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ನಿಮಿತ್ತ ಉತ್ತಮ ಚುನಾವಣಾ ಸಾಕ್ಷರತಾ ಕ್ಲಬ್ ಸಂಯೋಜಕರೆAದು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಾವಿತ್ರಿ ಕೆ ಹಾಗೂ ಉಡಮಗಲ್ ಖಾನಾಪೂರದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರು ಮತ್ತು ಸಾಕ್ಷರತಾ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಡಾ.ದಂಡಪ್ಪ ಬಿರಾದಾರ ಅವರಿಗೆ ಇದೆ ವೇಳೆ ಸನ್ಮಾನಿಸಲಾಯಿತು.
ಉತ್ತಮ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ: ಚುನಾವಣೆ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅರಸಿಗೇರಾದ ಮುಖ್ಯ ಶಿಕ್ಷಕರಾದ ನರೇಶ, ಗುಂಜಳ್ಳಿ ಆಶಾ ಕಾರ್ಯಕರ್ತೆ ಮುನೀಂದ್ರಮ್ಮ, ತುಂಟಾಪುರ ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಬಿಲ್ಲಾರ, ಅಂಗನವಾಡಿ ಕಾರ್ಯಕರ್ತೆ ಸುಜಾತ, ರಾಯಚೂರ ಇಂದಿರಾ ನಗರದ ಸಹ ಶಿಕ್ಷಕ ರವಿ ಅವರಿಗೆ ಉತ್ತಮ ಮತಗಟ್ಟೆ ಮಟ್ಟದ ಅಧಿಕಾರಿಗಳೆಂದು ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸ್ವಾಗತಿದರು. ರಾಯಚೂರ ತಿಮ್ಮಾಪುರ ಪೇಟೆಯ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಗೀತಾರಾಣಿ ನಿರೂಪಿಸಿದರು.
ಸಮಾರಂಭದಲ್ಲಿ ಚುನಾವಣಾ ನೋಂದಣಾಧಿಕಾರಿಗಳು ಆಗಿರುವ ಸಹಾಯಕ ಆಯುಕ್ತರಾದ ಗಜಾನಂದ ಬಾಳೆ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಸಹಾಯಕ ನೋಂದಣಾಧಿಕಾರಿಗಳು ಆಗಿರುವ ತಹಸೀಲ್ದಾರ ಸುರೇಶ ವರ್ಮಾ, ಚುನಾವಣಾ ಶಾಖೆಯ ತಹಸೀಲ್ದಾರ್ ಪರಶುರಾಮ, ಸ್ವೀಪ ನೋಡಲ್ ಅಧಿಕಾರಿ ಡಾ.ಯಮನಪ್ಪ ವಾಲ್ಮೀಕಿ ಹಾಗೂ ಇತರರು ಇದ್ದರು. ಗ್ರೇಡ್ 2 ತಹಸೀಲ್ದಾರ ಭೀಮರಾಯ ರಾಮಸಮುದ್ರ ವಂದಿಸಿದರು. ಸಮಾರಂಭದಲ್ಲಿ ರಾಯಚೂರಿನ ಎಸ್ ಕೆ ಇ ಎಸ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಇನ್ನೀತರ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು-ಕುಲಪತಿ ಡಾ.ವಿ.ಎಸ್.ಬಿರಾದಾರ

 
ಬೀದರ :- ಭಾರತವು ಬಲಿಷ್ಠವಾದ ಪ್ರಜಾಪ್ರಭುತ್ವ ದೇಶ. ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿ.ಎಸ್.ಬಿರಾದಾರ ಹೇಳಿದರು.
 ರಂಗಮ0ದಿರದಲ್ಲಿ0ದು ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಜರುಗಿದ ರಾಷ್ಟಿಯ ಮತದಾರರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


 ಮತದಾನದ ದಿನದಂದು ಮತ ಹಾಕದಿರಲು ಯಾವುದೇ ನೆಪ ಹೇಳದೆ ತಪ್ಪದೇ ಮತದಾನ ಮಾಡಬೇಕು. ಮತಕ್ಕಿಂತ ಮಹತ್ವ ಇನ್ನೊಂದಿಲ್ಲ. ನಾನು ಖಚಿತವಾಗಿ, ಕಡ್ಡಾಯವಾಗಿ ಮತದಾನ ಮಾಡುತ್ತೇನೆಂದು ಪ್ರತಿಜ್ಞೆಗೈದು, ಯಾವುದೇ ಆಶೆ, ಆಕ್ಷಾಂಕ್ಷೆಗಳಿಗೆ ಒಳಗಾಗದೇ ಮತ ಚಲಾಯಿಸಬೇಕೆಂದು ಯುವ ವಿದ್ಯಾರ್ಥಿಗಳಿಗೆ ತಿಳಿಸಿದರು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದರು.
 ಸರಕಾರದ ವಿವಿಧ ಸಹಾಯ ಸೌಲಭ್ಯ ಪಡೆಯಲು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವುದಲ್ಲದೇ ತಮ್ಮ ಸುತ್ತಮುತ್ತಲಿನವರೆಲ್ಲರನ್ನು ಮತ ಚಲಾಯಿಸುವಂತೆ ಪ್ರೇರೆಪಿಸಬೇಕೆಂದರು.
 ಮತದಾನ ದಿನದಂದು ಕುಂಟು ನೆಪ ಹೇಳಿ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕು. ಚುನಾವಣೆ ಪ್ರಜಾಪ್ರಭುತ್ವದ ರಾಷ್ಟಿçÃಯ ಹಬ್ಬ. ಈ ಹಬ್ಬದಲ್ಲಿ ಎಲ್ಲರು ಸಂತಸದಿAದ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಭಾರತದ ಸದೃಢ ಅಭಿವೃದ್ಧಿಗಾಗಿ ಹಾಗೂ ಸುಸ್ಥಿರ ಸರ್ಕಾರದ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಬೇಕೆಂದರು.
 ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಯುವ ಮತದಾರರು 18 ರಿಂದ 21 ವಯಸ್ಸಿನ ಯುವಕರ ಪಾತ್ರ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯಾವುದೇ ಆಶೆ, ಆಮೀಶಗಳಿಗೆ ಒಳಗಾಗಿ ಜವಾಬ್ದಾರಿಯಿಂದ ತಮ್ಮಿಷ್ಟದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದರು. ಮತದಾನದಿಂದ ಪ್ರಜಾಪ್ರಭುತ್ವ ಸದೃಢಗೊಳ್ಳುತ್ತದೆ. ಸ್ಥಿರ ಸರ್ಕಾರ ರಚನೆಗೊಳ್ಳುತ್ತದೆ. ಇದರಿಂದ ಮೂಲಭೂತ ಸೌಕರ್ಯಗಳ ಅಬಿವೃದ್ಧಿ ಕಾಣಬಹುದು. ಪ್ರತಿ ಐದು ವರ್ಷಕ್ಕೊಮ್ಮೆ ನಮಗೆ ಮತದಾನದ ಅವಕಾಶ ದೊರೆಯುತ್ತದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಢಿಸಲು ಜಿಲ್ಲಾಡಳಿತದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಯುವಕರು ತಮ್ಮ ಮೊಬೈಲ್‌ನಲ್ಲಿ ವೋರ‍್ಸ್ ಹೆಲ್ಪಲೈನ್ ಆö್ಯಪ್ ಡೌನಲೋಡ ಮಾಡಿ ಫಾರ್ಮ ನಂ. 6 ಭರ್ತಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ಹಿರಿಯರ ಸ್ವಾತಂತ್ರ ಹೋರಾಟದಿಂದಾಗಿ ದೇಶಕ್ಕೆ ಸ್ವಾತಂತ್ರö್ಯ ದೊರೆಕಿದ್ದು, ಪ್ರತಿಯೊಬ್ಬರು ಸ್ವತಂತ್ರತೆಯನ್ನು ಸ್ವಚ್ಚವಾಗಿ ಜೀವಿಸಲು ಭದ್ರ ಪ್ರಜಾಪ್ರಭುತ್ವದ ಸರಕಾರ ಅಗತ್ಯ. ಜಗತ್ತಿನಲ್ಲಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವದೇಶ. ಚುನಾವಣೆ ಹಾಗೂ ಮತದಾನ ಮಹತ್ವವಾಗಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.
 ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ರಾಷ್ಟಿçÃಯ ಮತದಾರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮತದಾನ ಜಾಗೃತಿ ಕುರಿತು ರಿಲ್ಸ್ ಹಾಗೂ ಮತದಾರರ ಜಾಗೃತಿ ಲೋಗೋ ತಯ್ಯಾರಿಸಿದವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಯುವ ಮತದಾರರ ಸಾಂಕೇತಿಕವಾಗಿ ಎಪಿಕ್ ಕಾರ್ಡ ವಿತರಿಸಲಾಯಿತು.
 ಈ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮುತ್ತಣ್ಣ ಕಲಿಗಾರ, ಬೀದರ ವಿಶ್ವವಿದ್ಯಾಲಯದ ಕುಲಸಚಿವರು, ಸುರೇಖಾ, ರಾಜ್ಯ ಮಾಸ್ಟರ ಟ್ರೇನರ ಗೌತಮ ಅರಳಿ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ" ಅಮೃತ ಮಹೋತ್ಸವದ ಸಂಭ್ರಮ

76 ನೇ ಗಣರಾಜ್ಯೋತ್ಸವ"   ಅಮೃತ ಮಹೋತ್ಸವದ ಸಂಭ್ರಮ"     

ನಾನು  ಕೇವಲ  ಒಂದು  ಜಾತಿ  ಅಥವಾ ಒಂದೇ ಜನಾಂಗಕೋಸ್ಕರ  ಕೆಲಸ  ಮಾಡಿಲ್ಲ. ಭಾರತದ  ಪ್ರತಿಯೊಬ್ಬ  ಕಟ್ಟ  ಕಡೆಯ  ವ್ಯಕ್ತಿಯ  ಸಲುವಾಗಿ  ಜೀವ  ಸವೆಸಿದ್ದೇನೆ  ಸಂಶಯವಿದ್ದರೆ ಹೋಗಿ  ಸಂವಿಧಾನ  ಓದಿಕೊಳ್ಳಿ

ನಮ್ಮ ಗಣರಾಜ್ಯೋತ್ಸವಕ್ಕೆ 75 ವರ್ಷಗಳ  ಪೂರೈಸಿ    ಅಮೃತ್  ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂಭ್ರಮದ  ಹಿಂದಿನ ಹೋರಾಟ  ಬಹಳ ಕಷ್ಟಕರವಾದ ದಿನಗಳನ್ನು ಎದುರಿಸಬೇಕಾಗಿತ್ತು. ಏಕೆಂದರೆ  ನಮ್ಮ ಭಾರತದ  ಸ್ವಾತಂತ್ರ್ಯದ  ಮೊದಲು  ನಮ್ಮ ದೇಶ ಬ್ರಿಟಿಷರ  ಆಳ್ವಿಕೆಯಲ್ಲಿ ಇತ್ತು .ಬ್ರಿಟಿಷರಿಂದ ಮುಕ್ತಿ ಪಡೆಯಬೇಕಾದರೆ ಸತತವಾದ ಹೋರಾಟ  ಬಲಿದಾನ, ತ್ಯಾಗ ,ಅತಿಯಾದ ಹೋರಾಟ  ಮಾಡಿ  ಸ್ವಾತಂತ್ರ್ಯ ಪಡೆಯಲಾಯಿತು .1947 ಆಗಸ್ಟ್ 15 ರಂದು.ಆದರೆ  ಕೇವಲ ಸ್ವಾತಂತ್ರ್ಯ  ಪಡೆದರೆ ಸಾಲದು  ದೇಶಕ್ಕೆ  ಸಂವಿಧಾನದ ತುಂಬಾ ಅವಶ್ಯಕವಾಗಿತ್ತು.  ಡೋಮಿನಿಯನ್  ವ್ಯವಸ್ಥೆ ಕ್ರಿ.ಶ.  1931 ರ ಕಾಯ್ದೆಯ ಪರಿಣಾಮವಾಗಿ ಆಸ್ಟ್ರೇಲಿಯಾ, ದಕ್ಷಿಣ  ಆಫ್ರಿಕಾ,  ಕೆನಡಾ, ಮುಂತಾದ  ಡೋಮಿನಿಯನ್  ರಾಜ್ಯಗಳು ಸ್ಥಾಪನೆಯಾದವು. ಆ ರಾಜ್ಯಗಳ  ಆಂತರಿಕ  ವಿಷಯದಲ್ಲಿ   ಸ್ವಾತಂತ್ರ್ಯ   ಪಡೆದವು . ಆದರೆ    ವಿದೇಶಾಂಗ  ಆಡಳಿತದ  ನೀತಿಯಲ್ಲಿ ಸ್ವಾತಂತ್ರ್ಯವಾಗಿರಲಿಲ್ಲ.   ಇಡೀ  ಪ್ರಪಂಚದ  ಮುಂದುವರೆದ   ರಾಷ್ಟ್ರಗಳ   ಪರಿಸ್ಥಿತಿ  ಈ ರೀತಿಯಾಗಿದ್ದಾಗ.  ನಮ್ಮ ಭಾರತ  ದೇಶದ   ಪರಿಸ್ಥಿತಿ   ತುಂಬಾ   ಕಷ್ಟಕರವಾದ ವಿಷಯವಾಗಿತ್ತು  .  ಅಂತಹ   ಸಮಯದಲ್ಲಿ ಭಾರತೀಯರಲ್ಲಿ  ಜಾತಿ ,ಧರ್ಮ, ಮೇಲು, ಕಿಳು ,ಶ್ರೀಮಂತ, ಬಡವ , ಎಂಬ ಮೂಢನಂಬಿಕೆ ಹೆಚ್ಚಾಗಿತ್ತು. ಇಂತಹ ವಿಷಯಗಳನ್ನೆಲ್ಲಾ ಕೇಂದ್ರಬಿಂದುವಾಗಿಟ್ಟುಕೊಂಡು  ಸ್ವಾತಂತ್ರ್ಯ ಭಾರತದ  ಪ್ರಥಮ  ಪ್ರಧಾನ ಮಂತ್ರಿಯಾದ ಪಂಡಿತ್  ಜವಾಹರಲಾಲ್ ನೆಹರು  ಅವರ ಸರ್ಕಾರದ  ನೇತೃತ್ವದಲ್ಲಿ  ಭಾರತಕ್ಕೆ  ತನ್ನದೇ ಆದ  ಒಂದು  ಸಂವಿಧಾನದ  ಅಗತ್ಯವಾಗಿತ್ತು. ಆದರಿಂದ  1946 ಮೇ 19 ರ  "ಕ್ಯಾಬಿನೆಟ್" ಮಿಷನ್  ಯೋಜನೆ  ಪ್ರಕಾರ ಸಂವಿಧಾನದ ರಚನಾ  ರಾಜ್ಯಾಂಗ  ಸಭೆಯನ್ನು ರಚಿಸಲಾಯಿತು. ಸಂವಿಧಾನ  ಸಮಿತಿಯ ಪ್ರಮುಖರು  ಡಾ: ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷರು  ಡಾ: ಬಿ. ಆರ್. ಅಂಬೇಡ್ಕರ್ ಕರಡು ಸಮಿತಿಯ  ಅಧ್ಯಕ್ಷರನ್ನಾಗಿ  ಹಾಗೂ  ಇತರ ಸದಸ್ಯರಾದ  ಅಲ್ಲಾಡಿ  ಕೃಷ್ಣಮಚಾರಿ ಅಯ್ಯಂಗಾರ್, ಮಹಮ್ಮದ್ ಸೈದುಲ್ಲಾ, ಕೆ.ಎಂ. ಮುನ್ಸಿ ,ಬಿ.ಪಿ .ಖೇತಾನ್ ,ರಾಜಗೋಪಾಲಚಾರಿ ಹೀಗೆ  ಏಳು  ಜನ  ಸದಸ್ಯರನ್ನಾಗಿ ನೇಮಿಸಲಾಯಿತು.  ಈ ನಿಯಮದ ಪ್ರಕಾರದಂತೆ  ಸಂವಿದಾನ  ರಚಿಸಲು  ಯಾರು ಸಹಾಯ  ಮಾಡಲಿಲ್ಲ  ಏಕೆಂದರೆ  ಸಂವಿಧಾನ ರಚಿಸುವುದು   ತುಂಬಾ   ಕಷ್ಟಕರವಾದ ಕೆಲಸವಾಗಿತ್ತು.  ಅಂತಹ  ಸಮಯದಲ್ಲಿ ದೀನದಲಿತರ  ನಾಯಕ, ದೇಶದ   ಪ್ರಥಮ ಕಾನೂನಿನ   ಮಂತ್ರಿ,  ಸಮಾಜ   ಸುಧಾರಕ ಡಾ: ಬಿ.ಆರ್ .ಅಂಬೇಡ್ಕರ್ ಅವರು ಮುಂದಾದರು. ಇವರು  ದೇಶದ  ಸಂವಿಧಾನವನ್ನು  ಹಗಲು ಇರುಳು  ಎಂಬದೆ. ತಿಂಡಿ, ಊಟ, ನೀರು, ನಿದ್ರೆ ,ಇಲ್ಲದೆ ಸತತವಾಗಿ ಕುಳಿತು ಭಾರತ ದೇಶದ ಸಂವಿಧಾನ ರಚನೆ ಮಾಡಿದ್ದರು .1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ಬಂದ ದಿನವನ್ನು  ಗಣರಾಜ್ಯೋತ್ಸವ  ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದ ಸಂವಿಧಾನದಲ್ಲಿ ಭಾರತ  ದೇಶದ  ಸಂವಿಧಾನ  ಅತ್ಯಂತ ಶ್ರೇಷ್ಠವಾದದ್ದು  .ಹಾಗೂ  ಲಿಖಿತ ಸಂವಿಧಾನವಾಗಿರುತ್ತದೆ.

 ಭಾರತ ದೇಶದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ,ಪ್ರಜಾಸತ್ತಾತ್ಮಕ ,ಮತ್ತು ಗಣತಂತ್ರ, ಸಮಾನತೆ , ಭ್ರಾತೃತ್ವ ,ನ್ಯಾಯ ,ರಾಷ್ಟ್ರವನ್ನಾಗಿ ಸ್ಥಾಪಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ  .ಇಲ್ಲಿನ  ಎಲ್ಲಾ  ಪ್ರಜೆಗಳಿಗೆ ಯಾವುದೇ ಜಾತಿ ,ಧರ್ಮ, ಮೇಲು, ಕೀಳು ,ಬೇದ ,ಭಾವವಿಲ್ಲದೆ ಸಮಾನವಾಗಿ ಶೈಕ್ಷಣಿಕವಾಗಿ ,ಆರ್ಥಿಕವಾಗಿ, ಸಾಮಾಜಿಕವಾಗಿ , ರಾಜಕೀಯವಾಗಿ , ನ್ಯಾಯಯುತವಾಗಿ, ನ್ಯಾಯವನ್ನು ಒದಗಿಸಿ ಅವರ ಆಚಾರ ,ವಿಚಾರ, ಅಭಿವ್ಯಕ್ತಿ ,ನಂಬಿಕೆ ,ಸ್ವಾತಂತ್ರ್ಯ ,ಸ್ಥಾನಮಾನ, ಭಾರತ ದೇಶದ  ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗೂ  ದೇಶದ  ಕೂಲಿ ಕಾರ್ಮಿಕರಿಗೂ ಎಲ್ಲರಿಗೂ ಸಮಾನವಾದ ಅವಕಾಶಗಳ   ಸಮಾನತೆಯನ್ನು  ದೊರಕಿಸಿ ವೈಯಕ್ತಿಕ   ಘನತೆ  ಮತ್ತು  ದೇಶದ  ಆಯ್ಕೆ ಎಲ್ಲರಲ್ಲಿ  ಭಾತೃತ್ವವನ್ನು  ಪ್ರೋತ್ಸಾಹಿಸಿ  ದೇಶದ ಎಲ್ಲಾ   ಜನತೆಗೆ  ಒಗ್ಗಟ್ಟಿನಿಂದ ಸ್ವಾಭಿಮಾನದಿಂದ  ನ್ಯಾಯಯುತವಾಗಿ  ಬದುಕಬೇಕೆಂಬುದನ್ನು ಈ ನಮ್ಮ  ಭಾರತ  ದೇಶದ  ಸಂವಿಧಾನ ಮಹತ್ವದ ಸೂಚನೆ ತಿಳಿಸುತ್ತದೆ.ಈ ಮೇಲೆ ಬಳಸಿರುವ   ಸಂವಿಧಾನ ಪೀಠಿಕೆಯಲ್ಲಿನ ಪದಗಳ ಅರ್ಥ ಹೀಗಿರುತ್ತವೆ.

1. ಸಾರ್ವಭೌಮ ರಾಷ್ಟ್ರ :ಎಂದರೆ ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸ್ವಾತಂತ್ರ್ಯ ನಿರ್ಣಯಗಳನ್ನು  ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದರ್ಥ.

2. ಜಾತ್ಯಾತೀತ ರಾಷ್ಟ್ರ :ಎಂದರೆ ಭಾರತವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಸ್ವೀಕರಿಸಿಲ್ಲ ಎಂದರ್ಥ.

3. ಸಮಾಜವಾದಿ :ಎಂದರೆ ಸಮಾಜದಲ್ಲಿ ಸಾಮಾಜಿಕವಾಗಿ ತಾರತಮ್ಯವಿಲ್ಲದಿರುವುದು ಎಂದರ್ಥ.

4. ಪ್ರಜಾಪ್ರಭುತ್ವ :ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರೂಪಿಸಿದ್ದ ಆಡಳಿತ.

5. ಗಣರಾಜ್ಯ :ಎಂದರೆ ಒಂದು ರಾಷ್ಟ್ರದ ಮುಖ್ಯೆಸ್ಥರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚುನಾವಣೆ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ/ ಗಣರಾಜ್ಯ ಎನ್ನುವರು.

6. ಸಮಾನತೆ: ಎಂದರೆ ಸಮಾಜದ ಎಲ್ಲಾ ವರ್ಗ ಧರ್ಮದವರನ್ನು ಸಮಾನವಾಗಿ ನೋಡಿಕೊಳ್ಳುವುದು.

7. ಭ್ರಾತೃತ್ವ :ಎಂದರೆ ದೇಶದಲ್ಲಿನ ಪ್ರತಿಯೊಬ್ಬರು ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಜೀವಿಸುವುದು ಎಂದರ್ಥ.

8. ನ್ಯಾಯ :ಎಂದರೆ ಎಲ್ಲಾ ಜನರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ ಒದಗಿಸುವುದು ಎಂದರ್ಥ.

 ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದು ಆದರೆ ಪ್ರಜಾಪ್ರಭುತ್ವದ ಮೂಲ ಆಧಾರ ನಮ್ಮ ಭಾರತ ದೇಶದ  ಸಂವಿಧಾನ  ಅಷ್ಟೇ  ಅಲ್ಲದೆ  ಜಗತ್ತಿನಲ್ಲಿ ಅತೀ  ದೊಡ್ಡ  ಲಿಖಿತ ಸಂವಿಧಾನ ಹೊಂದಿದೆ .ಡಾ: ಬಿ.ಆರ್ .ಅಂಬೇಡ್ಕರ್ ಅವರಿಂದ  ರಚಿಸಲ್ಪಟ್ಟಿರುವ ನಮ್ಮ  ಭಾರತ  ದೇಶದ  ಸಂವಿಧಾನದಲ್ಲಿ  ಎಲ್ಲಾ ವರ್ಗಗಳು ಎಲ್ಲಾ ಸ್ಥರದ ಜನರ ಹಿತವಿದೆ ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರಬುನಾದಿಯ ನಮ್ಮ  ಸಂವಿಧಾನವಾಗಿದೆ.   ಇಡೀ ಪ್ರಪಂಚದಲ್ಲಿಯೇ ವಿಶೇಷವಾದ ಸಂವಿಧಾನ ಹೊಂದಿರುವಂತಹ ನಮ್ಮ ಸಂವಿಧಾನವನ್ನು ಅಂದರೆ ಭಾರತದ ದೇಶದ ಸಂವಿಧಾನ ಬರೆಯಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ತೆಗೆದುಕೊಂಡಿತ್ತು.

ನಮ್ಮ ಭಾರತ  ದೇಶದ ಸಂವಿಧಾನದಲ್ಲಿ ಮೂರು ಪ್ರಕಾರದ ಹಂಚಿಕೆಗಳಿವೆ.

 1.ಕೇಂದ್ರ ಪಟ್ಟಿ 99 ವಿಷಯಗಳಿವೆ ಉದಾರಣೆಗೆ ರಕ್ಷಣಾ ವ್ಯವಸ್ಥೆ, ವಿದೇಶಾಂಗ ನೀತಿ, ಯುದ್ಧ ,ಶಾಂತಿ, ಅಂಚೆ ,ತಂತಿ, ನಾಣ್ಯ ,ಬ್ಯಾಂಕಿಂಗ್, ವಿದೇಶ ವ್ಯವಹಾರ ಇತ್ಯಾದಿ.

2. ರಾಜ್ಯಪಟ್ಟಿಯಲ್ಲಿ 61 ವಿಷಯಗಳ ಅಡಕವಾಗಿ ಉದಾಹರಣೆಗೆ ಸಾರ್ವಜನಿಕರ ಶಾಂತಿ, ಸ್ಥಳೀಯ ಸರ್ಕಾರ, ಶಿಕ್ಷಣ, ಗ್ರಂಥಾಲಯ ,ವ್ಯವಸಾಯ ಪಶುಪಾಲನೆ, ಭೂಕಂದಾಯ ನೀರಾವರಿ ,ವಾಹನಗಳ ತೆರಿಗೆ, ಇತ್ಯಾದಿ.

3. ಸಮವರ್ತಿ ಪಟ್ಟಿಯಲ್ಲಿ 52 ವಿಷಯಗಳಿವೆ ಉದಾಹರಣೆಗೆ ಕ್ರಿಮಿನಲ್ ಕಾಯ್ದೆ ವಿವಾಹ ವಿಚ್ಛೇದ, ಒಕ್ಕಲುತನ, ಕುಟುಂಬ ಯೋಜನೆ, ಕಾರ್ಮಿಕರ  ಕಲ್ಯಾಣ, ಇತ್ಯಾದಿ.

 ಸಂವಿಧಾನದ ಪ್ರಮುಖ ಕೆಲವು ಅಂಶಗಳು ಸಂವಿಧಾನದಲ್ಲಿ 444  ಕಲಾಂಗಳಿವೆ   395 ವಿಧಿಗಳು 92 ಉಪವಿಧಿಗಳು 12  ಅನುಸೂಚಿಗಳಿವೆ  7635 ತಿದ್ದುಪಡಿಗಳಿವೆ  22 ಭಾಗಗಳು, ನಾಲ್ಕು ( 4 )ಉಪಭಾಗಗಳಿವೆ 114 ದಿನಗಳು ಚರ್ಚಿಸಲಾಗಿತ್ತು . ಇಲ್ಲಿಯವರೆಗೆ 110 ಕ್ಕು ಹೆಚ್ಚು ತಿದ್ದುಪಡಿಗಳು ಆಗಿವೆ.ಸುಮಾರು 8 ಸಾವಿರ ಪುಟಗಳು ಹೊಂದಿಸಲಾಗಿದೆ.

ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕುಗಳು ಸಂವಿಧಾನ ಭಾಗ 3 ವಿಧಿಗಳು 12 ರಿಂದ 35 ರ ವರೆಗಿನ ಒಟ್ಟು 6 ಮೂಲಭೂತ ಹಕ್ಕುಗಳನ್ನು ಹಾಗೂ ಭಾಗ 4A 51A ಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಇಂತಹ ಎಲ್ಲಾ ವಿಷಯಗಳನ್ನು ಹೊಂದಿರುವುದಕ್ಕೆ ಮೂಲ ಕಾರಣ ಪ್ರಪಂಚದ ಅನೇಕ  ರಾಜಕೀಯ  ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ  ಅತ್ಯಂತ  ಸ್ವೀಕಾರ ವ್ಯವಸ್ಥೆಯಾಗಿದೆ .ಡೆಮೋಕ್ರೇಷೀಯೋ  ಎಂಬ ಗ್ರೀಕ್  ಪದವು  ಡೆಮೊ ಮತ್ತು  ಕ್ರೇಷಿಯೋ ಎಂಬ ಎರಡು ಪದಗಳ ಸಂಯೋಗ   ಡೆಮೋನ್ ಎಂದರೆ  ಪ್ರಜೆಗಳು  ಕ್ರೇಷಿಯೋ  ಎಂದರೆ ಅಧಿಕಾರ  ಡೆಮೋಕ್ರೇಷಿಯೋ  ಎಂದರೆ ಪ್ರಜೆಗಳ  ಅಧಿಕಾರ  ಇದು  ಪ್ರಜೆಗಳೇ ಪ್ರಭುಗಳು ಎಂಬುದನ್ನು ಸೂಚಿಸುತ್ತದೆ.  ಹಾಗಾಗಿ

 ಪ್ರತಿ  ವರ್ಷ  ನಮ್ಮ  ದೆಹಲಿಯ ಕೆಂಪುಕೋಟೆಯ ರಾಜಪಥದಲ್ಲಿ ಗಣರಾಜ್ಯೋತ್ಸವ  ಪಥಸಂಚಲನ ನಡೆಯುತ್ತದೆ. ಅಂದವಾದ  ಮೆರವಣೆಗೆ ಭಾರತದ ಭವ್ಯವಾದ ಮಿಲಿಟರಿ ಪರಾಕ್ರಮವನ್ನು  ಪ್ರತಿಬಿಂಬಿಸುತ್ತದೆ.  ಅಂದು ರಾಷ್ಟ್ರಪತಿಗಳು  ರಾಷ್ಟಧ್ಜವನ್ನು ಹಾರಿಸುತ್ತಾರೆ .ದೇಶದ ರಕ್ಷಣೆಗೋಸ್ಕರ ತಮ್ಮ ಪ್ರಾಣವನ್ನು  ತ್ಯಾಗ  ಮಾಡಿದವರಿಗೆ  ಗೌರವ ಸಲ್ಲಿಸುವ ಹಾಗೂ ಪರಮವೀರ ಚಕ್ರ ಮತ್ತು ವೀರ  ಚಕ್ರ  ಪ್ರಶಸ್ತಿ  ನೀಡಿ ಗೌರವಿಸುವಲ್ಲಾಗುತ್ತದೆ .! ಈ ದಿನ ಮಹತ್ವದ ದಿನ ಎಂದಿಗೂ ಮರೆಯಲಾಗದ ದಿನವಾಗಿದೆ.ಇಂಥ ಮಹತ್ವದ ಸಂವಿಧಾನವನ್ನು ರಚನಕಾರ ಮಹತ್ವದ ವ್ಯಕ್ತಿ! ಅಂದರೆ ಡಾ. ಬಿ.ಆರ್ .ಅಂಬೇಡ್ಕರ್ ಅವರು ಸತತವಾದ ಪ್ರಯತ್ನದ ಪ್ರತಿಫಲವೇ ಸಂವಿಧಾನದ ರಚನೆಗೆ ಕಾರಣವಾದದ್ದು.

 ಇವರು ಜನನ 1891ರ ಏಪ್ರಿಲ್ 14 ರಂದು ಮಹಾರಾಷ್ಟ್ರದ ಅಂಬೇವಾಡಿ (ಮ್ಹೋ)ಎಂಬ ಗ್ರಾಮದಲ್ಲಿ ಜನಿಸಿದ್ದರು. ಇವರು ಪಡೆದಿರುವ ಡಿಗ್ರಿಗಳೆಂದರೆ ಎಂ. ಎ,ಪಿ.ಎಚ್ .ಡಿ ,ಡಿ ಎಸ್.ಸಿ,ಡೀ.ಲೀಟ್, ಎಲ್ . ಎಲ್.ಡಿ,ಬಾರ್.ಅಟ್.ಲಾ, ಒಟ್ಟು ನಾಲ್ಕು  ಡಾಕ್ಟರೇಟ್ ಪದವಿ ಪಡೆದಿದ್ದರೂ. ಜೊತೆಗೆ ನಾಲ್ಕು ವೇದಗಳು 18 ಪುರಾಣಗಳು ಅರಿತವರಾಗಿದ್ರು ಜೊತೆಗೆ ಪ್ರಪಂಚದ 14  ವಿದ್ಯಾಧರರಲ್ಲಿ ಮೊದಲನೆಯ ವಿದ್ಯಾಧರರಾಗಿದ್ದರು ಎಂದು ಕರೆಯಲಾಗುತ್ತದೆ. ಜಗತ್ತಿನ ಆರು ಘನಪಂಡಿತರಲಿ ಅಂಬೇಡ್ಕರ್ ಅವರ ಅತ್ಯಂತ ಶ್ರೇಷ್ಠರು ಎಂದು ಕರೆಯಲಾಗುತ್ತದೆ ಹಾಗೂ ವಿಶ್ವದ ಸಮಾಜಶಾಸ್ತ್ರಗಳಾದ ಎನಸೈಕ್ಲೋಪಿಡಿಯಾ 15 ಭಾಗ ಅರಿತವರಾಗಿದ್ದರು.ಅದಕ್ಕಾಗಿಯೆ ಅಲ್ಪಕಾಲಾವಧಿಯಲ್ಲಿ ಸಮಾಜದ ಮಹತ್ತರ ಬದಲಾವಣೆ ಮಾಡಿ ಸಮಾಜದ ನಿರ್ಮಾಣ ನಿರ್ಮಾಪಕರ ಕೀರ್ತಿಗೆ ಪಾತ್ರರಾದವರೆಂದು ಹೇಳಲಾಗುತ್ತದೆ.

ತಾನು ಅನುಭವಿಸಿದ್ದಂತಹ ಅವಮಾನ ಹಿಂಸೆಯನ್ನು ನನ್ನ ಭಾರತದ ಜನರಾದ ನನ್ನ ಮಕ್ಕಳು ಯಾವ ರೀತಿ ಹಿಂಸೆಗೆ ಒಳಗಾಗಬಾರದು ಎಲ್ಲರೂ ಶಿಕ್ಷಣ ಪಡೆದು ಸಂಘಟಿತರಾಗಿ. ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಟ ಮಾಡಿ ನಿಮ್ಮ ಜೀವನವನ್ನು ಸ್ವಾಭಿಮಾನದಿಂದ ಸಮಾಜದಲ್ಲಿ ತಲೆಯೆತ್ತಿ ಬದುಕಬೇಕು ಎಂಬ ಕಾರಣಕ್ಕಾಗಿ ಇಂತಹ ಅನೇಕ ಮಹತ್ವದ ಅಂಶಗಳನ್ನು ಭಾರತದ ಸಂವಿಧಾನದಲ್ಲಿ ರಚಿಸಲಾಗಿರತಕ್ಕಂತ ಅಂಶಗಳು ಮೂಲ ಕಾರಣ ಎಂದು  ಹೇಳಬಹುದು.

 ಅಂಬೇಡ್ಕರ್ ಹೇಳುವ ಮಾತಾಗಿದೆ ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಸರ್ಕಾರ ಸರಿಯಾಗಿ ನಡೆಸುವವರು  ಇಲ್ಲಾ ಎಂದರೆ ಸಂವಿಧಾನ ಸರಿಯಾಗಿ ಕಾಣುವುದಿಲ್ಲ. ಸರ್ಕಾರ  ತುಂಬಾ ಸರಿಯಾಗಿ ನಡೆಸುವವರು ಇದ್ದರೆ ಸಂವಿಧಾನ  ಸರಿಯಾಗಿ ಇಲ್ಲದಿದ್ದರೂ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ನಮ್ಮ ಸಂವಿಧಾನ ಅತ್ಯಂತ ಉತ್ತಮವಾದ ಸಂವಿಧಾನವಾಗಿದೆ !.

ಮಂದಿರದಲ್ಲಿ   ಕುಳಿತಿರುವ.  ದೇವರು  ತನ್ನ ದೀಪವನ್ನು   ತಾನೇ   ಹಚ್ಚಿಕೊಳ್ಳಲಿಲ್ಲ   ಎಂದ ಮೇಲೆ ನಿಮ್ಮ ಬಾಳಲ್ಲಿ  ಹೇಗೆ ಬೆಳಕು ನೀಡಬಲ್ಲ. ಶಿಕ್ಷಣವೇ ಶಕ್ತಿ ಶಿಕ್ಷಣವೇ ಯುಕ್ತಿ, ಶಿಕ್ಷಣವೆಂಬ ಜ್ಯೋತಿ  ಬೆಳಗುತ್ತ  ಶಿಕ್ಷಣ  ಪಡೆಯಿರಿ ! ಶಿಕ್ಷಣ ನೀಡುವವರಾಗಿ  ಎಂದು  ಹೇಳುತ್ತಾ 76 ನೇಯ ಗಣರಾಜ್ಯೋತ್ಸವ  ಅಮೃತ್  ಮಹೋತ್ಸವದ ಹಾರ್ದಿಕ  ಶುಭಾಶಯಗಳು..!

 -ಶ್ರೀಮತಿ ಬುದ್ಧದೇವಿ ಅಶೋಕ್ ಸಂಗಮ     

ತಾ: ಜಿ:  ಬೀದರ್

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...