ಅಮಿತ್ ಶಾ ತಲೆದಂಡಕ್ಕೆ ಆಗ್ರಹ ಜೇವರ್ಗಿ ಸಂಪೂರ್ಣ ಸ್ತಬ್ಧ...
ads
Search This Blog
Friday, 20 December 2024
ಅಮಿತ್ ಶಾ ತಲೆದಂಡಕ್ಕೆ ಆಗ್ರಹ|ಜೇವರ್ಗಿ ಸಂಪೂರ್ಣ ಸ್ತಬ್ಧ...
ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಳ್ತಾ ಕಾಂಗ್ರೆಸ್?
ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಳ್ತಾ ಕಾಂಗ್ರೆಸ್?
ನದಿ ಎಂದರೆ ಕಾವೇರಿ, ಕರ್ನಾಟಕವೆಂದರೆ ಬೆಂಗಳೂರು. ಇದು ನಮ್ಮ ಸರ್ಕಾರಗಳ ನಡೆಯಾಗಿದೆ. ಉತ್ತರ ಕರ್ನಾಟಕದ ಜನತೆ ಕೂಪ ಮಂಡೂಕಗಳು. ಅವರಿಗೆ ಏನು ಬೇಕೆಂದೇ ಗೊತ್ತಾಗುವದಿಲ್ಲ ಎಂಬ ಧೋರಣೆ. ಇದುವರೆಗೂ ಎಲ್ಲ ಸರ್ಕಾರಗಳೂ ಇದನ್ನೇ ಅನುಸರಿಸುತ್ತ ಬಂದಿರುವುದರಿAದಲೇ ಉತ್ತರ ಕರ್ನಾಟಕ ಹಿಂದುಳಿದಿದೆ. ಪ್ರತಿ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತದೆ. ಇದು ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಯೋಜನೆಗಳ ನೀರು ರೈತರ ಭೂಮಿಗೆ ಹರಿಯಬೇಕು. ಇದುವರೆಗೂ ನಡೆದ ಅನೇಕ ಸದನಗಳ ಚರ್ಚೆಯಲ್ಲಿ ಇದು ಸಾಕಾರಗೊಂಡಿಲ್ಲ. ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಂಡೇ ಎಲ್ಲ ಸರ್ಕಾರಗಳೂ ಅಧಿಕಾರ ಹಿಡಿಯುತ್ತ ಬಂದಿವೆಯೇ ಹೊರತು, ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಮಾಡುತ್ತಿಲ್ಲ.
ಅಧಿಕಾರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಳಸಿಕೊಳ್ತಾ ಕಾಂಗ್ರೆಸ್?
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಬಳಸಿಕೊಂಡಿತ್ತು ಎಂಬುದು ಬಿಜೆಪಿ ಆರೋಪ. ಇದೇ ಆರೋಪವನ್ನು ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕೂಡ ಮಾಡಿತ್ತು. ಜನರನ್ನು ಯಾಮಾರಿಸಲು ಚುನಾವಣೆಗಳು ಬಂದಾಗ, `ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ' ಎಂಬ ಪಾದಯಾತ್ರೆ ಹಮ್ಮಿಕೊಂಡು, ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದು ಸುಳ್ಳಲ್ಲ. ಅಧಿಕಾರ ಹಿಡಿದ ನಂತರ, ಕೇವಲ ಪುಟಗಟ್ಟಲೇ ನೀಡುವ ಜಾಹೀರಾತುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರೂ ಈಗ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಅಕ್ಷರಶಃ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂದು ಚುನಾವಣೆಗೆ ಮೊದಲು ಕೃಷ್ಣೆಯ ಕಡೆಗೆ-ನಮ್ಮ ನಡಿಗೆ ಹೋರಾಟ ಕೈಗೊಂಡು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿದ್ದರು. ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ ನೀಡುವ ವಾಗ್ದಾನ ಮಾಡಿದ್ದರು. ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳೇ ಬರೆದಿದ್ದವು. ಅದಕ್ಕೆ ಕೂಡಲಸಂಗಮದಲ್ಲಿ ನಿಂತು ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕರು, ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡು, ನಮಗೆ ಅನುದಾನ ನೀಡಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಸರ್ಕಾರ ಕೃಷ್ಣೆಯನ್ನು ಸಂಪೂರ್ಣ ಮರೆತರು.
ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ ೧೦ ಸಾವಿರ ಕೋಟಿ ರೂ ಮೀಸಲಿಡುತ್ತೇವೆ. ಐದು ವರ್ಷಗಳಲ್ಲಿ ೫೦ ಸಾವಿರ ಕೋಟಿ ರೂ ವೆಚ್ಚ ಮಾಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಕೂಡಲಸಂಗಮನಾಥನ ಮೇಲೆ ಆಣೆ ಪ್ರಮಾಣ ಕೂಡ ಮಾಡಿದ್ದರು. ಅಲ್ಲದೆ ಕಾಯಿಕಟ್ಟಿ ಕಾಂಗ್ರೆಸ್ ನಾಯಕರು ಪ್ರಮಾಣ ಕೂಡ ಮಾಡಿದ್ದರು. ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಮಾತನ್ನು ಪುನರುಚ್ಛರಿಸಿದ್ದರು.
ಘೋಷಣೆಗಳು ಮಾತ್ರ
ಆದರೆ, ಈ ಘೋಷಣೆಗಳು ಅಧಿಕಾರಕ್ಕೆ ಬಂದ ನಂತರ ಸರ್ಕಾರ ಎಲ್ಲವನ್ನೂ ಮರೆತಿದೆ. ಸರ್ಕಾರ ಬೇಡಿಕೆ ಪೂರೈಸಿದ್ದೆಂದರೆ ಗ್ಯಾರಂಟಿ ಯೋಜನೆಗಳನ್ನು ಮಾತ್ರ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಸಾರಿಗೆ ಸಂಸ್ಥೆ ಸೊರಗುವಂತೆ ಮಾಡಿದ್ದು, ಸಾರಿಗೆ ಸಂಸ್ಥೆಗೆ ಸರ್ಕಾರದಿಮದ ಬರಬೇಕಾಧ ಸಾವಿರಾರು ಕೋಟಿ ರೂ ಇನ್ನೂ ಬಆಕಿ ಉಳಿಸಿಕೊಂಡಿದೆ. ಇನ್ನು ಉಚಿತ ವಿದ್ಯುತ್ ಯೋಜನೆಯೂ ಇದಕ್ಕೆ ಹೊರತಲ್ಲ. ಉಚಿತ ವಿದ್ಯುತ್ ಯೋಜನೆಯಿಂದ ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಸ್ವತಃ ಇಂಧನ ಸಚಿವರೇ ಹೇಳಿಕೊಂಡಿದ್ದಾರೆ. ಇನ್ನು ಭಾಗ್ಯ ಲಕ್ಷಿö್ಮ ಯೋಜನೆಯಡಿ ಮಾಸಿಕ ೨ ಸಾವಿರ ರೂ ನಾಲ್ಕಾರು ತಿಂಗಳ ವರೆಗೂ ಬರುತ್ತಿಲ್ಲ ಎಂಬುದು ಮಹಿಳೆಯರ ಗೋಳು. ಅತ್ತು ಕೇಜಿ ಅಕ್ಕಿ ಯೋಜನೆಯ ಬದಲಾಗಿ ಐದು ಕೆಜಿ ಹಣ ನೀಡುವದಾಗಿ ಸರ್ಕಾರ ಘೋಷಣೆ ಮಾಡಿದ್ದು, ಅದೂ ಕೂಡ ನಿಯಮಿತವಾಗಿ ಸಂದಾಯವಾಗುತ್ತಿಲ್ಲ. ಈ ಗ್ಯಾರಂಟಿ ಯೋಜನೆಗಳನ್ನು ಜನರು ಕೇಳಿದ್ದರೆ? ಅಧಿಕಾರಕ್ಕಗಿ ಘೋಷಣೆ ಮಾಡಿ ಸರ್ಕಾರ ಆರ್ಥಿ ಹೊರೆ ನಿಭಾಯಿಸಲಾಗದೇ ಹೆಣಗಾಡುವಂತಾಗಿದೆ.
ಬಜೆಟ್ ಮಂಡನೆ ಮಾಡುವಾಗ ಮಾತ್ರ ವಿವಿಧ ಯೋಜನೆಗಳಿಗೆ ಹಣ ಘೋಷಣೆ ಮಾಡಲಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿಗೆ ವಾರ್ಷಿಕ ೧೦ ಸಾವಿರ ಕೋಟಿ ಪ್ರಸ್ತಾಪಿಸಲಾಗುತ್ತದೆ. ಇದು ಬಜೆಟ್ ಪುಸ್ತಕಕದಲ್ಲಿ ಮಾತ್ರ ಉಳಿಯುತ್ತದೆ. ಬಜೆಟ್ ಘೋಷಣೆಯ ನಂತರ ಹಣ ಬಿಡುಗಡೆ ಬಗ್ಗೆ ವಿರೋಧ ಪಕ್ಷಗಳೂ ಧ್ವನಿ ಎತ್ತುವದಿಲ್ಲ. ಆಡಳಿತ ಪಕ್ಷಗಳು ಹಣ ಬಿಡುಗಡೆ ಮಾಡುವದಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಒಂದು ವರ್ಷದ ಹತ್ತು ಸಾವಿರ ರೂ ಬಿಡುಗಡೆಯಾಗಿದೆಯೇ? ಕಳೆದ ಒಂದೂವರೆ ವರ್ಷದಲ್ಲಿ ಕೃಷ್ಣಾ ಯೋಜಯೂ ಸೇರಿದಂತೆ ಉತ್ತರ ಕರ್ನಾಟಕದ ಯಾವುದೇ ನೀರಾವರಿ ಪ್ರದೇಶದ ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚುವರಿ ಎಷ್ಟು ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡಿಸಲಾಗಿದೆ? ಇದಕ್ಕೆ ಸರ್ಕಾರದ ಬಳಿ ಉತ್ತರವೇ ಇಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ೫೦ ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು, ಕೃಷ್ಣಾ ಯೋಜನೆಯೊಂದಕ್ಕೆ ಹೇಳಿದ್ದಲ್ಲ ಎಂದು ತಮ್ಮ ಹೇಳಿಕೆಯನ್ನೇ ಸರ್ಕರ ತಿರುಚಿತು. ನುಡಿದಂತೆ ನಡೆದಿದ್ದೇವೆ ಎನ್ನುವುದು ಸರ್ಕಾರದ ಟ್ಯಾಗ್ ಲೈನ್ ಅಷ್ಟೇ. ಅದರಲ್ಲಿ ನಿಜಾಂಶ ಇಲ್ಲವೇ ಇಲ್ಲ. ಗ್ಯಾರಂಟಿ ಯೋಜನೆಗಳಲ್ಲೂ ಷರತ್ತುಗಳನ್ನು ಹಾಕಿ ಯೋಜನೆಗಳನ್ನು ಸೀಮಿತಗೊಳಿಸಿ. ಅದೂ ಫಲಾನುಭವಿಗಳಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ.
ಉತ್ತರ ಕರ್ನಾಟಕದ ಆಮಿಷ
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಷನದ ಮೂರು ದಿನಗಳ ವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಮಾತ್ರ ಚರ್ಚೆಗೆ ಮೀಸಲು ಎಂದು ಸರ್ಕಾರ ದೊಡ್ಡದಾಗಿ ಹೇಳಿಕೊಂಡಿತು. ಇದೇನು ಉತ್ತರ ಕರ್ನಾಟಕ್ಕೆ ಮಾಡುವ ಉಪಕಾರವೇ? ಇವರ ಕರ್ತವ್ಯವಲ್ಲವೇ? ಬರೀ ಚರ್ಚೆ ಮಾಡಿದರೆ ಸಾಕೆ? ಚರ್ಚೆಯ ವಿಷಗಳು ಅನುಷ್ಠಾನಕ್ಕೆ ಬರಬೇಡವೇ? ಹಿಂದೆ ಅನೇಕ ಬಾರಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗಳು ನಡೆದಿವೆ. ಇದುವರೆಗೂ ಯಾವ ನಿರ್ಣಯಗಳೂ ಅನುಷ್ಠಾನಕ್ಕೆ ಬಂದಿಲ್ಲ. ಕೇವಲ ಉತ್ತರ ಕರ್ನಾಟಕವೆಂದು ಆಮಿಷವೊಡ್ಡುತ್ತ ಬರಲಾಗುತ್ತಿದೆ.
ಪ್ರಸ್ತುತ ಅಧಿವೇಶನದಲ್ಲಿ ಬಾಣಂತಿಯರ ಸಾವು, ಶಿಕ್ಷಣ ಇಲಾಖೆಯ ಅಧೋಗತಿ, ಸಂಪರ್ಕ ರಸ್ತೆಗಳು, ಮಕ್ಕಳ ಅಪೌಷ್ಠಿಕತೆ, ಆರೋಗ್ಯ ಇಲಾಖೆ ಮತ್ತು ನೀರಾವರಿ ಇಲಾಖೆ ಯಾವುದೇ ಒಂದೇ ಒಂದು ಸಮಸ್ಯೆ ¨ಗೆಹರಿಸಲು ಸಾಧ್ಯವಾಗಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ನಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರಕ್ಕೆ ಯಾವುದೇ ಒಂದೇ ಒಂದು ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ. ಜನರಿಗೆ ಭರವಸೆ ನೀಡಿ ಆಯ್ಕೆಯಾಗಿದ್ದೇವೆ. ಅವರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಸಭೆಗಳಲ್ಲಿ ಮತ್ತು ಶಾಸಕಾಂಗ ಪಕ್ಷದ ಸಭೆಗಳಲ್ಲೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಅಭಿವೃದ್ಧಿಯತ್ತ ಸರ್ಕಾರದ ದೃಷ್ಟಿ ಹೋಗುತ್ತಿಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂಬ ಅರಿವು ಕೂಡ ಇಲ್ಲದಿರುವುದು ಅಚ್ಚರಿಯ ಸಂಗತಿ.
ಬಲಿಷ್ಠ ಆಡಳಿತ ಪಕ್ಷ ಇರುವಾಗ ಅಷ್ಟೇ ಬಲಿಷ್ಠವಾದ ವಿರೋಧ ಪಕ್ಷವೂ ಅಗತ್ಯ. ೧೯೮೨ರ ಗಉಂಡೂರಾವ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲವೇ ಜನರಿದ್ದ ಬಿಜೆಪಿ ಎ.ಕೆ.ಸುಬ್ಬಯ್ಯ ನೇತೃತ್ವದಲ್ಲಿ ಪ್ರಬಲ ಹೋರಾಟ ನಡೆಸುವ ಮೂಲಕ ಒಂದು ಸರರ್ಕಾವೇ ಚುನಾವಣೆಯಲ್ಲಿ ಬಿದ್ದುಹೋಗುವಂತೆ ಮಡಿದ್ದರು. ಆದರೆ ಈಗ ೬೫ ಶಾಸಕರನ್ನು ಹೊಂದಿರುವ ದೊಡ್ಡ ವಿರೋಧ ಪಕ್ಷವಿದ್ದರೂ, ಜನರ ಪರವಾಗಿ ಧ್ವನಿ ಎತ್ತುವ ತಾಕತ್ತು ತೋರುತ್ತಿಲ್ಲ. ಸರ್ಕಾರದ ಅನೇಕ ಹಗರಣಗಳು ಬೆಳಕಿಗೆ ಬಂದಿದ್ದರೂ, ಅವುಗಳನ್ನೆತ್ತಿಕೊಂಡು ಹೋರಾಟ ಮಾಡುವ ಶಕ್ತಿ ಮತ್ತು ಜನರ ಪರವಾಗಿ ಹೋರಾಟದ ಧ್ವನಿಯನ್ನು ವಿರೋಧ ಪಕ್ಷಗಳು ಕಳೆದುಕೊಂಡಿವೆ.
ಕರ್ನಾಟಕವೆಂದರೆ ಎಲ್ಲಿದೆ?
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಮೊದಲಿಂದಲೂ ಎಲ್ಲ ಪಕ್ಷಗಳು ಅನುಸರಿಸಿಕೊಂಡು ಬಂದಿವೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಅದಿಕಾರಕ್ಕೆ ಬಂದರೂ, ಕರ್ನಾಟಕ ಎಂದರೆ ಬೆಂಗಳೂರು, ನೀರಾವರಿ ಎಂದರೆ ಕಾವೇರಿ ನೀರು ಮಾತ್ರ. ಎಲ್ಲ ಅಭಿವೃದ್ಧಿ ಯೋಜನೆಗಳೂ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಕಾವೇರಿ ವಿವಾದ ಹುಟ್ಟಿಕೊಂಡಾಗ ಇಡೀ ಕರ್ನಾಟಕ್ಕೇ ಬೆಂಕಿ ಬಿದ್ದಂತೆ ಬೊಬ್ಬೆ ಹೊಡೆಯಲಾಗುತ್ತದೆ. ಆದರೆ, ಉತ್ತರ ಕರ್ನಾಟಕವನ್ನು ಇಷ್ಟೊದು ವ್ಯವಸ್ಥಿತವಾಗಿ ತುಳಿದು ಹೊಸಕಿ ಹಾಕುತ್ತಿದ್ದರೂ, ಉತ್ತರ ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳು ಮತ್ತು ಶಾಸಕರು ಧ್ವನಿ ಎತ್ತುವದಿಲ್ಲ.
ದಶಕಗಳಿಂದ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ಉತ್ತರ ಕರ್ನಾಟಕದ ಪ್ರತಿನಿಧಿಗಳು ಸಚಿವರಾಗಿರುತ್ತಾರೆ. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದೇ, ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ, ತಮ್ಮ ಪ್ರದೇಶ ಹಿಂದುಳಿದಿದೆ ಎಂದು ಅಂಗಲಾಚುವ ದಯನೀಯ ಸ್ಥಿತಿ ನಮ್ಮ ಉತ್ತರ ಕರ್ನಾಟಕದ ಪ್ರತಿನಿಧಿಗಳದ್ದಾಗಿದೆ. ಇಷ್ಟೊಂದು ಅಸಹಾಯಕ ಮತ್ತು ಅಸಮರ್ತ ನಾಯಕರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ಪ್ರತ್ಯೇಕ ರಾಜ್ಯವೆಂದು ಕೂಗುವವರು, ತಾವು ಅದಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂಥವನ್ನು ಆಯ್ಕೆ ಮಾಡಿದೆವಲ್ಲ ಎಂದು ಜನರು ಪಶ್ಚಾತ್ತಾಪ ಪಡುವಂಥ ಸ್ಥಿತಿ ಹಲವು ವರ್ಷಗಳಿಂದಲೂ ಮುಂದುವರೆಯುತ್ತ ಬಂದಿದೆ. ಎಲ್ಲದಕ್ಕೂ ಒಂದು ಅಂತ್ಯ ಎಂಬುದಿರುತ್ತದೆ. ಈ ಬಗ್ಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಬೇಗ ಎಚ್ಚೆತ್ತುಕೊಂಡಷ್ಟೂ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.
ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೨
ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೨
ಅಕ್ಕಮಹಾದೇವಿ
"ಅರಿವು-ಆಚಾರ-ಅನುಭಾವ:"
"ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ ಅದೆಂದಿಂಗೆ ಬೆಳೆದು ಫಲವಪ್ಪುದಯ್ಯಾ ಅರಿವಿಲ್ಲದವರಿಗೆ ಆಚಾರವಿದ್ದಡೆ ಅರಕೆಗೆಟ್ಟು ಸುಖವೆಂದಪ್ಪುದಯ್ಯಾ ಹೊರೆದ ಪರಿಮಳ ಸ್ಥಿರವಾಗಬಲ್ಲುದೆ ಎನ್ನದೇವ ಚೆನ್ನಮಲ್ಲಿಕಾರ್ಜುನನ ಅರಿಯದವರಿಗೆ ಆಚಾರವಿಲ್ಲ ಕಾಣಿರಣ್ಣಾ"
ಈ ವಚನದ ಮೂಲಕ ಅಕ್ಕಮಹಾದೇವಿಯವರು ಅರಿವು-ಆಚಾರ-ಅನುಭಾವದ ಕುರಿತು ಅಮೂಲ್ಯವಾದ ಸಂದೇಶವನ್ನು ನೀಡುತ್ತಾರೆ. ಕೆಲವು ಉಪಮೆಗಳ ಮೂಲಕ ಆಚಾರ ಮತ್ತು ಅರಿವಿನ ಮಹತ್ವವನ್ನು ತಿಳಿಸಿದ್ದಾರೆ. ಭತ್ತದ ಒಳಗಿನ ತಿರುಳಾದ ಅಕ್ಕಿ ಇಲ್ಲದೆ ಬರೀ ಭತ್ತದ ಹೊಟ್ಟು (ಸಿಪ್ಪೆ)ನ್ನು ಬಿತ್ತಿ, ನೀರು, ಗೊಬ್ಬರ ಹಾಕಿ ಪೋಷಿಸಿದರೆ ಅದು ಎಂದಾದರೂ ಬೆಳೆದು ಫಲ ಕೊಡಲು ಸಾಧ್ಯವೇ? ಇಲ್ಲ. ಏಕೆಂದರೆ ಒಳ ಹೊರಗೆ ಬತ್ತದ ಬಿತ್ತನೆ ಬೀಜ ಸತ್ವಯುತವಾಗಿದ್ದರೆ ಮಾತ್ರ ನೀರು ಗೊಬ್ಬರ ಉಂಡು ಫಲ ಕೊಡುತ್ತದೆ. ಮೇಲೆ ಹೇಳಿದಂತೆ ಬರಿ ಹೊರಗಿನ ಬತ್ತದ ಹೊಟ್ಟಿಗೆ ನೀರು ಗೊಬ್ಬರ ಹಾಕಿದರೆ ಅದು ವ್ಯರ್ಥ ಪರಿಶ್ರಮವಲ್ಲದೆ ಬೇರಲ್ಲ. ತಿಳುವಳಿಕೆ ಅಥವಾ ಅರಿವು, ಜ್ಞಾನ ಇಲ್ಲದೆ ಕೇವಲ ಆಚಾರವನ್ನು ಮಾತ್ರ ಅಳವಡಿಸಿಕೊಂಡು ಆಚಾರವಂತನಾದರೆ ಅದು ಎಂದಿಗೂ ಶಾಶ್ವತ ಪರಿಣಾಮ ಬೀರುವುದಿಲ್ಲ. ಬೆವರಿನ ವಾಸನೆಯಿಂದ ಕೂಡಿದ ಶರೀರಕ್ಕೆ ಸುವಾಸಿತ ದ್ರವ್ಯ ಸಿಂಪಡಿಸಿದರೆ ಅದು ಕ್ಷಣಿಕ ಪರಿಹಾರ ಮಾತ್ರವಾಗುತ್ತದೆ. ಮತ್ತೆ ಶರೀರವು ಬೆವರು ವಾಸನೆಯಿಂದ ಕೂಡುತ್ತದೆ. ಅದೇ ರೀತಿ ಅರಿವಿಲ್ಲದ ಆಚಾರದ ಪರಿಣಾಮವು ಸಹ ಕೆಟ್ಟು ಹೋದ ಗಡಿಯಾರ ದಿನಕ್ಕೆ ಎರಡು ಬಾರಿ ಮಾತ್ರ ಸರಿಯಾದ ಸಮಯ ತೋರಿದಂತೆ ಕ್ಷಣಿಕ ಸತ್ಯವಾಗಿದೆ. ಆದ್ದರಿಂದ ಸರ್ವಶಕ್ತ, ಹುಟ್ಟು-ಸಾವಿಲ್ಲದ, ನಿರಾಕಾರ, ನಿರ್ಗಣನಾದ ಪರಮಾತ್ಮನ ಅಸ್ತಿತ್ವ ಮತ್ತು ಸ್ವರೂಪವನ್ನು ಅರಿತು ಲಿಂಗ ದೀಕ್ಷೆ ಪಡೆದು ಸದಾಚಾರ ಸಂಪನ್ನನಾದಾಗ ಮಾತ್ರ ಆ ಭಕ್ತನ ಆಚಾರಕ್ಕೆ ಫಲ ಸಿಗುತ್ತದೆ. ಉದಾಹರಣೆಗೆ ಒಂದು ಪಕ್ಷಿ ಹಾರಲು ಎರಡು ರೆಕ್ಕೆಗಳು ಮತ್ತು ಒಂದು ಪುಚ್ಚ ಬೇಕು. ಹಾಗೆಯೇ ಭಕ್ತನಿಗೆ ದೇವನ ಸಾಮ್ರಾಜ್ಯದಲ್ಲಿ ಓಲಾಡಬೇಕಾದರೆ ಅರಿವು ಆಚಾರವೆಂಬ ರೆಕ್ಕೆ ಬೇಕು ಜೊತೆಗೆ ಭಕ್ತಿ ಎಂಬ ಪುಚ್ಚ ಬೇಕು.
ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳ ಅರಿವಿನ ಮಾರ್ಗ, ಪಂಚಾಚಾರದ ಆಚಾರ ಮಾರ್ಗ, ಷಟಸ್ಥಲದ ಸಾಧನ ಮಾರ್ಗಗಳಿವೆ. ಇವುಗಳ ಸಾಧನೆಯಿಂದ ದೇವನ ನಿಜವಾದ ಅರಿವನ್ನು ಅಳವಡಿಸಿಕೊಳ್ಳಬೇಕು. ಇದರ ಹೊರತು ಭಕ್ತನು ಮಾಡುವ ಅನ್ಯ ದೇವತೆಗಳ ಪೂಜೆ, ವೃತ, ನಿಯಮ, ಆಚರಣೆಗಳು ಧರ್ಮಸಮತವಾದುದಲ್ಲ. ಕೇವಲ ಧರ್ಮದ ಲಾಂಛನಗಳನ್ನ ಆಚರಣೆಗೆ ತಂದರೆ ಸಾಲದು; ಲಾಂಛನಗಳ ಅರಿವು, ಆಚಾರಕ್ಕೆ ತಂದಾಗಲೇ ಶರಣ ಜ್ಞಾನದ ಮೂಲತತ್ವದಲ್ಲಿ ಒಂದಾಗಲು ಸಾಧ್ಯ. ಅಲ್ಲದೆ ಅರಿವನ್ನು ಆಚಾರಕ್ಕೆ ತಂದು ಅನುಭಾವದ ಮೂಲಕ ಈ ಜಗತ್ತಿಗೆ ಬೋಧನೆಯನ್ನು ಮಾಡಿ, ಜಗದ ಲೇಸನ್ನು ಬಯಸುವುದು ಶರಣ ಜ್ಞಾನಿಯ ಕರ್ತವ್ಯವಾಗಿದೆ ಎಂದು ಅರಿವು ಆಚಾರ ಅನುಭಾವದ ತಿಳುವರಿಕೆಯನ್ನು ಅಕ್ಕನವರು ಕೊಟ್ಟಿರುವರು.
ಹಾಗಾದರೆ ಶರಣ ಪದದ ಅರ್ಥ ಮತ್ತು ಅಸ್ತಿತ್ವ ಏನು? ಶರಣನೆಂದರೆ ಯಾರು ಅವನು ಸ್ವರೂಪ, ವ್ಯಕ್ತಿತ್ವ ಏನು? ಶರಣು ಶರಣಾರ್ಥಿ ಎಂದರೇನು? ಶರಣನ ಧ್ಯೇಯ ಏನಾಗಿರಬೇಕು? ಶರಣನ ಮೂಲಭೂತ ಹಕ್ಕುಗಳು ಯಾವವು? ಶರಣನು ಸಾಧಿಸುವ ಸಮನ್ವಯತೆ ಯಾವುದು? ಶರಣನ ಅರಿವು ಮಾರ್ಗ ಯಾವುದು? ಶರಣನ ಆಚಾರ ಮಾರ್ಗ ಯಾವುದು? ಶರಣನ ಸಾಧನಾ ಮಾರ್ಗ ಯಾವುದು? ಶರಣ ಜೀವನದ ದಿನಚರಿ ಹೇಗಿರಬೇಕು?. ಎನ್ನುವ ಪರಿಪೂರ್ಣ ಶರಣಜ್ಞಾನವನ್ನು ಅನುಭವ ಮಂಟಪದಲ್ಲಿ ಗುರು ಬಸವಣ್ಣನವರು ನೇತೃತ್ವದಲ್ಲಿ ಶರಣರು ಚರ್ಚಿಸಿ ಅನುಷ್ಟಾನಕ್ಕೆ ತಂದ ಈ ಎಲ್ಲಾ ಸಂದೇಶವನ್ನು ಅಕ್ಕನು ಮಾರ್ಮಿಕವಾಗಿ ತಿಳಿಸುತ್ತಾಳೆ.
೧) ಶರಣ ಪದದ ಅರ್ಥ ಮತ್ತು ಅಸ್ತಿತ್ವ ಏನು?:
'ಶರಣ' ಪದದ ಅರ್ಥವು ಆಳವಾದ ತಾತ್ವಿಕ ಅರ್ಥದಿಂದ ಕೂಡಿದೆ. ಪರಮಾತ್ಮನಲ್ಲಿ ಪ್ರಥಮದಲ್ಲಿ ಉದಯವಾದ ಜ್ಞಾನಕ್ಕೆ ಶರಣ ಎಂಬ ಹೆಸರು ಬಂದಿದೆ. 'ಶರಣ' ಎನ್ನುವುದು ಸೃಷ್ಟಿಯ ಪ್ರಥಮ ತತ್ತ್ವ. ಈ ತತ್ತ್ವ ಸಕಲ ಜೀವಾತ್ಮರನ್ನೂ, ಸಮಸ್ತ ಜಗತ್ತನ್ನು ನಿರ್ದೇಶಿಸುತ್ತದೆ. ಆದ್ದರಿಂದ 'ಶರಣ' ಪದವು ವಿಶ್ವದರ್ಶಕ, ಏನೇನೂ ಇಲ್ಲದ ಎಲ್ಲವನ್ನೂ ಒಳಗೊಂಡ ಪರಮಸತ್ಯಕ್ಕೆ 'ಶರಣ' ಎಂದೂ ಶೂನ್ಯ ಸಿದ್ಧಾಂತವು ಕರೆಯಲ್ಪಡುತ್ತದೆ. ಈ ಶರಣನ ಅಸ್ತಿತ್ವದ ಬಗ್ಗೆ ಅಲ್ಲಮಪ್ರಭು ಬಹಳ ಅರ್ಥಪೂರ್ಣವಾಗಿ ಹೇಳಿರುವರು.
"ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ, ಗುಹೇಶ್ವರಾ ನಿಮ್ಮ ಶರಣಸಂಬಂಧ"
ಶಿಲೆಯೊಳಗೆ ಅಗ್ನಿ ಇದೆ, ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಹಾಗೆಯೇ ಚಿಧಗ್ನಿ ರೂಪವಾದ ಪರಮಾತ್ಮನು ಈ ಜಗತ್ತಿನಲ್ಲಿ ನಿಗೂಢವಾಗಿ ನೆಲೆಸಿದ್ದಾನೆ. ಉದಕದೊಳಗೆ ಪ್ರತಿಬಿಂಬವಿದೆ ಆದರೆ ಅದು ಗೌಪ್ಯವಾಗಿದೆ. ಅಂದರೆ ಆ ಜಲದ ಗುಣ ದೋಷಗಳು ಈ ಪ್ರತಿಬಿಂಬಕ್ಕೆ ಅಂಟುವುದಿಲ್ಲ. ಹಾಗೆಯೇ ಚಲನಶೀಲವಾದ ಪ್ರಪಂಚದ ಯಾವ ಗುಣದೋಷಗಳು ಅವನಿಗೆ ಅಂಟುವುದಿಲ್ಲ. ಅವನು ಅಷ್ಟು ಅಲಿಪ್ತ, ನಿರ್ಲಿಪ್ತ. ಬೀಜದೊಳಗೆ ಬೃಹತ್ತಾದ ವೃಕ್ಷವಿದೆ, ಆದರೆ ಅದು ಅವ್ಯಕ್ತವಾಗಿದೆ. ಹಾಗೆಯೇ ಜೀವಾತ್ಮನಲ್ಲಿ ಪರಮಾತ್ಮ ನೆಲೆಸಿದ್ದಾನೆ. ಹಾಗೆಯೇ ಶಬ್ದದೊಳಗೆ ನಿಶಬ್ದವಿದೆ. ಆದರೆ ಅಭಿಯವಾಗಿದೆ ಅದು ಬಯಲಿನಂತೆ ಮಹಾ ಮೌನ. ಶಬ್ದಗಳಿಂದ ನಿಶಬ್ದತೆಗೆ ಯಾವ ಬಾಧೆಯೂ ಇಲ್ಲ. ಹಾಗೆಯೇ ಪರಮಾತ್ಮನು ನಿಶಬ್ದ ಬ್ರಹ್ಮನಾಗಿರುವನು. ಅವನದು ಮೌನ ಅಸ್ತಿತ್ವ. ಹೀಗೆ ಪರಮಾತ್ಮನ ಅಂದರೆ ಶರಣನ ಸಂಬಂಧದ ನಿಲವು.
ಮುಂದುವರೆಯುವುದು........
ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು
ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.
ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೧.
ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೧.
ಶರಣ ಜ್ಞಾನದ ಮಹತ್ವ:
ಶರಣ ಬಂಧುಗಳೇ, ಮಾನವನು ದೇವನ ಈ ಸೃಷ್ಟಿಯ ಪ್ರಕೃತಿಯಲ್ಲಿ ಮೂಲತಃ ಸಂಗ ಜೀವಿಯಾಗಿರುವನು. ಮೊದಲು ಸೃಷ್ಟಿಯನ್ನು ತಿಳಿಯುವುದು, ತನ್ನ ತಾನರಿವುದು, ಸಮೂಹ ಪ್ರಜ್ಞೆಯಲ್ಲಿ ಬದುಕುವುದು ಮಾನವನ ಸಹಜ ಕ್ರಿಯೆಯಾಗಿದೆ. ತನ್ನ ತಾ ಅರಿಯದೆ ಏನೇ ಜ್ಞಾನವನ್ನು ಪಡೆದರೂ ಅದು ಉಪಯೋಗವಾಗದು; ಕೇವಲ ಶುಷ್ಕ ಜ್ಞಾನವಾಗುತ್ತದೆ. ವಿಶ್ವಗುರು ಬಸವಣ್ಣನವರು ಹೇಳಿದಂತೆ "ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟ ಜ್ಞಾನವೆಂಬ ಜ್ಞಾನತ್ರಯಂಗಳೇನಾದವೊ ಕೂಡಲ ಸಂಗಮದೇವಾ ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನ." ಈ ಜಗತ್ತಿನಲ್ಲಿ ಅನೇಕರು ಅನೇಕ ರೀತಿಯ ಜ್ಞಾನವನ್ನು ಹೊಂದಿರಬಹುದು ಆದರೆ ತನ್ನ ತಾನರಿವುದೆಂದರೆ ಪರಮಾತ್ಮನ ಮೂಲ ಜ್ಞಾನದಲ್ಲಿ ಒಂದಾಗುವುದು ಎಂದರ್ಥ. ಆ ಪರಮಜ್ಞಾನವನ್ನು ಅರಿತ ಬಳಿಕ ಅವನು ಪರಮಾತ್ಮನ ಮುಖವೇ ಆಗಿರುವ ಜಂಗಮ. ಅಂದರೆ ಸಮಾಜವನ್ನು ಪ್ರೀತಿಸಿ ಸಮೂಹ ಜ್ಞಾನದಲ್ಲಿ ಒಂದಾಗುತ್ತಾನೆ. ಈ ರೀತಿಯಾಗಿ ತಿಳಿಯುವ ಪರಮ ಜ್ಞಾನವೇ ಶರಣಜ್ಞಾನ. ಈ ಜ್ಞಾನವಿಲ್ಲದ ಮನುಜನು ಸಗಣಿಯಲ್ಲಿ ಹುಟ್ಟುವ ಹುಳುವಿಗೆ ಸಮಾನ ಎಂದಿರುವರು ಬಸವಣ್ಣನವರು.
"ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು ಸಗಣಕ್ಕೆ ಸಾಸಿರ ಹುಳು ಹುಟ್ಟವೆ ದೇವಾ, ಕಾಡ ಮೃಗವೊಂದಾಗಿರಲಾಗದೆ ದೇವಾ, ಊರ ಮೃಗವೊಂದಾಗಿರಲಾಗದೆ ಹರನೆ, ನಮ್ಮ ಕೂಡಲಸಂಗನ ಶರಣರಿಲ್ಲದ ಊರು ದೇಶ ವನವಾಸ, ನರವಿಂಧ್ಯ ಕಾಣಿರಣ್ಣಾ."
ಯಾರು ಪರಮಾತ್ಮನ ಚಿಂತನೆಯ ಮೂಲಕ ದಿವ್ಯ ಜ್ಞಾನವನ್ನು ಪಡೆಯಲಾರರೋ ಅಂಥವರ ಬದುಕು ಸೆಗಣಿಯ ಹುಳು ಮತ್ತು ಕಾಡು ಪ್ರಾಣಿ ಹಾಗೂ ಊರ ಪ್ರಾಣಿಗಳಿಗಿಂತ ಕಟ್ಟ ಕಡೆಯಾಗಿರುವುದು. ಅಲ್ಲದೇ ಅವರ ಮನಸ್ಸು ಮತ್ತು ಮನೆ ಸ್ಮಶಾನದಂತೆ ನರಕಯಾತನೆ ಅನುಭವಿಸುತ್ತದೆ ಎಂದು ಹೇಳಿ, ಮಾನವನ ಬದುಕಿಗೆ ಎಚ್ಚರಿಕೆಯನ್ನು ನೀಡುತ್ತಾರೆ.
ಶರಣ ಜ್ಞಾನವು ನಿಜವಾದ ಅರ್ಥದಲ್ಲಿ ಲೋಕಜ್ಞಾನವೇ ಆಗಿದೆ. ಲೋಕ ಎಂದರೆ ಸಕಲ ಜೀವರಾಶಿಗಳಿಂದ ಕೂಡಿದ ವಿಶ್ವ. ಲೋಕ ಎಂದರೆ ಜನರು. ಲೋಕ ಬಿಟ್ಟು ನಾವಿಲ್ಲ, ನಮ್ಮ ಬಿಟ್ಟು ಲೋಕವಿಲ್ಲ. ಮಾನವ ಮತ್ತು ಪ್ರಕೃತಿಯ ಮಧ್ಯೆ ಅವಿನಾಭಾವ ಸಂಬಂಧವಿದೆ. ಪ್ರಕೃತಿ ಎಂದರೆ ಮನಸ್ಸು, ದೇಹ ಮತ್ತು ನಿಸರ್ಗ. ಪ್ರಕೃತಿಯೊಳಗೆ ಸಾಂದರ್ಭಿಕವಾಗಿ ಈ ಮೂರು ಅಡಗಿವೆ. ಮಾನವ ಮತ್ತು ಪ್ರಕೃತಿಯ ಮಧ್ಯೆ ಸಂಬಂಧವನ್ನು ಕಲ್ಪಿಸುವ ಉದ್ಧೇಶವನ್ನು ಬಸವಧರ್ಮ ಹೊಂದಿದೆ. ಮನಸ್ಸಿನ ರಕ್ಷಣೆ ಮಾಡುವ ಅಷ್ಟಾವರಣ ಮೊದಲನೆಯ ಹಂತವಾಗಿದೆ. ಮನಸ್ಸಿನ ಬೆಳವಣಿಗೆ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಿ ವಿಶ್ವಮಾನವ ಮಾಡುವ ಷಟಸ್ಥಲ ಎರಡನೆಯ ಹಂತವಾಗಿದೆ. ಲೋಕಹಿತಕ್ಕಾಗಿ ಕ್ರಿಯಾಶೀಲವಾಗುವ ಪಂಚಾಚಾರ ಮೂರನೆಯ ಹಂತವಾಗಿದೆ.
ವ್ಯಷ್ಟಿಯಿಂದ ಸಮಷ್ಟಿಯವರೆಗೆ ಈ ಧರ್ಮದ ವಿಸ್ತಾರವಿದೆ. ವ್ಯಕ್ತಿಯಿಂದ ಸಮೂಹದ ವರೆಗೆ ಇಡೀ ಮಾನವ ಕುಲ ನಿಸರ್ಗದ ರಹಸ್ಯವನ್ನು ಅರಿತ ನಂತರ ಆ ಅರಿವನ್ನು ನಮ್ಮ ಬದುಕಿಗೆ ಅಳವಡಿಸಿಕೊಂಡು, ಸಕಲಜೀವಾತ್ಮರಿಗೆ ಲೇಸನೇ ಬಯಸುತ್ತ ಕಾಯಕ ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕ್ರಿಯಾಶೀಲವಾಗಿ ಬದುಕಿದರೆ ಲಿಂಗಭೇದ, ಜಾತಿಭೇದ, ವರ್ಣಭೇದ, ವರ್ಗಭೇದ ಮುಂತಾದ ಭೇದಗಳಿಂದ ಮುಕ್ತವಾಗಿ ನೆಮ್ಮದಿ ಪಡೆದು ಆನಂದಮಯ ಬದುಕನ್ನು ಬದುಕಲು ಸಾಧ್ಯವಿದೆ. ಬಸವಧರ್ಮವು ಮುಖ್ಯವಾಗಿ ಮನೋವೈಜ್ಞಾನಿಕ ಧರ್ಮವಾಗಿರುವುದರಿಂದ ಇಲ್ಲಿ ಮಾನವ ಸಂಸ್ಕಾರಕ್ಕೆ ಪ್ರಾಧಾನ್ಯವಿದೆ. ಮೊದಲ ಹಂತದಲ್ಲಿ ಮನಸ್ಸಿನ ಸಂರಕ್ಷಣೆ, ಎರಡನೆಯ ಹಂತದಲ್ಲಿ ಮನಸ್ಸಿನ ಬೆಳವಣಿಗೆಯಿಂದ ಪಡೆದ ವಿಶ್ವಮಾನವ ಪ್ರಜ್ಞೆಯ ಮೂಲಕ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಅರಿವಿನ ಸಾಕ್ಷಾತ್ಕಾರವಾಗಿ ಅನುಭಾವದ ಮಟ್ಟಕ್ಕೆ ಏರುತ್ತದೆ. ಈ ಅನುಭಾವವೇ ಲಿಂಗಾಂಗ ಸಾಮರಸ್ಯದ ಫಲ. ಹೀಗೆ ಜೀವಾತ್ಮ ಮತ್ತು ನಮ್ಮೊಳಗೆ ಇರುವ ಪರಮಾತ್ಮನ ಜೊತೆಗೆ ನಿತ್ಯ ಐಕ್ಯ ಸಾಧಿಸುವುದೇ ಲಿಂಗಾಂಗ ಸಾಮರಸ್ಯ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಇವು ಅಷ್ಟಾವರಣಗಳು. ಮನಸ್ಸನ್ನು ಐಹಿಕ ಆಸೆಗಳಿಂದ ಸಂರಕ್ಷಿಸುವ ಶಕ್ತಿ ಇವುಗಳಿಗಿದೆ. ಐಹಿಕ ಆಕರ್ಷಣೆಗಳಿಂದ ಮುಕ್ತವಾಗುವ ಹಾಗೆ ಮನಸ್ಸನ್ನು ಗಟ್ಟಿಗೊಳಿಸುವುದು ಸುಲಭದ ಕಾರ್ಯವಲ್ಲ. ಗುರುವೆಂಬ ಅರಿವು, ಲಿಂಗವೆಂಬ ತತ್ತ್ವ, ಜಂಗಮವೆಂಬ ಸಾಮಾಜಿಕ ಜವಾಬ್ದಾರಿ. ಪಾದೋದಕ ಎಂಬ ಜ್ಞಾನೋದಕ. ಪ್ರಸಾದವೆಂಬುದು ದೇವರ ಕಾಣಿಕೆಯಾದ ಈ ಲೋಕ ಮತ್ತು ಕಾಯ. ವಿಭೂತಿ ಎಂಬ ಅಂತಿಮ ಸತ್ಯ. ಮಂತ್ರ ಎಂಬ ಇಷ್ಟಲಿಂಗ ಮತ್ತು ಜಂಗಮಲಿಂಗದ ಜ್ಞಾನದ ನಿರಂತರದ ಲಕ್ಷ್ಯ. ಇಷ್ಟಲಿಂಗ ಪೂಜೆಯಿಂದ ಬರುವ ಅರಿವಿನಲ್ಲಿ ಮನಸ್ಸು ತೆರಪಿಲ್ಲದಂತಾಗುತ್ತದೆ. ಅಂಗಲಿಂಗದ ಆಚರಣೆಯಲ್ಲಿ ಆ ತೆರಪಿಲ್ಲದ ಮನಸ್ಸು ಲೋಕಹಿತ ಸಾಧಿಸುವ ಕ್ರಿಯೆಗೆ ತೊಡಗಲು ಪ್ರೇರೇಪಿಸುತ್ತದೆ. ಹೀಗೆ ಅಷ್ಟಾವರಣಗಳು ಮನಸ್ಸನ್ನು ಲೌಕಿಕ ಆಶೆಗಳಿಗೆ ಹರಿಯದಂತೆ ತಡೆಯುತ್ತವೆ. ಆಗ ಮನಸ್ಸು ಫಲ ಪಡೆಯಲು ಬೇಕಾದ ಸುರಕ್ಷಿತ ಬೀಜದಂತಾಗುತ್ತದೆ.
ಷಟಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಸ್ಥಲಗಳು ಮಾನವನ ಮನಸ್ಸಿನ ವಿಕಾಸಕ್ಕಾಗಿ ಇವೆ. ಇಲ್ಲಿ ಆ ಬೀಜ ಮನಸ್ಸಿನ ಬಿತ್ತನೆಯಾಗುತ್ತದೆ. ಈ ಬೀಜ ಮನಸ್ಸು ಭಕ್ತಸ್ಥಲದಲ್ಲಿ ಮೊಳಕೆಯೊಡೆಯುತ್ತದೆ. 'ನಾನು ಭಕ್ತ, ಜಗತ್ತಿನ ಸೇವೆ ಮಾಡಬಯಸುವವ' ಎಂಬ ಭಾವ ಮೂಡುತ್ತದೆ. ಮಹೇಶ ಸ್ಥಲದಲ್ಲಿ ಈ ಭಾವ ಗಟ್ಟಿಗೊಂಡು ಪರಿಪೂರ್ಣ ಆವಸ್ಥೆಯನ್ನು ತಲುಪುತ್ತದೆ. 'ಪ್ರಸಾದಿ ಸ್ಥಲದಲ್ಲಿ ನಮ್ಮ ದೇಹ ಸಮೇತ ಇಡೀ ಲೋಕ ದೇವರ ಪ್ರಸಾದ' ಎಂಬ ಭಾವ ಮೂಡುತ್ತದೆ. ಪ್ರಾಣಲಿಂಗಿ ಸ್ಥಲದಲ್ಲಿ ಮಾನವನ ಒಳಲೋಕವೆಲ್ಲ ದೇವಮಯವಾಗುತ್ತದೆ. ಶರಣ ಸ್ಥಲದಲ್ಲಿ ವ್ಯಷ್ಟಿ ಮತ್ತು ಸಮಷ್ಟಿಯ ಮಧ್ಯದಗೆರೆ ಅಳಿದು ಹೋಗುತ್ತದೆ. ಐಕ್ಯಸ್ಥಲದಲ್ಲಿ ದೆಹವೆಂಬ ದೇಗುಲದೊಳಗಿನ ಪರಮಾತ್ಮನ ಜೊತೆಗೆ ಬೆರೆಯುವ ಮೂಲಕ ಲಿಂಗೈಕ್ಯ ಸ್ಥಿತಿಗೆ ತಲುಪಿ ಲಿಂಗಾಂಗ ಸಾಮರಸ್ಯವಾಗುತ್ತದೆ.
ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಮತ್ತು ಭೃತ್ಯಾಚಾರಗಳು ಅರಿವನ್ನು ಆಚರಣೆಗೆ ತರುವುದಕ್ಕಾಗಿ ಇವೆ. ಮಾನವನ ಈ ಆಚಾರಗಳನ್ನು ಕೃತಿಯಲ್ಲಿ ತಂದಾಗಲೇ ನಡೆ-ನುಡಿ ಸಿದ್ಧಾಂತವನ್ನು ಪ್ರತಿಪಾದಿಸುವ ಬಸವಧರ್ಮದ ಪಾಲನೆ ಮಾಡಿದಂತಾಗುವುದು. ಒಬ್ಬನೇ ದೇವರು, ಒಂದೇ ಭೂಮಿ, ಒಂದೇ ಮಾನವಕುಲ ಎಂಬುದನ್ನು ಲಿಂಗಾಚಾರ ಹೇಳುತ್ತದೆ. ಸ್ವಾವಲಂಬಿಯಾಗಿ ಸಮಾಜದ ಉನ್ನತಿಗಾಗಿ ಕ್ರೀಯಾಶೀಲವಾಗಲು ಸದಾಚಾರ ತಿಳಿಸುತ್ತದೆ. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದೆ ಬದುಕಲು ಶಿವಾಚಾರ ಪ್ರೇರೇಪಿಸುತ್ತದೆ. ಈ ತತ್ತ್ವವನ್ನು ಸಂರಕ್ಷಿಸಿ ಪ್ರಸಾರ ಮಾಡಲು ಗಣಾಚಾರ ಕರೆ ನೀಡುತ್ತದೆ. ಇದನ್ನೆಲ್ಲ 'ಎನಗಿಂತ ಕಿರಿಯರಿಲ್ಲ' ಎಂಬ ಮನೋಭಾವದೊಂದಿಗೆ ಸೇವೆ ಮಾಡುತ್ತ ಸಾಧಿಸಿಬೇಕೆಂದು ಭೃತ್ಯಾಚಾರ ಸೂಚಿಸುತ್ತದೆ. ಹೀಗೆ ಅಕ್ಕ ಮಹಾದೇವಿ ಶರಣ ಜ್ಞಾನದ ಮಹತ್ವವನ್ನು ಪೂರ್ವ ಪೀಠಿಕೆಯಾಗಿ ತಿಳಿಸುತ್ತಾರೆ.
ಮುಂದುವರೆಯುವುದು........
ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.
ಪ್ರವಾಸ ಮಾಡೋಣ ಅನುಭವ ಪಡೆಯೋಣ
ಪ್ರವಾಸ ಮಾಡೋಣ ಅನುಭವ ಪಡೆಯೋಣ
ಜಗನ್ಮಾತೆ ಅಕ್ಕಮಹಾದೆವಿಯವರು ಹೇಳುವಂತೆ ಜೀವಿಸುವ ಜೀವನಕ್ಕೆ ಶೃಂಗಾರ ಯಾವುದು ಎಂದರೆ; ಗುರು ಹಿರಿಯರನ್ನು ನೋಡುವುದು, ಅವರ ಮಾತುಗಳನ್ನು ಆಲಿಸುವುದು, ಸಮಾಜದ ಬಂಧುಗಳು ಪರಸ್ಪರರು ಒಟ್ಟಿಗೆ ಸೇರಿ ಸತ್ಸಂಗ ಮಾಡುವುದು ಮತ್ತು ಒಟ್ಟಿಗೆ ಸೇರಿಕೊಂಡು ಪ್ರವಾಸ ಮಾಡುವುದು. ಈ ಲಕ್ಷಣಗಳೇ ನಮ್ಮ ವೈಯುಕ್ತಿಕ ಮತ್ತು ಸಮುಷ್ಟಿ ಜೀವನವನ್ನು ಶುದ್ಧೀಕರಣ ಮಾಡುತ್ತವೆ ಎಂಬುದು ಅಕ್ಕನ ಆಶಯ ನುಡಿ.
ಮುಡಬಿಯ ಅಂಬಾಭವಾನಿ ದೇವಸ್ಥಾನದ ಕಮಿಟಿಯವರು 2024ರ ದಸರಾ ನಿಮಿತ್ತವಾಗಿ 21 ದಿನಗಳ ಕಾಲ ಅಕ್ಕನ ಪ್ರವಚನ ಮಾಡಲು ನನ್ನನ್ನು ಸಂಪರ್ಕಿಸಿದಾಗ ಸಂತೋಷದಿಂದ ಒಪ್ಪಿಕೊಂಡು ದಿನಾಂಕ 21-10-2024 ರಿಂದ 11-11-2024ರವರೆಗೆ ಊರಿನ ಗುರು ಹಿರಿಯರ ಸಹಕಾರದಿಂದ ಯಶಸ್ವಿಯಾಗಿ ಪ್ರವಚನ ನಡೆಸಿಕೊಟ್ಟೆನು. ಪ್ರವಚನ ಮಂಗಲದ ದಿನ ನಾನು; ಅಕ್ಕನ ಬಳಗ ಸಂಘಟನೆ ಮಾಡಬೇಕೆಂದೂ ಮತ್ತು ಶ್ರೀಶೈಲಕ್ಕೆ ಹೋಗುವ ಬಯಕೆ ವ್ಯಕ್ತಪಡಿಸಿದಾಗ ಊರಿನ ಜನತೆ ಸಂತೋಷದಿಂದ ಒಪ್ಪಿಕೊಂಡರಲ್ಲದೆ ತಾವು ಬರುವುದಾಗಿ ತಿಳಿಸಿದರು. ಆಗ ಅಕ್ಕನ ಬಳಗವನ್ನು ಉದ್ಘಾಟನೆ ಮಾಡಿದ್ದಲ್ಲದೆ ಪ್ರತಿವಾರ ಮಂಗಳವಾರ ಸತ್ಸಂಗವನ್ನು ಮಾಡಲು ಸೂಚಿಸಿದೆನು. ಅದರಂತೆ ಪ್ರತೀ ಮಂಗಳವಾರದ ದಿನ ಪೂಜೆ, ಪ್ರಾರ್ಥನೆ, ಅನುಭಾವ ಏರ್ಪಡಿಸಿ ಸತ್ಸಂಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.
ಪ್ರವಾಸದ ಅನುಭವ:
ಅಕ್ಕನ ಬಳಗದವರು ನನ್ನ ಜೊತೆ ಹೈದರಾಬಾದ್, ಶ್ರೀಶೈಲ, ಮಹಾನಂದಿ, ಮಂತ್ರಾಲಯ ಪ್ರವಾಸದ ಚರ್ಚೆ ಮಾಡಿ, ದಿನಾಂಕ 06-12-2024 ರಿಂದ 8-12-2024ರವರೆಗೆ ಮೂರು ದಿನ ನಿಗದಿ ಮಾಡಿದರು. ಪ್ರವಾಸಕ್ಕೆ ಐದು ಜನ ಮಕ್ಕಳು, 32 ಶರಣ-ಶರಣೆಯರು ಬರಲು ತಯಾರಾದರು, ಅದಕ್ಕಾಗಿ ಮೂರು ಕ್ರೋಸರ್ ಗೊತ್ತು ಮಾಡಿದರು. ಮೊದಲ ದಿನ(6-12-2024ರಂದು) ಸುಪ್ರಭಾತ ಸಮಯದಲ್ಲಿ 6ಗಂಟೆಗೆ ಕಲ್ಯಾಣ ಮಹಾಮನೆ ಗುಣತೀರ್ಥವಾಡಿಗೆ ಆಗಮಿಸಿದರು.
ಕಲ್ಯಾಣ ಮಹಾಮನೆ ದರ್ಶನ:
ಕಲ್ಯಾಣ ಮಹಾಮನೆಯಲ್ಲಿ ದರ್ಶನ, ಪೂಜೆ, ಪ್ರಾರ್ಥನೆ, ಅನುಭಾವ, ಮಂಗಲ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಸತ್ಯ ಸಂಕಲ್ಪದ ದ್ಯೋತಕವಾಗಿ, ಗುಡ್ಡಾಪೂರು ದಾನಮ್ಮನ ತಪೋಕ್ಷೇತ್ರ ಗುಣತೀರ್ಥ ವಾಡಿಯಲ್ಲಿ ಕಲ್ಯಾಣ ಮಹಾಮನೆಯನ್ನು, 770 ಜೆಂಬಿಟ್ಟಿಗೆಯ ಕೆಂಪು ಕಲ್ಲಿನಿಂದ ವೃತ್ತಾಕಾರವಾಗಿ ಕಟ್ಟಲಾಗಿದೆ. ಅದರ ಛಾವಣೆಯು ಪಿರಾಮಿಡ್ ಶೈಲಿಯಲ್ಲಿ ವೃತ್ತಾಕಾರವಾಗಿದೆ. ಆ ಛಾವಣಿಯ ಮೇಲೆ ವಿಶ್ವ ಶಕ್ತಿಯನ್ನು ಎಳೆದು ಒಳಗೆ ಬಿಡುವ ಮೂರುವರೆ ಅಡಿಯ ಲಿಂಗವಿದೆ. ಮಹಾಮನೆಯ ಒಳಗೆ ಮೂವತ್ತಾರು ತತ್ವ ಸೂಚಿಸುವ ಛಾವಣಿ ಖಾನೆಗಳಿವೆ. ಮಹಾಮನೆಯ ಸುತ್ತಲೂ ಪ್ರತೀ ಕಲ್ಲಿನ ಮೇಲೆ ಶರಣ-ಶರಣೆಯರ ಹೆಸರನ್ನು ಬರೆಯಿಸಿಲಾಗಿದ್ದು ಒಂದು ಪ್ರದಕ್ಷಿಣೆ ಮಾಡಿದರೆ ಸಮಗ್ರ 770 ಅಮರಗಣಂಗಳ ದರ್ಶನವಾಗುತ್ತದೆ. ಪಶ್ಚಿಮ ಬಾಗಿಲಿನಿಂದ ಒಳಗಡೆ ಪ್ರವೇಶಿಸಿದಾಗ ಎದುರುಗಡೆ ಗೋಡೆಯ ಮೇಲೆ ಎಂಟು ಅಡಿ ಎತ್ತರದಲ್ಲಿ ಲಿಂಗದ ಚಿತ್ರ ಮತ್ತು ಅದರೊಳಗೆ ಧ್ಯಾನಕ್ಕೆ ಕುಳಿತ ಗುರು ಬಸವಣ್ಣನವರ ಭಾವಚಿತ್ರವನ್ನು ತೈಲ ವರ್ಣದಿಂದ ಬಿಡಿಸಲಾಗಿದೆ. ಅದರ ಮುಂದೆ ಚೌಕಾಕಾರದಲ್ಲಿ ಕಟ್ಟಿದ ಕಟ್ಟೆ ಇದೆ. ಅದು ಆರು ಮೆಟ್ಟಿಲಿನಿಂದ ಕೂಡಿದೆ. ಪ್ರತಿಯೊಂದು ಮೆಟ್ಟಿಲು ಮೇಲೆ ಎದುರಿಗೆ ಕಾಣುವಂತೆ ಆಚಾರ ಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಎಂದು ಆರು ಲಿಂಗದ ಹೆಸರನ್ನು ರೇಡಿಯಮ್ (ಬೆಳಕಿನ) ಅಕ್ಷರದಲ್ಲಿ ಬರೆಸಲಾಗಿದೆ. ಆ ಮೆಟ್ಟಿಲು ಮೇಲೆ ಎಂಟುದಳದ ಕಮಲವಿದ್ದು ಅದರೊಳಗೆ ಆಕರ್ಷಣೀಯ ಮತ್ತು ತ್ರಾಟಕ ಯೋಗಕ್ಕೆ ಸಹಾಯಕವಾಗುವ ಮೂರು ಅಡಿಯ ಗಣಲಿಂಗವಿದೆ. ಆ ಗಣಲಿಂಗದೊಳಗಡೆ ದಕ್ಷಿಣ ಭಾಗದ ತುದಿಯ ಎರಡು ಇಂಚಿನ ಕೊಳವೆಯಲ್ಲಿ ಇಣುಕಿ ನೋಡಿದರೆ ಲಿಂಗಪೂಜೆಗೆ ಕುಳಿತ ಅಕ್ಕಮಹಾದೇವಿಯ ಮೂರ್ತಿ ಕಾಣಿಸುತ್ತದೆ. ಇದು ಧ್ಯಾನಿಗಳನ್ನು ಲಘುವಾಗಿ ಆಕರ್ಷಿಸಿ ಮನಕ್ಕೆ ಮುದವನ್ನು ನೀಡುತ್ತದೆ. ಉತ್ತರಕ್ಕೆ ತಿರುಗಿದರೆ ಬಸವಣ್ಣ ನೀಲಗಂಗಾಬಿಕೆ ಭಾವಚಿತ್ರ ಇಡಲಾಗಿದ್ದು ಈ ಚಿತ್ರವು ಪೂಜ್ಯತೆಯೊಂದಿಗೆ ದಾಂಪತ್ಯ ಧರ್ಮದ ಪವಿತ್ರ ಭಾವನೆಯನ್ನು ಕಣ್ಣು ಮುಂದೆ ತಂದು ನಿಲ್ಲಿಸುತ್ತದಲ್ಲದೆ ಶರಣಜ್ಞಾನವನ್ನು ಬೋಧಿಸುವ ಭಾವನೆ ಇದೆ.
ಮಹಾಮನೆಯ ನೆಲ ಮಹಡಿಯಲ್ಲಿ ಲಿಂಗಾನುಷ್ಟಾನಿಗಳಿಗಾಗಿ ಗವಿಯನ್ನು ನಿರ್ಮಿಸಲಾಗಿದೆ.
ಕಲ್ಯಾಣ ಮಹಾಮನೆಯ ಹೊರಗಡೆ ಪೌಳಿಯ ಸುತ್ತಲೂ ವಿವಿಧ ಶರಣರ ವಚನ ಫಲಕಗಳನ್ನು ಹಾಕಲಾಗಿದೆ. 13 ಗುಂಟೆಯ ವಿಸ್ತೀರ್ಣದಲ್ಲಿ ವಿವಿಧ ಬಗೆಯ ಹಣ್ಣಿನ, ಹೂವಿನ ಗಿಡಗಳನ್ನು ನೆಡಲಾಗಿದ್ದು, ಸಂದರ್ಶಕರಿಗೆ ಪ್ರಕೃತಿ ಭಾವದ ಪ್ರಜ್ಞೆಯನ್ನು ಮೂಡಿಸುತ್ತವೆ. 45*60 ಜಾಗದಲ್ಲಿ ಪ್ಯಾಷನ್ ಫ್ರೂಟ್(ಕೃಷ್ಣ ಫಲ) ಬೆಳೆಸಲಾಗಿದ್ದು ಬಂದ ಭಕ್ತರಿಗೆ ಜ್ಯೂಸ್ ಮಾಡಿ ಕೊಡಲಾಗುತ್ತಿದೆ. ಈ ಕಲ್ಯಾಣ ಮಹಾಮನೆಯನ್ನು ದರ್ಶನ ಮಾಡುವುದೇ ಒಂದು ಅಹೋ ಭಾಗ್ಯ.
ದಾನಮ್ಮ ದಾಸೋಹ ಮಹಾಮನೆಯ ತಾಯಿಯಾದ ಶರಣೆ ಅನಿತಾ ಅವರು ಎಲ್ಲರಿಗೂ ಚಹಾ ವ್ಯವಸ್ಥೆ ಮತ್ತು ಉಪಹಾರ ವ್ಯವಸ್ಥೆ ಮಾಡಿದರು. ಉಪಹಾರವನ್ನು ಜೊತೆಗೆ ಕಟ್ಟಿಕೊಂಡು ಹೋದೆವು. ಸದಾಶಿವ ಪೇಟೆಯ ಹೆದ್ಧಾರಿಗೆ ಹೊಂದಿಕೊಂಡಿದ್ದ ಒಬ್ಬ ರೈತನ ಮಾವಿನ ತೋಟದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಬೆಳಗಿನ ಕುಳಿತು ಪ್ರಸಾದವನ್ನು ಸ್ವೀಕರಿಸಿದೆವು. ಆ ರೈತನ ನಿಸ್ವಾರ್ಥ ಸೇವೆಯಿಂದ ನೂರಾರು ಗಿಡಗಳ ಮಾವಿನ ತೋಟವು ಅಷ್ಟೇ ನಿಸ್ವಾರ್ಥದಿಂದ ತನ್ನ ಫಲ ನೀಡಲಿಕ್ಕಾಗಿ ಮೈ ತುಂಬಾ ಹೂಗಳನ್ನು ಹೊತ್ತುಕೊಂಡು, ಆಶ್ರಯಿಸುವವರಿಗೆ ಅಪಾರ ನೆರಳನ್ನು ನೀಡಲಿಕ್ಕಾಗಿ ಸ್ವಾಗತಿಸುವುದನ್ನು ಕಂಡರೆ, ಮಾನವನ ಜೀವನಕ್ಕಿಂತ ಮಾವಿನ ತೋಟದ ಸಾರ್ಥಕತೆ ಹಿರಿದು ಎನಿಸಿತ್ತದೆ.
ರಾಮಾನುಜಾಚಾರ್ಯರ ಸಮತಾ ಮೂರ್ತಿ:
ನಮ್ಮ ಪ್ರವಾಸ ಹೈದರಾಬಾದ್ ಗೆ ಶಮಶಾಬಾದನ ರಾಮಾನುಜಾಚಾರ್ಯರ 102ಅಡಿ ಸಮಾತಾ ಮೂರ್ತಿಗೆ 11:30ಕ್ಕೆ ತಲುಪಿತು. ಪ್ರತಿಯೊಬ್ಬರಿಗೆ 200ರಂತೆ
ರಿಯಾಯಿತಿ ದರದಲ್ಲಿ ಟಿಕೇಟ್ ಪಡೆದು ಒಳಗೆ ಪ್ರವೇಶ ಮಾಡಿದೆವು. ಶ್ರಿಮನ್ ನಾರಾಯಣನ ಭಾರತದ 108 ದೇಗುಲಗಳ ಯತಾವತ್ತಾದ ದೇಗುಲಗಳನ್ನು ದ್ರಾವೀಡ ಶೈಲಿಯಲ್ಲಿ ಅದ್ಭುತವಾಗಿ ಕಟ್ಟಿದ್ದಾರೆ. ಆ ಗರ್ಭಗುಡಿಯಲ್ಲಿ ನಾರಾಯಣನ ವಿವಿಧ ಭಂಗಿಯಲ್ಲಿ ಪೂಜೆಗೊಳ್ಳುವ ವಿಗ್ರಹಗಳು ನಾರಾಯಣ ಭಕ್ತರನ್ನು ಆಕರ್ಷಿಸಿ, ಹೃದಯವನ್ನು ತಂಪಾಗಿಸುತ್ತವೆ. ಮುರ್ತಿಯ ಸುತ್ತಲೂ ಇರುವ 108ದೇವಾಲಯಗಳನ್ನು ಸಂದರ್ಶಿಸಿ ನೆಲ ಮಹಡಿಗೆ ಬಂದರೆ ಅಲ್ಲಿ ಪದ್ಮಾಸನದಲ್ಲಿ ಕುಳಿತ ರಾಮಾನುಜಾಚಾರ್ಯರ ಮೂರು ಅಡಿಯ ವಿಗ್ರಹವಿದೆ. ಆ ವಿಗ್ರಹ ದರ್ಶನ ಮಾಡಿಕೊಂಡು ಒಂದಿಷ್ಟು ಧ್ಯಾನ ಮಾಡಿ, ಲಿಪ್ಟ್ ಸಹಾಯದಿಂದ ಮೇಲ್ಮಹಡಿಗೆ ಹೋದರೆ ಅಲ್ಲಿ ಸುಂದರ ಮತ್ತು ವಿಶಾಲವಾದ ಕಂಭಗಳಲ್ಲಿ ತೈಲ ವರ್ಣದಿಂದ ಚಿತ್ರಿಸಿದ ರಾಮಾನುಜಾಚಾರ್ಯರ ಸಮಗ್ರ ಜೀವನ ಚರಿತ್ರೆಯನ್ನು ವರ್ಣ ರಂಜಿತ ಬೆಳಕಿನ ಸಹಾಯದಿಂದ ನೋಡಿದೆವು. ಮೂರನೇ ಮಹಡಿಗೆ ಹೋದಾಗ ಅಲ್ಲಿ ಅತ್ಯಂತ ಆಕರ್ಷಣೀಯವಾದ 35 ಆನೆಗಳ ಶಿರದ ಮೇಲಿರುವ ಕಮಲ ಅದರ ಮೇಲೆ ಕುಳಿತ ಸಾತ್ವಿಕ ತೇಜಸ್ಸಿನಿಂದ ಸಮತಾ ಧ್ವಜವಿಡಿದ ಅಭಯ ಹಸ್ತದ 102ಅಡಿಯ ಹಳದಿ ಬಣ್ಣದ ಭವ್ಯ ದಿವ್ಯ ತೇಜೋಮೂರ್ತಿ ರಾಮಾನುಜಾಚಾರ್ಯರ ವಿಗ್ರಹ ಭಕ್ತರನ್ನು ಆಕರ್ಷಿಸಿ ಸಮ್ಮೋಹನಕ್ಕೊಳಪಡಿಸುತ್ತದೆ. ಮೂರ್ತಿ ಸ್ಥಳವನ್ನು ದರ್ಶನ ಮಾಡಿಕೊಂಡು ಮೆಟ್ಟಿಲಿನ ಸಹಾಯದಿಂದ ಕೆಳಗಿಳಿದರೆ ಮೂರ್ತಿ ಎದರುಗಡೆ ವಿಶಾಲವಾದ ಮೈದಾನದಲ್ಲಿ ಸಂಗೀತ ಕಾರಂಜಾ ಕೊಳ ಇದೆ. ಆ ಕೊಳದ ಮಧ್ಯದಲ್ಲಿ ನೂರು ಅಡಿಗೂ ಹೆಚ್ಚು ಇರುವ ಮತ್ತು ಕಮಲದಳದಿಂದ ಕೂಡಿದ ಕಂಚಿನ ಕಂಭವಿದೆ. ಕಂಚಿನ ಕಂಭದ ತುತ್ತ ತುದಿಯ ಕಮಲದಳದೊಳಗೆ ಅಡಗಿ ಕುಳಿತುಕೊಂಡಿರುವ ರಾಮಾನುಜಾಚಾರ್ಯರ ಮೂರ್ತಿ ಇದೆ. ಶ್ರೀಮನ್ ನಾರಾಯಣನ ಮಂತ್ರ ಪ್ರಾರಂಭವಾದೊಡನೆಯೆ ಸಂಗೀತಾ ಕಾರಂಜಿಯ ನೀರು ವಿವಿಧ ರೀತಿ ನರ್ತನೆ ಮಾಡುತ್ತದೆ. ನೆರೆದ ಭಕ್ತರ ಮಂತ್ರ ಘೋಷ ಜೋರಾದಂತೆ ಕಮಲದಳಗಳು ಬಿಡಿಸಿಕೊಳ್ಳುತ್ತವೆ ಆಗ ರಾಮಾನುಜಾಚಾರ್ಯರ ಮೂರ್ತಿ ಕಮಲದಳದಿಂದ ಹೊರಬಂದು ಸೂತ್ತಲೂ ಪ್ರದಕ್ಷಣೆ ಮಾಡಿ ಭಕ್ತರಿಗೆ ದರ್ಶನ ನೀಡುವುದು. ಈ ದೃಶ್ಯ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಇದೆಲ್ಲವನ್ನು ನೋಡಿ ಹೊರಗಡೆ ನಿರ್ಗಮಿಸುವಾಗ ಉಚಿತವಾಗಿ ಒಂದು ಬಟ್ಟಲು ಪ್ರಸಾದ ಎಡೆಮಾಡುತ್ತಾರೆ. ಅದನ್ನು ಸ್ವೀಕರಿಸಿ ನಮ್ಮ ಪ್ರವಾಸ ಮುಂದುವರೆಸಿದೆವು.
ಮಹಾಮಹೇಶ್ವರ ಪಿರಾಮಿಡ್
ಮಹಾಮಹೇಶ್ವರ ಪಿರಾಮಿಡ್ ಹೈದರಾಬಾದನಿಂದ ಶ್ರೀಶೈಲಂ ದಾರಿಯ ಮಧ್ಯದಲ್ಲಿ ಕಡತಾಲ ಊರಿನಿಂದ ಏಳೆಂಟು ಕಿಲೋ ಮೀಟರ್ ಅನತಿ ದೂರದಲ್ಲಿದೆ. ಬ್ರಹ್ಮರ್ಷಿ ಪತ್ರೀಜಿಯವರ ಸಂಕಲ್ಪ ಶಕ್ತಿ ಕಾರಣವಾಗಿ ಈಜಿಪ್ಟಿನ ಗೀಜಾ ಪಿರಾಮಿಡ್ ಮಾದರಿಯಲ್ಲಿ ನಿರ್ಮಾಣಗೊಂಡ ಮಹಾಮಹೇಶ್ವರ ಪಿರಾಮಿಡ್ ಧ್ಯಾನ ಕೇಂದ್ರವು 216ಅಡಿ ಎತ್ತರವಿದೆ. ನಾಲ್ಕು ಕೋನಗಳು ಒಂದು ಕಡೆ ಸೇರುವ ಕಟ್ಟಡ ಇದು. ಒಳಗಡೆ ಐದು ಸಾವಿರ ಜನ ಏಕ ಕಾಲದಲ್ಲಿ ಕುಳಿತು ಧ್ಯಾನ ಮಾಡುವಷ್ಟು ವಿಶಾಲವಾಗಿದೆ. ಮಧ್ಯದಲ್ಲಿ 200ಅಡಿ ಎತ್ತರದ ನಡುಗಂಭವಿದೆ. ಅದರೊಳಗಿನಿಂದ ಏಣಿಯ ಮೂಲಕ ತುತ್ತ ತುದಿಯವರೆಗೆ ಏರಿಕೊಂಡು ಹೋಗಿ ಅಲ್ಲಿ ಧ್ಯಾನ ಮಾಡುವಂತೆ ವ್ಯವಸ್ಥೆ ಮಾಡಿರುವರು. ಅಲ್ಲಿ ಕುಳಿತರೆ ಕ್ಷಣಾರ್ಧದಲ್ಲಿ ಮಾತುಗಳು ಮೌನ ಮನಸ್ಸು ಶೂನ್ಯವಾಗಿ ಧ್ಯಾನ ಹತ್ತುತ್ತದೆ. ಕೇವಲ ಉಸಿರಿನ ಮೇಲೆ ಗಮನವಿಟ್ಟು ಮಾಡುವಂತಹ ಅದ್ಭುತ ಮತ್ತು ಸರಳ ಧ್ಯಾನ ವಿಧಾನವಾಗಿದೆ. ಇಲ್ಲಿ ತುಸು ಹೊತ್ತು ಧ್ಯಾನ ಮಾಡಿ ಅಲ್ಲಿಯೇ ಮಧ್ಯಾಹ್ನ ವೇಳೆಯ ಪ್ರಸಾದ ಸ್ವೀಕರಿಸಿ ಶ್ರೀಶೈಲದತ್ತ ಪ್ರಯಾಣ ಬೆಳೆಸಿದೆವು.
ಶ್ರೀಶೈಲ:
ಪೂರ್ವ ನಿಯೋಜನೆಯಂತೆ ಶ್ರೀಶೈಲದ ಸಾರಂಗ ಮಠದ ಛತ್ರದಲ್ಲಿ ತಂಗುವ ಅನುಮತಿಯನ್ನು ಅಲ್ಲಿನ ಜಗದ್ಗುರುಗಳಾದ ಪೂಜ್ಯ ಶ್ರೀ ಸಾರಂಗಧರ ದೇಶಿಕೇಂದ್ರ ಸ್ವಾಮಿಗಳಿಂದ ಪಡೆದಿದ್ದೆವು. ಅದರಂತೆ ಪೂಜ್ಯರು ವಸತಿ ಮತ್ತು ರಾತ್ರಿಯ ಪ್ರಸಾದ ವ್ಯವಸ್ಥೆ ಮಾಡಿಸಿದ್ದರು. ರಾತ್ರಿ ವಸತಿ ಮಾಡಿ ಬೆಳಿಗ್ಗೆ 4ಗಂಟೆಗೆ ಎದ್ದು ನಮ್ಮ ಜೊತೆ ಬಂದ ಎಲ್ಲಾ ಶರಣರು ಸೇರಿಕೊಂಡು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿದೆವು. ಸುಪ್ರಭಾತ ಸಮಯ 6 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಭ್ರಮರಾಂಭ ದೇವಸ್ಥಾನ ನೋಡಿದೆವು. ಬೆಳಗಿನ ಉಪಹಾರ ಮುಗಿಸಿ ನೇರವಾಗಿ ಕೆಲವರು ರೂಪ್ ವೇ ಮೂಲಕವಾಗಿ, ಕೆಲವರು ನನ್ನ ಜೊತೆ ಮೆಟ್ಟಿಲು ಮೂಲಕ ಕಾಲ್ನಡಿಗೆಯಿಂದ ನಡೆದುಕೊಂಡು ಪಾತಾಳ ಗಂಗೆಗೆ ಬಂದರು, 9ಗಂಟೆಗೆ ತಲುಪಿದೆವು. ಅಕ್ಕಮಹಾದೇವಿ ಗವಿ ನೋಡಲು ನಿರ್ಧರಿಸಿ ತಲಾ 650 ರೂ ಟಿಕೆಟ್ ಪಡೆದು ನೀರಿನ ದೋಣಿಯಲ್ಲಿ ಕುಳಿತು ಹೊರಟೆವು.
ಪಾತಾಳ ಗಂಗೆಯ ರೋಪ್ ವೆ.
ನಾವು ರೋಪ್ವೇ ನಿಲ್ದಾಣದಿಂದ ಬೋಟಿಂಗ್ ನಿಲ್ದಾಣವನ್ನು ತಲುಪುವ ಮೊದಲು ಇದು ಸುಮಾರು 1500ಮೀ ಬೆಟ್ಟದ ಆರೋಹಣವಾಗಿದೆ ಮತ್ತು ಈ ಅನುಭವವು ಸುಮಾರು 4-5 ನಿಮಿಷಗಳವರೆಗೆ ಇರುತ್ತದೆ. ಶ್ರೀಶೈಲಂನಲ್ಲಿರುವ ರೋಪ್ ವೇ ಭಾರತದ ಅತ್ಯುತ್ತಮ ಹಗ್ಗದ ಮಾರ್ಗವಾಗಿದೆ ಮತ್ತು ಪರ್ವತ, ನದಿ ಮತ್ತು ದಟ್ಟವಾದ ಹಸಿರು ನಲ್ಲಮಲೈ ಕಾಡಿನ ಅತ್ಯಂತ ಸುಂದರವಾದ ನೋಟವನ್ನು ನೀಡುತ್ತದೆ. ಖಂಡಿತವಾಗಿಯೂ ಈ ರೋಪ್ವೇ ಡ್ರೈವ್ ಎಲ್ಲರಿಗೂ ಮರೆಯಲಾಗದ ಅನುಭವವಾಗಿದೆ.
ಅಕ್ಕ ಮಹಾದೇವಿ ಗುಹೆಗೆ ಪ್ರಯಾಣ
ಪವಿತ್ರ ನದಿ ಕೃಷ್ಣಾ ಅಥವಾ ಅಕ್ಕಮಹಾದೇವಿ ಗುಹೆಗಳಿಗೆ 3-4 ಗಂಟೆಗಳ ಕಾಲ ದೀರ್ಘ ಪ್ರವಾಸವಾಗಿದೆ. ಶ್ರೀಶೈಲವು ಅನೇಕ ಸಾಹಸಮಯ ಗುಹೆಗಳಿಗೆ ನೆಲೆಯಾಗಿದೆ, ಅವು ನೈಸರ್ಗಿಕವಾಗಿ ರೂಪುಗೊಂಡಿವೆ, ಅವುಗಳಲ್ಲಿ ಹಲವು ಪೂರ್ವ-ಐತಿಹಾಸಿಕ ಕಾಲದವುಗಳಾಗಿವೆ. ನಲ್ಲಮಲೈ ಬೆಟ್ಟದ ಸಾಲುಗಳು ಅಂತಹ ಸುಂದರವಾಗಿ ರೂಪುಗೊಂಡ ನೈಸರ್ಗಿಕ ಗುಹೆಗಳಿಗೆ ಅವಕಾಶವನ್ನು ನೀಡುತ್ತವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪ್ರಸಿದ್ಧ ಅಕ್ಕಮಹಾದೇವಿ ಗುಹೆಗಳು. ಈ ಗುಹೆಗಳ ಇತಿಹಾಸವು ಬಹಳ ಹಿಂದಿನಿಂದಲೂ ಇದೆಯಾದರೂ, ಪ್ರಸ್ತುತ ಹೆಸರು ಮತ್ತು ಸೆಳವು ನಿರಂತರವಾಗಿದೆ ಏಕೆಂದರೆ ಪ್ರಸಿದ್ಧ ಮಹಿಳಾ ಸಾಕಾರವೆಂದರೆ ಅಕ್ಕಮಹಾದೇವಿಯಾಗಿದ್ದಾಳೆ.
ನಾವೆಲ್ಲ ನಿರ್ಧರಿಸಲಾದ ದೋಣಿಯಲ್ಲಿ ಕುಳಿತೆವು. ನಮ್ಮಲ್ಲಿನ ಪ್ರತಿಯೊಬ್ಬರಿಗೂ ರೋಮಾಂಚನದ ಅನುಭವ. ಕೃಷ್ಣಾ ನದಿಯ ಮೂಲಕ ದೋಣಿ ಸವಾರಿ ಪ್ರಾರಂಭವಾಯಿತು. ನಾನು ಎಲ್ಲರನ್ನು ಉದ್ಧೇಶಿಸಿ ಮುಡಬಿಯಲ್ಲಿ ನಡೆದ ಅಕ್ಕನ ಪ್ರವಚನವನ್ನು ನೆನಪಿಸಿ ಅಕ್ಕನು ಕದಳಿವನಕ್ಕೆ ಬಂದ ಉದ್ಧೇಶ ಮತ್ತು ಲಿಂಗೈಕ್ಯದ ಕುರಿತು ವಚನಗಳನ್ನು ಉಲ್ಲೇಖಿಸಿ ಮಾತನಾಡಿದೆ. ಕೊನೆಗೆ "ನಶ್ವರ ಮಾಯಾ ಸಾಗರದಲ್ಲಿ ಬಾಳಿನ ದೋಣಿ ಸಾಗುತ್ತಿದೆ" ಎಂಬ ನಮ್ಮ ಗುರುಗಳು ಬರೆದ ಪದ್ಯವನ್ನು ಹಾಡಿದೆ. ಅಕ್ಕನ ಜೀವನದ ಅಂತಿಮ ಘಟನೆಗಳನ್ನು ಕೇಳಿದ ಎಲ್ಲರೂ ತುಸು ಹೊತ್ತು ಭಾವುಕರಾದರು. ವಿಶಾಲವಾದ ಆರು ಬೆಟ್ಟಗಳು, 10 ಕಿಮೀ ದೂರದ ನದಿಯ ಪ್ರಯಾಣ, ಅಲ್ಲಿನ ಚುಂಚರ ಮನೆ, ಪ್ರಕೃತಿ ನಿಸರ್ಗ ರಮ್ಯ ದೃಶ್ಯದ ವೈಭವ ನಮ್ಮನ್ನು ಲಘುವಾಗಿ ಆಕರ್ಷಿಸಿ ನಮ್ಮನ್ನು ಮೂಖ ವಿಸ್ಮೀತರನ್ನಾಗಿಸಿದವು. 12ಗಂಟೆಗೆ ಅಕ್ಕಮಹಾದೇವಿ ಗವಿ ತಲುಪಿದೆವು.
ಅಕ್ಕಮಹಾದೇವಿಯ ಗುಹೆ
ದೋಣಿಯಿಂದ ಇಳಿದ ಮೇಲೆ ಇಳಿದ ಮೇಲೆ ಗವಿಯ ಪ್ರವೇಶದ್ವಾರಕ್ಕೆ ತಲುಪಲು ಸು.150ಮೀಟರ್ ನಡೆದುಕೊಂಡು ಹೋದೆವು. ಗವಿಯ ಪ್ರವೇಶದ್ವಾರದ ಒಂದೇ ಕಲ್ಲಿನ ಕಂಭ ಸು.80ಅಡಿ ಇದ್ದು, ಮದ್ಯದಲ್ಲಿ ನಡುಗಂಭವಿಲ್ಲದೆ ಅದು ಅಖಂಡವಾಗಿ ನಿಂತಿದ್ದು ಆಶ್ಚರ್ಯವನ್ನುಂಟು ಮಾಡಿತು. ಪ್ರವೇಶಧ್ವಾರದಲ್ಲಿಯೇ ಅಕ್ಕಮಹಾದೇವಿಯ ವಿಗ್ರಹ ನೋಡಿ ಅಕ್ಕನ ಹಾಡು ಹಾಡಿ ದರ್ಶಿಸಿದೆವು. ಅಕ್ಕಮಹಾದೇವಿಯ ಗರ್ಭಗುಡಿಗೆ ಭೇಟಿ ನೀಡಲು ಗುಹೆಯೊಳಗೆ ಅಂದಾಜು 150 ಮೀಟರ್ ಚಾರಣವಿದೆ. ಅಲ್ಲಿಗೆ ನಮ್ಮ ಜೊತೆ ಬಂದ ಮಾರ್ಗದರ್ಶಿ ಒಬ್ಬೊಬ್ಬರನ್ನು ಕರೆದುಕೊಂಡು ಹೋಗಿ ತೋರಿಸಿದ. ಜಗನ್ಮಾತೆ ಅಕ್ಕಮಹಾದೇವಿಯು ಲಿಂಗಾನುಷ್ಟಾನವನ್ನು ಇದೇ ಗುಹೆಯಲ್ಲಿ ಮಾಡಿದ್ದಾಳೆ. ಅಕ್ಕ ಮಹಾದೇವಿಯು ಕುಳಿತ ಜಾಗದಲ್ಲಿ ಈಗ ಶಿವಲಿಂಗವನ್ನು ಪೂಜಿಸುತ್ತಾರೆ. ಅಕ್ಕಮಹಾದೇವಿ ಗುಹೆಯು ನಮ್ಮಗೆಲ್ಲ ಸಾಹಸಮಯ ರೋಮಾಂಚನವನ್ನು ನೀಡಿತು, ಅಲ್ಲಯೇ ಕುಳಿತು ಅಕ್ಕನ ಯೋಗಾಂಗ ತ್ರಿವಧಿಯನ್ನು ಪಠಣ ಮಾಡಿದೆವು ನಂತರ ಮಂಗಲ ಮಾಡಿ ಹೊರಗೆ ಬಂದು ಸಾಮೂಹಿಕವಾಗಿ ನಿಂತು ಪೋಟೊ ಕ್ಲಿಕ್ಕಿಸಿಕೊಂಡು ದೋಣಿಯಲ್ಲಿ ಕುಳಿತು ಮರಳಿದೆವು.
ಶ್ರೀಶೈಲಂ ಅಣೆಕಟ್ಟು
ಮರಳಿ ಬರುವಾಗ ಶ್ರೀಶೈಲಂ ಅಣೆಕಟ್ಟಿನ ಮಾಹಿತಿಯನ್ನು ನಮ್ಮ ಮಾರ್ಗದರ್ಶಿ ಹೀಗೆ ಮಾಡಿಕೊಟ್ಟನು. ಕೃಷ್ಣಾ ನದಿಯ ಮೂಲ ಉಗಮ ಮಹಾರಾಷ್ಟ್ರದ ಮಹಾ ಬಳೇಶ್ವರದಲ್ಲಿಯಾಗುತ್ತದೆ. ಅಲ್ಲಿಂದ ಕೂಡಲ ಸಂಗಮ ಮಾರ್ಗವಾಗಿ ಈ ನೀರು ಆಲಮಟ್ಟಿಗೆ ತಲುಪಿ ಅಲ್ಲಿಂದ ಹರಿದು ಇಲ್ಲಿಗೆ ಬರುತ್ತದೆ. ಇದು ಪಂಚಧಾರೆ ನದಿಯಾಗಿದೆ. ಈ ಶ್ರೀಶೈಲದಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಆಣೆಕಟ್ಟು ಸಿವಿಲ್ ಎಂಜಿನಿಯರಿಂಗ್ನ ಅದ್ಭುತ ಶಕ್ತಿಯಾಗಿದೆ ಮತ್ತು ಇದು ಭಾರತದಲ್ಲಿನ ಮಹಬೂಬ್ನಗರ ಜಿಲ್ಲೆ, ತೆಲಂಗಾಣ (ಎಡದಂಡೆ) ಮತ್ತು ಆಂಧ್ರಪ್ರದೇಶದ (ಬಲದಂಡೆ) ಕರ್ನೂಲ್ ಜಿಲ್ಲೆಯ ಗಡಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟು ಮತ್ತು ಇದು 3 ನೇ ಅತಿದೊಡ್ಡ ಸಾಮರ್ಥ್ಯದ ಜಲವಿದ್ಯುತ್ ಯೋಜನೆಯಾಗಿದೆ. ಈ ಅಣೆಕಟ್ಟನ್ನು ಮಹಬೂಬ್ನಗರ ಮತ್ತು ಕರ್ನೂಲ್ ಜಿಲ್ಲೆಗಳ ನಡುವಿನ ನಲ್ಲಮಲ ಬೆಟ್ಟಗಳಲ್ಲಿ ಸಮುದ್ರ ಮಟ್ಟದಿಂದ 300 ಮೀ ಎತ್ತರದಲ್ಲಿ ಆಳವಾದ ಕಮರಿಯಲ್ಲಿ ನಿರ್ಮಿಸಲಾಗಿದೆ. ಇದು 512 ಮೀ ಉದ್ದ, 269.748 ಮೀಟರ್ ಎತ್ತರ ಮತ್ತು 12 ರೇಡಿಯಲ್ ಕ್ರೆಸ್ಟ್ ಗೇಟ್ಗಳನ್ನು ಹೊಂದಿದೆ. ಇದು 800 ಚದರ ಕಿಲೋಮೀಟರ್ ವಿಸ್ತೀರ್ಣದ ಜಲಾಶಯವನ್ನು ಹೊಂದಿದೆ. ಯೋಜನೆಯು 178.74 ಶತಕೋಟಿ ಘನ ಅಡಿಗಳನ್ನು ಹಿಡಿದಿಡಲು ಅಂದಾಜು ಲೈವ್ ಸಾಮರ್ಥ್ಯವನ್ನು ಹೊಂದಿದೆ. ಎಡದಂಡೆಯ ವಿದ್ಯುತ್ ಕೇಂದ್ರವು 6 × 150 ಮೆಗಾವ್ಯಾಟ್ಗಳ ರಿವರ್ಸಿಬಲ್ ಟರ್ಬೈನ್ಗಳನ್ನು ಹೊಂದಿದೆ ಮತ್ತು ಬಲದಂಡೆ 7 × 110 ಮೆಗಾವ್ಯಾಟ್ಗಳ ಟರ್ಬೈನ್ ಜನರೇಟರ್ಗಳನ್ನು ಒಳಗೊಂಡಿದೆ ಈ ಮಾಹಿತಿ ಅತ್ಯಂತ ಉಪಯುಕ್ತವಾಯಿತು. ಶ್ರೀಶೈಲದಲ್ಲಿ ನಮ್ಮ ಪ್ರವಾಸವನ್ನು ಮುಗಿಸಿ, ಸಂಜೆ 5ಗಂಟೆಗೆ ಮಹಾನಂದಿ ಕಡೆ ಪ್ರಯಾಣ ಬೆಳೆಸಿದೆವು.
ಮಹಾನಂದಿ:
ಶ್ರೀಶೈಲದಿಂದ ಸುಮಾರು 179km ಪ್ರಯಾಣ ಮಾಡಿ ಸಂಜೆ 11ಗಂಟೆಗೆ ಮಹಾನಂದಿಗೆ ತಲುಪಿದೆವು. ಮಹಾನಂದಿಯ ದೇವಸ್ಥಾನ ವಿಶಾಲ ಮೈದಾನದಲ್ಲಿ ನಮ್ಮ ಜೊತೆ ಕೆಲವರು ಉಳಿದುಕೊಂಡರು. ವಯಸ್ಸಾದ ಕೆಲವರು ರೂಂ ಹಿಡಿದು ಅಲ್ಲಿ ವಸತಿ ಮಾಡಿದರು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ 6:30ಕ್ಕೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದೆವು. ಕೆಲವರು ಪುಷ್ಕರಣಿಯಲ್ಲಿ ಸ್ನಾನ ಮಾಡಿದರು. ನಂತರ ಅಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮುಗಿಸಿದೆವು. ನಮ್ಮೊಳಗಿನ ನಾಗಮ್ಮ ಯರಬಾಗೆ ಎಂಬುವವರ ಹುಟ್ಟು ಹಬ್ಬ ಆಚರಣೆಯನ್ನು ಅಲ್ಲಿಯೇ ಮಾಡಿದೆವು. ದೇವಸ್ಥಾನವನ್ನು ಸಮಗ್ರವಾಗಿ ವೀಕ್ಷಿಸಿದೆವು, ಎತ್ತರದ ಮಹಾನಂದಿಯನ್ನು ನೋಡಿ ದೇವಸ್ಥಾನದ ಆವರ್ಣದಲ್ಲಿರುವ ಅನ್ನಪೂರ್ಣ ಹೊಟೆಲ್ ದಲ್ಲಿ ಉಪಹಾರ ಮುಗಿಸಿ ಮಂತ್ರಾಲಯದ ಕಡೆ ಪ್ರಯಾಣ ಬೆಳೆಸಿದೆವು.
ಮಂತ್ರಾಲಯ:
ಬೆಳಿಗ್ಗೆ 10ಗಂಟೆಗೆ ಮಹಾನಂದಿಯಿಂದ ಹೊರಟು 179ಕಿ ಮೀ ಸಂಚರಿಸಿ ಮದ್ಯಾಹ್ನ 2:30ಕ್ಕೆ ಮಂತ್ರಾಲಯ ತಲುಪಿದೆವು. ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮುಖಮಾರ್ಜನೆ ಮಾಡಿಕೊಂಡು ಗುರು ರಾಘವೇಂದ್ರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋದೆವು ಸರಿಯಾಗಿ ನಾಲ್ಕು ಗಂಟೆಗೆ ಒಳಗೆ ಪ್ರವೇಶ ದೊರೆಯಿತು. ಅರ್ಧ ಗಂಟೆ ದರ್ಶನ ಮುಗಿಸಿ,ಗುರು ರಾಘವೇಂದ್ರರ ಜೀವನ ಚರಿತ್ರೆ ಕುರಿತ ತೈಲವರ್ಣದ ಚಿತ್ರವನ್ನು ವೀಕ್ಷಿಸಿದೆವು. ದೇವಸ್ಥಾನವು ಸುಂದರವಾದ ಕಲಾಕೃತಿಯಿಂದ ನಿರ್ಮಾಣವಾಗಿದೆ, ಮೈದಾನವಂತೂ ಅತ್ಯಂತ ವಿಶಾಲವಾಗಿದ್ದು ಸಾವಿರಾರು ಭಕ್ತರು ವಿಶ್ರಿಮಿಸಲು ಯೋಗ್ಯವಾದ ಪ್ರಶಾಂತ ಸ್ಥಳವಾಗಿದೆ. ದೇವಸ್ಥಾನ ದರ್ಶಿಸಿದ ನಮ್ಮವರು ಒಂದು ಗಂಟೆ ಮಂತ್ರಾಲಯದ ಸುಸಜ್ಜಿತ ಕಟ್ಟಡ ಹೊಂದಿದ ಪ್ರಸಿದ್ದ ಮಳಿಗೆಗಳಿಗೆ ಭೇಟಿ ನೀಡಿ ಮರಳಿದರು. ಸಂಜೆ 5ಗಂಟೆಗೆ ಮಂತ್ರಾಲಯದಿಂದ ಹೊರಟೆವು ರಾತ್ರಿ ವೇಳೆ ಒಂದು ಕಡೆ ನಿಂತು ನಾವು ತಂದಿರುವ ಬುತ್ತಿ ಬಿಚ್ಚಿಕೊಂಡು ಪ್ರಸಾದ ಮಾಡಿದೆವು. ಸುಪ್ರಭಾತದ 3ಗಂಟೆಗೆ ಮುಡಬಿ ಮಾರ್ಗವಾಗಿ ಮುಡಬಿ ಶರಣರನ್ನು ಅಲ್ಲಿಯೇ ಇಳಿಸಿ ನಮ್ಮ ಕಲ್ಯಾಣ ಮಹಾಮನೆಗೆ ಬಂದೆನು.
ಕೃತಜ್ಞತೆಗಳು
ಮೂರು ದಿನ ಪ್ರವಾಸದಲ್ಲಿ ತುಸು ವ್ಯತ್ಯಾಸವನ್ನು ಹೊರತುಪಡಿಸಿ, ಉಳಿದಂತೆ ಭಕ್ತಿಯ ಹಾಡು, ಪ್ರವಚನ, ಮಕ್ಕಳ ಜೊತೆಗಿನ ಆಟಗಳು, ಹಾಸ್ಯಮಯ ಕಥೆಯೊಂದಿಗೆ ಪ್ರವಾಸವನ್ನು ನಾನಂತೂ ಆನಂದವಾಗಿ ಅನುಭವಿಸಿದೆ. ನನ್ನನ್ನು ಕರೆದುಕೊಂಡು ಹೋಗಿ ಗೌರವ, ಪ್ರೀತಿ, ಪ್ರಸಾದ, ಕಾಣಿಕೆ ನೀಡಿ ಸಹಕರಿಸಿದ, ಮುಡಬಿಯ ಪ್ರವಾಸಿಕರಾದ ಬಸವರಾಜ ಕಣಜಿ, ನಾಗಮ್ಮ, ಸುಲೋಚನಾ, ಶ್ರೀದೇವಿ, ಶ್ರೀದೇವಿ, ಶಾರದಾ, ಕಲಾವತಿ, ಚಂದ್ರಕಲಾ, ಗೀತಾ, ಗೀತಾ, ಗಿರಿಜಾ, ಸಿದ್ದಣ್ಣ, ಸರಸ್ವತಿ, ಇಂದ್ರಬಾಯಿ, ಗಂಗಮ್ಮ, ರೇಖಾ, ಜಗದೇವಿ, ನಿರ್ಮಲಾ, ಸಂಗಮೇಶ, ಕಾವೇರಿ, ಸುಜಾತಾ, ಮಹಾದೇವಿ, ಶಾಲುಬಾಯಿ, ಅಮೃತಾ, ಮಧು, ಅನಿತಾ ಮಧುಮತಿ, ಶ್ವೇತಾ, ಇಂದುಮತಿ, ಬಸಮ್ಮ, ಸುಜಾತಾ, ವಿಜಯಕುಮಾರ, ಜಗದೇವಿ, ನಾಗರಾಜ, ಸಿಂಧೂರಿ, ಸೃಷ್ಟಿ, ಪ್ರಾಚಿ ಮತ್ತು ವಾಹನ ಚಾಲಕರಿಗೆ ಶರಣು ಶರಣಾರ್ಥಿಗಳೊಂದಿಗೆ ಕೃತಜ್ಞತೆಗಳು.
ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.
ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು, ದಲಿತರೊಬ್ಬರು ಸಿಎಂ ಆಗಲು ರಾಜೀನಾಮೆ ನೀಡಿ -ವಿಜಯೇಂದ್ರ
ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು, ದಲಿತರೊಬ್ಬರು ಸಿಎಂ ಆಗಲು ರಾಜೀನಾಮೆ ನೀಡಿ
ಬೆಂಗಳೂರು: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು’ ಬಿಟ್ಟು ದಲಿತರೊಬ್ಬರು ಸಿಎಂ ಆಗುವ ಹಾದಿಯನ್ನು ಸುಗಮಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಾ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ಅವರು, 3 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ಇನ್ನೂ ಸಮಯವಿದೆ. ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ರಾಜೀನಾಮೆ ನೀಡಿ ದಲಿತರೊಬ್ಬರು ಸಿಎಂ ಆಗಲು ಅವಕಾಶ ಮಾಡಿಕೊಡಿ. ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದುಸ ಹಾಗೂ ರಾಜಕೀಯ ಷಡ್ಯಂತ್ರ ಮಾಡುವುದನ್ನು ಬಿಡಿ. ದೇಶದ ಜನರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ. ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗವನ್ನು ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆಯನ್ನೂ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡ ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯದೊಂದಿಗೆ ತಿಳಿಯುವಂತೆ ಸಂವಿಧಾನ ದಿನವನ್ನು ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ.
ಅಮಿತ್ ಶಾ ಅವರು ಕಾಂಗ್ರೆಸಿಗರು ಅಂದು ಅಂಬೇಡ್ಕರ್ ಅವರನ್ನು ಅವಮಾನಿಸಿ ಇಂದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಪಟಿಸುತ್ತಿರುವ ಕಾಂಗ್ರೆಸ್ಸಿಗರ ಗೋಮುಖ ವ್ಯಾಘ್ರತನವನ್ನು ಬಯಲು ಮಾಡುವ ನಿಟ್ಟಿನಲ್ಲಿ ಆಡಿದ ಮಾತುಗಳನ್ನು ತಿರುಚುವ ಮೂಲಕ ಅಪಪ್ರಚಾರ ನಡೆಸಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ಸಿಗರ ನಡೆ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ತಿಳಿಸಿದರು.
ವಿಶ್ವ ಕಂಡ ಶ್ರೇಷ್ಠ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಡಿಗಡಿಗೂ ಅವಮಾನಿಸಿ ಅವರ ಸಾವಿನ ನಂತರವೂ ಅವರನ್ನು ತಾತ್ಸಾರವಾಗಿ ಕಂಡ ಕಾಂಗ್ರೆಸ್ಸಿಗರು ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಸುರಿಸುತ್ತಿರುವ ಮೊಸಳೆ ಕಣ್ಣೀರಿನ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ವ್ಯಂಗ್ಯಭರಿತ ಮಾತುಗಳಿಂದ ಕಾಂಗ್ರೆಸ್ ಬಂಡವಾಳ ಬಯಲು ಮಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲಾರದೆ ಹತಾಶ ಮನಸ್ಥಿತಿಯಿಂದ ವಿಡಿಯೋ ಎಡಿಟ್ ಮಾಡಿಕೊಂಡು ವಿಷಯವನ್ನು ತಿರುಚಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ಸಿಗರ ನೀಚ ಪ್ರವೃತ್ತಿ ಅಂಬೇಡ್ಕರ್ ರವರನ್ನು ಅವಮಾನಿಸುವುದೇ ಆಗಿದೆ, ಇದಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
ಅಂದು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ಸಿಗರು, ನೀವೂ ಕೂಡ ಮುಖ್ಯಮಂತ್ರಿ ಆಗಲಿದ್ದ ದಲಿತ ಮುಖಂಡರೊಬ್ಬರನ್ನು 2013ರ ಚುನಾವಣೆಯಲ್ಲಿ ಸೋಲಿಸಿ ಅವರ ಅವಕಾಶ ಕಸಿದುಕೊಂಡಿದ್ದು ಇತಿಹಾಸದ ಪುಟಗಳಲ್ಲಿ ಬಹಿರಂಗ ಸತ್ಯವಾಗಿ ಉಳಿದಿದೆ. ಈಗಲೂ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶದ ಬಾಗಿಲು ತೆರೆಯದೆ ಭ್ರಷ್ಟತೆಯ ಮೂಟೆ ಹೊತ್ತು ಮುಖ್ಯಮಂತ್ರಿ ಸ್ಥಾನವನ್ನು ಭಂಡತನದಿಂದ ಆಕ್ರಮಿಸಿಕೊಂಡಿರುವ ನಿಮಗೆ ಅಂಬೇಡ್ಕರ್ ವಾದ, ಸಮಾಜವಾದ, ಸಾಮಾಜಿಕ ನ್ಯಾಯಗಳ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಂಡಿದ್ದೀರಿ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣದ ಕಾರ್ಯಕ್ಕಾಗಿ ಮೀಸಲಿಟ್ಟ ಹಣ ಲೂಟಿಯಾಗಲು ಕಾರಣರಾಗಿದ್ದೀರಿ, ನಿಮ್ಮ ಪಂಚಭಾಗ್ಯಗಳಿಗೆ ವಿನಿಯೋಗಿಸಲು ಬಳಸಿಕೊಂಡಿದ್ದೀರಿ. ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರು ಬಳಸಿಕೊಂಡು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುವ ಬದಲು ಈಗಲಾದರೂ ಪರಿಶಿಷ್ಟರು ಹಾಗೂ ಹಿಂದುಳಿದವರಿಗಾಗಿ ಏನನ್ನಾದರೂ ಯೋಜನೆ ಕಾರ್ಯಗತಗೊಳಿಸಿ ನಿಮಗಂಟಿರುವ ಕಳಂಕ ತೊಳೆದುಕೊಳ್ಳಲು ಪ್ರಯತ್ನಿಸಿ ಎಂದು ತಿಳಿಸಿದರು.
ಬೆಂಗಳೂರು ಹೊರವಲಯದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಶೀಘ್ರವೇ ಟೆಂಡರ್
ಬೆಂಗಳೂರು ಹೊರವಲಯದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಶೀಘ್ರವೇ ಟೆಂಡರ್
ಬೆಂಗಳೂರು: ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು, ನಮ್ಮ ಮೆಟ್ರೋ ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್
ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಛೇಗೌಡ ಅವರು ಹೊಸಕೋಟೆಗೆ ಮೆಟ್ರೋ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು. ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತವಾಗಿ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೋ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಾರ್ಗ ವಿಸ್ತರಣೆ ವಿಚಾರವನ್ನು ನಾನು ಈಗಾಗಲೇ ಯೋಜನೆಯಲ್ಲಿ ಸೇರಿಸಿ ವಿಸ್ತೃತ ಸಮೀಕ್ಷೆ ಮಾಡಿಸುತ್ತಿದ್ದೇನೆ. ನಮ್ಮ ಸರ್ಕಾರ ಹಾಗೂ ಮೆಟ್ರೋ ಸಂಸ್ಥೆ ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿದೆ. ಹೊಸಕೋಟೆ ಜತೆಗೆ ಬಿಡದಿ, ನೆಲಮಂಗಲದವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಸಿದ್ಧಡಿಸಲು ವರದಿ ರೂಪಿಸಲಾಗುತ್ತಿದೆ. ನಾವು ನಿಮ್ಮ ಮನವಿಯನ್ನು ಪರಿಗಣಿಸಿದ್ದೇವೆ" ಎಂದು ತಿಳಿಸಿದರು. ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕಡೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಅದರ ಜತೆಗೆ ಬೆಂಗಳೂರಿನಲ್ಲಿರುವ ಘನತ್ಯಾಜ್ಯ ಮಾಫಿಯಾ ಮಟ್ಟ ಹಾಕಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು: ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು, ನಮ್ಮ ಮೆಟ್ರೋ ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಛೇಗೌಡ ಅವರು ಹೊಸಕೋಟೆಗೆ ಮೆಟ್ರೋ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು. ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತವಾಗಿ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೋ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಾರ್ಗ ವಿಸ್ತರಣೆ ವಿಚಾರವನ್ನು ನಾನು ಈಗಾಗಲೇ ಯೋಜನೆಯಲ್ಲಿ ಸೇರಿಸಿ ವಿಸ್ತೃತ ಸಮೀಕ್ಷೆ ಮಾಡಿಸುತ್ತಿದ್ದೇನೆ. ನಮ್ಮ ಸರ್ಕಾರ ಹಾಗೂ ಮೆಟ್ರೋ ಸಂಸ್ಥೆ ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿದೆ. ಹೊಸಕೋಟೆ ಜತೆಗೆ ಬಿಡದಿ, ನೆಲಮಂಗಲದವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಸಿದ್ಧಡಿಸಲು ವರದಿ ರೂಪಿಸಲಾಗುತ್ತಿದೆ. ನಾವು ನಿಮ್ಮ ಮನವಿಯನ್ನು ಪರಿಗಣಿಸಿದ್ದೇವೆ" ಎಂದು ತಿಳಿಸಿದರು. ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕಡೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಅದರ ಜತೆಗೆ ಬೆಂಗಳೂರಿನಲ್ಲಿರುವ ಘನತ್ಯಾಜ್ಯ ಮಾಫಿಯಾ ಮಟ್ಟ ಹಾಕಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...