ads

Search This Blog

Wednesday, 26 February 2025

ಪ್ರಯಾಗರಾಜ್ ಅಪಘಾತ ಪ್ರಕರಣ; ಗಾಯಾಳು ಹಾಗೂ ಮೃತರ ಕುಟುಂಬಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ


 ಬೀದರ  : ಪ್ರಯಾಗರಾಜ್‍ಗೆ ಹೋಗಿ ಮರಳಿ ಬರುವಾಗ ಅಪಘಾತ ಸಂಭವಿಸಿ ಮೃತಪಟ್ಟವರ ಕುಟುಂಬಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು ಸಂಪೂರ್ಣವಾಗಿ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದರು. ಹಾಗೆಯೇ ಇಬ್ಬರು ಗಾಯಾಳುಗಳ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ವೈದ್ಯರಿಗೆ ತಿಳಿಸಿದರು.
ನಂತರ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೃತರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಒಂದು ವಾರದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಮೃತ ಕುಟುಂಬಸ್ಥರು ಅತ್ಯಂತ ಕಡು ಬಡವರಿದ್ದಾರೆ. ಹಾಗಾಗಿ ಅವರಿಗೆ ಇನ್ನು ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಮಾಡಲಾಗುವುದು. ಸರಕಾರ ಅವರ ಜೊತೆ ಇದೆ. ಇನ್ನೊಬ್ಬ ಗಾಯಾಳು ಇನ್ನು ಅಲ್ಲೇ ಇದ್ದಾರೆ. ಅವರನ್ನು ಶಿಫ್ಟ್ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಈಗಾಗಲೇ ಹೇಳಿದ್ದೇನೆ ಎಂದರು.
ಫೆ.21 ರಂದು ನಗರದ ಲಾಡಗೇರಿ ನಿವಾಸಿಗಳು ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಹೋಗಿ ಬರುತ್ತಿದ್ದಾಗ ವಾರಾಣಸಿ ಜಿಲ್ಲೆಯ ಮಿರ್ಜಾ ಮುರಾರ್ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೂಪಾಪುರ್ ಬಳಿ ಇವರು ಸಾಗುತ್ತಿದ್ದ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.


ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ್ ಡಿ.ಜೆ. ಮಹೇತ್, ಬೀದರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪೂರೆ, ಸುನಿಲ್ ಭಾವಿಕಟ್ಟಿ, ಮುಖಂಡರಾದ ಧನರಾಜ ಹಂಗರಗಿ, ರೇಖಾ, ಚಂದ್ರಕಾಂತ ಹಳ್ಳಿಖೇಡಕರ್, ಶರಣು ಲಾಡಗೇರಿ, ರಮೇಶ ಜಮಾದಾರ್, ಜಗದೀಶ ಭಾವಿಕಟ್ಟಿ, ವಿಜಯಕುಮಾರ ಭಂಡೆ ಸೇರಿದಂತೆ ಇತರರು ಇದ್ದರು.


























































































































































































































































































































































ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ್ ಡಿ.ಜೆ. ಮಹೇತ್, ಬೀದರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪೂರೆ, ಸುನಿಲ್ ಭಾವಿಕಟ್ಟಿ, ಮುಖಂಡರಾದ ಧನರಾಜ ಹಂಗರಗಿ, ರೇಖಾ, ಚಂದ್ರಕಾಂತ ಹಳ್ಳಿಖೇಡಕರ್, ಶರಣು ಲಾಡಗೇರಿ, ರಮೇಶ ಜಮಾದಾರ್, ಜಗದೀಶ ಭಾವಿಕಟ್ಟಿ, ವಿಜಯಕುಮಾರ ಭಂಡೆ ಸೇರಿದಂತೆ ಇತರರು ಇದ್ದರು.

Monday, 24 February 2025

ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪತ್ರಿಕೆಗಳು ಸಹಕಾರಿ

 ಪತ್ರಿಕೆ ಓದುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶಕ್ಕೆ ಚಾಲನೆ

ಕಲಬುರಗಿ: ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಳವಾಗಲಿದೆ ಎಂದು ಪತ್ರಕರ್ತ- ಲೇಖಕ ಡಾ.‌ ಶಿವರಂಜನ ಸತ್ಯಂಪೇಟೆ ತಿಳಿಸಿದರು.

ಕಲಬುರಗಿಯ ಪತ್ರಕರ್ತರ ಸಭಾಂಗಣದಲ್ಲಿ ಸೋಮವಾರ ಜರುಗಿದ  ಪ್ರಜಾ ಸುದ್ದಿ ಕನ್ನಡ ದಿನಪತ್ರಿಕೆ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಕಷ್ಟಪಟ್ಟು ಸಂಪಾದಿಸಿದ ಜ್ಞಾನ ಗಳಿಸಿದ ಸಂಪತ್ತಿಗಿಂತ ಮಿಗಿಲಾದುದಾಗಿದೆ. ಪತ್ರಿಕೆಗಳನ್ನು ಓದುವುದರಿಂದ ಐಎಎಸ್‌ ಮತ್ತು ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು. 

ಸಮಾಜ ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಿ ವೈಚಾರಿಕತೆಯನ್ನು ಬೆಳೆಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಜಾ ಸುದ್ದಿ ಪತ್ರಿಕೆಯ ಸಂಪಾದಕ ಶರಣಬಸಪ್ಪ ಕೆ.‌ಸೂಗೂರ ಮಾತನಾಡಿ, ಓದುಗರ ಸಮಾವೇಶ ಮಾಡುವ ಮೂಲಕ ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡಬೇಕು ಎಂದು ವಿವರಿಸಿದರು.


ಸಾಮಾಜಿಕ ಕಾರ್ಯಕರ್ತ ಬಾವರಾಜ ಎಂ. ರಾವೂರ ಮುಖ್ಯ ಅತಿಥಿಯಾಗಿದ್ದರು. ಇದೇವೇಳೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ  ಪ್ರಭು ಸೋನಿ,‌ ಶೇಖರ್ ಸೇಡಂ, ದೇವೇಂದ್ರಪ್ಪ ಕಟ್ಟಿಮನಿ, ಅಯಾಜುದ್ದೀನ್, ಧನರಾಜ್ ದೊಡ್ಡಮನಿ,  ರಾಜಕುಮಾರ  ದಣ್ಣೂರ, ರವಿ ಪೂಜಾರಿ,   ಬಸವರಾಜ್ ಪಾಸ್ವಾನ್ ,  ಸುರೇಶ್ ದೇವಿಂದ್ರಪ್ಪ, ಅವಿನಾಶ್ ದೇವನೂರ್ ಅವರನ್ನು ಸತ್ಕರಿಸಲಾಯಿತು. ಡಾ. ಸುಖದೇವಿ ಗಂಟೆ ನಿರೂಪಿಸಿ ವಂದಿಸಿದರು. ಸೈದಮ್ಮ ಶಿವಗಂಗಾ ಪ್ರಾರ್ಥನೆಗೀತೆ ಹಾಡಿದರು.

ಪತ್ರಿಕೆ ಓದುವ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಡಿ ಪ್ರಶಿಕ್ಷಣಾರ್ಥಿಗಳು ದಿನಪತ್ರಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ವಿನೂತನವೆನಿಸಿತು. ಇದಕ್ಕೂ ಮುನ್ನ ನಮಗೆಷ್ಟು ಗೊತ್ತು ಕನ್ನಡ ದಿನಪತ್ರಿಕೆ ಓದುಗರ ಮಾದರಿ ಸ್ಪರ್ಧೆ ನಡೆಸಿದ್ದು ಕೂಡ ವಿಶೇಷವೆನಿಸಿತು.

ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ - ಮುಖ್ಯಮಂತ್ರಿ ಸಿದ್ದರಾಮಯ್ಯ


 ಬೆಂಗಳೂರು : ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದ್ದು, ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯ ಇರುವವಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದು ನಮ್ಮದೇ ಕಾಂಗ್ರೆಸ್ ಸರ್ಕಾರ ಎಂದರು.
ಬಸವಣ್ಣನವರ ವಿಚಾರ ಮತ್ತು ಹೋರಾಟ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕ. ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸಲ್ಲ. ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ. ಅದಕ್ಕೇ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ. ಜಾತಿ ವ್ಯವಸ್ಥೆ ಬಹಳ ಗಟ್ಟಿಯಾಗಿ ಬೇರೂರಿದೆ. ಇದಕ್ಕೆ ಪಟ್ಟಭದ್ರರು ನೀರು ಗೊಬ್ಬರ ಹಾಕುತ್ತಿದ್ದಾರೆ. ಜಾತ್ಯತೀತ, ಸಮ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ಹೋರಾಟ ಪೂರಕ. ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಜಾತಿ ಜಡತ್ವ, ಆರ್ಥಿಕ ಜಡತ್ವ ಇರುವ ಸಮಾಜದಲ್ಲಿ ಚಲನೆ ಸಾಧ್ಯವಿಲ್ಲ. ಬಸವಣ್ಣನವರ ವಿಚಾರಗಳೇ ಅಂಬೇಡ್ಕರ್ ವಿಚಾರಗಳಾಗಿದ್ದು ಇವೆಲ್ಲವೂ ಸಂವಿಧಾನದಲ್ಲಿ ಅಡಕವಾಗಿವೆ ಎಂದರು.
ಗೋರುಚ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿದ್ದು ನಾವು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ವೇದಿಕೆ. ಯಾರ ಒತ್ತಾಯವೂ ಇಲ್ಲದ ವೇಳೆಯಲ್ಲೇ ನಮ್ಮ ಸರ್ಕಾರ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿತ್ತು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರ ಎಂದರು.

ಸ್ವಾಮೀಜಿಗಳ ನಿಯೋಗದ ಬೇಡಿಕೆಗಳು..
ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿತರಾಗಿರುವ ವಿಶ್ವಗುರು ಬಸವೇಶ್ವರರ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ನಲ್ಲಿ ರೂ 100 ಕೋಟಿ ನೀಡುವ ಜೊತೆಗೆ, ಮುಂದಿನ ನಾಲ್ಕು ವರ್ಷಗಳ ಬಜೆಟ್ ನಲ್ಲಿ ತಲಾ 100 ಕೋಟಿಯಂತೆ ಒಟ್ಟು ರೂ 500 ಕೋಟಿ ಅನುದಾನ ನೀಡಬೇಕು.
ಮುಖ್ಯಮಂತ್ರಿ ಭೇಟಿಗೂ ಮುನ್ನ ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ರೇಸ್ ಕೋರ್ಸ್ ರಸ್ತೆಯ ಅಧಿಕೃತ ನಿವಾಸದಲ್ಲಿ ಬೆಳಿಗ್ಗೆ ಮಠಾಧೀಶರು, ಸಮುದಾಯದ ಸಚಿವರು, ಶಾಸಕರು ಸಭೆ ನಡೆಸಿದರು. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಮುದಾಯದ ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು. ನಂತರ, ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ಕಾವೇರಿ’ಗೆ ತೆರಳಿ ಮನವಿ ಸಲ್ಲಿಸಿದರು.
ಯುವ ಪೀಳಿಗೆಗೆ ಬಸವಣ್ಣ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕೆಂದು ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ 13ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪರಮಪೂಜ್ಯರು, ಗಣ್ಯರು, ಚಿಂತಕರು, ಅಭಿಪ್ರಾಯಪಟ್ಟಿದ್ದಾರೆ. ನಂತರದಲ್ಲಿಯೂ ಈ ಕುರಿತು ಹಲವು ಸಭೆಗಳನ್ನು ನಡೆಸಿ ಹಿಂತಚಿಂತಕರೆಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಲಾಗಿದೆ. ಅದರಂತೆ, ಕಾರ್ಯಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಸಕ್ತ ಸಾಲಿನ ಬಜೆಟ್ ನಿಂದಲೇ ಅಗತ್ಯ ಅನುದಾನ ಒದಗಿಸಬೇಕು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವಣ್ಣನ ಬೃಹತ್ ಪ್ರತಿಮೆ ಪ್ರತಿμÁ್ಠಪಿಸಬೇಕು. ಜೊತೆಗೆ, ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ 'ಶರಣ ದರ್ಶನ' ಕೇಂದ್ರ ಸ್ಥಾಪಿಸಿ, ಅಲ್ಲಿ, ಉದ್ಯಾನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂಬುದನ್ನು ಬಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರು ಎಲ್ಲರ ಪರವಾಗಿ ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ಎಲ್ಲ ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ 'ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ' ರಚಿಸಬೇಕು.
ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಸದ್ಬಳಕೆಯಾಗಲು ಅಲ್ಲಿಯೇ 'ವಚನ ವಿಶ್ವವಿದ್ಯಾಲಯ' ಮತ್ತು ಸಂಶೋಧನ ಕೇಂದ್ರ ಆರಂಭಿಸಬೇಕು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 'ಬಸವಭವನ' ನಿರ್ಮಿಸಿ, ಅಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ನಿರಂತರವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಬೇಕು.
ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ಶರಣ ಸಾಹಿತ್ಯ ಮತ್ತು ಸಂಸ್ಕøತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸಬೇಕು ಎಂದರು.
ಮುಂದಿನ ಐದು ವರ್ಷಗಳಲ್ಲಿ 500 ಕೋಟಿ ಅನುದಾನ ಒದಗಿಸುವ ಮೂಲಕ ಸಾಂಸ್ಕøತಿಕ ನಾಯಕ ಬಸವಣ್ಣನವರನ್ನು ಮುಂಬರುವ ಪೀಳಿಗೆಗಳಿಗೆ ಪರಿಚಯಿಸುವುದಕ್ಕೆ ಸಂಬಂಧಿಸಿದ ಈ ಕಾರ್ಯಯೋಜನೆಗಳಿಗೆ ಚಾಲನೆ ನೀಡಿ, ಇತಿಹಾಸ ಸದಾ ನೆನಪಿಸಿಕೊಳ್ಳುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದರು. ನಿಯೋಗದಲ್ಲಿ ಗದುಗಿನ ತೊಂಟದ ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು. ಭಾಲ್ಕಿ ಹಿರೇಮಠದ ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು. ಮೊಟಗಿಯ ಚನ್ನಪ್ರಭು ಸ್ವಾಮಿಜಿ ಹಾಗೂ ಅನೇಕ ಮಠಾಧೀಶರು ಇದ್ದರು.

Saturday, 22 February 2025

ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಿದೆ: ಬಿ.ಕೆ ಶಕ್ತಿಕಾಂತ

 


ಬೀದರ್: ನಿತ್ಯ ಜೀವನದಲ್ಲಿ ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ರಾಜಸ್ಥಾನ ಮೌಂಟ್ ಅಬುದ ಅಂತರಾಷ್ಟ್ರೀಯ ಪ್ರೇರಣಾದಾಯಿ ಪ್ರವಚನಕಾರರಾದ ಬಿ.ಕೆ ಶಕ್ತಿಕಾಂತ ಭಾಯಿ ಜಿ ಹೇಳಿದರು.
ನಗರದ ಸಾಯಿ ಸ್ಕೂಲ್ ಅವರಣದಲ್ಲಿ ಸಂಜೆ ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮ ವತಿಯಿಂದ ಮೂರು ದಿವಸಗಳ ವರೆಗೆ ಜರುಗಲಿರುವ ಜೀವನೋತ್ಸವ ಪ್ರವಚನ ಮಾಲೆ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾಗಿ ಮಾತನಾಡಿದ ಅವರು, ನಿತ್ಯ 75 ಪ್ರತಿಶತದಷ್ಟು ರೋಗಗಳು ಮಾನಸಿಕ ಖಿನ್ನತೆಯಿಂದಲೇ ಬರುತ್ತವೆ ಎಂದರು.
ನಾವು ನಮ್ಮಲ್ಲಿ ಕೆಲಸಕ್ಕೆ ಬಾರದಷ್ಟು ಅದೆಷ್ಟೊ ಚಿಂತೆಗಳಳನ್ನು ಮನಸ್ಸಿನಲ್ಲಿ ಹಿಡಿದಿಟ್ಟು, ನಮ್ಮ ಮನಸ್ಸಿನ ಕಂಟ್ರೋಲ್ ಇನ್ಯಾರಿಗೊ ಕೊಟ್ಟು ಒದ್ದಾಡುತ್ತಿರುತ್ತೇವೆ. ಇಂದು ಒತ್ತಡದ ಬದುಕಿನಿಂದ ಹೃದಯರೋಗ, ಸಿಟ್ಟಿನಿಂದ ಕ್ಯಾನ್ಸರ್, ಗರ್ವದಿಂದ ವರ್ತಿಸುತ್ತಿದ್ದರೆ ಕುತ್ತಿಗೆ ನೋವು ಬರುವ ಸಂಭೌ ಇರುತ್ತದೆ. ಆದ್ದರಿಂದ ನಿತ್ಯ ಖುಷಿ, ಪ್ರೇಮ, ಆನಂದ, ಶಕ್ತಿ, ಶಾಂತಿ, ಜ್ಞಾನ, ಪವಿತ್ರತೆ ಎಂಬ ಸಪ್ತ ಗುಣಗಳನ್ನು ನಿತ್ಯ ಧರಿಸಿದಲ್ಲಿ ಒತ್ತಡ ಮುಕ್ತ ಬದುಕು ಸಾಧ್ಯವಿದೆ ಎಂದರು.
ನಾವು ಭೂತಕಾಲದೆಲ್ಲವನ್ನು ನೆನಪು ಮಾಡಿ ಚಿಂತೆಗೊಳಗಾತ್ತೇವೆ. ಆದರೆ ಅದು ಯಾವ ಪ್ರಯೊಜನವಿಲ್ಲ. ಸುಮ್ಮನ್ನೆ ಭವಿಷ್ಯದ ಕನಸ್ಸು ಕಾಣಿ ವರ್ತಮಾನದಲ್ಲಿ ಆಗುವ ಅದೆಷ್ಟೊ ಸತ್ಯ ಘಟನೆಗಳನ್ನು ಮರೆತು ಪಶ್ಚಾತ್ತಾಪ ಪಡುತ್ತೇವೆ. ಸದಾ ಪ್ರಸ್ತುತತೆಗೆ ಒತ್ತು ನೀಡಬೇಕು, ನಮ್ಮ ಬದುಕಿನಲ್ಲಿ ಧನಾತ್ಮಕವೆಂಬ ಚೆಂಡನ್ನು ಎಸೆದರೆ ನಮಗೆ ಸದಾ ಧನಾತ್ಮಕ ಶಕ್ತಿ ದೊರಕುತ್ತದೆ. ಕೆಲಸಕ್ಕೆ ಬಾರದ ಸಾವಿರಾರು ಮಾತುಗಳು ನಮ್ಮಲ್ಲಿ ಶೇಖರಿಸಿಕೊಂಡು ನಮ್ಮ ಮನಸ್ಸನ್ನು ಕಸದ ಪೆಟ್ಟಿಗೆಯನ್ನಾಗಿ ಮಾಡಿಕೊಂಡಿದ್ದೇವೆ. ಇದು ಹಾರ್ಟ್ ಬ್ಲಾಕೆಜ್‌ಗೆ ಕಾರಣವಾಗುತ್ತದೆ. ನಮ್ಮಲ್ಲಿ ಪರಮಾತ್ನ ಶಕ್ತಿ ಅಡಗಿದ್ದು, ಅದನ್ನು ಹೊರಗಡೆ ತರುವ ಅರಿವು ಬೆಳೆಸಿಕೊಳ್ಳಬೇಕು. ಎದುರಿನವರು ನಮಗೆ ಏನೆ ಜರಿದರೂ ನಾವು ಪ್ರತಿಕ್ರಿಯಿಸದೇ ಮುಗುಳ್ನಗುತ್ತ ಸಾಗಿದರೆ ಎದುರಿನವನ ಸಿಟ್ಟು ತಣ್ಣದಾಗಿ, ನಮಗೂ ಯಾವುದೇ ಒತ್ತಡವಾಗದೇ ನಿರಾಯಾಸವಾಗಿ ಮುಂದೆ ಸಾಗಬಹುದಾಗಿದೆ ಎಂದವರು ತಿಳಿಸಿದರು.
ಅಧ್ಯಾತ್ಮವಲ್ಲಿ ಆತ್ಮವನ್ನು 6ನೇ ಇಂದ್ರಿಯಕ್ಕೆ ಹೋಲಿಸಲಾಗುತ್ತದೆ. ತಾಯಿಯ ಗರ್ಭದಲ್ಲಿದ್ದಾಗಲೇ 4ನೇ ತಿಂಗಳಲ್ಲಿ ಒಳಗಿರುವ ಶರೀರಕ್ಕೆ ಆತ್ಮ ಸೇರಿಕೊಳ್ಳುತ್ತದೆ. ಆಗ ಆ ಶರೀರ ಎಕ್ಟಿವ್ ಆಗುತ್ತದೆ. ಅಲ್ಲಿಯ ವರೆಗೆ ಕೇವಲ ನಿರ್ಜಿವದ ಮುದ್ದೆಯಾಗಿರುತ್ತದೆ. ಹಿಂದಿನ ಜನ್ಮದ ನಮ್ಮ ಎಲ್ಲ ನೆನಹುಗಳು ಖಾಲಿಯಾಗಿ ಹೊಸ ಚೈತನ್ಯವಾಗಿ ಹೊರ ಹೊಮ್ಮುತ್ತದೆ. ಅಷ್ಟು ಪರಿಶುದ್ದವಿರುವ ನಮ್ಮ ಹೂವಿನಂಥ ಮನಸ್ಸಿನಲ್ಲಿ ಸಾವಿರಾರು ಚಿಂತೆಗಳು ತುಂಬಿ ಒತ್ತಡಯುಕ್ತ ಜೀವನಕ್ಕೆ ಜೋತು ಬಿಳುತ್ತೇವೆ. ಇದನ್ನು ದೂರ ಮಾಡಲು ಋಣಾತ್ಮಕ ಆಲೋಚನೆಗಳನ್ನು ಕ್ಯಾನ್ಸಲ್ ಮಾಡಿ ಕೇವಲ ಧನಾತ್ಮಕ ವಿಚಾರಗಳನ್ನು ಮನದಲ್ಲಿ ಭರಿಸಿ ಶಕ್ತಿಭರಿತ ಹಾಗೂ ಸಪ್ತಗುಣಲಕ್ಷಣಗಳನ್ನು ಮೈಗೂಡಿಸಿಕೊಂಡು ಸಂತೋಷದ ಬದುಕು ನಮ್ಮದಾಗಿಸಿಕೊಳ್ಳುವಂತೆ ಶಕ್ತಿಕಾಂತ ಭಾಯಿ ಜಿ ಕರೆ ನೀಡಿದರು.
ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸೆಕ ಡಾ.ಚಂದ್ರಕಾAತ ಗುದಗೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಉದ್ಯಮಿ ಬಸವರಾಜ ಧನ್ನುರ್, ರಮೇಶ ಗೋಯಲ್, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತೀಶ ಪಾಟೀಲ, ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಪ್ರವರ್ತಕರಾದ ಬಿ.ಕೆ ಪ್ರಭಾಕರ ಕೋರವಾರ ಹಾಗೂ ಇತರರು ವೇದಿಕೆಯಲ್ಲಿದ್ದರು.
ಆರಂಭದಲ್ಲಿ ನಾಸಿಕ್ ನ ಶಾಸ್ತ್ರೀಯ ಸಂಗೀತಗಾರರಾದ ಬಿ.ಕೆ ಓಂಕಾರ ಭಾಯಿ ಜಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಕು. ಸಂಯುಕ್ತಾ ಹಾಗೂ ಕು.ಅನನ್ಯಾ ಸ್ವಾಗತ ನೃತ್ಯಗೈದರು. ಬ್ರಹ್ಮಾಕುಮಾರಿ ಕೇಂದ್ರ ಪಾಚನದಸಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ಜಿ ಸರ್ವರನ್ನು ಸ್ಚಾಗತಿಸಿದರು. ನೌಬಾದ್ ಬ್ರಹ್ಮಾಕುಮಾರಿ ಕೇಂದ್ರದ ಬಿ.ಕೆ ಜ್ಯೋತಿ ಬಹೆನ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಆಗಮಿಸಿದ ಅತಿಥಿ ಗಣ್ಯರು ಆರತಿ ಬೆಳಗಿ ಸಹಸ್ರ ಜ್ಯೋತಿರ್ಲಿಂಗ ದರುಶನಕ್ಕೆ ಚಾಲನೆ ನೀಡಿದರು. ಬ್ರಹ್ಮಾಕುಮಾರಿಸ್ ಕೇಂದ್ರ ಶಿವಶಕ್ತಿ ಭವನದ ಬಿ.ಕೆ ಸುಮಂಗಲಾ ಬಹೆನ್ ಜಿ ಹಾಗೂ ಬಿ.ಕೆ ಸುನಂದಾ ಬಹೆನ್ ಜಿ, ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೇಶನ್ ಗೌರವಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರಡ್ಡಿ, ಬಿ.ಕೆ ಗುರುದೇವಿ ಅಕ್ಕನವರು ಸೇರಿದಂತೆ ನೂರಾರು ಬಿ.ಕೆ ಸಹೋದರ, ಸಹೋದರಿಯರು, ಸಾವಿರಾರು ಭಕ್ತಾದಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಶ್ರೀಶೈಲಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ : ಸೌಲಭ್ಯ ಪಡೆಯಲು ಸೂಚನೆ



ಯಾದಗಿರಿ : ಮಹಾ ಶಿವರಾತ್ರಿ ಹಬ್ಬದ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ರಥೋತ್ಸವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲಕ್ಕೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ವಿಶೇಷ ಬಸ್ ವಾಹನಗಳು ಸಂಚರಿಸಲಿವೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.  
 
     2025ರ ಫೆಬ್ರವರಿ 22 ರಿಂದ 28ರ ವರೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರ ಅನುಕೂಲಕ್ಕಾಗಿ ಯಾದಗಿರಿ ವಿಭಾಗದ ಯಾದಗಿರಿದಿಂದ ಮಧ್ಯಾಹ್ನ 3 ಗಂಟೆಗೆ ಶಹಾಪೂರದಿಂದ ಸಂಜೆ 4 ಗಂಟೆಗೆ ಸುರಪೂರದಿಂದ ಸಂಜೆ 4 ಗಂಟೆಗೆ  ಗುರುಮಠಕಲ್‌ದಿಂದ 3 ಗಂಟೆಗೆ  ವಿಶೇಷ (ಹೆಚ್ಚುವರಿ) ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ, ವಿಭಾಗದ ವ್ಯಾಪ್ತಿಯಲ್ಲಿನ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ಈ ವಿಶೇಷ ಬಸ್ ಕಾರ್ಯಾಚರಣೆಯ ಸದುಪಯೋಗ ಪಡೆದುಕೊಳ್ಳಬೇಕು.  

     ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾಧಿ ಪ್ರಯಾಣಿಕರು ತಮ್ಮ ಸಾರಿಗೆ ಸೌಕರ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ಯಾದಗಿರಿ ದೂ.ಸಂ.7760992463, ಘಟಕ ವ್ಯವಸ್ಥಾಪಕರು ಶಹಾಪೂರ ದೂ.ಸಂ.7760992464, ಘಟಕ ವ್ಯವಸ್ಥಾಪಕರು ಸುರಪೂರ ದೂ. ಸಂ.7760992467, ಘಟಕ ವ್ಯವಸ್ಥಾಪಕರು ಗುರುಮಠಕಲ್ ದೂ.ಸಂ.7760992467ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಿ* *ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ*

 

ಯಾದಗಿರಿ :  ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಡಿಯ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ಯಾದಗಿರಿ  ಹಾಗೂ ರಾಯಚೂರು ಜಿಲ್ಲೆಗಳು ಒಳಗೊಂಡಿದ್ದು, ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ  ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸುವಂತೆ ಭಾರತ ಸರ್ಕಾರದ ಹಣಕಾಸು ಸೇವೆಗಳ , ಜಂಟಿಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ  ಅವರು ಅಧಿಕಾರಿಗಳಿಗೆ ಸೂಚಿಸಿದರು.
   
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
ದೇಶದ ಹಿಂದುಳಿದ 112 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿ, ವಿವಿಧ ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೀತಿ ಆಯೋಗ ಗುರಿ ನಿಗದಿಪಡಿಸಿದೆ.  ಜನರ ಆರೋಗ್ಯ ಮತ್ತು ಪೌಷ್ಟಿಕ, ಕೃಷಿ ಮತ್ತು ಜಲ ಸಂಪನ್ಮೂಲ, ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲಾಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕುರಿತು 49 ಸೂಚ್ಯಂಕ ನೀಡಲಾಗಿದೆ.ಇವುಗಳಲ್ಲಿ ಸೂಕ್ತ ಪ್ರಗತಿ  ಸಾಧಿಸಲು ಸಂಬಂಧಿಸಿದ ಅಧಿಕಾರಿಗಳು ಜವಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು. 

ವಿಶೇಷವಾಗಿ ಬಡಜನರು,ಮಧ್ಯಮ ವರ್ಗದವರಿಗಾಗಿ ಪಿ.ಎಮ್ ಸ್ವನಿಧಿ, ಮುದ್ರಾ, ಹಾಗೂ ವಿಶ್ವಕರ್ಮ ಯೋಜನೆಗಳತ್ತ ಹೆಚ್ಚಿನ ಗಮನಹರಿಸಬೇಕು .ಅದರಂತೆ ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಗಳು ಕಡುಬಡವರಿಗೆ ಉಪಯುಕ್ತವಾಗಿವೆ.ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳು  ವಿಶೇಷ ಅಭಿಯಾನದ ಮೂಲಕ ಅರಿವು ಮತ್ತು ಪ್ರೋತ್ಸಾಹ ನೀಡಬೇಕು.ಸರ್ಕಾರದ ಪ್ರತಿ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳೂ ಈ ಯೋಜನೆಗಳಡಿ ಬರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.


ಲೀಡ್ ಬ್ಯಾಂಕ್ ಮೂಲಕ ಮುದ್ರಾ ಯೋಜನೆಯಡಿ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಾಲ ಸೌಲಭ್ಯ ಕಲ್ಪಿಸಬೇಕು.ಈವರೆಗೆ ಸಾಧಿಸಿದ ಪ್ರಗತಿ ವರದಿ ಜಿ.ಪಂ ಸಿಇಓ ಅವರಿಗೆ ನೀಡಿ ಎಷ್ಟು ಜನ ಫಲಾನುಭವಿಗಳು ಈ ಯೋಜನೆಯಡಿ ಲಾಭ ಪಡೆದಿದ್ದಾರೆ ಎಂಬುದರ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು.ಅದರಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಲೀಡ್ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯ ಗಳ ಬಗ್ಗೆ ಪರಿಶೀಲಿಸಿ ನಿಖರ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಯೋಜನೆಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಗಮನ ನೀಡುವಂತೆ ಅವರು ಸೂಚನೆ ನೀಡಿ ಫಲಿತಾಂಶ ಕಡಿಮೆ ಕುರಿತು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಪರಿಣಾಮಕಾರಿ ಯೋಜನೆ ರೂಪಿಸಲು ಅವರು ಸೂಚಿಸಿದರು. 

ಕಡಿಮೆ ತೂಕದ ಶಿಶುಗಳ ಜನನವನ್ನು ಶೇಕಡಾವಾರು ಕಡಿಮೆ ಮಾಡುವಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳು, ಅಪೌಷ್ಠಿಕತೆ ನಿವಾರಣೆ, ಐಸಿಡಿಎಸ್ ಕಾರ್ಯಕ್ರಮದ ಅಡಿಯಲ್ಲಿ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಪಡೆಯುವ ಮಹಿಳೆಯರ ಸಂಖ್ಯೆ ಮತ್ತು ರೋಗಿಗಳಿಗೆ ಒದಗಿಸಲಾದ ಪ್ರೋಟೀನ್-ಭರಿತ ಆಹಾರಗಳ ಕುರಿತು, ಶಿಕ್ಷಣ, ಕೃಷಿ ಮತ್ತು ಜಲಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಮೂಲಭೂತ ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಮತ್ತು ಸವಾಲುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. 

ಇದಕ್ಕೂ ಮುನ್ನ ಅವರು ದೋರನಹಳ್ಳಿ ಅಂಗನವಾಡಿ ,ಹಾಗೂ ನಾಯ್ಕಲ್ ಗ್ರಾಮದ  ಗ್ರಂಥಾಲಯ, ಪರಿಶೀಲಿಸಿದರು. ಈ ಭೇಟಿ ವೇಳೆ ಹಾಗೂ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಹಾಗೂ ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್  ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

ಕಷ್ಟದ ಜೀವನ ಶಿಸ್ತಿನ ಪಾಠಶಾಲೆ: ಶ್ರೀ ರಂಭಾಪುರಿ ಜಗದ್ಗುರುಗಳು



ಸವಣೂರ : ನೋವನ್ನು ನುಂಗಿ ಜೀವನದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಕಷ್ಟದ ಜೀವನ ಶಿಸ್ತಿನ ಪಾಠಶಾಲೆಯಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕು ಜೊತೆಗೆ ಸಮರ್ಥ ಮಾರ್ಗದರ್ಶನ ನೀಡುವ ಗುರು ಇದ್ದಾಗ ಜೀವನ ಸಾರ್ಥಕ ಹೊಂದುತ್ತದೆ. ಡಾ.ಗುರುಪಾದಯ್ಯ ಸಾಲಿಮಠರು ಗುರು ಸೇವಾ ನಿಷ್ಠರಾಗಿ ಪೀಠ-ಮಠಗಳು ನೀಡುವ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವುದು ಅವರ ಧರ್ಮಾಭಿಮಾನಕ್ಕೆ ಕಾರಣವಾಗಿದೆ. ವೀರತಪಸ್ವಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಈ ಭಾಗದಲ್ಲಿ ಮಾಡಿದ ಧರ್ಮ ಜಾಗೃತಿಯನ್ನು ಮರೆಯುವಂತಿಲ್ಲ. ವೀರಶೈವರಾದವರು ಇಷ್ಟಲಿಂಗ ಧಾರಿಗಳಾಗಿ ಪ್ರತಿ ದಿನ ಕನಿಷ್ಠ ೫ ನಿಮಿಷವಾದರೂ ಪೂಜೆಗೈದರೆ ಜನ್ಮ ಪಾವನಗೊಳ್ಳುತ್ತದೆ. ಇಂದು ಧರ್ಮದ ದಾರಿಯನ್ನು ತಪ್ಪಿಸಿ ಜನರನ್ನು ಧರ್ಮದಿಂದ ದೂರವಿರಿಸುವ ಕಾರ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂಥವರಿAದ ಭಕ್ತ ಶ್ರದ್ಧಾಳುಗಳು ಎಚ್ಚರಿಕೆಯಿಂದ ಇರಬೇಕೆಂದರು.
ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರುವನ್ನು ನಂಬಿ ನಡೆದವರ ಬಾಳು ಉತ್ಕೃಷ್ಟವಾಗಿ ಬೆಳಗುತ್ತದೆ ಎಂದರು. ಮಳಲಿ ಸಂಸ್ಥಾನ ಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರು ಕರುಣೆಯಿದ್ದಾಗ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಬೆಳೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಗುಣ ಹೊಂದಿದಾಗ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಲ್ಲಾಪುರದ ಡಾ. ಗುರುಮಹಾಂತಯ್ಯ ಆರಾಧ್ಯಮಠರು ರಚಿಸಿದ “ಗೀತ ಮಂದಾರ” ಕೃತಿ ಹಾಗೂ ದಾವಣಗೆರೆ ವೀರೇಶ ಪುರಾಣಿಕರು ತಮ್ಮ ಕೈ ಬರಹದಿಂದ ರಚಿಸಿದ ಶ್ರೀ ರಂಭಾಪುರಿ ಜಗದ್ಗುರುಗಳ ಭಾವಚಿತ್ರ ಬಿಡುಗಡೆಗೊಂಡವು. ಸಮಾರಂಭದಲ್ಲಿ ಡಾ.ರಾಜಗುರು ಗುರುಸ್ವಾಮಿ ಕಲಕೇರಿ, ಗಂಗಾಧರಸ್ವಾಮಿ ಸಾಲಿಮಠ, ಶಿವಮೂರ್ತಯ್ಯ ಚರಂತಿಮಠ, ಶಿವಯ್ಯ ನಾಲ್ವತ್ವಾಡಮಠ, ವೀರಭದ್ರಯ್ಯ ಮಠದ, ರಾಜಶೇಖರ ಹಾಲೇವಾಡಿಮಠ, ಮಂಜುನಾಥ ಗಾಣಿಗೇರ, ಮಲ್ಲಾರೆಪ್ಪ ತಳ್ಳಿಹಳ್ಳಿ, ವೀರಯ್ಯಶಾಸ್ತಿç ಹಿರೇಮಠ ಉಪಸ್ಥಿತರಿದ್ದರು. ಡಾ.ಗುರುಪಾದಯ್ಯ ಸಾಲಿಮಠರು ಸ್ವಾಗತಿಸಿದರು. ಶಿವಪ್ರಕಾಶ ಬಳಿಗಾರ ನಿರೂಪಿಸಿದರು. ವೀರಯ್ಯ ಸಾಲಿಮಠರು ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಿತು.



 

ಶರಣರು ಸಾಧಿಸಿದ ಲಿಂಗಯೋಗವು ಸರ್ವಶ್ರೇಷ್ಠ ಯೋಗ: ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು

 


ಬಸವಕಲ್ಯಾಣ: “ಹನ್ನೆರಡನೇ ಶತಮಾನದಲ್ಲಿ ಗುರು ಬಸವಾದಿ ಶರಣರು ಸಾಧಿಸಿದ ಲಿಂಗಯೋಗ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಯೋಗವಾಗಿದೆ” ಎಂದು ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಅಭಿಮತ ವ್ಯಕ್ತಪಡಿಸಿದ್ದಾರೆ.

ಅವರು ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣದ ವತಿಯಿಂದ ಹಮ್ಮಿಕೊಂಡ ಅನುಭವ ಮಂಟಪ ಸಂಸತ್ತು 7ನೇ ಅದಿವೇಶನದ ಮೊದಲನೇ ಗೋಷ್ಟಿಯಲ್ಲಿ  ಮಾತನಾಡುತ್ತಾ. “ಲಿಂಗಯೋಗವೆಂದರೆ ಕೇವಲ ಆಧ್ಯಾತ್ಮಿಕ ಸಾಧನೆಗೆ ಮಾತ್ರ ಸೀಮಿತವಲ್ಲ. ಇದು ಜೀವನ ಪರಿವರ್ತನೆಯ ಶಕ್ತಿ ಹೊಂದಿರುವ ಪ್ರಾತ್ಯಕ್ಷಿಕ ಯೋಗವಾಗಿದೆ” ಎಂದು ಅವರು ವಿದ್ವತ್ತಿನಿಂದ ವಿವರಿಸಿದರು.

ಶರಣರು ವಚನಸಾಹಿತ್ಯದಲ್ಲಿ ಬೋಧಿಸಿದ ಷಟಸ್ಥಲವು ಅಂಗ ಲಿಂಗರ ಸಾಮರಸ್ಯಕ್ಕೆ ಭದ್ರ ಬುನಾದಿಯಾಗಿದೆಯಲ್ಲದೆ ಇದರಲ್ಲಿ ವಿಜ್ಞಾನ ಅಡಗಿದೆ. ಪ್ರತಿಯೊಬ್ಬ ಸಾಧಕರು ಶಿವಯೋಗ ಮಾರ್ಗವನ್ನು ಅನುಸರಿಸಿದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದೆಂದರು. 

ಇಷ್ಟಲಿಂಗ ಸಾಧನೆಯಿಂದ ದೇಹ ಶುದ್ಧಿಯಾಗುತ್ತದೆ. ಪ್ರಾಣಲಿಂಗ ಸಾಧನೆಯಿಂದ ಮನ ಶುದ್ಧಿಯಾಗುತ್ತದೆ. ಭಾವಲಿಂಗ ಸಾಧನೆಯಿಂದ ಆತ್ಮಶುದ್ಧಿಯಾಗಿ ಸಾಧಕನ ಇಡೀ ದೇಹ ಸರ್ವಾಂಗ ಲಿಂಗವಾಗಲು ಸಹಕಾರಿಯಾಗಿದೆ ಪ್ರತಿಯೊಬ್ಬರು ಸಾಧಿಸಲು ಮುಂದಾಗಬೇಕು ಎಂದರು. 

ಕೇವಲ ಧಾರ್ಮಿಕ ಕ್ರಿಯೆಗೆ ಸೀಮಿತರಾಗಬಾರದು ಎಂದು ಕಿವಿ ಮಾತು ಹೇಳಿದರಲ್ಲದೆ ಶಿವಯೋಗ ಸಾಧಿಸುವ ಸಾಧಕರಿಗೆ ವಿಶೇಷ ತರಬೇತಿ ನೀಡಲು ನಾವು ಕಾರ್ಯಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಶರಣರು ಮಠ ಸಂಸ್ಕೃತಿ ಹುಟ್ಟು ಹಾಕಿಲ್ಲ, ಜಗದ್ಗುರು ಪದವಿ ಹುಟ್ಟು ಹಾಕಿಲ್ಲ. ಶರಣರದು ಮಹಾಮನೆ ಕಲ್ಪನೆ ಇದೆ. ಮಹಾಮನೆ ಎಂಬುದು ವಿಶಾಲವಾಗಿತ್ತು, ಅದರೊಳಗೆ ಅನುಭವ ಮಂಟಪ ಚಿಂತನೆ ನಡೆಯುತ್ತಿತ್ತು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಗುಣತೀರ್ಥ ವಾಡಿ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ   “ಇಂದಿನ ಯುಗದಲ್ಲಿ ಮಾನವನಿಗೆ ಶಾಂತಿ, ಸಮಾನತೆ ಮತ್ತು ನೈತಿಕತೆಯ ಅವಶ್ಯಕತೆ ಇದೆ. ಶರಣರ ಲಿಂಗಯೋಗವೇ ಅದಕ್ಕೆ ಮೂಲ ಪರಿಹಾರ” ಎಂದು ಅವರು ಅಭಿಪ್ರಾಯಪಟ್ಟರು.

ಅನುಭವ ಮಂಟಪದ ಆಶಯವು ಸಂಸ್ಕಾರ, ಸಹೋದರ, ಸಮಾನತೆ, ಸಂಘಟನೆಯಿಂದ ಕೂಡಿತ್ತು. ಬಸವಣ್ಣನವರು ಒಬ್ಬ ಮನಃಶಾಸ್ತ್ರೀಯ ಗುಣ ಹೊಂದಿದ್ದರಿಂದಲೇ ಸರ್ವರನ್ನು ತನ್ನತ್ತ ಸೆಳೆದು ಸಮುದಾಯಿಕ ಲಿಂಗಯೋಗ ಸಾಧನೆ ಮಾಡಲು ಸಾಧ್ಯವಾಯಿತು. 

ಪೂಜ್ಯ ಶ್ರೀ ಡಾ. ಸಿದ್ಧರಾಮ ಬೆಲ್ದಾಳ ಶರಣರು ಶ್ರೇಷ್ಟ ಲಿಂಗಾನುಭಾವಿಗಳಾಗಿದ್ದು ಅವರ ಜ್ಞಾನಾನುಭವನ್ನು ಸಾಧಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು, ಸತ್ಯದೇವಿ ಮಾತಾಜಿ, ಗಂಗಾದಾರ ದೇವರು, ಸತ್ಯಕ್ಕ ಮಾತಾಜಿ ಬಂದವರ ಓಣಿ, ಬಸವ ದೇವರು ಸವದತ್ತಿ, ಶ್ರೀಕಾಂತ ಸ್ವಾಮಿ ಬೀದರ,   ಉಪಸ್ಥಿತರಿದ್ದರು.

Friday, 21 February 2025

ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು

 

 ಕಲ್ಯಾಣ ಕರ್ನಾಟಕದ ಮಠಗಳಲ್ಲಿ ಸಾಮರಸ್ಯ ಸೌಹಾರ್ದತೆ, ಸಮನ್ವಯತೆಯ ಕೇಂದ್ರವೆಂದು ಪ್ರಸಿದ್ಧವಾಗಿರುವುದು ಹಾರಕೂಡದ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನವಾಗಿದೆ. ಈ ಮಠಕ್ಕೆ ಪೂಜ್ಯ ಸಂಗನ ಬಸವರಿಂದ ಪ್ರಾರಂಭವಾಗಿ ಶ್ರೀ ಚನ್ನವೀರ ಶಿವಾಚಾರ್ಯರವರೆಗೆ ಏಳು ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಈಗ ಎಂಟನೇ ಪೀಠಾಧಿಪತಿಗಳಾಗಿ ಬಂದವರೇ ಪೂಜ್ಯ ಶ್ರೀ ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡದ ವೇದಮೂರ್ತಿ ಶ್ರೀ ಕರಬಸಯ್ಯ ಹಿರೇಮಠ ಮತ್ತು ಸುಭದ್ರ ತಾಯಿಯವರ ಮಗನಾಗಿ ೦೧-೦೭-೧೯೬೩ ರಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ರೇವಣಸಿದ್ದಯ್ಯ. ಶ್ರೀಗಳು ತಮ್ಮ ಶಿಕ್ಷಣಾ ಅಭ್ಯಾಸವನ್ನು ಹಾರಕೂಡದಲ್ಲಿ ಪ್ರಾರಂಭಿಸಿದರು. ಕಲಬುರ್ಗಿಯ ಶರಣಬಸವೇಶ್ವರ ಪ್ರೌಢಶಾಲೆ, ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ೨೯೮೪ ರಲ್ಲಿ ಬಿ.ಎ‌ ಪದವಿಯನ್ನು ಪೂರೈಸಿದರು. ಧಾರವಾಡ ವಿಶ್ವವಿದ್ಯಾಲಯದಿಂದ ೧೯೮೬ ಎಂ.ಎ.ಪದವಿ  ಪಡೆದರು. ಹುಬ್ಬಳ್ಳಿಯ ಮೂರು ಸಾವಿರಮಠದ ಡಾ.ಗಂಗಾಧರ ರಾಜ ಯೋಗೇಂದ್ರ ಜಗದ್ಗುರುಗಳು ಪ್ರಭಾವದಿಂದ ಸಾಹಿತ್ಯ ಆಸಕ್ತಿ. ಶಿವಯೋಗ ಮಂದಿರದಲ್ಲಿ ಸ್ವಾಮಿ ತರಬೇತಿ ಹೊಂದಿ ಕನ್ನಡ ಮತ್ತು ಸಂಸ್ಕೃತ ಭಾಷೆ- ಸಾಹಿತ್ಯ ಪ್ರೌಢಿಮೆ ಹೊಂದಿದರು.
      ಶ್ರೀ ರೇವಣಸಿದ್ಧರು ಚನ್ನವೀರರರಾಗಿ ಹಾರಕೂಡ ಹಿರೇಮಠ‌ ಸಂಸ್ಥಾನದ ಪಟ್ಟಾಧಿಕಾರವನ್ನು ೨೫-೦೪-೧೯ ೯೬ ರಲ್ಲಿ ಹೊಂದಿದರು.ಅಲ್ಲಿಂದ ಸಣ್ಣ ಮಠದ ಜವಾಬ್ದಾರಿ ಹೊತ್ತು ಮಠದ ಪರಂಪರೆಯನ್ನು ಮುಂದುವರಿಸುವ‌ ಸಾಮಥ್ರ್ಯ ಹೊಂದಿದರು.ಅಪಾರ ಭಕ್ತ ಆರಾಧ್ಯ ಗುರುಳಾದರು. ಮಠದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಲಿ.ಚನ್ನಬಸವ ಶಿವಯೋಗಿಗಳು, ಲಿಂ.ಗುರುಲಿಂಗ ಶಿವಾ ಚಾರ್ಯರನ್ನು, ಪಂಚಪೀಠ, ಆಚಾರ್ಯ ಪರಂಪರೆ, ಶರಣ ಪರಂಪರೆಯೊಂದಿಗೆ ಸರ್ವಧರ್ಮ, ಸರ್ವಜಾತಿ, ಸಕಲ ಮತಗಳನ್ನು ಒಳಗೊಂಡು ಸಕಲ ಜೀವಾತ್ಮರಿಗೆ ಲೇಸ ಬಯಸುವ ಕಾರ್ಯಕೈಗೊಂಡು ಸರ್ವ ಜನಾಂಗದ ಶಾಂತಿ‌ಯ ತೋಟವಾಗಿಸಿಕೊಂಡ ಮಹಾ ಮಾನವತಾವಾದಿಯಾದವರು.
      ಮಠದ ಆವರಣದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ, ದಾಸೋಹ ಮನೆ, ಶಾಲೆ,ಕುಸ್ತಿ, ಕ್ರೀಡಾಂಗಣ, ಕಲ್ಯಾಣ ಮಂಟಪ, ಕಳಸಾರೋಹಣ,ಮೂರ್ತಿ ಪ್ರತಿಷ್ಠಾನ, ತಂದೆ- ತಾಯಿ ಸ್ಮರಣೆ ಭವನ, ರಥೋತ್ಸವ, ಜಾತ್ರೆ, ದಪೂಜೆ ಪುನಸ್ಕಾರ, ಜಾನುವಾರು, ಶಿಬಿರಗಳು, ತರಬೇತಿ, ಕಲೆ, ಸಂಗೀತ ದರ್ಬಾರ್, ಭಜನೆ, ಜಾನಪದ ಕಲೆ- ಹಾಡು ಪ್ರದರ್ಶನ. ಸಾಹಿತ್ಯ ಸಮ್ಮೇಳನ ಆಯೋಜನೆ, ಸಂಗೀತ ಸಮ್ಮೇಳನ, ಧರ್ಮ ಗೋಷ್ಠಿ, ಅನುಭಾವ ಪ್ರಚಾರೋಪನ್ಯಾಸ, ೧೦೩ಕ್ಕೂ ಹೆಚ್ಚು ಪುಸ್ತಕ ಪ್ರಕಟ. ವಿಷಯ ವಚನ ೧೫ ಸಂಪುಟಗಳು. ಪುರಾಣ, ನಾಟಕ ಪ್ರದರ್ಶನ, ಹೀಗೆ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ, ಕನ್ನಡ ಪರಿಚಾರಕರಾಗಿದ್ದಾರೆ.
         ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಸುಲಭವಾಗಿ, ಉತ್ತಮ ಶಿಕ್ಷಣ ನೀಡಲು ಯುಕೆಜಿಯಿಂದ ಪದವಿ ಹಂತದವರೆಗೂ ಶಿಕ್ಷಣ ಕೇಂದ್ರವನ್ನು ಹಾರಕೂಡ, ಚಿಂಚೋಳಿ, ಭಾಲ್ಕಿ, ಮೊದಲಾದ ಕಡೆ ಶಿಕ್ಷಣ ಕೇಂದ್ರ ಅದರಲ್ಲೂ ಕನ್ನಡ ಮಾಧ್ಯ ಮದಲ್ಲಿ, ಉಚಿತ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪ್ರೇರೇಪಿಸಿದವರು. ಪಾಲಕರು, ಶಿಕ್ಷಕರ ಸ್ಮರಣೆ ಮಾಡಿಸುತ್ತಿದ್ದಾರೆ.
 


           ಪ್ರಶಸ್ತಿ ನೀಡುವ ಮಠವಾಗಿದೆ. ಕವಿ, ಸಾಹಿತಿ, ಕಲಾವಿ‌ದರು, ಬಡವರಾಗಬಾರದೆಂದು ಚನ್ನಶ್ರೀ ಪ್ರಶಸ್ತಿ, ಚನ್ನರತ್ನ, ಕಲ್ಯಾಣ ಕರ್ನಾಟಕ ಸಂಗೀತ ರತ್ನ, ಶಿಕ್ಷಣ ರತ್ನ, ಬಸವಭಾನು, ಕಲ್ಯಾಣ ಕರ್ನಾಟಕ ರತ್ನ, ಭಜನಾ ಪ್ರಶಸ್ತಿ, 
ಅಲ್ಲದೆ ಕನ್ನಡ ನಾಡಿನ ಪ್ರತಿಷ್ಠಿತ ೧ ಲಕ್ಷ, ೨ ತೊಲ ಚಿನ್ನದ ಪದಕ ಪ್ರಶಸ್ತಿ ಫಲಕ ಹೊಂದಿದೆ. ಇದುವರೆಗೆ ೧೨ ಜನರಲ್ಲಿ ಪ್ರದಾನ ಮಾಡಲಾಗಿದೆ. 
    ಪೂಜ್ಯರು ಸಾಹಿತಿಗಳು. ಅವರು ನೀಡುವ ಆಶೀರ್ವಚನ ಸಂದೇಶ, ಪ್ರವಚನ, ವಾಗ್ಮಿತನ, ಮೂಲಕ ಜನಸಾಮಾನ್ಯರಿಂದ ಹೀಡಿದು ವಿದ್ವಾಂಸರಿಗೂ ಅನ್ವಯವಾಗುವ‌ ಹಿತ ವಚನ ಬೋಧನೆ ಮಾಡುವರು. ಹಡಪದ ಅಪ್ಪಣ್ಣನ ನೂರ ವಚನ ಗಳ ಸಂಗ್ರಹ,ಚನ್ನ ಚಿಂತನ,ಚನ್ನಚಂದ್ರಹಾರ, ಚನ್ನಕಾಂತ ವಿಚಾರ ಬಿಂದುಗಳು, ಶ್ರೀಚನ್ನ ನುಡಿ ಎನ್ನುವ ಐದು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸಮನ್ವಯತೆ ಹೊಂದಿದೆ. ಸರಳವಾಗಿ ಸರ್ವರು ಓದುವ ಸಮತಾ ಭಾವ ನೀಡುವುದು.
   ಪೂಜ್ಯರ ಕುರಿತು ಚನ್ಮವೀರ, ಹಾರಕೂಡ ಸಿರಿ, ನಡೆದಾಡುವ ದೇವರು, ಚನ್ನ ಶ್ರೀನಿಧಿ, ಚನ್ನವೀರ ಪದನಮನ
ಚನ್ನ ಚಂದನ, ನುಡಿಚನ್ನ, ವಚನ ವಾರಿಧಿ, ಚನ್ನ ಸಂಭ್ರಮ, ಚನ್ನಶ್ರೀವಾಣಿ, ಅಲ್ಲದೇ ಮಠದ ಹಾಗೂ ಶ್ರೀಗಳ ಕುರಿತು ಎಂಫಿಲ್,ಪಿಎಚ್.ಡಿಗಳಾಗಿವೆ.  ಶಿವಾಚಾರ್ಯ ರತ್ನ, ಸದ್ಧರ್ಮ ಶಿಖಾಮಣಿ, ಮನುಕುಲ ರತ್ನ, ದಾಸೋಹ ಜ್ಯಾನ ರತ್ನ, ಆಧ್ಯಾತ್ಮ ಸಿರಿ, ಅನ್ನದಾನೇಶ್ವ‌ರ  ಪ್ರಶಸ್ತಿ, ಸ್ವರ ಮಾಧುರಿ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ರತ್ನ, ಕಲ್ಯಾಣ ಕರ್ನಾಟಕ ರತ್ನ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಕಲ್ಯಾಣ ಕರ್ನಾಟಕ ಎರಡನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಹೊಂದಿದ್ದರು ಈಗ ಬೇಲೂರು ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ‌ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ‌ಸಂದಿದೆ.

-ಡಾ. ರಾಜಕುಮಾರ ಮಾಳಗೆ ಕಲಬುರಗಿ

ಗುರುದ್ರೋಹಿ ಕನ್ಹೇರಿ ಸ್ವಾಮಿಗಳು: ಬಹಿರಂಗ ಕ್ಷಮೆ ಯಾಚಿಸಲಿ : ಡಾ. ಚನ್ನಬಸವಾನಂದ ಜಗದ್ಗುರುಗಳು

 

ಬೀದರ: ಮಹಾರಾಷ್ಟçದ ಕೋಲ್ಹಾಪುರ ಸಮೀಪದ ಕನ್ಹೇರಿ ಮಠವು ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಮತ್ತು ಶೂನ್ಯ ಪೀಠದ  ಪರಂಪರೆಯ ಮಠ. ಶರಣರಾದ ಶ್ರೀ ಕನ್ಹೇರಿ ಕಾಡಸಿದ್ದೇಶ್ವರರು ಅಪ್ಪಟ ಬಸವ ಭಕ್ತರು. ಆದರೆ ಆ ಶರಣ ಪರಂಪರೆಯ ಪೀಠದ ಮೇಲೆ ಕುಳಿತಿರುವ ಈಗಿನ ಮಠಾಧೀಶರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಶರಣರ ಪರಂಪರೆಯನ್ನೇ ಅದೃಶ್ಯಗೊಳಿಸಿದ್ದಾರೆ. ಇತ್ತಿಚಿಗೆ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊAದರಲ್ಲಿ ಬಸವ ಭಕ್ತರನ್ನು ತಾಲಿಬಾನಿಗಳೆಂದು ಆರೋಪಿಸಿದ್ದು, ಭಕ್ತರೋಬ್ಬರು ನಿಮ್ಮ ಮಠವು ವೈದಿಕವೋ ಅಥವಾ ಅವೈದಿಕವೋ ಎಂದು ಪ್ರಶ್ನೆ ಕೇಳಿದಾಗ ಅದನ್ನು ಕೇಳಲು ನೀಯಾರು? ಎಂದು ಸ್ವಾಮಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ವಚನಗಳನ್ನು ಬೊಗಳು ಬರೀ ಹಂಗೆ ಪ್ರಶ್ನೆ ಕೇಳುತ್ತಿದ್ದಿಯಲ್ಲ ಎಂದು ದುರಹಂಕಾರದಿAದ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅವಮಾನ ಮಾಡಿದ್ದಾರೆ.

ಈ ಕನ್ಹೇರಿ ಮಠವು ವೈದಿಕ ಮಠವೋ ಅಥವಾ ಲಿಂಗಾಯತ ಧರ್ಮದ ಮಠವೋ ಎಂಬುದಕ್ಕೆ ಈ ಮಠದ ಕರ್ತೃ ಅಥವಾ ಮೂಲಪುರುಷ ಕಾಡಸಿದ್ದೇಶ್ವರ ವಚನಗಳಿಂದಲೇ ತಿಳಿದುಕೊಳ್ಳೋಣ.
ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಇವು ಲಿಂಗಾಯತ ಧರ್ಮದ ಅಂಗವಾಗಿವೆ. ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಮತ್ತು ಭೃತ್ಯಾಚಾರ ಪ್ರಾಣ ಸ್ವರೂಪವಾಗಿವೆ. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಆರು ಸ್ಥಲಗಳು ಲಿಂಗಾಯತ ಧರ್ಮ ಪುರುಷನ ಆತ್ಮದಂತಿವೆ. ಬಸವ ತತ್ವನಿಷ್ಠರಾದ ಕಾಡಸಿದ್ದೇಶ್ವರ ಶರಣರು ಸಹ ಈ ವಿಷಯ ಕುರಿತು ೫೦೦ ವಚನಗಳನ್ನು ರಚಿಸಿದ್ದಾರೆ. ಮತ್ತು ಅದರಂತೆ ನಡೆದುಕೊಂಡಿದ್ದಾರೆ. ಆದರೆ ಅದೇ ಮಠದ ಮಠಾಧೀಶರಾಗಿರುವ ಈ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಲಿಂಗಾಯತ ಧರ್ಮದ ಸಿದ್ದಾಂತಗಳನ್ನು ಗಾಳಿಗೆ ತೂರಿ ಸಂಪೂರ್ಣವಾಗಿ ಈ ಮಠವನ್ನು ಕಟ್ಟಾ ವೈದಿಕ ಮಠವನ್ನಾಗಿ ಬದಲಿಸಿದ್ದಾರೆ.
ಹಣೆಯ ಮೇಲೆ ವಿಭೂತಿಯಿಲ್ಲ. ಸದಾವಕಾಲ ಕುಂಕುಮ ಧರಿಸಿ ವೈದಿಕನಂತೆ ಪ್ರದರ್ಶಿಸುವ ಈ ಸ್ವಾಮಿಗಳ ಕೊರಳಲ್ಲಿ ಇಷ್ಟಲಿಂಗವಿದೆಯೋ ಇಲ್ಲವೋ ಅನುಮಾನವಿದೆ. ಶ್ರೀ ಕಾಡಸಿದ್ದೇಶ್ವರ ಶರಣರು ಬರೆದ ವಚನಗಳು ಗಣಾಚಾರ ತತ್ವದಿಂದ ಕೂಡಿವೆ.
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ
ಹೆಣ್ಣ ಮೆಚ್ಚವಿ ಲಿಂಗಕ್ಕೆ ಹೊರತಾದೆ
ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ………
ಎಂಬ ವಚನದಲ್ಲಿ ಬಸವೇಶ್ವರಾದಿಯಾಗಿ ಏಳ್ನೂರೆಪ್ಪತ್ತು ಶರಣರು ಹೇಳಿದ ತತ್ವಗಳು ಅಲ್ಲಗಳೆದರೆ ಅಂತಹ ಮತಿಭ್ರಷ್ಟರನ್ನು ಕಾಲು ಮೇಲಕ್ಕೆ ತಲೆ ಕೆಳಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತ ಕುರಿತಗಳ ಚರ್ಮ ಹರಿದ ಹಾಗೆ ಹರಿದು ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ. – ಕಾಡಸಿದ್ದೇಶ್ವರ ವಚನ ೨೬
ಇಷ್ಟಲಿಂಗಕ್ಕೆ ರೂಪು ಮೊದಲಾದ ಪದಾರ್ಥವ ಕೊಟ್ಟು ಸೇವಿಸಬೇಕು. ಪ್ರಾಣಲಿಂಗಕ್ಕೆ ರುಚಿ ಪದಾರ್ಥವ ನರ್ಪಿಸಿ ಸೇವಿಸಬೇಕು. ಭಾವಲಿಂಗಕ್ಕೆ ತೃಪ್ತಿ ಪದಾರ್ಥವ ನರ್ಪಿಸಿ ಸೇವಿಸಬೇಕು ಅವನೇ ಶರಣ ಸತಿ ಲಿಂಗಪತಿ ಎಂದು ಶರಣರು ತಮ್ಮ ೧೦೫ ನೇ ವಚನದಲ್ಲಿ ಹೇಳುತ್ತಾರೆ.
ಲಿಂಗ ಜಂಗಮ ಒಂದೆAದರಿಯದೆ
ಭಿನ್ನವಿಟ್ಟು ಅರ್ಚಿಸುವರು
ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೇ?
ಲಿAಗವೇ ಅಂಗ ಜಂಗಮವೇ ಪ್ರಾಣ ಎಂದು ಶ್ರೀ ಕಾಡಸಿದ್ದೇಶ್ವರರು ತಮ್ಮ ೯೭ನೇ ವಚನದಲ್ಲಿ ಹೇಳಿದ್ದಾರೆ. ಇಷ್ಟಲಿಂಗದ ಹೊರತು ಅನ್ಯದೇವತೆಗಳ ಪೂಜೆಯನ್ನು ಖಂಡಿಸಿದ್ದಾರೆ.
ಇಷ್ಟಲಿAಗದ ಮಹತ್ವ ಅರಿಯದೆ ದೇವರನ್ನು ಹೊರಗೆ ಹುಡುಕುವವರ ಕುರಿತು ಕಾಡಸಿದ್ದೇಶ್ವರ ಶರಣರು ಕುರುಡನ ಕೈಯಲ್ಲಿ ಕನ್ನಡಿಯ ಕೊಟ್ಟರೆ ನೋಡಬಲ್ಲನೇ? ಎಂದು ನೋವಿನಿಂದ ಹೇಳಿದ್ದಾರೆ. ಅಂತಹ ಮಹಾನ್ ಶರಣರ ಸ್ಥಾನದಲ್ಲಿ ಕುಳಿತ ಸ್ವಾಮಿಗಳು ಇಷ್ಟಲಿಂಗದ ಮಹತ್ವ ಅರಿಯದೆ ವೈದಿಕರ ಬೆನ್ನು ಹತ್ತಿರುವುದು ಲಿಂಗಾಯತರ ದುರ್ದೈವ ಸರಿ. ಕಾಡಸಿದ್ದೇಶ್ವರ ಶರಣರು ತಮ್ಮ ಇನ್ನೊಂದು ವಚನ ಸಂ. ೪೨೭ ರಲ್ಲಿ ಲೌಕಿಕ ಯಾರು ಎಂಬುದನ್ನು ವಿವರಿಸುತ್ತ
ಹೊನ್ನು ಹೆಣ್ಣು ಮಣ್ಣನ್ನು ಹಿಡಿದು
ಆಚರಿಸುವುದು ಲೌಕಿಕವಲ್ಲ
ಸತಿಸುತರ ಹಿಡಿದು ಮನೆಮಾರು ಕಟ್ಟಿ
ಪ್ರಪಂಚ ಮಾಡುವುದು ಲೌಕಿಕವಲ್ಲ
ಯಾವುದು ಲೌಕಿಕವೆಂದರೆ ಶ್ರೀ ಗುರು ಕರುಣದಿಂದ ಪಡಕೊಂಡ ಕರಕಮಲದ ಲಿಂಗಾAಗ ಸಮರಸವನರಿಯದೆವರು ಲೌಕಿಕರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿAಗ – ಕಾಡಸಿದ್ದೇಶ್ವರ ವಚನ ಈಗಿನ ಸ್ವಾಮಿಗಳು ಇಷ್ಟಲಿಂಗ ಯೋಗದ ಮರ್ಮವನರಿಯದೆ ಲೌಕಿಕವಾಗಿ ತಿರುಗುತ್ತಿರುವುದು ಮಹಾದುರಂತವೆAದೇ ಹೇಳಬೇಕಾಗುತ್ತದೆ
ಗುರುವಿನಿಂದ ಇಷ್ಟಲಿಂಗ ಧರಿಸಿ ಕಲ್ಲು ಕಟ್ಟಿಗೆ ಮಣ್ಣನ್ನು ಪೂಜಿಸುವವರು ಹುಟ್ಟು ಕುರುಡರು ಎಂದು ಶರಣ ಕಾಡಸಿದ್ದೇಶ್ವರರು ಕುಟುಕಿದ್ದಾರೆ. ತಮ್ಮ ಮಠದ ಮೂಲ ಕರ್ತೃಗಳ ಆಶಯಕ್ಕೆ ತತ್ವಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಈ ಅದೃಶ್ಯ ಸ್ವಾಮಿಗಳು ಬಸವ ಭಕ್ತರಿಗೆ ತಾಲಿಬಾನಿಗಳು ಎಂದು ಹೇಳುವುದು ಹಾಸ್ಯಾಸ್ಪದ. ಗುರುಲಿಂಗ ಜಂಗಮಕ್ಕೆ ದ್ರೋಹ ಮಾಡಿ ಬಸವಾದಿ ಶರಣರ ಮಠವನ್ನು ವೈದಿಕ ಮಠವನ್ನಾಗಿ ಮಾಡಿ ತಾನೂ ವೈದಿಕನಾವುಗುವುದು ಧರ್ಮದ್ರೋಹದ ಕೆಲಸ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಬಸವ ಭಕ್ತರಲ್ಲಿ ಬಹಿರಂಗ ಕ್ಷಮೆ ಯಾಚಿಸಿ ಇನ್ನು ಮುಂದೆ ಲಿಂಗಾಯತ ಧರ್ಮದಂತೆ ನಡೆಯುತ್ತೇನೆಂದು ಮಾತು ಕೊಡಬೇಕು. ಇಲ್ಲವಾದರೆ ಲಿಂಗಾಯತರು ಮಠ ಬಿಟ್ಟು ತೊಲಗಿ ಎಂದು ಚಳುವಳಿ ಮಾಡಬೇಕಾದೀತು…!

Thursday, 13 February 2025

ಧರ್ಮಾಚರಣೆಗಳು ಬೇರೆಯಾದರೂ ಆತ್ಮ ಚೈತನ್ಯ ಒಂದೆ - ಹಾರಕೂಡ ಶ್ರೀ

 ಚಿಂಚೋಳಿ : ನಾವು ಆಚರಿಸುವ, ಅನುಸರಿಸುವ, ಧರ್ಮಾಚರಣೆಗಳು ಬೇರೆ ಬೇರೆಯಾದರೂ ಎಲ್ಲರೊಳಗಿರುವ ಆತ್ಮ ಚೈತನ್ಯ ಒಂದೆ ಆಗಿರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಬಹುತ್ವ ನಮ್ಮ ದೇಶದ ವೈಶಿಷ್ಟ್ಯ 
 ಆಧ್ಯಾತ್ಮ ಸಾಧನೆಗಾಗಿ, ಆರಾಧನೆಗಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಿದರೂ ದೈವತ್ವದ ವಾರಿಧಿ ಒಂದೆ ಆಗಿರುತ್ತದೆ.
ಕಷ್ಟದುಳಿಯ ಸಹಸ್ರ ಪೆಟ್ಟು ಸಹಿಸಿದವನೇ ನಿಜವಾದ ಸಾಧಕನಾಗಿ ಹೊರಹೊಮ್ಮುತ್ತಾನೆ.
 ಲೋಕ ನಿಂದೆಗಳಿಗೆ ಕಿವಿಗೊಡದೆ, ಆತ್ಮ ಸಾಕ್ಷಿಯಿಂದ ಪ್ರಯತ್ನ ಶೀಲನಾದರೆ ಯಶಸ್ಸು ಲಭಿಸುತ್ತದೆ.
 ಭಾರತೀಯ ಪರಂಪರೆಯಲ್ಲಿ ವಾರಕಾರಿ ಭಕ್ತಿ ಪಂಥ ಒಂದು ವಿಶೇಷವಾದ ಆರಾಧನಾ ಪಂಥವಾಗಿದ್ದು ಪಂಡರಪುರ ವಿಠಲನ ನಾಮಸ್ಮರಣೆಯಿಂದ ಶಾಶ್ವತ ಶಾಂತಿ ಪಡೆಯಬಹುದಾಗಿದೆ.
 ಭಕ್ತಿಯಲ್ಲಿ ದೃಢತೆ ಇದ್ದರೆ ನಮ್ಮ ಹೃದಯ ವಿಠಲನ ಆವಾಸಸ್ಥಾನವಾಗಿರುತ್ತದೆ.
 ಸೌಹಾರ್ದತೆಯ ತೊಟ್ಟಿಲಿನಂತಿರುವ ಸಾಲೆ ಬೀರನಳ್ಳಿ ಗ್ರಾಮದ ಜನತೆ ಬದುಕು ಯಾವತ್ತೂ ಶ್ರೇಯಸ್ಸಿನಿಂದ ಕೂಡಿರಲಿ, ಈ ನಿಟ್ಟಿನಲ್ಲಿ ಹಾರಕೂಡ ಚೆನ್ನಬಸವರ ಆಶೀರ್ವಾದ ಸದಾ ಎಲ್ಲರನ್ನೂ ಕಾಪಾಡಲಿ ಎಂದು ಶುಭ ಹಾರೈಸಿದರು.
ವೀರೇಶ್ವರ ಶಿವಾಚಾರ್ಯರು ಧನಶ್ರೀ ಹಾಗೂ  ಸುಭಾಷ ರಾಥೋಡ ಮಾತನಾಡಿದರು.
ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
 ಜಗನ್ನಾಥ ರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ರೇವಣಸಿದ್ದಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
 ನವಲಿಂಗ ಪಾಟೀಲ ನಿರೂಪಿಸಿದರು.



ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ವೀರೇಶ್ವರ ಶಿವಾಚಾರ್ಯರು ಧನಶ್ರೀ, ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಸುಭಾಷ ರಾಥೋಡ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ, ಜಗನ್ನಾಥ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

Friday, 7 February 2025

ಡಾ. ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮಕ್ಕೆ ದ್ರೋಹ: ತಕ್ಷಣ ಒಕ್ಕೂಟ ಅಧ್ಯಕ್ಷಕ್ಕೆ ರಾಜೀನಾಮೆ ನೀಡಲಿ – ಶಿವರಾಜ ಪಾಟೀಲ್ ಅತಿವಾಳ ಆಕ್ರೋಶ


ಬೀದರ : ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಡಾ. ನಾಡೋಜ ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಹಿರಿಯ ಲಿಂಗಾಯತ ನಾಯಕ ಶಿವರಾಜ ಪಾಟೀಲ್ ಅತಿವಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅವರು ಇಂದು ಶೋಧವಾಣಿ ಯೊಂದಿಗೆ ಮಾತನಾಡುತ್ತ ಭಾಲ್ಕಿ ಹಿರೇಮಠ ಸಂಸ್ಥಾನದ ಗೌರವವನ್ನು ಪೂಜ್ಯ ಬಸವಲಿಂಗ ಪಟ್ಟದ್ದೆವರು ಕಳೆಯುತ್ತಿರುವುದು ಖೇದಕರ ಸಂಗತಿ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಹುತ್ವ ಭಾರತ ಸಮಾವೇಶದಲ್ಲಿ ಭಾಗವಹಿಸಿ ಅವರೆ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಯಾರು ಭಾರತೀಯ ಸಂಸ್ಕೃತಿಯ ಉತ್ಸವಕ್ಕೆ ಹೋಗಬಾರದು ಎಂದು ನುಡಿದರು.  ಮುಂದುವರೆದು ಯಾರು ಭಾಗವಹಿಸುತ್ತಾರೋ ಅವರು ಕೊರಳಿನಲ್ಲಿ ಕಟ್ಟಿರುವ ಲಿಂಗವನ್ನು ಬಿಚ್ಚಿಟ್ಟು ಹೋಗಬೇಕು ಹಾಗೂ ವಚನ ಸಾಹಿತ್ಯವನ್ನು ಬಳಸುವಂತಿಲ್ಲ ಎಂದು ತಾಕ್ಕಿತು ಮಾಡಿರುವ ಮಾತು ಪಟ್ಟದ್ದೆವರು ಮರೆತ್ತಿದ್ದಾರೆಯೇ ಎಂದು ಅತಿವಾಳ ಆಕ್ರೋಶ ವ್ಯಕ್ತಪಡಿಸಿದರು. ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನದ ಪೂಜೆ ಅವರ ಉತ್ತರಾಧಿಕಾರಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾಲ್ಕಿ ತಮ್ಮ ಮಠದ ಎದುರುಗಡೆ ಚಾಲನೆ ಕೊಟ್ಟರು, ಎಂತಹ ದ್ರೋಹ ವಿಡಂಬನೆ ಅಂದರೆ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಾನಿಧ್ಯ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ವಹಿಸಿದರು. 

ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಮಾಡಿದು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಆದರೆ ಬಸವಲಿಂಗ ಪಟ್ಟದ್ದೆವರು ತಮ್ಮ ಮಠದ ಅಭಿವೃದ್ಧಿ ಯೋಜನೆ ಮೂಲ ಮಂತ್ರವಾಗಿಸಿಕೊಂಡು ಇಂದು ಎಲ್ಲರ ಕೆಂಗಣ್ಣಿಗೆ ಗುರಿಯಾದರು, ಆರೆಸಸ್ ಮುಖಂಡ ಶ್ರೀ ಬಸವರಾಜ ಪಾಟಿಲ ಸೇಡಂ ಅವರ ಸಂಸ್ಥೆಯ ಫಲಾನುಭವಿಗಳು ಆದ ಭಾಲ್ಕಿ ಮಠ ಇಂದು ಲಿಂಗಾಯತ ಧರ್ಮ ಮತ್ತು ಬಸವ ತತ್ವ ಸಿದ್ದಾಂತ ಹಾಳು ಸ್ವಾರ್ಥಕ್ಕಾಗಿ ಮಾಡುತ್ತಿದೆ. ಈ ಪದ್ದತಿಯನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪಟ್ಟದ್ದೆವರ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ ನೀಡಿದರು. 

     ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ಸಂಸ್ಕೃತಿಯನ್ನು ಬಿಟ್ಟು, ಆರಎಸ್‌ಎಸ್ ಸಂಸ್ಕೃತಿಯನ್ನು ತಮ್ಮ ಮಠದಲ್ಲಿ ಅಳವಡಿಸಿಕೊಂಡು, ಲಿಂಗಾಯತ ಧರ್ಮದ ತತ್ವಗಳನ್ನು ಗಾಳಿಗೆ ತೂರುತ್ತಿರುವ ಬಸವಲಿಂಗ ಪಟ್ಟದ್ದೆವರು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯು ಲಿಂಗಾಯತ ಸಮುದಾಯದ ಕ್ಷೇಮವನ್ನು ನೋಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿಯೂ ಭಾಗವಹಿಸಲು ಹಿಂದೇಟು ಹಾಕಿದರು, ಬೀದರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಇವರು ಭಾಲ್ಕಿಯ ತಮ್ಮ ಮಠದಲ್ಲಿ ಪ್ರಚಾರ ಸಭೆ ಇಟ್ಟುಕೊಂಡು ತಾವಿಬ್ಬರೂ ಗುರು ಶಿಷ್ಯ ತಮ್ಮ ಮಠದಲ್ಲಿಯೇ ಇರಲಿಲ್ಲ ಗೈರಾದರು, ಇದು ಇವರ ಇಬ್ಬಂಗಿ ತನ ,ಹೀಗಾಗಿ ಅವರ ಮುಖವಾಡವನ್ನು ಸಮಾಜದ ಮುಂದೆ ಕಳಚಿ ಬಿದ್ದಿದೆ ಎಂದು ಶಿವರಾಜ ಪಾಟೀಲ್ ಅತಿವಾಳ ಪಟ್ಟದ್ದೆವರ ವಿರುದ್ಧ ಹರಿಹಾಯಿದರು. 

“ಒಕ್ಕೂಟದ ಉದ್ದೇಶವನ್ನು ಮರೆತು, ವ್ಯಕ್ತಿಗತ ಲಾಭದ ಕಡೆಗೆ ಗಮನ ಹರಿಸುವ ಈ ನಡೆ ಅಸ್ಥಿರತೆಯನ್ನು ಉಂಟುಮಾಡುತ್ತದೆ. ಲಿಂಗಾಯತ ಧರ್ಮದ ಹಿತವನ್ನು ಕಾಯುವುದಾದರೆ, ಅವರು ತಕ್ಷಣ ರಾಜೀನಾಮೆ ನೀಡಿ ತಮ್ಮ ಗೌರವ ಉಳಿಸಿಕೊಳ್ಳಬೇಕು” ಎಂದು ಪಾಟೀಲ್ ಒತ್ತಾಯಿಸಿದರು.

ಈ ಬೆಳವಣಿಗೆಯ ಹಿನ್ನೆಲೆ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಠಾಧೀಶರ ಒಕ್ಕೂಟದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಶೀಘ್ರವೇ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಲ್ಲಾ ಲಿಂಗಾಯತ ಮುಖಂಡರು ಆಗ್ರಹಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಸಂದೇಶಗಳನ್ನು. ಪಟ್ಟದ್ದೆವರ ನಿಲುವು ಕಾದು ನೋಡೋಣ..

Thursday, 6 February 2025

ಪೂಜ್ಯ ಗಂಗಾ0ಬಿಕೆಯ ವಚನವಿಜಯೋತ್ಸವಕ್ಕೆ ಧಿಕ್ಕಾರ : ಬಸವಣ್ಣನವರ ಹೆಸರಿಗೆ ಕಳಂಕ: ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ

ಬೀದರ : ಇತ್ತಿಚೆಗೆ ಕಲಬುರಗಿಯಲ್ಲಿ ಆಯೋಜಿಸಿದ ಬಹುತ್ವ ಭಾರತ ಸಮಾವೇಶದಲ್ಲಿ ಒಂದು ಮಾತನಾಡಿ ಇಂದು ನುಡಿದಂತೆ ನಡೆಯದ ಪೂಜ್ಯರು ಮೊದಲು ತಾವು ಬಸವಣ್ಣನವರು ಕೊಟ್ಟ ವಚನವನ್ನು ಪಾಲಿಸಲಿ ಆ ಮೇಲೆ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಪೂಜ್ಯ ಗಂಗಾ0ಬಿಕೆಯ ವಚನ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿರುವ ಹಿರಿಯ ಲಿಂಗಾಯತ ನಾಯಕ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟಿçಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಈ ಕಾರ್ಯಕ್ರಮ ಲಿಂಗಾಯತ ಧರ್ಮದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಒಳಗೊಳಗೆ ರಾಷ್ಟಿçಯ ಸ್ವಯಂ ಸೇವಕರ ಧ್ಯೇಯೋಧ್ಯೆಶ್ಯ ಇಟ್ಟುಕೊಂಡು ಬಸವಣ್ಣನವರ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಸಮಾಜವು ತೀವೃವಾಗಿ ಖಂಡಿಸುತ್ತದೆ ಎಂದು ಶಿವರಾಜ ಪಾಟೀಲ ಕಿಡಿಕಾರಿದ್ದಾರೆ.

    ಅವರು ಇಂದು ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ತತ್ವಗಳು ಸಮಾನತೆ, ಸತ್ಯ ಮತ್ತು ಧರ್ಮನಿಷ್ಠೆಯ ಮೇಲೆ ಆಧಾರಿತವಾಗಿವೆ. ಆದರೆ, ಗಂಗಾAಬಿಕೆಯ ಈ ನಡೆ ಲಿಂಗಾಯತ ಸಮಾಜವನ್ನು ತಪ್ಪು ದಾರಿಗೆ ತಳ್ಳುವ ಪ್ರಯತ್ನವಾಗಿದೆ. ಇದು ಧರ್ಮದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದ್ದು, ಸ್ವಾರ್ಥ ಮತ್ತು ರಾಜಕೀಯ ಉದ್ದೇಶ ಹೊಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗಂಗಾAಬಿಕೆ ಬಸವಣ್ಣನವರ ಹೆಸರಿಗೆ ಕಳಂಕ ತರುತ್ತಿರುವ ಈ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು. ಲಿಂಗಾಯತ ಧರ್ಮದ ಶುದ್ಧತೆಯನ್ನು ಕಾಪಾಡಲು, ಸಮಾಜದ ಎಲ್ಲರೂ ಈ ರೀತಿಯ ದೋಷಯುಕ್ತ ಕಾರ್ಯಕ್ರಮಗಳನ್ನು ಖಂಡಿಸಬೇಕು” ಇತ್ತಿಚಿಗೆ ಭಾರತೀಯ ಉತ್ಸವ ರಥಕ್ಕೆ ಪೂಜೆ ಮಾಡಿ ಬೀದರನಲ್ಲಿ ಆರ್‌ಎಸ್‌ಎಸ್ ಪ್ರಾಯೋಜಿತ ಕಾರ್ಯಕ್ರಮಕ್ಕೆ ಚಾಲನೇ ನೀಡಿದು ಇವರ ನಡೆಯನ್ನು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ವಚನ ವಿಜಯೋತ್ಸವಕ್ಕೆ ಯಾರು ಸಹಕಾರ ನೀಡದೆ ಲಿಂಗಾಯತ ಸಮಾಜದ ಬಾಂಧವರು ವಿರೋಧಿಸಿ ಧಿಕ್ಕರಿಸಬೇಕು ಎಂದು ಅವರು ಕರೆ ನೀಡಿದರು.

ಇದೇ ತಿಂಗಳ ೧೦ ಮತ್ತು ೧೧, ೧೨ ರಂದು ಬೀದರ್ ಜಿಲ್ಲೆಯಲ್ಲಿ ಬಸವಗಿರಿಯಲ್ಲಿ ನಡೆಯಲಿರುವ ವಚನ ವಿಜಯೋತ್ಸವಕ್ಕೆ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳು ಸಹಕರಿಸಬಾರದು ಎಂದು ಮನವಿ ಮಾಡಿರುವ ಪಾಟೀಲ್, “ಲಿಂಗಾಯತ ಧರ್ಮದ ಶುದ್ಧತೆ ಉಳಿಯಬೇಕಾದರೆ, ಈ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕು” ಎಂದು ಒತ್ತಾಯಿಸಿದರು.

ಹಾಗೇ ಗಂಗಾAಬಿಕೆ ಅವರಿಗೆ ಸಹಕರಿಸುತ್ತಿರುವ ದುಷ್ಟ ಶಕ್ತಿಗಳಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದ ಶಿವರಾಜ ಪಾಟೀಲ್, “ಲಿಂಗಾಯತ ಧರ್ಮದ ವಿರುದ್ಧ ನಡೆಯುವ ಪ್ರತಿಯೊಂದು ಚಟುವಟಿಕೆಗೆ ತಕ್ಕ ಪ್ರತಿರೋಧ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಬಸವಣ್ಣನ ದ್ರೋಹಿಗಳು

ಬಹುತ್ವ ಸಂಸ್ಕೃತಿ ಸಮಾವೇಶದಲ್ಲಿ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ ಸೇಡಂ ಅವರ ಆರೆಸಸ್ ಪ್ರೋತ್ಸಾಹಿತಾ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಯಾರು ಹೋಗಬಾರದು ಎಂದು ೧೯ ನೇ ಜನವರಿ ಭಾಷಣ ಮಾಡಿ ಮರು ದಿವಸ ೨೦ ನೇ ಜನವರಿ ಬೀದರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ವಾಹನಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟು ಬಸವ ತತ್ವ ಸಿದ್ದಾಂತಕ್ಕೆ ದ್ರೋಹ ಬಗೆದಿದ್ದಾರೆ. ಅದು ಸಾಕಾಗಿಲ್ಲ ಎಂದು ಮತ್ತೆ ಸೇಡಂ ನಗರದಲ್ಲಿ ಹಮ್ಮಿಕೊಂಡಿದ್ದ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸಾನಿಧ್ಯ ವಹಿಸಿದ್ದರು. ಅದೇ ಉತ್ಸವದಲ್ಲಿ ಡಾ ಎಂಎ ಕಲ್ಬುರ್ಗಿ ಹತ್ಯ ಮಾಡಿದ್ದವರು ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದರು ಎಂದು ಸುದ್ದಿ ಇದೆ. ಇಂತಹ ಮನಸ್ಥಿತಿ ಅಕ್ಕಂದಿರು ಯಾವ ಮುಖ ಇಟ್ಟುಕೊಂಡು ವಚನ ವಿಜಯೋತ್ಸವ ಆಚರಿಸುತ್ತಾರೆ ಅನ್ನೋದು ಸೋಜಿಗ. ಇಂತಹ ಬಹುಮುಖಿ ನಾಟಕ ಆಡಿ ಲಿಂಗಾಯತರಿAದ ದೇಣಿಗೆ ಪಡೆದು ಬಸವ ದ್ರೋಹ ಮಾಡುತ್ತಿದ್ದಾರೆ. ಇವರ ಮಾತು ಯಾರು ಕೇಳುತ್ತಿಲ್ಲ, ಅದಕ್ಕೆ ಆರೆಸಸ್ ಪ್ರಾಯೋಜಿತ ಸೇಡಂ ಉತ್ಸವಕ್ಕೆ ಲಿಂಗಾಯತರು ಬೆಂಬಲ ಕೊಟ್ಟಿಲ್ಲ, ಅದನ್ನು ಸಂಪೂರ್ಣ ವಿಫಲ ಆಗಿದೆ ಸನ್ಮಾನ್ಯ ಶೋಭಾ ಕರಂದ್ಲಾಜೆ ಅವರು ವ್ಯಥೆ  ಪಟ್ಟಿದ್ದಾರೆ. ಆರೆಸಸ್ ಕುತಂತ್ರಕ್ಕೆ ಲಿಂಗಾಯತರು ತಕ್ಕ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ಮೋಸದ ವಚನ ವಿಜಯೋತ್ಸವ ಆಚರಿಸುತ್ತಿರುವ ಕುತಂತ್ರಿ ಗಂಗಾ0ಬಿಕೆ ಅವರಿಗೆ ಮುಖವಾಡ ಕಳಚಿ ಬೀದರ ಲಿಂಗಾಯತರು ಬುದ್ಧಿ ಕಲಿಸುತ್ತಾರೆ .

ಇದೇ ಸಂದರ್ಭದಲ್ಲಿ, ಈ ವಚನ ವಿಜಯೋತ್ಸವದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಭಾಗವಹಿಸಬಾರದು. ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದು ಪಾಟೀಲ್ ಒತ್ತಾಯಿಸಿದ್ದು, ಶಿಕ್ಷಣ ಇಲಾಖೆಯ ಡಿಡಿಪಿಐ, ಆಯುಕ್ತರು ತಕ್ಷಣವೇ ಈ ಕುರಿತಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮತ್ತು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿಯಾಗಿ ಮಕ್ಕಳ ಶಿಕ್ಷಣಕ್ಕೆ ಇಂಥಹ ಸಮಾರಂಭಗಳು ಬೀದರನಲ್ಲಿ ಬಳಸಿಕೊ ಳ್ಳುತ್ತಿರುವುದು  ಹಾಗೂ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗುತ್ತದೆ ಎಂದು ಶಿವರಾಜ ಪಾಟೀಲ ತಿಳಿಸಿದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಲಿಂಗಾಯತ ಮುಖಂಡರು ಸಭೆ ಸೇರಿ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಬಸವಣ್ಣನವರು ಯಾವ ಸಂಘಟನೆ ವಿರೋಧ ಮಾಡುತ್ತ ಬಂದಿದ್ದೇಯೋ ಆ ಸಂಘಟನೆಯ ಪರವಾಗಿ ಇಂದು ಅನೇಕ ಮಠಾಧೀಶರು ಕಾರ್ಯ ಮಾಡುತ್ತಿದು ಇದು ನಿಲ್ಲಬೇಕು ಎಂದು ಪರೋಕ್ಷವಾಗಿ ಬಸವಣ್ಣನವರ ತತ್ವ ಸಿದ್ದಾಂತವು ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಬೃಹತ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬಸವಂತರಾವ ಬಿರಾದಾರ. ರವಿಕುಮಾರ ಹಾಜರಿದರು.

ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಸಹಕಾರಿ - ಎಸ್.ಆರ್.ಮೆಹರೋಜ್ ಖಾನ್

 ಕೊಪ್ಪಳ  : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಬಹಳಷ್ಟು ಸಹಕರಿಯಾಗಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.

ಅವರು ಬುಧವಾರ ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಗ್ರಾ.ಪಂ ವ್ಯಾಪ್ತಿಯ ಹಂಚಿನಾಳ ಗ್ರಾಮದ ಗ್ರಾಮಸ್ಥರೊಂದಿಗೆ ಗೃಹಲಕ್ಷ್ಮಿ ಯೋಜನೆ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಸಂಬಂಧ ಮುಕ್ತವಾಗಿ ಚರ್ಚೆ ನಡೆಸಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ವಿಶೇಷವಾಗಿ ನಮ್ಮ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿಯೇ ಅನುಷ್ಠಾನ ಮಾಡಿದೆ. ಪ್ರಮುಖವಾಗಿ ಅನ್ನ ಭಾಗ್ಯ ಯೋಜನೆಯಲ್ಲಿ 5ಕೆಜಿ ಅಕ್ಕಿ ಜತೆಗೆ 170ಹಣವನ್ನ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಿದೆ. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರ ಕನಸಿನನಂತೆ ದೇಶದ ಅಭಿವೃದ್ಧಿ ಯಾಗಬೇಕಾದರೆ, ಆ ದೇಶದ ಮಹಿಳೆಯರು ಮತ್ತು ಯುವಕರ ಸಬಲೀಕಾರಣದಿಂದ ಮಾತ್ರ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ತಮ್ಮ ಮನೆಯನ್ನು ನಿಭಾಯಿಸಲು ಬಹಳಷ್ಟು ಉಪಯುಕ್ತವಾಗಿದ್ದು, ಈ ಯೋಜನೆಯ ಹಣವನ್ನು ಉಳಿತಾಯ ಮಾಡಿಕೊಂಡು ಸ್ವಯಂ ಉದ್ಯೋಗ ಮಾಡುವ ಕೊಪ್ಪಳ ಜಿಲ್ಲೆಯ ಮಹಿಳೆಯರ ಆಸಕ್ತಿಯು ತುಂಬಾ ಹೆಮ್ಮೆಯಾಗಿದೆ. ನಮ್ಮ ರಾಜ್ಯದಲ್ಲಿ ಶೇ.12 ರಷ್ಟು ಸ್ವಯಂ ಉದ್ಯೋಗ ಹೆಚ್ಚಾಗಿದ್ದು, ಕೆಲವರು ಬಟ್ಟೆ ಅಂಗಡಿ, ಜೆರಾಕ್ಸ್ ಸೆಂಟರ್, ಹೀಗೆ ಹಲವಾರು ಸ್ವಯಂ ಉದ್ಯೋಗವನ್ನ ಮಾಡುತ್ತಿದ್ದಾರೆ. ಇದರಿಂದ ಜನರಿಗೂ ಅನುಕೂಲವಾಗುತ್ತಿದೆ. ಇದರ ಜೊತೆಗೆ ಯಾರಿಗೆ ಯೋಜನೆಯ ಉಪಯೋಗ ದೊರೆಯುತ್ತಿಲ್ಲ, ಅವರಿಗೂ ಈ ಯೋಜನೆಗಳ ಅನುಕೂಲವಾಗುವಂತೆ ಮಾಡಬೇಕು ಎಂದು ಹೇಳಿದರು.
ಹಂಚಿನಾಳ ಗ್ರಾಮದ ಮುದುಕಮ್ಮ ಮೌಲಪ್ಪ ಮಾದರ್ ಎಂಬ ಮಹಿಳೆಯು ಗೃಹಲಕ್ಷ್ಮಿ ಹಣದಿಂದ ಒಂದು ಹಸು ಪಡೆದು, ಹಾಲನ್ನು ಮಾರಿ, ಪ್ರತಿ ತಿಂಗಳಿಗೆ 9 ಸಾವಿರ ದುಡಿಯುತ್ತಿದ್ದಾರೆ. ಇದರ ಜೊತೆಗೆ ಗೃಹಲಕ್ಷ್ಮಿಯ 2 ಸಾವಿರ ಸೇರಿ ಒಂದು ತಿಂಗಳಿಗೆ 10 ರಿಂದ 12 ಸಾವಿರ ಹಣ ಸಂಪಾದಿಸುತಿದ್ದಾರೆ. ಹಾಗೆ ಗಂಗಮ್ಮ ದೊಡ್ಡಯ್ಯ ಹಿರೇಮಠ್ ರವರು, ಗೃಹಲಕ್ಷ್ಮಿ ಹಣದಿಂದ ಹೊಸದಾಗಿ ಬಟ್ಟೆ ಅಂಗಡಿಯನ್ನ ತೆಗೆದು ಸ್ವಯಂ ಉದ್ಯೋಗವನ್ನು ಪ್ರಾರಂಭ ಮಾಡಿರುವುದು ತುಂಬಾ ಸಂತೋಷವಾಗಿದೆ. ಶಕ್ತಿ ಯೋಜನೆಯನ್ನ ಉಪಯೋಗಿಸಿಕೊಂಡು ಮಹಿಳೆಯರು, ವಿವಿಧ ದೇವಸ್ಥಾನಗಳ ವೀಕ್ಷಣೆಗೆ ತೆರಳುತ್ತಿದ್ದಾರೆ. ಇದರಿಂದ ಸಣ್ಣ ಸಣ್ಣ ವ್ಯಾಪಾರವು ಆಗುತ್ತದೆ. ಚಿಕ್ಕ ವ್ಯಾಪಾರದಿಂದ ಹೆಚ್ಚಿನ ಜಿಎಸ್ಟಿ ಸಂಗ್ರಹಣೆಯಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಯಾವಾಗ ಮಹಿಳೆಯರು ಸ್ವಯಂ ಅಭಿವೃದ್ಧಿಯಾಗುತಾರೆ, ಅವಾಗ ಹಳ್ಳಿ, ರಾಜ್ಯ, ದೇಶದ ಅಭಿವೃದ್ಧಿಯಾಗುತ್ತದೆ. ವಿಷೇಶವಾಗಿ ಯುವಕರು, ಮಹಿಳೆಯರು ಯಾವಾಗ ಸ್ವಯಂ ಉದ್ಯೋಗವಂತರಗುತ್ತಾರೆ, ಅವಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಅವರು ಮಾತನಾಡಿ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿರುವ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿವೆಯೇ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಹಣದಿಂದ ಹಸು ತಂದು ಹೈನುಗಾರಿಕೆ ಪ್ರಾರಂಭಿಸಿರುವುದು, ಬಟ್ಟೆ ಅಂಗಡಿ ತೆರೆದಿದ್ದು ಹಾಗೂ ಮಕ್ಕಳ ಶಿಕ್ಷಣಕ್ಕೆ‌ ಬಳಕೆ ಮಾಡಿರುವುದು ಮತ್ತು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮೂಲಕ ವಿವಿಧ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳನ್ನು ನೋಡೊರುವ ಬಗ್ಗೆ ಮಹಿಳಾ ಫಲಾನುಭವಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗೃಹಲಕ್ಷ್ಮಿ ಹಣದಿಂದ ಫಲಾನುಭವಿ ಆರಂಭಿಸಿರುವ ಬಟ್ಟೆ ಅಂಗಡಿಗೆ ಭೇಟಿ: ಹಂಚಿನಾಳ ಗ್ರಾಮದ ಗಂಗಮ್ಮ ದೊಡ್ಡಯ್ಯ ಹಿರೇಮಠ ಎಂಬುವವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮ್ಮ ಮನೆಯಲ್ಲೇ ಆರಂಭಿಸಿರುವ ಬಟ್ಟೆ ಅಂಗಡಿಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಅವರು ಭೇಟಿ ನೀಡಿ, ಅಂಗಡಿಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಬಳಿಕ ಬಟ್ಟೆ ಖರೀದಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ನಾಗರಜ ಅರಳಿ ಹಾಗೂ ಅಮರೇಶ ಗಾಂಜಿ, ಕುಷ್ಟಗಿ ತಾಲ್ಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಫಾರೂಖ್ ದಲಾಯತ್, ಜಿಲ್ಲಾ ಸಮಿತಿ ಸದಸ್ಯರಾದ ಶಾರದಾ ಕಟ್ಟಿಮನಿ, ಕುಷ್ಟಗಿ ತಾ.ಪಂ ಇಓ ಪಂಪಾಪತಿ ಹಿರೇಮಠ ಸೇರಿದಂತೆ ತಾಲ್ಲೂಕು ಸಮಿತಿ ಸದಸ್ಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...