ads
Search This Blog
Wednesday, 26 February 2025
ಪ್ರಯಾಗರಾಜ್ ಅಪಘಾತ ಪ್ರಕರಣ; ಗಾಯಾಳು ಹಾಗೂ ಮೃತರ ಕುಟುಂಬಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ
Monday, 24 February 2025
ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪತ್ರಿಕೆಗಳು ಸಹಕಾರಿ
ಪತ್ರಿಕೆ ಓದುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶಕ್ಕೆ ಚಾಲನೆ
ಕಲಬುರಗಿ: ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚಳವಾಗಲಿದೆ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.
ಕಲಬುರಗಿಯ ಪತ್ರಕರ್ತರ ಸಭಾಂಗಣದಲ್ಲಿ ಸೋಮವಾರ ಜರುಗಿದ ಪ್ರಜಾ ಸುದ್ದಿ ಕನ್ನಡ ದಿನಪತ್ರಿಕೆ ಜಿಲ್ಲಾ ಮಟ್ಟದ ಪತ್ರಿಕೆಗಳ ಓದುಗರ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಷ್ಟಪಟ್ಟು ಸಂಪಾದಿಸಿದ ಜ್ಞಾನ ಗಳಿಸಿದ ಸಂಪತ್ತಿಗಿಂತ ಮಿಗಿಲಾದುದಾಗಿದೆ. ಪತ್ರಿಕೆಗಳನ್ನು ಓದುವುದರಿಂದ ಐಎಎಸ್ ಮತ್ತು ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.
ಸಮಾಜ ಪರಿವರ್ತನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಿ ವೈಚಾರಿಕತೆಯನ್ನು ಬೆಳೆಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಜಾ ಸುದ್ದಿ ಪತ್ರಿಕೆಯ ಸಂಪಾದಕ ಶರಣಬಸಪ್ಪ ಕೆ.ಸೂಗೂರ ಮಾತನಾಡಿ, ಓದುಗರ ಸಮಾವೇಶ ಮಾಡುವ ಮೂಲಕ ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡಬೇಕು ಎಂದು ವಿವರಿಸಿದರು.
ಸಾಮಾಜಿಕ ಕಾರ್ಯಕರ್ತ ಬಾವರಾಜ ಎಂ. ರಾವೂರ ಮುಖ್ಯ ಅತಿಥಿಯಾಗಿದ್ದರು. ಇದೇವೇಳೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪ್ರಭು ಸೋನಿ, ಶೇಖರ್ ಸೇಡಂ, ದೇವೇಂದ್ರಪ್ಪ ಕಟ್ಟಿಮನಿ, ಅಯಾಜುದ್ದೀನ್, ಧನರಾಜ್ ದೊಡ್ಡಮನಿ, ರಾಜಕುಮಾರ ದಣ್ಣೂರ, ರವಿ ಪೂಜಾರಿ, ಬಸವರಾಜ್ ಪಾಸ್ವಾನ್ , ಸುರೇಶ್ ದೇವಿಂದ್ರಪ್ಪ, ಅವಿನಾಶ್ ದೇವನೂರ್ ಅವರನ್ನು ಸತ್ಕರಿಸಲಾಯಿತು. ಡಾ. ಸುಖದೇವಿ ಗಂಟೆ ನಿರೂಪಿಸಿ ವಂದಿಸಿದರು. ಸೈದಮ್ಮ ಶಿವಗಂಗಾ ಪ್ರಾರ್ಥನೆಗೀತೆ ಹಾಡಿದರು.
ಪತ್ರಿಕೆ ಓದುವ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಡಿ ಪ್ರಶಿಕ್ಷಣಾರ್ಥಿಗಳು ದಿನಪತ್ರಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ವಿನೂತನವೆನಿಸಿತು. ಇದಕ್ಕೂ ಮುನ್ನ ನಮಗೆಷ್ಟು ಗೊತ್ತು ಕನ್ನಡ ದಿನಪತ್ರಿಕೆ ಓದುಗರ ಮಾದರಿ ಸ್ಪರ್ಧೆ ನಡೆಸಿದ್ದು ಕೂಡ ವಿಶೇಷವೆನಿಸಿತು.
ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ - ಮುಖ್ಯಮಂತ್ರಿ ಸಿದ್ದರಾಮಯ್ಯ
Saturday, 22 February 2025
ಸಂತೋಷಕ್ಕೆ ಸ್ವಾಗತಿಸಿ, ಒತ್ತಡಕ್ಕೆ ಅಂತ್ಯ ಹಾಡಬೇಕಿದೆ: ಬಿ.ಕೆ ಶಕ್ತಿಕಾಂತ
ಶ್ರೀಶೈಲಕ್ಕೆ ವಿಶೇಷ ಬಸ್ಗಳ ವ್ಯವಸ್ಥೆ : ಸೌಲಭ್ಯ ಪಡೆಯಲು ಸೂಚನೆ
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಿ* *ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ*
ಕಷ್ಟದ ಜೀವನ ಶಿಸ್ತಿನ ಪಾಠಶಾಲೆ: ಶ್ರೀ ರಂಭಾಪುರಿ ಜಗದ್ಗುರುಗಳು
ಶರಣರು ಸಾಧಿಸಿದ ಲಿಂಗಯೋಗವು ಸರ್ವಶ್ರೇಷ್ಠ ಯೋಗ: ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು
ಬಸವಕಲ್ಯಾಣ: “ಹನ್ನೆರಡನೇ ಶತಮಾನದಲ್ಲಿ ಗುರು ಬಸವಾದಿ ಶರಣರು ಸಾಧಿಸಿದ ಲಿಂಗಯೋಗ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಯೋಗವಾಗಿದೆ” ಎಂದು ಪೂಜ್ಯ ಶ್ರೀ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಅಭಿಮತ ವ್ಯಕ್ತಪಡಿಸಿದ್ದಾರೆ.
ಅವರು ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣದ ವತಿಯಿಂದ ಹಮ್ಮಿಕೊಂಡ ಅನುಭವ ಮಂಟಪ ಸಂಸತ್ತು 7ನೇ ಅದಿವೇಶನದ ಮೊದಲನೇ ಗೋಷ್ಟಿಯಲ್ಲಿ ಮಾತನಾಡುತ್ತಾ. “ಲಿಂಗಯೋಗವೆಂದರೆ ಕೇವಲ ಆಧ್ಯಾತ್ಮಿಕ ಸಾಧನೆಗೆ ಮಾತ್ರ ಸೀಮಿತವಲ್ಲ. ಇದು ಜೀವನ ಪರಿವರ್ತನೆಯ ಶಕ್ತಿ ಹೊಂದಿರುವ ಪ್ರಾತ್ಯಕ್ಷಿಕ ಯೋಗವಾಗಿದೆ” ಎಂದು ಅವರು ವಿದ್ವತ್ತಿನಿಂದ ವಿವರಿಸಿದರು.
ಶರಣರು ವಚನಸಾಹಿತ್ಯದಲ್ಲಿ ಬೋಧಿಸಿದ ಷಟಸ್ಥಲವು ಅಂಗ ಲಿಂಗರ ಸಾಮರಸ್ಯಕ್ಕೆ ಭದ್ರ ಬುನಾದಿಯಾಗಿದೆಯಲ್ಲದೆ ಇದರಲ್ಲಿ ವಿಜ್ಞಾನ ಅಡಗಿದೆ. ಪ್ರತಿಯೊಬ್ಬ ಸಾಧಕರು ಶಿವಯೋಗ ಮಾರ್ಗವನ್ನು ಅನುಸರಿಸಿದರೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದೆಂದರು.
ಇಷ್ಟಲಿಂಗ ಸಾಧನೆಯಿಂದ ದೇಹ ಶುದ್ಧಿಯಾಗುತ್ತದೆ. ಪ್ರಾಣಲಿಂಗ ಸಾಧನೆಯಿಂದ ಮನ ಶುದ್ಧಿಯಾಗುತ್ತದೆ. ಭಾವಲಿಂಗ ಸಾಧನೆಯಿಂದ ಆತ್ಮಶುದ್ಧಿಯಾಗಿ ಸಾಧಕನ ಇಡೀ ದೇಹ ಸರ್ವಾಂಗ ಲಿಂಗವಾಗಲು ಸಹಕಾರಿಯಾಗಿದೆ ಪ್ರತಿಯೊಬ್ಬರು ಸಾಧಿಸಲು ಮುಂದಾಗಬೇಕು ಎಂದರು.
ಕೇವಲ ಧಾರ್ಮಿಕ ಕ್ರಿಯೆಗೆ ಸೀಮಿತರಾಗಬಾರದು ಎಂದು ಕಿವಿ ಮಾತು ಹೇಳಿದರಲ್ಲದೆ ಶಿವಯೋಗ ಸಾಧಿಸುವ ಸಾಧಕರಿಗೆ ವಿಶೇಷ ತರಬೇತಿ ನೀಡಲು ನಾವು ಕಾರ್ಯಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಶರಣರು ಮಠ ಸಂಸ್ಕೃತಿ ಹುಟ್ಟು ಹಾಕಿಲ್ಲ, ಜಗದ್ಗುರು ಪದವಿ ಹುಟ್ಟು ಹಾಕಿಲ್ಲ. ಶರಣರದು ಮಹಾಮನೆ ಕಲ್ಪನೆ ಇದೆ. ಮಹಾಮನೆ ಎಂಬುದು ವಿಶಾಲವಾಗಿತ್ತು, ಅದರೊಳಗೆ ಅನುಭವ ಮಂಟಪ ಚಿಂತನೆ ನಡೆಯುತ್ತಿತ್ತು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಗುಣತೀರ್ಥ ವಾಡಿ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ “ಇಂದಿನ ಯುಗದಲ್ಲಿ ಮಾನವನಿಗೆ ಶಾಂತಿ, ಸಮಾನತೆ ಮತ್ತು ನೈತಿಕತೆಯ ಅವಶ್ಯಕತೆ ಇದೆ. ಶರಣರ ಲಿಂಗಯೋಗವೇ ಅದಕ್ಕೆ ಮೂಲ ಪರಿಹಾರ” ಎಂದು ಅವರು ಅಭಿಪ್ರಾಯಪಟ್ಟರು.
ಅನುಭವ ಮಂಟಪದ ಆಶಯವು ಸಂಸ್ಕಾರ, ಸಹೋದರ, ಸಮಾನತೆ, ಸಂಘಟನೆಯಿಂದ ಕೂಡಿತ್ತು. ಬಸವಣ್ಣನವರು ಒಬ್ಬ ಮನಃಶಾಸ್ತ್ರೀಯ ಗುಣ ಹೊಂದಿದ್ದರಿಂದಲೇ ಸರ್ವರನ್ನು ತನ್ನತ್ತ ಸೆಳೆದು ಸಮುದಾಯಿಕ ಲಿಂಗಯೋಗ ಸಾಧನೆ ಮಾಡಲು ಸಾಧ್ಯವಾಯಿತು.
ಪೂಜ್ಯ ಶ್ರೀ ಡಾ. ಸಿದ್ಧರಾಮ ಬೆಲ್ದಾಳ ಶರಣರು ಶ್ರೇಷ್ಟ ಲಿಂಗಾನುಭಾವಿಗಳಾಗಿದ್ದು ಅವರ ಜ್ಞಾನಾನುಭವನ್ನು ಸಾಧಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು, ಸತ್ಯದೇವಿ ಮಾತಾಜಿ, ಗಂಗಾದಾರ ದೇವರು, ಸತ್ಯಕ್ಕ ಮಾತಾಜಿ ಬಂದವರ ಓಣಿ, ಬಸವ ದೇವರು ಸವದತ್ತಿ, ಶ್ರೀಕಾಂತ ಸ್ವಾಮಿ ಬೀದರ, ಉಪಸ್ಥಿತರಿದ್ದರು.
Friday, 21 February 2025
ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು
ಗುರುದ್ರೋಹಿ ಕನ್ಹೇರಿ ಸ್ವಾಮಿಗಳು: ಬಹಿರಂಗ ಕ್ಷಮೆ ಯಾಚಿಸಲಿ : ಡಾ. ಚನ್ನಬಸವಾನಂದ ಜಗದ್ಗುರುಗಳು
ಬೀದರ: ಮಹಾರಾಷ್ಟçದ ಕೋಲ್ಹಾಪುರ ಸಮೀಪದ ಕನ್ಹೇರಿ ಮಠವು ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಮತ್ತು ಶೂನ್ಯ ಪೀಠದ ಪರಂಪರೆಯ ಮಠ. ಶರಣರಾದ ಶ್ರೀ ಕನ್ಹೇರಿ ಕಾಡಸಿದ್ದೇಶ್ವರರು ಅಪ್ಪಟ ಬಸವ ಭಕ್ತರು. ಆದರೆ ಆ ಶರಣ ಪರಂಪರೆಯ ಪೀಠದ ಮೇಲೆ ಕುಳಿತಿರುವ ಈಗಿನ ಮಠಾಧೀಶರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಶರಣರ ಪರಂಪರೆಯನ್ನೇ ಅದೃಶ್ಯಗೊಳಿಸಿದ್ದಾರೆ. ಇತ್ತಿಚಿಗೆ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊAದರಲ್ಲಿ ಬಸವ ಭಕ್ತರನ್ನು ತಾಲಿಬಾನಿಗಳೆಂದು ಆರೋಪಿಸಿದ್ದು, ಭಕ್ತರೋಬ್ಬರು ನಿಮ್ಮ ಮಠವು ವೈದಿಕವೋ ಅಥವಾ ಅವೈದಿಕವೋ ಎಂದು ಪ್ರಶ್ನೆ ಕೇಳಿದಾಗ ಅದನ್ನು ಕೇಳಲು ನೀಯಾರು? ಎಂದು ಸ್ವಾಮಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ವಚನಗಳನ್ನು ಬೊಗಳು ಬರೀ ಹಂಗೆ ಪ್ರಶ್ನೆ ಕೇಳುತ್ತಿದ್ದಿಯಲ್ಲ ಎಂದು ದುರಹಂಕಾರದಿAದ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅವಮಾನ ಮಾಡಿದ್ದಾರೆ.
Thursday, 13 February 2025
ಧರ್ಮಾಚರಣೆಗಳು ಬೇರೆಯಾದರೂ ಆತ್ಮ ಚೈತನ್ಯ ಒಂದೆ - ಹಾರಕೂಡ ಶ್ರೀ
ಚಿಂಚೋಳಿ : ನಾವು ಆಚರಿಸುವ, ಅನುಸರಿಸುವ, ಧರ್ಮಾಚರಣೆಗಳು ಬೇರೆ ಬೇರೆಯಾದರೂ ಎಲ್ಲರೊಳಗಿರುವ ಆತ್ಮ ಚೈತನ್ಯ ಒಂದೆ ಆಗಿರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
Friday, 7 February 2025
ಡಾ. ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮಕ್ಕೆ ದ್ರೋಹ: ತಕ್ಷಣ ಒಕ್ಕೂಟ ಅಧ್ಯಕ್ಷಕ್ಕೆ ರಾಜೀನಾಮೆ ನೀಡಲಿ – ಶಿವರಾಜ ಪಾಟೀಲ್ ಅತಿವಾಳ ಆಕ್ರೋಶ
ಬೀದರ : ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಡಾ. ನಾಡೋಜ ಬಸವಲಿಂಗ ಪಟ್ಟದ್ದೆವರು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಹಿರಿಯ ಲಿಂಗಾಯತ ನಾಯಕ ಶಿವರಾಜ ಪಾಟೀಲ್ ಅತಿವಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ಇಂದು ಶೋಧವಾಣಿ ಯೊಂದಿಗೆ ಮಾತನಾಡುತ್ತ ಭಾಲ್ಕಿ ಹಿರೇಮಠ ಸಂಸ್ಥಾನದ ಗೌರವವನ್ನು ಪೂಜ್ಯ ಬಸವಲಿಂಗ ಪಟ್ಟದ್ದೆವರು ಕಳೆಯುತ್ತಿರುವುದು ಖೇದಕರ ಸಂಗತಿ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಹುತ್ವ ಭಾರತ ಸಮಾವೇಶದಲ್ಲಿ ಭಾಗವಹಿಸಿ ಅವರೆ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಯಾರು ಭಾರತೀಯ ಸಂಸ್ಕೃತಿಯ ಉತ್ಸವಕ್ಕೆ ಹೋಗಬಾರದು ಎಂದು ನುಡಿದರು. ಮುಂದುವರೆದು ಯಾರು ಭಾಗವಹಿಸುತ್ತಾರೋ ಅವರು ಕೊರಳಿನಲ್ಲಿ ಕಟ್ಟಿರುವ ಲಿಂಗವನ್ನು ಬಿಚ್ಚಿಟ್ಟು ಹೋಗಬೇಕು ಹಾಗೂ ವಚನ ಸಾಹಿತ್ಯವನ್ನು ಬಳಸುವಂತಿಲ್ಲ ಎಂದು ತಾಕ್ಕಿತು ಮಾಡಿರುವ ಮಾತು ಪಟ್ಟದ್ದೆವರು ಮರೆತ್ತಿದ್ದಾರೆಯೇ ಎಂದು ಅತಿವಾಳ ಆಕ್ರೋಶ ವ್ಯಕ್ತಪಡಿಸಿದರು. ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನದ ಪೂಜೆ ಅವರ ಉತ್ತರಾಧಿಕಾರಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾಲ್ಕಿ ತಮ್ಮ ಮಠದ ಎದುರುಗಡೆ ಚಾಲನೆ ಕೊಟ್ಟರು, ಎಂತಹ ದ್ರೋಹ ವಿಡಂಬನೆ ಅಂದರೆ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಾನಿಧ್ಯ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ವಹಿಸಿದರು.
ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಮಾಡಿದು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಆದರೆ ಬಸವಲಿಂಗ ಪಟ್ಟದ್ದೆವರು ತಮ್ಮ ಮಠದ ಅಭಿವೃದ್ಧಿ ಯೋಜನೆ ಮೂಲ ಮಂತ್ರವಾಗಿಸಿಕೊಂಡು ಇಂದು ಎಲ್ಲರ ಕೆಂಗಣ್ಣಿಗೆ ಗುರಿಯಾದರು, ಆರೆಸಸ್ ಮುಖಂಡ ಶ್ರೀ ಬಸವರಾಜ ಪಾಟಿಲ ಸೇಡಂ ಅವರ ಸಂಸ್ಥೆಯ ಫಲಾನುಭವಿಗಳು ಆದ ಭಾಲ್ಕಿ ಮಠ ಇಂದು ಲಿಂಗಾಯತ ಧರ್ಮ ಮತ್ತು ಬಸವ ತತ್ವ ಸಿದ್ದಾಂತ ಹಾಳು ಸ್ವಾರ್ಥಕ್ಕಾಗಿ ಮಾಡುತ್ತಿದೆ. ಈ ಪದ್ದತಿಯನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪಟ್ಟದ್ದೆವರ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ ನೀಡಿದರು.
ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ಸಂಸ್ಕೃತಿಯನ್ನು ಬಿಟ್ಟು, ಆರಎಸ್ಎಸ್ ಸಂಸ್ಕೃತಿಯನ್ನು ತಮ್ಮ ಮಠದಲ್ಲಿ ಅಳವಡಿಸಿಕೊಂಡು, ಲಿಂಗಾಯತ ಧರ್ಮದ ತತ್ವಗಳನ್ನು ಗಾಳಿಗೆ ತೂರುತ್ತಿರುವ ಬಸವಲಿಂಗ ಪಟ್ಟದ್ದೆವರು ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯು ಲಿಂಗಾಯತ ಸಮುದಾಯದ ಕ್ಷೇಮವನ್ನು ನೋಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿಯೂ ಭಾಗವಹಿಸಲು ಹಿಂದೇಟು ಹಾಕಿದರು, ಬೀದರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಇವರು ಭಾಲ್ಕಿಯ ತಮ್ಮ ಮಠದಲ್ಲಿ ಪ್ರಚಾರ ಸಭೆ ಇಟ್ಟುಕೊಂಡು ತಾವಿಬ್ಬರೂ ಗುರು ಶಿಷ್ಯ ತಮ್ಮ ಮಠದಲ್ಲಿಯೇ ಇರಲಿಲ್ಲ ಗೈರಾದರು, ಇದು ಇವರ ಇಬ್ಬಂಗಿ ತನ ,ಹೀಗಾಗಿ ಅವರ ಮುಖವಾಡವನ್ನು ಸಮಾಜದ ಮುಂದೆ ಕಳಚಿ ಬಿದ್ದಿದೆ ಎಂದು ಶಿವರಾಜ ಪಾಟೀಲ್ ಅತಿವಾಳ ಪಟ್ಟದ್ದೆವರ ವಿರುದ್ಧ ಹರಿಹಾಯಿದರು.
“ಒಕ್ಕೂಟದ ಉದ್ದೇಶವನ್ನು ಮರೆತು, ವ್ಯಕ್ತಿಗತ ಲಾಭದ ಕಡೆಗೆ ಗಮನ ಹರಿಸುವ ಈ ನಡೆ ಅಸ್ಥಿರತೆಯನ್ನು ಉಂಟುಮಾಡುತ್ತದೆ. ಲಿಂಗಾಯತ ಧರ್ಮದ ಹಿತವನ್ನು ಕಾಯುವುದಾದರೆ, ಅವರು ತಕ್ಷಣ ರಾಜೀನಾಮೆ ನೀಡಿ ತಮ್ಮ ಗೌರವ ಉಳಿಸಿಕೊಳ್ಳಬೇಕು” ಎಂದು ಪಾಟೀಲ್ ಒತ್ತಾಯಿಸಿದರು.
ಈ ಬೆಳವಣಿಗೆಯ ಹಿನ್ನೆಲೆ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಠಾಧೀಶರ ಒಕ್ಕೂಟದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಶೀಘ್ರವೇ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಲ್ಲಾ ಲಿಂಗಾಯತ ಮುಖಂಡರು ಆಗ್ರಹಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಸಂದೇಶಗಳನ್ನು. ಪಟ್ಟದ್ದೆವರ ನಿಲುವು ಕಾದು ನೋಡೋಣ..
Thursday, 6 February 2025
ಪೂಜ್ಯ ಗಂಗಾ0ಬಿಕೆಯ ವಚನವಿಜಯೋತ್ಸವಕ್ಕೆ ಧಿಕ್ಕಾರ : ಬಸವಣ್ಣನವರ ಹೆಸರಿಗೆ ಕಳಂಕ: ಶಿವರಾಜ ಪಾಟೀಲ್ ಅತಿವಾಳ ಎಚ್ಚರಿಕೆ
ಬೀದರ : ಇತ್ತಿಚೆಗೆ ಕಲಬುರಗಿಯಲ್ಲಿ ಆಯೋಜಿಸಿದ ಬಹುತ್ವ ಭಾರತ ಸಮಾವೇಶದಲ್ಲಿ ಒಂದು ಮಾತನಾಡಿ ಇಂದು ನುಡಿದಂತೆ ನಡೆಯದ ಪೂಜ್ಯರು ಮೊದಲು ತಾವು ಬಸವಣ್ಣನವರು ಕೊಟ್ಟ ವಚನವನ್ನು ಪಾಲಿಸಲಿ ಆ ಮೇಲೆ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಪೂಜ್ಯ ಗಂಗಾ0ಬಿಕೆಯ ವಚನ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿರುವ ಹಿರಿಯ ಲಿಂಗಾಯತ ನಾಯಕ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟಿçಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಈ ಕಾರ್ಯಕ್ರಮ ಲಿಂಗಾಯತ ಧರ್ಮದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಒಳಗೊಳಗೆ ರಾಷ್ಟಿçಯ ಸ್ವಯಂ ಸೇವಕರ ಧ್ಯೇಯೋಧ್ಯೆಶ್ಯ ಇಟ್ಟುಕೊಂಡು ಬಸವಣ್ಣನವರ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಸಮಾಜವು ತೀವೃವಾಗಿ ಖಂಡಿಸುತ್ತದೆ ಎಂದು ಶಿವರಾಜ ಪಾಟೀಲ ಕಿಡಿಕಾರಿದ್ದಾರೆ.
ಅವರು ಇಂದು ಶೋಧವಾಣಿಯೊಂದಿಗೆ ಮಾತನಾಡಿದ ಪಾಟೀಲ್, “ಬಸವಣ್ಣನವರ ತತ್ವಗಳು ಸಮಾನತೆ, ಸತ್ಯ ಮತ್ತು ಧರ್ಮನಿಷ್ಠೆಯ ಮೇಲೆ ಆಧಾರಿತವಾಗಿವೆ. ಆದರೆ, ಗಂಗಾAಬಿಕೆಯ ಈ ನಡೆ ಲಿಂಗಾಯತ ಸಮಾಜವನ್ನು ತಪ್ಪು ದಾರಿಗೆ ತಳ್ಳುವ ಪ್ರಯತ್ನವಾಗಿದೆ. ಇದು ಧರ್ಮದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದ್ದು, ಸ್ವಾರ್ಥ ಮತ್ತು ರಾಜಕೀಯ ಉದ್ದೇಶ ಹೊಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗಂಗಾAಬಿಕೆ ಬಸವಣ್ಣನವರ ಹೆಸರಿಗೆ ಕಳಂಕ ತರುತ್ತಿರುವ ಈ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು. ಲಿಂಗಾಯತ ಧರ್ಮದ ಶುದ್ಧತೆಯನ್ನು ಕಾಪಾಡಲು, ಸಮಾಜದ ಎಲ್ಲರೂ ಈ ರೀತಿಯ ದೋಷಯುಕ್ತ ಕಾರ್ಯಕ್ರಮಗಳನ್ನು ಖಂಡಿಸಬೇಕು” ಇತ್ತಿಚಿಗೆ ಭಾರತೀಯ ಉತ್ಸವ ರಥಕ್ಕೆ ಪೂಜೆ ಮಾಡಿ ಬೀದರನಲ್ಲಿ ಆರ್ಎಸ್ಎಸ್ ಪ್ರಾಯೋಜಿತ ಕಾರ್ಯಕ್ರಮಕ್ಕೆ ಚಾಲನೇ ನೀಡಿದು ಇವರ ನಡೆಯನ್ನು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ವಚನ ವಿಜಯೋತ್ಸವಕ್ಕೆ ಯಾರು ಸಹಕಾರ ನೀಡದೆ ಲಿಂಗಾಯತ ಸಮಾಜದ ಬಾಂಧವರು ವಿರೋಧಿಸಿ ಧಿಕ್ಕರಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ತಿಂಗಳ ೧೦ ಮತ್ತು ೧೧, ೧೨ ರಂದು ಬೀದರ್ ಜಿಲ್ಲೆಯಲ್ಲಿ ಬಸವಗಿರಿಯಲ್ಲಿ ನಡೆಯಲಿರುವ ವಚನ ವಿಜಯೋತ್ಸವಕ್ಕೆ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳು ಸಹಕರಿಸಬಾರದು ಎಂದು ಮನವಿ ಮಾಡಿರುವ ಪಾಟೀಲ್, “ಲಿಂಗಾಯತ ಧರ್ಮದ ಶುದ್ಧತೆ ಉಳಿಯಬೇಕಾದರೆ, ಈ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕು” ಎಂದು ಒತ್ತಾಯಿಸಿದರು.
ಹಾಗೇ ಗಂಗಾAಬಿಕೆ ಅವರಿಗೆ ಸಹಕರಿಸುತ್ತಿರುವ ದುಷ್ಟ ಶಕ್ತಿಗಳಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದ ಶಿವರಾಜ ಪಾಟೀಲ್, “ಲಿಂಗಾಯತ ಧರ್ಮದ ವಿರುದ್ಧ ನಡೆಯುವ ಪ್ರತಿಯೊಂದು ಚಟುವಟಿಕೆಗೆ ತಕ್ಕ ಪ್ರತಿರೋಧ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಬಸವಣ್ಣನ ದ್ರೋಹಿಗಳು
ಬಹುತ್ವ ಸಂಸ್ಕೃತಿ ಸಮಾವೇಶದಲ್ಲಿ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ ಸೇಡಂ ಅವರ ಆರೆಸಸ್ ಪ್ರೋತ್ಸಾಹಿತಾ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಯಾರು ಹೋಗಬಾರದು ಎಂದು ೧೯ ನೇ ಜನವರಿ ಭಾಷಣ ಮಾಡಿ ಮರು ದಿವಸ ೨೦ ನೇ ಜನವರಿ ಬೀದರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ವಾಹನಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟು ಬಸವ ತತ್ವ ಸಿದ್ದಾಂತಕ್ಕೆ ದ್ರೋಹ ಬಗೆದಿದ್ದಾರೆ. ಅದು ಸಾಕಾಗಿಲ್ಲ ಎಂದು ಮತ್ತೆ ಸೇಡಂ ನಗರದಲ್ಲಿ ಹಮ್ಮಿಕೊಂಡಿದ್ದ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸಾನಿಧ್ಯ ವಹಿಸಿದ್ದರು. ಅದೇ ಉತ್ಸವದಲ್ಲಿ ಡಾ ಎಂಎ ಕಲ್ಬುರ್ಗಿ ಹತ್ಯ ಮಾಡಿದ್ದವರು ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದರು ಎಂದು ಸುದ್ದಿ ಇದೆ. ಇಂತಹ ಮನಸ್ಥಿತಿ ಅಕ್ಕಂದಿರು ಯಾವ ಮುಖ ಇಟ್ಟುಕೊಂಡು ವಚನ ವಿಜಯೋತ್ಸವ ಆಚರಿಸುತ್ತಾರೆ ಅನ್ನೋದು ಸೋಜಿಗ. ಇಂತಹ ಬಹುಮುಖಿ ನಾಟಕ ಆಡಿ ಲಿಂಗಾಯತರಿAದ ದೇಣಿಗೆ ಪಡೆದು ಬಸವ ದ್ರೋಹ ಮಾಡುತ್ತಿದ್ದಾರೆ. ಇವರ ಮಾತು ಯಾರು ಕೇಳುತ್ತಿಲ್ಲ, ಅದಕ್ಕೆ ಆರೆಸಸ್ ಪ್ರಾಯೋಜಿತ ಸೇಡಂ ಉತ್ಸವಕ್ಕೆ ಲಿಂಗಾಯತರು ಬೆಂಬಲ ಕೊಟ್ಟಿಲ್ಲ, ಅದನ್ನು ಸಂಪೂರ್ಣ ವಿಫಲ ಆಗಿದೆ ಸನ್ಮಾನ್ಯ ಶೋಭಾ ಕರಂದ್ಲಾಜೆ ಅವರು ವ್ಯಥೆ ಪಟ್ಟಿದ್ದಾರೆ. ಆರೆಸಸ್ ಕುತಂತ್ರಕ್ಕೆ ಲಿಂಗಾಯತರು ತಕ್ಕ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ಮೋಸದ ವಚನ ವಿಜಯೋತ್ಸವ ಆಚರಿಸುತ್ತಿರುವ ಕುತಂತ್ರಿ ಗಂಗಾ0ಬಿಕೆ ಅವರಿಗೆ ಮುಖವಾಡ ಕಳಚಿ ಬೀದರ ಲಿಂಗಾಯತರು ಬುದ್ಧಿ ಕಲಿಸುತ್ತಾರೆ .
ಇದೇ ಸಂದರ್ಭದಲ್ಲಿ, ಈ ವಚನ ವಿಜಯೋತ್ಸವದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಭಾಗವಹಿಸಬಾರದು. ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದು ಪಾಟೀಲ್ ಒತ್ತಾಯಿಸಿದ್ದು, ಶಿಕ್ಷಣ ಇಲಾಖೆಯ ಡಿಡಿಪಿಐ, ಆಯುಕ್ತರು ತಕ್ಷಣವೇ ಈ ಕುರಿತಾದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮತ್ತು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿಯಾಗಿ ಮಕ್ಕಳ ಶಿಕ್ಷಣಕ್ಕೆ ಇಂಥಹ ಸಮಾರಂಭಗಳು ಬೀದರನಲ್ಲಿ ಬಳಸಿಕೊ ಳ್ಳುತ್ತಿರುವುದು ಹಾಗೂ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗುತ್ತದೆ ಎಂದು ಶಿವರಾಜ ಪಾಟೀಲ ತಿಳಿಸಿದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಲಿಂಗಾಯತ ಮುಖಂಡರು ಸಭೆ ಸೇರಿ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಬಸವಣ್ಣನವರು ಯಾವ ಸಂಘಟನೆ ವಿರೋಧ ಮಾಡುತ್ತ ಬಂದಿದ್ದೇಯೋ ಆ ಸಂಘಟನೆಯ ಪರವಾಗಿ ಇಂದು ಅನೇಕ ಮಠಾಧೀಶರು ಕಾರ್ಯ ಮಾಡುತ್ತಿದು ಇದು ನಿಲ್ಲಬೇಕು ಎಂದು ಪರೋಕ್ಷವಾಗಿ ಬಸವಣ್ಣನವರ ತತ್ವ ಸಿದ್ದಾಂತವು ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಬೃಹತ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬಸವಂತರಾವ ಬಿರಾದಾರ. ರವಿಕುಮಾರ ಹಾಜರಿದರು.
ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಸಹಕಾರಿ - ಎಸ್.ಆರ್.ಮೆಹರೋಜ್ ಖಾನ್
ಕೊಪ್ಪಳ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಹಾಗೂ ಯುವ ಜನರ ಅಭಿವೃದ್ಧಿಗೆ ಬಹಳಷ್ಟು ಸಹಕರಿಯಾಗಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಹೇಳಿದರು.
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...