ಬೆಂಗಳೂರು :ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಣದ ಜೊತೆ ಜೊತೆಯಲ್ಲಿಯೇ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮಾರ್ಗದರ್ಶನವನ್ನು ಶಿಕ್ಷಕರು ನೀಡಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿಬೇಕು. ಅವರನ್ನು ದೇಶದ ಆಸ್ತಿಯನ್ನಾಗಿ ತಯಾರು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ads
Search This Blog
Monday, 27 January 2025
ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ–ಡಿ.ಕೆ.ಶಿವಕುಮಾರ
Sunday, 26 January 2025
ಸಂವಿಧಾನದ ಆಶಯಗಳನ್ನು ನೆಲೆಗೊಳಿಸಲು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆದಿವೆ-ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್
ದೇಶದ ಅಖಂಡತೆ ಹಾಗೂ ಭದ್ರ ಬುನಾದಿಗೆ ಸಂವಿಧಾನವೇ ಮುಖ್ಯ-ಸಚಿವ ಈಶ್ವರ ಬಿ.ಖಂಡ್ರೆ
ಬೀದರ :- ವಿಶ್ವಕ್ಕೆ ಮಾದರಿಯಾದ ಭಾರತದ ಲಿಖಿತ ಸಂವಿಧಾನದಂತೆ ನಡೆಯುವುದೇ ನಮ್ಮೆಲ್ಲರ ಜವಾಬ್ದಾರಿ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
Saturday, 25 January 2025
ಡಾ ಚೆನ್ನಬಸವ ಪಟ್ಟದೇವರು ಕಟ್ಟಿದ ಬಸವ ತತ್ವ ಕನ್ನಡ ಮಠ ವೈದಿಕ ಕಡೆ ಜಾರುತ್ತಿದೆಯ?
ಡಾ ಚೆನ್ನಬಸವ ಪಟ್ಟದೇವರು ಕಟ್ಟಿದ ಬಸವ ತತ್ವ ಕನ್ನಡ ಮಠ ವೈದಿಕ ಕಡೆ ಜಾರುತ್ತಿದೆಯ?
ಹಿರಿಯ ಮತ್ತು ಕಿರಿಯ ಮಠಾಧೀಶರ ದ್ವಂದ್ವ ನಿಲುವು ಬಸವ ಭಕ್ತರಿಗೆ ಆಘಾತ:
ಬೀದರ : ಜಿಲ್ಲೆಯಲ್ಲಿ ಇಂದು ಬಸವ ತತ್ವದ ಸತ್ವ ಪರೀಕ್ಷೆಯ ಪರ್ವ ಕಾಲದಲ್ಲಿ ಲಿಂಗಾಯತ ಧರ್ಮದ ಅನೂಯಾಯಿಗಳ ಅಘಾತಕಾರಿ ಸನ್ನಿವೇಶವನ್ನು ಎದುರಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಕಿರೀಟ ಪ್ರಾಯವಾದ ಬೀದರ ಜಿಲ್ಲೆಯ ಹೆಸರಾಂತ ಏಕೈಕ ಕನ್ನಡ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ ಭಾಲ್ಕಿ ಸಂಸ್ಥಾನ ಹಿರೇಮಠದ ಇಂದಿನ ಮಠಾಧೀಶರ ನಡೆಯನ್ನು ನೋಡಿದರೆ ವೈದಿಕ ಸಂಪ್ರದಾಯಕ್ಕೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂಬುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಮಠದಲ್ಲಿರುವ ಹಿರಿಯ, ಕಿರಿಯ ಸ್ವಾಮಿಜಿಗಳ ದ್ವಂದ್ವ ನಿಲ್ಲುವೇ ಮೂಲಕಾರಣವಾಗಿದೆ ಇಂದು. ಇಬ್ಬರಲ್ಲಿ ಒಬ್ಬರು ಬಸವತತ್ವಕ್ಕೆ ನಾವು ಒತ್ತು ನೀಡುತ್ತೇವೆ ಎಂದರೆ ಇನ್ನೊಬ್ಬರು ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದು ಇಂದು ಎಲ್ಲೆಡೆ ಬಸವ ಭಕ್ತರಲ್ಲಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆಲ್ಲ ಕಾರಣ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ಸೇಡಂ ಪರ ಮತ್ತು ವಿರೋಧ ದ್ವಂದ್ವ ನಿಲುವು: ದಿನಾಂಕ ೧೯ ರಂದು ಕಲಬುರ್ಗಿಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ ಮಠಾಧೀಶರು ಮತ್ತು ಚಿಂತಕರು ಆಯೋಜಿಸಿದ್ದ " ಬಹುತ್ವ ಸಂಸ್ಕೃತಿ ಭಾರತೋತ್ಸವ "ದಲ್ಲಿ ಲಿಂಗಾಯತ ಧರ್ಮದ ಮಠಾಧೀಶರು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗಾಯತ ಬಸವ ವಿರೋಧಿ ಸಂಘಟನೆ ಆರೆಸಸ್ ಪ್ರಾಯೋಜಿತ ಭಾರತೀಯ ಸಂಸ್ಕೃತಿ ಉತ್ಸವ ವಿರೋಧ ಮಾಡುವದು, ಬುದ್ಧ ಬಸವ ಅಂಬೇಡ್ಕರ್ ಗಾಂಧಿವಾದಿಗಳು ಪ್ರಗತಿಪರ ವಿಚಾರ ಧಾರೆಯ ವಿರೋಧಿ ಕಾರ್ಯಕ್ರಮಕ್ಕೆ ಪ್ರಗತಿಪರರು ಚಿಂತಕರು ಯಾರು ಹೋಗಬಾರದು ಎಂದು ಎಲ್ಲರೂ ಭಾಷಣ ಮುಖಾಂತರ ಆಹ್ವಾನ ಮಾಡಿದ್ದರು. ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಮಠಾಧೀಶ ಒಕ್ಕೂಟದ ಅಧ್ಯಕ್ಷ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದೇವರು ಭಾಲ್ಕಿ ಇವರು ಭಾಗವಹಿಸಿ ಮಾತನಾಡಿ ಈ ಒಂದು ಕಾರ್ಯಕ್ರಮ ಬಸವ ವಿರೋಧಿ ಕಾರ್ಯಕ್ರಮ ಯಾರು ಭಾಗವಹಿಸಬಾರದು ಎಂದು ಕರೆ ಕೊಟ್ಟಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮದ ಹೆಸರಾಂತ ಮಠಾಧೀಶರು ಅಕ್ಕ ಮಾತೆಯವರು ಭಾಗವಹಿಸಿ ಮಾತನಾಡಿದ್ದರು, ಪೂಜ್ಯ ಸಾಣೇಹಳ್ಳಿ ಸ್ವಾಮೀಜಿ, ಪೂಜ್ಯ ಹುಲಸೂರು ಸ್ವಾಮೀಜಿ, ಪೂಜ್ಯ ಕೋರ್ಣೇಶ್ವರ ಸ್ವಾಮೀಜಿ, ಪೂಜ್ಯ ಅಕ್ಕ ಗಂಗಾAಬಿಕೆ ಮುಂತಾದವರು ಭಾಗವಹಿಸಿದರು.
ವಿಪರ್ಯಾಸ ಅಂದರೆ ಮಾರನೇ ದಿನವೇ ೨೦/೦೧/೨೦೨೫ ರಂದು ಕಲ್ಬುರ್ಗಿ ಕಾರ್ಯಕ್ರಮದಲ್ಲಿ ವಿರೋಧ ಮಾಡಿದ್ದ ಪೂಜ್ಯ ಅಕ್ಕ ಗಂಗಾAಬಿಕೆ ಮತ್ತೆ ಅವರೇ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು, ಲಿಂಗಾಯತರ ಬಸವಾದಿ ಶರಣರ ಕೆಂಗಣ್ಣಿಗೆ ಗುರಿಯಾದರು.
ದಿನಾಂಕ ೨೪/೦೧/೨೦೨೫ ರಂದು ಭಾಲ್ಕಿಯಲ್ಲಿ ಮಠದ ಮಠಾಧೀಶ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು. ಭಾಲ್ಕಿ ಹಿರೇಮಠದ ಹಿರಿಯ ಕಿರಿಯ ಮಠಾಧೀಶರು ದ್ವಂದ್ವ ನಿಲುವು ದಿಗ್ಭ್ರಮೆಗೊಳಿಸಿದೆ. ಇವರಿಬ್ಬರಲ್ಲಿ ತತ್ವ ಸಿದ್ದಾಂತದಲ್ಲಿ ಭೇದ ಉಂಟಾಗಿದೆಯ ಎನ್ನುವ ಸಂಶಯ ನಿರಂತರ ಕಂಡು ಬರುತ್ತಿದೆ. ಬಸವಲಿಂಗ ಪಟ್ಟದೇವರು ಪೂಜ್ಯ ಚೆನ್ನಬಸವ ಪಟ್ಟದೇವರ ತತ್ವ ಸಿದ್ದಾಂತ ದಾರಿಯಲ್ಲಿ ನಿಷ್ಠೆಯಿಂದ ನಿರಂತರ ಸಾಗುತ್ತಿದ್ದಾರೆ, ಬಸವ ತತ್ವ ಸಿದ್ದಾಂತ ತಮ್ಮ ಉಸಿರು ಮಾಡಿಕೊಂಡಿದ್ದಾರೆ. ಆದರೆ ವ್ಯವಹಾರಿಕ ಮನಸ್ಥಿತಿ ಇರುವ ಗುರುಬಸವ ಪಟ್ಟದೇವರು ಯಾವಾಗಲೂ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಎಡವಿ ಮಠದ ತತ್ವ ಸಿದ್ದಾಂತಗಳನ್ನು ಪಾಲಿಸುತ್ತಿಲ್ಲ ಅನ್ನೋದು ಮಠದ ಭಕ್ತರ ಅಳಲು. ಗುರುಬಸವ ಪಟ್ಟದೇವರು ಯಾರ ಮಾತು ಕೇಳಲ್ಲ, ಬಸವಲಿಂಗ ಪಟ್ಟದೇವರನ್ನು ಮಾತು ಕೇಳಲ್ಲ, ಅವರಿಗೆ ನಿಯಂತ್ರಣ ಮಾಡುತ್ತಾರೆ, ಆಧ್ಯಾತ್ಮಿಕ ಜ್ಞಾನದ ಕೊರತೆ ಇದೆ, ಸರಿಯಾದ ಶಿಕ್ಷಣ ಆಗಿಲ್ಲ, ಬಸವಾದಿ ಶರಣರ ಸಾಹಿತ್ಯದ ಸಂಪೂರ್ಣ ಅಧ್ಯಯನವು ಇಲ್ಲ, ಅಧ್ಯಯನ ಮಾಡುವ ಮನಸ್ಸು ಇಲ್ಲ ಎಂದು ಮಠದ ಶಿಷ್ಯರ ಅಳಲು. ಆದರೆ ತಮ್ಮ ಮಠದ ವ್ಯವಹಾರ ಆಸ್ತಿ ಹೇಗೆ ವೃದ್ಧಿ ಮಾಡಬೇಕು ಎನ್ನುವ ಸಂಪೂರ್ಣ ವ್ಯವಹಾರಿಕ ಜ್ಞಾನ ಇದೆ. ರಾಜಕೀಯ ಇಚ್ಛಾಶಕ್ತಿ ಇರುವ ಗುರುಬಸವ ಪಟ್ಟದೇವರು ದಿನಾಲು ಸರಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ತಮ್ಮವರ ಕೆಲಸ ಮಾಡುವಂತೆ ಒತ್ತಾಯಿಸುತ್ತಾರಂತೆ, ಹಲವಾರು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಾರದಲ್ಲಿ ಒಂದೆರಡು ಸಲ ಬೆಂಗಳೂರು ವಿಧಾನ ಸೌಧ ಭೇಟಿ ಕೊಟ್ಟು ಅಲ್ಲಿಯ ಸಚಿವರ ಕಚೇರಿಗೆ ಅಲೆದಾಡುತ್ತಾರೆ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೋಳು ಹೊಡೆಯುತ್ತಾರೆ. ರಾಜಕೀಯ ನಾಯಕರನ್ನು ಮತ್ತು ಅಧಿಕಾರಿಗಳನ್ನು ತಮ್ಮ ಮಠದ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸನ್ಮಾನ ಮಾಡಿ ಅವರ ಸಂಬAಧ ಬೆಳೆಸಿಕೊಳ್ಳುವದೆ ಇವರ ಮೂಲ ಉದ್ದೇಶ, ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುವದು ಕಿಂಚಿತ್ತೂ ಇಚ್ಛೆ ಇಲ್ಲ.
ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಥೆ ಮತ್ತು ಸನ್ಮಾನ್ಯ ಶ್ರೀ ಬಸವರಾಜ ಪಾಟಿಲ ಸೇಡಂ ಮುಖಾಂತರ ಆರೆಸಸ್ ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದ ಲಿಂಗಾಯತ ಮಠಗಳನ್ನು ತೆಕ್ಕೆಗೆ ತೆಗೆದುಕೊಂಡು ಬಸವ ತತ್ವ ಸಿದ್ದಾಂತ ಮಸುಕು ಮಾಡುವ ಹುನ್ನಾರ:
ಎರಡು ದಶಕಗಳಿಂದ ಶ್ರೀ ಬಸವರಾಜ ಪಾಟಿಲ ಸೇಡಂ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್, ಪಠ್ಯ ಪುಸ್ತಕ, ಇನ್ನಿತರ ಸಾಮಗ್ರಿಗಳು ಪೂರೈಸಿ ಈ ಭಾಗದ ಶಿಕ್ಷಣ ಸಂಸ್ಥೆಗಳ ಪ್ರಭಾವ ಬಿರುತ್ತಿದ್ದಾರೆ. ಹಲವಾರು ಮಠ ಮಾನ್ಯಗಳು, ಲಿಂಗಾಯತ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚಿ ಅವರನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ಇವರನ್ನು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘಟನೆ ಮಾಡಿ ಸೇಡಂ ಅವರಿಗೆ ಅಧ್ಯಕ್ಷ ಮಾಡಿದ್ದರು, ಇದಕ್ಕೆ ಬಜೆಟ್ ಕೊಡಲಾಗಿತ್ತು, ಇವರ ಕೆಲಸ ಇಷ್ಟೇ ಹಿಂದೂ ಧರ್ಮದ ದೇವಾಲಯಗಳು ಅಭಿವೃದ್ದಿ ಪಡಿಸುವುದು, ಬಸವಾದಿ ಶರಣರ ಇತಿಹಾಸ ಹಾಳು ಮಾಡುವದು, ಲಿಂಗಾಯತ ಮಠಾಧೀಶರಿಗೆ ಬಜೆಟ್ ಕೊಟ್ಟು ಅವರನ್ನು ತಮ್ಮ ಕಡೆ ಸೆಳೆದುಕೊಳ್ಳುವದು.ಹೊಸ ಅನುಭವ ಮಂಟಪದ ಕಟ್ಟಡ ಭೂಮಿ ಪೂಜೆ ಮಾಡುವ ಆಹ್ವಾನ ಪತ್ರಿಕೆಯಲ್ಲಿ ಸನಾತನ ಪರಂಪರಯ ಪುನರುತ್ಥಾನ ಬಸವ ತತ್ವ ಎಂದು ಬರೆದಿದ್ದರು, ಆವಾಗ ಮಠಾಧೀಶರು ಯಾರು ವಿರೋಧ ಮಾಡಿಲ್ಲ. ವೇದಿಕೆಯ ಮೇಲೆ ಗೊ.ರು.ಚ ಅವರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಚಾರ ರಥಗಳಿಗೆ ಚಾಲನೆ ಕೊಡುತ್ತಿರುವವರು ಸೇಡಂ ಅವರ ಹಂಗಿನಲ್ಲಿ ಇದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಕೆಲವು ಲಿಂಗಾಯತ ಮಠಾಧೀಶರು ಬಸವ ತತ್ವ ಸಿದ್ದಾಂತ ವಿರೋಧಿ ಆದ ಕುಂಭಮೇಳದಲ್ಲಿ ಸ್ನಾನಕ್ಕೆ ಪ್ರಯಗರಾಜ್ ಪ್ರಯಾಣ ಬೆಳೆಸಿದ್ದಾರೆ, ಕೆಲವರು ಸ್ನಾನ ಮಾಡಿ ಬಂದಿದ್ದಾರೆ, ಇನ್ನು ಕೆಲವರು ಪ್ರಯಾಗರಾಜ್ ಪ್ರಯಾಣಕ್ಕೆ ಸಜ್ಜಾಗಿದ್ದಾರೆ, ಇವರಿಗೆಲ್ಲ ಆರೆಸಸ್ ಸಂಪೂರ್ಣ ಅಂದರೆ ವಿಮಾನ ಟಿಕೆಟ್, ತಂಗುವ ಸವಲತ್ತು, ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುತ್ತಿದೆ. ಎಂಬ ವದಂತಿ ಹರಿದಾಡುತ್ತಿವೆ.
೯೦% ಪ್ರತಿಶತ ಲಿಂಗಾಯತ ಮಠಗಳು ವ್ಯವಹಾರಿಕ ಆಗಿದ್ದು, ಹಣದ ಆಮಿಷಕ್ಕೆ ಒಳಗಾಗಿ, ಪ್ರಶಸ್ತಿಗಳ ಬಯಕೆಯಲ್ಲಿ ರಾಜಕೀಯ ಪಕ್ಷಗಳ ಹಂಗಿನಲ್ಲಿ ತತ್ವ ಸಿದ್ದಾಂತ ಗಾಳಿಗೆ ತುರುತ್ತಿದ್ದಾರೆ. ಈ ಮಠಗಳು ಕೇವಲ ಲಾಭಕ್ಕಾಗಿ ಬಸವಣ್ಣನವರ ಫೋಟೋ ಬಳಸಿಕೊಳ್ಳುತ್ತಿದ್ದಾರೆ, ಆಂತರಿಕ ಹಿಂದೂ ಬಾಹ್ಯ ಲಿಂಗಾಯತ.ಇವರು ಹಣದ ವ್ಯಾಮೋಹದಲ್ಲಿ ಮಠಗಳನ್ನು ಆರೆಸಸ್ ಸುಪರ್ದಿಗೆ ವಹಿಸಿಕೊಡಲು ಹಿಂಜರಿಯಲ್ಲ. ಕೆಲವೊಂದು ಮಠಗಳು ಸಂಪೂರ್ಣ ಬಸವ ತತ್ವ ಸಿದ್ದಾಂತ ಮೇಲೆ ಸಾಗುತ್ತಿವೆ, ಆ ಮಠಗಳು ತಮ್ಮ ತಮ್ಮ ಧರ್ಮ ಪ್ರಚಾರ ಮಾಡುತ್ತಾ ಯಾವುದೇ ಹಂಗಿಗೂ ಪ್ರಚಾರಕ್ಕೂ ಪ್ರಶಸ್ತಿಗಳಿಗೂ ಹಾತೋರೈದೆ ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಿವೆ.
ಪೂಜ್ಯ ಡಾ ಮಾತೆ ಮಹಾದೇವಿ, ಪೂಜ್ಯ ತೋಟದಾರ್ಯ ಶ್ರೀಗಳು, ಇಲ್ಲಕಲ್ ಶ್ರೀಗಳು ಐಕ್ಯ ಆದ ಮೇಲೆ ಗಟ್ಟಿಯಾಗಿ ಮಾತಾಡುವರು ಯಾರು ಇಲ್ಲ, ಹೋರಾಟ ಮಾಡುವವರು ಯಾರು ಇಲ್ಲ , ಕೆಲವು ಲಿಂಗಾಯತ ಸಂಘಟನೆ ಮುಖಂಡರು ಮಠಾಧೀಶರೆ ರಾಷ್ಟ್ರೀಯ ಬಸವ ದಳ ಒಡೆದಿದ್ದಾರೆ, ಬಸವ ಪ್ರತಿಷ್ಠಾನ ಅಕ್ಕವರ ಮಧ್ಯ ಜಗಳ ಹಚ್ಚಿದ್ದಾರೆ, ಪೂಜ್ಯ ಚಿತ್ರದುರ್ಗ ಶ್ರೀಗಳ ಮೇಲೆ ಹುಸಿ ಕೇಸ್ ಮಾಡಿ ಜೈಲು ಕಳಿಸಿದ್ದಾರೆ. ಇವೆಲ್ಲದರ ಹಿಂದೆ ಕಾಣದ ಕೈಗಳು ಇವೆ, ಅದಕ್ಕೆ ಆರೆಸಸ್ ಬಿಜೆಪಿ ನಾಯಕರ ಕುಮ್ಮಕ್ಕು ಇದೆ.
ಭಾಲ್ಕಿ ಶ್ರೀಗಳು ಪೂರ್ವದಿಂದಲೂ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯನ್ನು ಕಟುವಾಗಿ ವಿರೋಧಿಸುವ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಠಗಳು ಯಾರನ್ನೂ ದೂರವಿಡಬಾರದುˌ ಮಠ ಎಲ್ಲರಿಗೂ ಸೇರಿದ್ದು ಎಂದು ನೆಪ ಹೇಳುತ್ತಲೆ ತಮ್ಮ ತಮ್ಮ ಮಠಗಳಲ್ಲಿ ಬಹುತೇಕ ಮಠಾಧೀಶರು ಹಿಂದುತ್ವವಾದಿ ಹಾಗೂ ಕೋಮುವಾದಿಗಳ ಹಿಂದೂತ್ವ ಬಿತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಉದಾಹರಣೆಗಳು ಇವೆ. -ಡಾ. ಜೆ ಎಸ್ ಪಾಟೀಲ
ಇದು ಕೇವಲ ಭಾಲ್ಕಿ ಮಠ ಒಂದರ ಸಮಸ್ಯೆ ಮಾತ್ರವಲ್ಲ. ನಾಡಿನ ಬಹುತೇಕ ಲಿಂಗಾಯತ ಮಠಗಳು ಮನುವಾದಿಗಳಿಗೆ ಶರಣಾಗತರಾಗಿ ದಶಕಗಳೆ ಕಳೆದುಹೋಗಿವೆ. ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.
ಮಠಾಧೀಶರು ತಮ್ಮ ಇಚ್ಛೆಯಂತೆ ನಡೆಯುವ ಹಾದಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶ್ರೀಮಂತ ರಾಜಕಾರಣಿಗಳ ಕುಟುಂಬದ ಖಾಸಗಿ ಆಸ್ತಿಗಳಾಗಿ ಮಾರ್ಪಟ್ಟಿವೆ.
ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳನ್ನು ನಾಶಗೊಳಿಸದ ಹೊರತು ಕರ್ನಾಟಕದಲ್ಲಿ ಹಿಂದುತ್ವವನ್ನು ಬೆಳೆಸಲು ಸಾಧ್ಯವಿಲ್ಲವೆಂದು ಮನಗಂಡಿರುವ ಹಿಂದುತ್ವವಾದಿಗಳು ಅವುಗಳ ನಾಶಕ್ಕೆ ೨೦ ವರ್ಷಗಳ ಹಿಂದೆಯೆ ಯೋಜನೆಯೊಂದನ್ನು ರೂಪಿಸಿ ಅದರಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಇದರಲ್ಲಿ ಹಿಂದುತ್ವವಾದಿಗಳದೇನೂ ತಪ್ಪಿಲ್ಲ. ಕರ್ನಾಟಕದಲ್ಲಿ ತಮ್ಮ ಪ್ರಮುಖ ವೈರಿಗಳು ಲಿಂಗಾಯತರುˌ ಹಿಂದುತ್ವವನ್ನು ಮುನ್ನೆಲೆಗೆ ತರಬೇಕಾದರೆ ಲಿಂಗಾಯತರನ್ನು ನಾಶಗೊಳಿಸಬೇಕು ಎನ್ನುವ ಹಿಂದುತ್ವವಾದಿಗಳ ಯೋಜನೆ ಅವರ ಪ್ರಕಾರ ಸರಿಯಾದದ್ದೆ.
ಲಿಂಗಾಯತರನ್ನು ನಾಶಗೊಳಿಸುವುದು ಸುಲಭವಲ್ಲವಾದ್ದರಿಂದ ಅವರನ್ನು ಅಪ್ಪಿಕೊಂಡೆ ನಾಶಗೊಳಿಸಬೇಕು ಎನ್ನುವ ಅವರ ಹುನ್ನಾರವೂ ಸರಿಯಾದದ್ದೆ. ಆದರೆ ಅದನ್ನು ತಿಳಿದುಕೊಳ್ಳುವಲ್ಲಿ ಲಿಂಗಾಯತ ಮಠಗಳು ಹಾಗೂ ರಾಜಕಾರಣಿಗಳು ಮತ್ತವರ ಅನುಯಾಯಿಗಳು ಸೋತಿದ್ದಾರೆ.
ಲಿಂಗಾಯತ ತತ್ವಜ್ಞಾನˌ ಸಿದ್ಧಾಂತ ಹಾಗೂ ಸಂಸ್ಕೃತಿಯ ಪರಂಪರಾಗತ ವೈರಿಗಳು ಯಾರು ಎನ್ನುವ ಕನಿಷ್ಠ ಪ್ರಜ್ಞೆ ಲಿಂಗಾಯತ ಮಠಗಳಿಗೆˌ ರಾಜಕಾರಣಿಗಳಿಗೆ ಹಾಗೂ ಜನಸಾಮಾನ್ಯರಿಗೆ ಇಲ್ಲದಿರುವದು ಆ ಸಮುದಾಯದ ದೌರ್ಭಾಗ್ಯವೆ ಹೊರತು ಹಿಂದುತ್ವವಾದಿಗಳ ತಪ್ಪಲ್ಲ. ಹಿಂದುತ್ವವಾದಿಗಳು ತಮಗನ್ನಿಸಿದ್ದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.
ಪರಮ ಸ್ವಾರ್ಥ : ಲಿಂಗಾಯತ ಮಠಾಧೀಶರ ಈ ನಡೆಗೆ ಮುಖ್ಯ ಕಾರಣ ತಾತ್ವಿಕ ಬದ್ದತೆಯ ಕೊರತೆ ಹಾಗೂ ಪರಮ ಸ್ವಾರ್ಥ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಡೀ ಲಿಂಗಾಯತ ಸಂಸ್ಕೃತಿಯು ನಾಶಗೊಳ್ಳುವಲ್ಲಿ ಯಾವುದೆ ಅನುಮಾನವಿಲ್ಲ. ಈಗಾಗಲೆ ಹಿಂದುತ್ವದ ನಶೆಯ ಕಾರಣ ಲಿಂಗಾಯತ ಯುವಕರು ಶಿಕ್ಷಣ ಪೂರೈಸುವಲ್ಲಿ ಹಾಗೂ ಉದ್ಯೋಗ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಲಿಂಗಾಯತರ ಕುರಿತು ಮಠಾಧೀಶರಿಗಾಗಲಿˌ ರಾಜಕಾರಣಿಗಳಿಗಾಗಲಿ ಯಾವದೆ ಕಾಳಜಿ ಇಲ್ಲ. ಇನ್ನು ಮುಂದೆಯೂ ಕೂಡ ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.
ಲಿಂಗಾಯತ ಮಠಾಧೀಶರು ತಮಗೆ ಅನುಕೂಲಕರವಾದದ್ದನ್ನು ಮಾಡಬಲ್ಲರೆ ಹೊರತು ಸಮುದಾಯದ ಹಿತರಕ್ಷಣೆಯ ಕಾರ್ಯ ಮಾಡಲಾರರು.
ಈಗಾಗಲೇ ಆರೆಸಸ್ ಲಿಂಗಾಯತ ಧರ್ಮ ಮಾನ್ಯತೆ ಅಲ್ಪಸಂಖ್ಯಾತ ಸೌಲಭ್ಯ ಕೇಂದ್ರ ಸರ್ಕಾರ ಮುಖಾಂತರ ತಿರಸ್ಕಾರ ಮಾಡಿಸಿತ್ತು. ಆರೆಸಸ್ ಬಸವಕಲ್ಯಾಣದಲ್ಲಿ ಜರುಗಿದ ಲಿಂಗಾಯತ ಮಹಾಸಮಾವೇಶಕ್ಕೂ ಸಹಾಯ ಸಹಕಾರ ಕೊಟ್ಟು ಪ್ರಚಾರ ಮಾಡಿ ಬೀದರ ಜಿಲ್ಲೆಯ ನಾಲ್ಕು ಶಾಸಕರು ಗೆಲ್ಲುವ ಹಾಗೆ ರೂಪು ರೇಷಗಳನ್ನು ಹಾಕಿ ಜಯ ಸಾಧಿಸಿತ್ತು. ಆರೆಸಸ್ ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಮಾಡಲು ಜಗದ್ಗುರು ಪೂಜ್ಯ ಜಯ ಮೃತ್ಯುಂಜಯ ಸ್ವಾಮೀಜಿ ಕುಮ್ಮಕ್ಕು ಕೊಟ್ಟು ಲಿಂಗಾಯತ ಧರ್ಮ ಹೋರಾಟಕ್ಕೆ ಹೊಡೆತ ಕೊಟ್ಟಿದೆ. ಪ್ರಸ್ತಾವ ತಿರಸ್ಕಾರ ಆಗಿ ಏಳು ವರ್ಷ ಆದರೂ ಕೂಡ ಯಾವುದೇ ಸಂಘಟನೆ ಆಗಲಿ ಮಠಾಧೀಶರಾಗಲಿ ಹೋರಾಟ ಮಾಡುವ ಮನಸ್ಸು ಮಾಡುತ್ತಿಲ್ಲ. ಇವಾಗ ಭಾರತೀಯ ಸಂಸ್ಕೃತಿ ಉತ್ಸವ ಕೂಡ ಬಸವ ತತ್ವ ಸಿದ್ದಾಂತ ಪ್ರಚಾರ ಹೊಡೆತ ಕೊಡುವ ಉದ್ದೇಶ ಆಗಿದೆ. ಇನ್ಮುಂದೆ ಲಿಂಗಾಯತರು ಬಸವಾದಿ ಶರಣರ ಅನುಯಾಯಿಗಳು ಯಾವ ಮಠಗಳ ಮೇಲೆ ಅವಲಂಬಿತ ಆಗದೆ ಲಿಂಗಾಯತ ಧರ್ಮ ಪ್ರಚಾರ ಮಾಡಬೇಕು, ಆರೆಸಸ್ ಮಾಡುತ್ತಿರುವ ಲಿಂಗಾಯತ ವಿರೋಧಿ ಬಸವ ತತ್ವ ವಿರೋಧ ನಿಲುವುಗಳಿಗೆ ಗುರಿ ಆಗಬಾರದು. ಮಠಾಧೀಶರು ಭಾರತೀಯ ಸಂಸ್ಕೃತಿ ಉತ್ಸವ ಸೇಡಂ ಹೋದರೆ ಹೋಗಲಿ ಬಿಡಲಿ, ಆದರೆ ಲಿಂಗಾಯತರು ಬಸವ ಅನುಯಾಯಿಗಳು ಯಾರು ಹೋಗಬಾರದು, ಈ ನಿಲುವಿನಿಂದ ಆರೆಸಸ್ ಹುನ್ನಾರಕ್ಕೆ ಮತ್ತು ಮಠಾಧೀಶರ ದ್ವಂದ ನಿಲುವಿಗೆ ಹೊಡೆತ ಬೀಳುತ್ತದೆ.
ಪ್ರತಿದಿನ ಬೆಳಿಗ್ಗೆ ಸೂರ್ಯ ಪೂರ್ವದಲ್ಲಿ ಉದಯ ಆಗುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ತಮ್ಮ ಅಭಿಪ್ರಾಯ. ಮಠಾಧೀಶರು ಅಷ್ಟೇ ಅಲ್ಲ ನಮ್ಮ ಜಾಗತಿಕ ಲಿಂಗಾಯತ ಮಹಾಸಭಾದ ಬಹು ಸಂಖ್ಯಾತ ಪದಾಧಿಕಾರಿಗಳ ಬದ್ಧತೆ ಬಸವ ತತ್ವಗಳಿಗಿಂತ ಮನುವಾದಿ ವೈರಸ್ ಅಂಟಿಸಿಕೊಂಡ ಬಿಜೆಪಿ ಪಕ್ಷಕ್ಕೆ ಎಂಬುದು ಸ್ಪಷ್ಟ. ಜಾಗತಿಕ ಲಿಂಗಾಯತ ಮಹಾಸಭಾ ಬಲಿಷ್ಠ ಸಂಘಟನೆ ಆಗಬೇಕಾದರೆ ಮನುವಾದಿ ಮನಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದರೆ ಮಾತ್ರ ಸಾಧ್ಯ. ನಾನು ಕುರುಡುತನದಿಂದ ಮನುವಾದಿಗಳು ವಿರೋಧಿಸುತ್ತಿಲ್ಲ. ನಾನು ಆರ್.ಎಸ್.ಎಸ್ ಮತ್ತು ಬಿಜೆಪಿ ಒಳಗೆ ಹೋಗಿ ನೋಡಿಕೊಂಡು ಅವರ ಚಿಂತನೆಗಳು ಇಷ್ಟವಾಗದೆ ಹೊರಗೆ ಬಂದಿದ್ದೇನೆ. ಮೊದಲು ನಮ್ಮೆಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಬಸವ ತತ್ವದ ಬಗ್ಗೆ ಸೈದ್ಧಾಂತಿಕ ಬದ್ಧತೆ ಬರಬೇಕು.
-ಪ್ರೂ.ವೀರಭದ್ರಯ್ಯ.ಬೆಂಗಳೂರು
ಗುರು ಬಸವಣ್ಣ ಅವರ ತತ್ವ ಸಿದ್ದಾಂತ ಮೇಲೆ ಇಂತ ಇಂತ ಮಠಾಧಿಪತಿ ಗಳಿಂದ ಒಳಗೆ ದ್ರೋಹ ಅಗತ ಇದೆ ಇಂಥ ಗುರು ದ್ರೋಹಿ ಧರ್ಮ ದ್ರೋಹಿ ಗಳಿಗೆ ಅಪ್ಪ ಬಸವಣ್ಣ ಕೊಟ್ಟ ಲಿಂಗ ಸಮಾನತೆ ಇವರ ಸ್ವಾರ್ಥ ಸಾಧನೆಗಾಗಿ ಬಳಕೆ ಅಗತಾ ಇದೆ ಇಂತ ಧರ್ಮ ದ್ರೋಹಿ ಗೆ ದಿಕ್ಕಾರ ಅಕುವ ಮನಸ್ಥಿತಿ ಯಾರಿಗೂ ಇಲ್ವಾ ನಮ್ಮ ಬಸವ ಧರ್ಮ ಯಾರೇ ತಪ್ಪು ಮಾಡಿದರೂ ಅದನ್ನು ಸಕಾರಾತ್ಮಕವಾಗಿ ಕಂಡಿಸುವ ಸಿದ್ದಾಂತ ಅಕ್ಕ ಗಂಗಾಬಿಕ್ ಮೇಲೆ ವಾಗ್ದಾಳಿ ಆಯ್ತು ಆದ್ರೆ ಈ ಸ್ವಾಮೀಜಿ ಕೇಳುವ ದೈರ್ಯ ಯಾರಿಗೂ ಇಲ್ವಾ ನಮ್ಮ ಧರ್ಮದಲ್ಲಿ ಇಂತ ಗುರು ಗಳಿಂದ ಇನ್ನು ಅಪ್ಪಟ ಬಸವ ಧರ್ಮ ಅನುಯಾಯಿ ಶ್ರೀಗಳು ದೊಡ್ಡವರೆ ಹಾಗೆ ಇನ್ನು ನಾವು ಯಾಕ್ ಪಾಲನೆ ಮಾಡ್ ಬೇಕು ಅಂತ ತಿಳಿದು ಇವರಂತೆ ಅವರು ಮನುವಾದಿಗಳ ಜೊತೆ ಸೇರಿದರೆ ಒಳ್ಳೆಯದು ಅನ್ನೋ ಅನಿಸಿಕೆ ಬರ್ತಾ ಇದೆ ಆದಷ್ಟು ಇಂತ ನಾಟಕ ಕಂಡರೆ ತಕ್ಕ ಪಾಠ ಕಲಿಸಿ
-ಶ್ರೀ ಓಂಕಾರೇಶ್ವರ ಸ್ವಾಮೀಜಿ ಕಲ್ಯಾಣ ಬಸವಣ್ಣ ಮಠ ಮಂಡ್ಯ
ರಾಯಚೂರ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ-2025
ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು-ಕುಲಪತಿ ಡಾ.ವಿ.ಎಸ್.ಬಿರಾದಾರ
ಗಣರಾಜ್ಯೋತ್ಸವ" ಅಮೃತ ಮಹೋತ್ಸವದ ಸಂಭ್ರಮ
76 ನೇ ಗಣರಾಜ್ಯೋತ್ಸವ" ಅಮೃತ ಮಹೋತ್ಸವದ ಸಂಭ್ರಮ"
ನಾನು ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಕೆಲಸ ಮಾಡಿಲ್ಲ. ಭಾರತದ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ ಸಂಶಯವಿದ್ದರೆ ಹೋಗಿ ಸಂವಿಧಾನ ಓದಿಕೊಳ್ಳಿ
ನಮ್ಮ ಗಣರಾಜ್ಯೋತ್ಸವಕ್ಕೆ 75 ವರ್ಷಗಳ ಪೂರೈಸಿ ಅಮೃತ್ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂಭ್ರಮದ ಹಿಂದಿನ ಹೋರಾಟ ಬಹಳ ಕಷ್ಟಕರವಾದ ದಿನಗಳನ್ನು ಎದುರಿಸಬೇಕಾಗಿತ್ತು. ಏಕೆಂದರೆ ನಮ್ಮ ಭಾರತದ ಸ್ವಾತಂತ್ರ್ಯದ ಮೊದಲು ನಮ್ಮ ದೇಶ ಬ್ರಿಟಿಷರ ಆಳ್ವಿಕೆಯಲ್ಲಿ ಇತ್ತು .ಬ್ರಿಟಿಷರಿಂದ ಮುಕ್ತಿ ಪಡೆಯಬೇಕಾದರೆ ಸತತವಾದ ಹೋರಾಟ ಬಲಿದಾನ, ತ್ಯಾಗ ,ಅತಿಯಾದ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು .1947 ಆಗಸ್ಟ್ 15 ರಂದು.ಆದರೆ ಕೇವಲ ಸ್ವಾತಂತ್ರ್ಯ ಪಡೆದರೆ ಸಾಲದು ದೇಶಕ್ಕೆ ಸಂವಿಧಾನದ ತುಂಬಾ ಅವಶ್ಯಕವಾಗಿತ್ತು. ಡೋಮಿನಿಯನ್ ವ್ಯವಸ್ಥೆ ಕ್ರಿ.ಶ. 1931 ರ ಕಾಯ್ದೆಯ ಪರಿಣಾಮವಾಗಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಕೆನಡಾ, ಮುಂತಾದ ಡೋಮಿನಿಯನ್ ರಾಜ್ಯಗಳು ಸ್ಥಾಪನೆಯಾದವು. ಆ ರಾಜ್ಯಗಳ ಆಂತರಿಕ ವಿಷಯದಲ್ಲಿ ಸ್ವಾತಂತ್ರ್ಯ ಪಡೆದವು . ಆದರೆ ವಿದೇಶಾಂಗ ಆಡಳಿತದ ನೀತಿಯಲ್ಲಿ ಸ್ವಾತಂತ್ರ್ಯವಾಗಿರಲಿಲ್ಲ. ಇಡೀ ಪ್ರಪಂಚದ ಮುಂದುವರೆದ ರಾಷ್ಟ್ರಗಳ ಪರಿಸ್ಥಿತಿ ಈ ರೀತಿಯಾಗಿದ್ದಾಗ. ನಮ್ಮ ಭಾರತ ದೇಶದ ಪರಿಸ್ಥಿತಿ ತುಂಬಾ ಕಷ್ಟಕರವಾದ ವಿಷಯವಾಗಿತ್ತು . ಅಂತಹ ಸಮಯದಲ್ಲಿ ಭಾರತೀಯರಲ್ಲಿ ಜಾತಿ ,ಧರ್ಮ, ಮೇಲು, ಕಿಳು ,ಶ್ರೀಮಂತ, ಬಡವ , ಎಂಬ ಮೂಢನಂಬಿಕೆ ಹೆಚ್ಚಾಗಿತ್ತು. ಇಂತಹ ವಿಷಯಗಳನ್ನೆಲ್ಲಾ ಕೇಂದ್ರಬಿಂದುವಾಗಿಟ್ಟುಕೊಂಡು ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರಲಾಲ್ ನೆಹರು ಅವರ ಸರ್ಕಾರದ ನೇತೃತ್ವದಲ್ಲಿ ಭಾರತಕ್ಕೆ ತನ್ನದೇ ಆದ ಒಂದು ಸಂವಿಧಾನದ ಅಗತ್ಯವಾಗಿತ್ತು. ಆದರಿಂದ 1946 ಮೇ 19 ರ "ಕ್ಯಾಬಿನೆಟ್" ಮಿಷನ್ ಯೋಜನೆ ಪ್ರಕಾರ ಸಂವಿಧಾನದ ರಚನಾ ರಾಜ್ಯಾಂಗ ಸಭೆಯನ್ನು ರಚಿಸಲಾಯಿತು. ಸಂವಿಧಾನ ಸಮಿತಿಯ ಪ್ರಮುಖರು ಡಾ: ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷರು ಡಾ: ಬಿ. ಆರ್. ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಇತರ ಸದಸ್ಯರಾದ ಅಲ್ಲಾಡಿ ಕೃಷ್ಣಮಚಾರಿ ಅಯ್ಯಂಗಾರ್, ಮಹಮ್ಮದ್ ಸೈದುಲ್ಲಾ, ಕೆ.ಎಂ. ಮುನ್ಸಿ ,ಬಿ.ಪಿ .ಖೇತಾನ್ ,ರಾಜಗೋಪಾಲಚಾರಿ ಹೀಗೆ ಏಳು ಜನ ಸದಸ್ಯರನ್ನಾಗಿ ನೇಮಿಸಲಾಯಿತು. ಈ ನಿಯಮದ ಪ್ರಕಾರದಂತೆ ಸಂವಿದಾನ ರಚಿಸಲು ಯಾರು ಸಹಾಯ ಮಾಡಲಿಲ್ಲ ಏಕೆಂದರೆ ಸಂವಿಧಾನ ರಚಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಅಂತಹ ಸಮಯದಲ್ಲಿ ದೀನದಲಿತರ ನಾಯಕ, ದೇಶದ ಪ್ರಥಮ ಕಾನೂನಿನ ಮಂತ್ರಿ, ಸಮಾಜ ಸುಧಾರಕ ಡಾ: ಬಿ.ಆರ್ .ಅಂಬೇಡ್ಕರ್ ಅವರು ಮುಂದಾದರು. ಇವರು ದೇಶದ ಸಂವಿಧಾನವನ್ನು ಹಗಲು ಇರುಳು ಎಂಬದೆ. ತಿಂಡಿ, ಊಟ, ನೀರು, ನಿದ್ರೆ ,ಇಲ್ಲದೆ ಸತತವಾಗಿ ಕುಳಿತು ಭಾರತ ದೇಶದ ಸಂವಿಧಾನ ರಚನೆ ಮಾಡಿದ್ದರು .1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದ ಸಂವಿಧಾನದಲ್ಲಿ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು .ಹಾಗೂ ಲಿಖಿತ ಸಂವಿಧಾನವಾಗಿರುತ್ತದೆ.
ಭಾರತ ದೇಶದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ,ಪ್ರಜಾಸತ್ತಾತ್ಮಕ ,ಮತ್ತು ಗಣತಂತ್ರ, ಸಮಾನತೆ , ಭ್ರಾತೃತ್ವ ,ನ್ಯಾಯ ,ರಾಷ್ಟ್ರವನ್ನಾಗಿ ಸ್ಥಾಪಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .ಇಲ್ಲಿನ ಎಲ್ಲಾ ಪ್ರಜೆಗಳಿಗೆ ಯಾವುದೇ ಜಾತಿ ,ಧರ್ಮ, ಮೇಲು, ಕೀಳು ,ಬೇದ ,ಭಾವವಿಲ್ಲದೆ ಸಮಾನವಾಗಿ ಶೈಕ್ಷಣಿಕವಾಗಿ ,ಆರ್ಥಿಕವಾಗಿ, ಸಾಮಾಜಿಕವಾಗಿ , ರಾಜಕೀಯವಾಗಿ , ನ್ಯಾಯಯುತವಾಗಿ, ನ್ಯಾಯವನ್ನು ಒದಗಿಸಿ ಅವರ ಆಚಾರ ,ವಿಚಾರ, ಅಭಿವ್ಯಕ್ತಿ ,ನಂಬಿಕೆ ,ಸ್ವಾತಂತ್ರ್ಯ ,ಸ್ಥಾನಮಾನ, ಭಾರತ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗೂ ದೇಶದ ಕೂಲಿ ಕಾರ್ಮಿಕರಿಗೂ ಎಲ್ಲರಿಗೂ ಸಮಾನವಾದ ಅವಕಾಶಗಳ ಸಮಾನತೆಯನ್ನು ದೊರಕಿಸಿ ವೈಯಕ್ತಿಕ ಘನತೆ ಮತ್ತು ದೇಶದ ಆಯ್ಕೆ ಎಲ್ಲರಲ್ಲಿ ಭಾತೃತ್ವವನ್ನು ಪ್ರೋತ್ಸಾಹಿಸಿ ದೇಶದ ಎಲ್ಲಾ ಜನತೆಗೆ ಒಗ್ಗಟ್ಟಿನಿಂದ ಸ್ವಾಭಿಮಾನದಿಂದ ನ್ಯಾಯಯುತವಾಗಿ ಬದುಕಬೇಕೆಂಬುದನ್ನು ಈ ನಮ್ಮ ಭಾರತ ದೇಶದ ಸಂವಿಧಾನ ಮಹತ್ವದ ಸೂಚನೆ ತಿಳಿಸುತ್ತದೆ.ಈ ಮೇಲೆ ಬಳಸಿರುವ ಸಂವಿಧಾನ ಪೀಠಿಕೆಯಲ್ಲಿನ ಪದಗಳ ಅರ್ಥ ಹೀಗಿರುತ್ತವೆ.
1. ಸಾರ್ವಭೌಮ ರಾಷ್ಟ್ರ :ಎಂದರೆ ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸ್ವಾತಂತ್ರ್ಯ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದರ್ಥ.
2. ಜಾತ್ಯಾತೀತ ರಾಷ್ಟ್ರ :ಎಂದರೆ ಭಾರತವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಸ್ವೀಕರಿಸಿಲ್ಲ ಎಂದರ್ಥ.
3. ಸಮಾಜವಾದಿ :ಎಂದರೆ ಸಮಾಜದಲ್ಲಿ ಸಾಮಾಜಿಕವಾಗಿ ತಾರತಮ್ಯವಿಲ್ಲದಿರುವುದು ಎಂದರ್ಥ.
4. ಪ್ರಜಾಪ್ರಭುತ್ವ :ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರೂಪಿಸಿದ್ದ ಆಡಳಿತ.
5. ಗಣರಾಜ್ಯ :ಎಂದರೆ ಒಂದು ರಾಷ್ಟ್ರದ ಮುಖ್ಯೆಸ್ಥರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚುನಾವಣೆ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ/ ಗಣರಾಜ್ಯ ಎನ್ನುವರು.
6. ಸಮಾನತೆ: ಎಂದರೆ ಸಮಾಜದ ಎಲ್ಲಾ ವರ್ಗ ಧರ್ಮದವರನ್ನು ಸಮಾನವಾಗಿ ನೋಡಿಕೊಳ್ಳುವುದು.
7. ಭ್ರಾತೃತ್ವ :ಎಂದರೆ ದೇಶದಲ್ಲಿನ ಪ್ರತಿಯೊಬ್ಬರು ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಜೀವಿಸುವುದು ಎಂದರ್ಥ.
8. ನ್ಯಾಯ :ಎಂದರೆ ಎಲ್ಲಾ ಜನರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ ಒದಗಿಸುವುದು ಎಂದರ್ಥ.
ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದು ಆದರೆ ಪ್ರಜಾಪ್ರಭುತ್ವದ ಮೂಲ ಆಧಾರ ನಮ್ಮ ಭಾರತ ದೇಶದ ಸಂವಿಧಾನ ಅಷ್ಟೇ ಅಲ್ಲದೆ ಜಗತ್ತಿನಲ್ಲಿ ಅತೀ ದೊಡ್ಡ ಲಿಖಿತ ಸಂವಿಧಾನ ಹೊಂದಿದೆ .ಡಾ: ಬಿ.ಆರ್ .ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟಿರುವ ನಮ್ಮ ಭಾರತ ದೇಶದ ಸಂವಿಧಾನದಲ್ಲಿ ಎಲ್ಲಾ ವರ್ಗಗಳು ಎಲ್ಲಾ ಸ್ಥರದ ಜನರ ಹಿತವಿದೆ ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರಬುನಾದಿಯ ನಮ್ಮ ಸಂವಿಧಾನವಾಗಿದೆ. ಇಡೀ ಪ್ರಪಂಚದಲ್ಲಿಯೇ ವಿಶೇಷವಾದ ಸಂವಿಧಾನ ಹೊಂದಿರುವಂತಹ ನಮ್ಮ ಸಂವಿಧಾನವನ್ನು ಅಂದರೆ ಭಾರತದ ದೇಶದ ಸಂವಿಧಾನ ಬರೆಯಲು ಸುಮಾರು 2 ವರ್ಷ 11 ತಿಂಗಳು 18 ದಿನಗಳ ಕಾಲ ತೆಗೆದುಕೊಂಡಿತ್ತು.
ನಮ್ಮ ಭಾರತ ದೇಶದ ಸಂವಿಧಾನದಲ್ಲಿ ಮೂರು ಪ್ರಕಾರದ ಹಂಚಿಕೆಗಳಿವೆ.
1.ಕೇಂದ್ರ ಪಟ್ಟಿ 99 ವಿಷಯಗಳಿವೆ ಉದಾರಣೆಗೆ ರಕ್ಷಣಾ ವ್ಯವಸ್ಥೆ, ವಿದೇಶಾಂಗ ನೀತಿ, ಯುದ್ಧ ,ಶಾಂತಿ, ಅಂಚೆ ,ತಂತಿ, ನಾಣ್ಯ ,ಬ್ಯಾಂಕಿಂಗ್, ವಿದೇಶ ವ್ಯವಹಾರ ಇತ್ಯಾದಿ.
2. ರಾಜ್ಯಪಟ್ಟಿಯಲ್ಲಿ 61 ವಿಷಯಗಳ ಅಡಕವಾಗಿ ಉದಾಹರಣೆಗೆ ಸಾರ್ವಜನಿಕರ ಶಾಂತಿ, ಸ್ಥಳೀಯ ಸರ್ಕಾರ, ಶಿಕ್ಷಣ, ಗ್ರಂಥಾಲಯ ,ವ್ಯವಸಾಯ ಪಶುಪಾಲನೆ, ಭೂಕಂದಾಯ ನೀರಾವರಿ ,ವಾಹನಗಳ ತೆರಿಗೆ, ಇತ್ಯಾದಿ.
3. ಸಮವರ್ತಿ ಪಟ್ಟಿಯಲ್ಲಿ 52 ವಿಷಯಗಳಿವೆ ಉದಾಹರಣೆಗೆ ಕ್ರಿಮಿನಲ್ ಕಾಯ್ದೆ ವಿವಾಹ ವಿಚ್ಛೇದ, ಒಕ್ಕಲುತನ, ಕುಟುಂಬ ಯೋಜನೆ, ಕಾರ್ಮಿಕರ ಕಲ್ಯಾಣ, ಇತ್ಯಾದಿ.
ಸಂವಿಧಾನದ ಪ್ರಮುಖ ಕೆಲವು ಅಂಶಗಳು ಸಂವಿಧಾನದಲ್ಲಿ 444 ಕಲಾಂಗಳಿವೆ 395 ವಿಧಿಗಳು 92 ಉಪವಿಧಿಗಳು 12 ಅನುಸೂಚಿಗಳಿವೆ 7635 ತಿದ್ದುಪಡಿಗಳಿವೆ 22 ಭಾಗಗಳು, ನಾಲ್ಕು ( 4 )ಉಪಭಾಗಗಳಿವೆ 114 ದಿನಗಳು ಚರ್ಚಿಸಲಾಗಿತ್ತು . ಇಲ್ಲಿಯವರೆಗೆ 110 ಕ್ಕು ಹೆಚ್ಚು ತಿದ್ದುಪಡಿಗಳು ಆಗಿವೆ.ಸುಮಾರು 8 ಸಾವಿರ ಪುಟಗಳು ಹೊಂದಿಸಲಾಗಿದೆ.
ಎಲ್ಲರಿಗೂ ಸಮಾನವಾದ ಮೂಲಭೂತ ಹಕ್ಕುಗಳು ಸಂವಿಧಾನ ಭಾಗ 3 ವಿಧಿಗಳು 12 ರಿಂದ 35 ರ ವರೆಗಿನ ಒಟ್ಟು 6 ಮೂಲಭೂತ ಹಕ್ಕುಗಳನ್ನು ಹಾಗೂ ಭಾಗ 4A 51A ಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಇಂತಹ ಎಲ್ಲಾ ವಿಷಯಗಳನ್ನು ಹೊಂದಿರುವುದಕ್ಕೆ ಮೂಲ ಕಾರಣ ಪ್ರಪಂಚದ ಅನೇಕ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಸ್ವೀಕಾರ ವ್ಯವಸ್ಥೆಯಾಗಿದೆ .ಡೆಮೋಕ್ರೇಷೀಯೋ ಎಂಬ ಗ್ರೀಕ್ ಪದವು ಡೆಮೊ ಮತ್ತು ಕ್ರೇಷಿಯೋ ಎಂಬ ಎರಡು ಪದಗಳ ಸಂಯೋಗ ಡೆಮೋನ್ ಎಂದರೆ ಪ್ರಜೆಗಳು ಕ್ರೇಷಿಯೋ ಎಂದರೆ ಅಧಿಕಾರ ಡೆಮೋಕ್ರೇಷಿಯೋ ಎಂದರೆ ಪ್ರಜೆಗಳ ಅಧಿಕಾರ ಇದು ಪ್ರಜೆಗಳೇ ಪ್ರಭುಗಳು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ
ಪ್ರತಿ ವರ್ಷ ನಮ್ಮ ದೆಹಲಿಯ ಕೆಂಪುಕೋಟೆಯ ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ನಡೆಯುತ್ತದೆ. ಅಂದವಾದ ಮೆರವಣೆಗೆ ಭಾರತದ ಭವ್ಯವಾದ ಮಿಲಿಟರಿ ಪರಾಕ್ರಮವನ್ನು ಪ್ರತಿಬಿಂಬಿಸುತ್ತದೆ. ಅಂದು ರಾಷ್ಟ್ರಪತಿಗಳು ರಾಷ್ಟಧ್ಜವನ್ನು ಹಾರಿಸುತ್ತಾರೆ .ದೇಶದ ರಕ್ಷಣೆಗೋಸ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಹಾಗೂ ಪರಮವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸುವಲ್ಲಾಗುತ್ತದೆ .! ಈ ದಿನ ಮಹತ್ವದ ದಿನ ಎಂದಿಗೂ ಮರೆಯಲಾಗದ ದಿನವಾಗಿದೆ.ಇಂಥ ಮಹತ್ವದ ಸಂವಿಧಾನವನ್ನು ರಚನಕಾರ ಮಹತ್ವದ ವ್ಯಕ್ತಿ! ಅಂದರೆ ಡಾ. ಬಿ.ಆರ್ .ಅಂಬೇಡ್ಕರ್ ಅವರು ಸತತವಾದ ಪ್ರಯತ್ನದ ಪ್ರತಿಫಲವೇ ಸಂವಿಧಾನದ ರಚನೆಗೆ ಕಾರಣವಾದದ್ದು.
ಇವರು ಜನನ 1891ರ ಏಪ್ರಿಲ್ 14 ರಂದು ಮಹಾರಾಷ್ಟ್ರದ ಅಂಬೇವಾಡಿ (ಮ್ಹೋ)ಎಂಬ ಗ್ರಾಮದಲ್ಲಿ ಜನಿಸಿದ್ದರು. ಇವರು ಪಡೆದಿರುವ ಡಿಗ್ರಿಗಳೆಂದರೆ ಎಂ. ಎ,ಪಿ.ಎಚ್ .ಡಿ ,ಡಿ ಎಸ್.ಸಿ,ಡೀ.ಲೀಟ್, ಎಲ್ . ಎಲ್.ಡಿ,ಬಾರ್.ಅಟ್.ಲಾ, ಒಟ್ಟು ನಾಲ್ಕು ಡಾಕ್ಟರೇಟ್ ಪದವಿ ಪಡೆದಿದ್ದರೂ. ಜೊತೆಗೆ ನಾಲ್ಕು ವೇದಗಳು 18 ಪುರಾಣಗಳು ಅರಿತವರಾಗಿದ್ರು ಜೊತೆಗೆ ಪ್ರಪಂಚದ 14 ವಿದ್ಯಾಧರರಲ್ಲಿ ಮೊದಲನೆಯ ವಿದ್ಯಾಧರರಾಗಿದ್ದರು ಎಂದು ಕರೆಯಲಾಗುತ್ತದೆ. ಜಗತ್ತಿನ ಆರು ಘನಪಂಡಿತರಲಿ ಅಂಬೇಡ್ಕರ್ ಅವರ ಅತ್ಯಂತ ಶ್ರೇಷ್ಠರು ಎಂದು ಕರೆಯಲಾಗುತ್ತದೆ ಹಾಗೂ ವಿಶ್ವದ ಸಮಾಜಶಾಸ್ತ್ರಗಳಾದ ಎನಸೈಕ್ಲೋಪಿಡಿಯಾ 15 ಭಾಗ ಅರಿತವರಾಗಿದ್ದರು.ಅದಕ್ಕಾಗಿಯೆ ಅಲ್ಪಕಾಲಾವಧಿಯಲ್ಲಿ ಸಮಾಜದ ಮಹತ್ತರ ಬದಲಾವಣೆ ಮಾಡಿ ಸಮಾಜದ ನಿರ್ಮಾಣ ನಿರ್ಮಾಪಕರ ಕೀರ್ತಿಗೆ ಪಾತ್ರರಾದವರೆಂದು ಹೇಳಲಾಗುತ್ತದೆ.
ತಾನು ಅನುಭವಿಸಿದ್ದಂತಹ ಅವಮಾನ ಹಿಂಸೆಯನ್ನು ನನ್ನ ಭಾರತದ ಜನರಾದ ನನ್ನ ಮಕ್ಕಳು ಯಾವ ರೀತಿ ಹಿಂಸೆಗೆ ಒಳಗಾಗಬಾರದು ಎಲ್ಲರೂ ಶಿಕ್ಷಣ ಪಡೆದು ಸಂಘಟಿತರಾಗಿ. ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಟ ಮಾಡಿ ನಿಮ್ಮ ಜೀವನವನ್ನು ಸ್ವಾಭಿಮಾನದಿಂದ ಸಮಾಜದಲ್ಲಿ ತಲೆಯೆತ್ತಿ ಬದುಕಬೇಕು ಎಂಬ ಕಾರಣಕ್ಕಾಗಿ ಇಂತಹ ಅನೇಕ ಮಹತ್ವದ ಅಂಶಗಳನ್ನು ಭಾರತದ ಸಂವಿಧಾನದಲ್ಲಿ ರಚಿಸಲಾಗಿರತಕ್ಕಂತ ಅಂಶಗಳು ಮೂಲ ಕಾರಣ ಎಂದು ಹೇಳಬಹುದು.
ಅಂಬೇಡ್ಕರ್ ಹೇಳುವ ಮಾತಾಗಿದೆ ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಸರ್ಕಾರ ಸರಿಯಾಗಿ ನಡೆಸುವವರು ಇಲ್ಲಾ ಎಂದರೆ ಸಂವಿಧಾನ ಸರಿಯಾಗಿ ಕಾಣುವುದಿಲ್ಲ. ಸರ್ಕಾರ ತುಂಬಾ ಸರಿಯಾಗಿ ನಡೆಸುವವರು ಇದ್ದರೆ ಸಂವಿಧಾನ ಸರಿಯಾಗಿ ಇಲ್ಲದಿದ್ದರೂ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ನಮ್ಮ ಸಂವಿಧಾನ ಅತ್ಯಂತ ಉತ್ತಮವಾದ ಸಂವಿಧಾನವಾಗಿದೆ !.
ಮಂದಿರದಲ್ಲಿ ಕುಳಿತಿರುವ. ದೇವರು ತನ್ನ ದೀಪವನ್ನು ತಾನೇ ಹಚ್ಚಿಕೊಳ್ಳಲಿಲ್ಲ ಎಂದ ಮೇಲೆ ನಿಮ್ಮ ಬಾಳಲ್ಲಿ ಹೇಗೆ ಬೆಳಕು ನೀಡಬಲ್ಲ. ಶಿಕ್ಷಣವೇ ಶಕ್ತಿ ಶಿಕ್ಷಣವೇ ಯುಕ್ತಿ, ಶಿಕ್ಷಣವೆಂಬ ಜ್ಯೋತಿ ಬೆಳಗುತ್ತ ಶಿಕ್ಷಣ ಪಡೆಯಿರಿ ! ಶಿಕ್ಷಣ ನೀಡುವವರಾಗಿ ಎಂದು ಹೇಳುತ್ತಾ 76 ನೇಯ ಗಣರಾಜ್ಯೋತ್ಸವ ಅಮೃತ್ ಮಹೋತ್ಸವದ ಹಾರ್ದಿಕ ಶುಭಾಶಯಗಳು..!
-ಶ್ರೀಮತಿ ಬುದ್ಧದೇವಿ ಅಶೋಕ್ ಸಂಗಮ
ತಾ: ಜಿ: ಬೀದರ್
ಫೈನಾನ್ಸ್ ಕಂಪನಿ ಹಾವಳಿ: ಕಿರುಕುಳ ತಾಳಲಾರದೆ ಪಲಾಯನಗೈದ ಗದಗ ಹೊಟೇಲ್ ಉದ್ಯಮಿ
ಗದಗ: ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ಗದಗ ಜಿಲ್ಲೆಯ ಅನೇಕ ಕುಟುಂಬಗಳು ಪಟ್ಟಣವನ್ನು ತೊರೆಯುತ್ತಿವೆ ಎಂದು ಜನರು ದೂರು ನೀಡುತ್ತಿದ್ದಾರೆ. ಹಣಕಾಸು ಕಂಪನಿಗಳು 50,000 ರೂ. ಸಾಲ ನೀಡುವ ಮೊದಲು 1.5 ಲಕ್ಷ ರೂ. ಮೌಲ್ಯದ ಬಾಂಡ್ಗಳನ್ನು ಪಡೆದುಕೊಂಡಿವೆ ಎಂದು ಆರೋಪಿಸಿವೆ.
ಇಂತದ್ದೆ ಒಂದು ಪ್ರಕರಣದಲ್ಲಿ, ಗದಗದ ಹೋಟೆಲ್ ಮಾಲೀಕರೊಬ್ಬರು ಮೈಕ್ರೋಫೈನಾನ್ಸ್ ಕಂಪನಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಫೈನಾನ್ಸ್ ಕಂಪನಿಯ ಕಿರುಕುಳದಿಂದ ತಮ್ಮ ಹೋಟೆಲ್ಗೆ ಬೀಗ ಹಾಕಿ ಕುಟುಂಬದೊಂದಿಗೆ ಬೇರೆ ಪಟ್ಟಣಕ್ಕೆ ಸ್ಥಳಾಂತರಗೊಂಡರು. ಪರಶುರಾಮ್ ಹಬೀಬ್ ಗದಗ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಕ್ಯಾಂಟೀನ್ ಹೊಂದಿದ್ದರು. ಇತ್ತೀಚೆಗೆ ಅವರು ರಹಸ್ಯ ಸ್ಥಳದಿಂದ ತಮ್ಮ ಸ್ನೇಹಿತರಿಗೆ ವೀಡಿಯೊ ಕರೆ ಮಾಡಿ ಹಣಕಾಸು ಕಂಪನಿಯ ಚಿತ್ರಹಿಂಸೆಯನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದರು.
ಪ್ರತಿ ವಾರ ಬಡ್ಡಿಯನ್ನು ಪಾವತಿಸಬೇಕಾಗಿರುವುದರಿಂದ ಈಗ 60 ಲಕ್ಷ ರೂ.ಗಳ ಹೊಣೆಗಾರಿಕೆಯನ್ನು ಹೊಂದಿದ್ದೇನೆ ಎಂದು ಅವರು ಅವರಿಗೆ ತಿಳಿಸಿದರು. ಸಾಲ ಪಡೆದ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಅವರು ಸರಿಯಾಗಿ ಉತ್ತರಿಸಿಲ್ಲ. ಅವರ ಸಹೋದರನಿಗೂ ತಿಳಿದಿಲ್ಲ. ಮಹಿಳಾ ಕಾನ್ಸ್ಟೆಬಲ್ನ ಪತಿ ಸಾಲವನ್ನು ಮರುಪಾವತಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಪರಶುರಾಮ್ ಹೇಳಿದ್ದಾರೆ. ಹಣವನ್ನು ಬೇಗ ಪಾವತಿಸದಿದ್ದರೆ ಪರಶುರಾಮ್ನನ್ನು ಕೊಲೆ ಮಾಡುವುದಾಗಿ ಮಹಿಳಾ ಪೊಲೀಸ್ ಪೇದೆ ಪತಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದರು.
ಪರಶುರಾಮ್ ಅವರಿಗೆ ಸಾಲ ಇದೆ ಅಂತ ನನಗೆ ಗೊತ್ತಿತ್ತು ಮತ್ತು ಕಳೆದ ಕೆಲವು ದಿನಗಳಿಂದ ಅವರು ಆತಂಕಕ್ಕೊಳಗಾಗಿದ್ದರು. ಸಾಲಗಾರರು ತಮ್ಮನ್ನು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ನಮಗೆ ಹೇಳುತ್ತಿದ್ದರು. ಆದರೆ ಅವರ ಪರಿಸ್ಥಿತಿ ಇಷ್ಟೊಂದು ಕೆಟ್ಟದಾಗಿದೆ ಎಂದು ನಮಗೆ ತಿಳಿದಿರಲಿಲ್ಲ. ಅವರು ಬೇರೆ ಊರಿಗೆ ಸ್ಥಳಾಂತರಗೊಂಡಿದ್ದಾರೆ ಮತ್ತು ಯಾವುದೇ ಕರೆಗಳಿಗೆ ಉತ್ತರಿಸುತ್ತಿಲ್ಲ.
ಅವರ ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಚಿಂತಿತರಾಗಿದ್ದಾರೆ. ಇದು ಪರಶುರಾಮ್ ಅವರ ಪ್ರಕರಣ ಮಾತ್ರವಲ್ಲ, ಗದಗದಲ್ಲಿ ಇನ್ನೂ ಅನೇಕರು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾರೆ" ಎಂದು ಪರಶುರಾಮ್ ಅವರ ಆಪ್ತ ಸ್ನೇಹಿತರೊಬ್ಬರು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಶೋಧವಾಣಿ ಕನ್ನಡ ದಿನಪತ್ರಿಕೆ SHODHAVANI KANNADA 25-01-2025
CLICK FOR E-PAPERS http://shodhavani.in/#/e-pape
ಶೋಧವಾಣಿ ಕನ್ನಡ ದಿನಪತ್ರಿಕೆ ಓದಲು ಇ ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಲ್ಲಾ ಸುದ್ದಿಯನ್ನು ಓದಿ. ಹಾಗೇ ದಯವಿಟ್ಟು ನಮ್ಮ ಚಾನೆಲ್ ಸದಸ್ಯರಾಗಿ ಪ್ರೋತ್ಸಾಹ ನೀಡಿ. ನಿಮ್ಮ ಆತ್ಮೀಯ ಸ್ನೇಹಿತರಿಗೆ ಲಿಂಕ್ ಶೇರ ಮಾಡಿ. ಕಾಮೆಂಟ್ ಮಾಡಿ. ಲೈಕ್ ಮಾಡಿ. ಪ್ರೋತ್ಸಾಹ ನೀಡಿ. ಧನ್ಯವಾದಗಳು
Friday, 24 January 2025
ಬ್ರಹ್ಮಪುತ್ರ ನದಿಗೆ ದೊಡ್ಡ ಆಣೆಕಟ್ಟು: ಚೀನಾ ದುಸ್ಸಾಹಸ-ಭಾರತಕ್ಕೆ ಕಂಟಕ!
ವಿಶ್ವದಲ್ಲೇ ಅತಿ ದೊರ್ಡ ಆಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಅದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಹೆಚ್ಚು ಸಮೃದ್ಧಿ ಸಾಧಿಸುವುದು ತನ್ನ ಗುರಿ ಎಂದು ಚೀನಾ ಹೇಳಿಕೊಂಡಿದೆ. ಆದರೆ, ಅಲ್ಲಿನ ತಜ್ಞರೂ ಸೇರಿದಂತೆ ಜಾಗತಿಕ ಮಟ್ಟದ ಹಲವರು ಆ ಆಣೆಕಟ್ಟು ಜನರ ಮೇಲೆ ಮತ್ತು ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿರ್ದಾರೆ. ಭಾರತವೂ ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಟಿಬೆಟ್, ಬಾಂಗ್ಲಾ, ಭಾರತದ ಜನರ ಸುರಕ್ಷತೆ ಮತ್ತು ಪ್ರಕೃತಿ ವಿನಾಶದ ದೃಷ್ಟಿಯಿಂದ ಈ ಡ್ಯಾಮ್ ಅಪಾಯಕಾರಿ ಎಂದರೂ ಚೀನಾ ತನ್ನ ನಿಲುವಿನಿಂದ ಹಿಂದೆಸರಿಯುತ್ತಿಲ್ಲ.
ಬ್ರಹ್ಮಪುತ್ರ ನದಿಗೆ ದೊಡ್ಡ ಆಣೆಕಟ್ಟು: ಚೀನಾ ದುಸ್ಸಾಹಸ-ಭಾರತಕ್ಕೆ ಕಂಟಕ!
ಬ್ರಹ್ಮಪುತ್ರ ಭಾರತದಲ್ಲಿ ಹರಿಯುವ ಪ್ರಮುಖ ನದಿಯಲ್ಲೊಂದು. ಟಿಬೆಟ್ನಲ್ಲಿ ಹುಟ್ಟುವ ಈ ನದಿ, ಭಾರತ ಮತ್ತು ಬಂಗ್ಲಾ ದೇಶದ ಮೂಲಕ ಹರಿದು ಕೊನೆಗೆ ಬಂಗಾಳ ಕೊಲ್ಲಿ ಸೇರುತ್ತದೆ. ಬ್ರಹ್ಮಪುತ್ರ ನದಿಯನ್ನು ಟಿಬೆಟ್ನಲ್ಲಿ ಯಾರ್ಲಂಗ್ ಸಂಗ್ಪೋ ಎಂದು ಕರೆಯುತ್ತಾರೆ. ನದಿ ಕೆಳಭಾಗದಲ್ಲಿ ವಿಶ್ವದ ಅತಿ ದೊಡ್ಡ ಆಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾ ಸರ್ಕಾರದ ಯೋಜನೆ. ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಚೀನಾದ ತ್ರೀ ಜಾರ್ಜಸ್ ಡ್ಯಾಮ್ (ಯಾಂಟ್ಜೆ ನದಿಗೆ ಕಟ್ಟಲಾಗಿದೆ) ಇದು ವಿಶ್ವದ ಅತಿ ದೊಡ್ಡ ಆಣೆಕಟ್ಟಾಗಿದ್ದು, ಜಲವಿದ್ಯುತ್ ಉಪಾದನೆ ಮಾಡಲಾಗುತ್ತಿದೆ. ಯಾರ್ಲಂಗ್ ಸಾಂಗ್ಪೋ ನದಿಯ ಕೆಳಭಾಗದಲ್ಲಿ ಕಟ್ಟಲಾಗುವ ಆಣೆಕಟ್ಟೆಯಿಂದ ಅದರ ಮೂರು ಪಟ್ಟು ಜಲವಿದ್ಯುತ್ ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾದ ಲೆಕ್ಕಾಚಾರ. ಚೀನಾದ ಮಾಧ್ಯಮಗಳು ಇದು ಸುರಕ್ಷಿತ ಯೋಜನೆಯಾಗಿದ್ದು, ಪರಿಸರ ಸಂರಕ್ಷಣೆಯನ್ನು ತನ್ನ ಆದ್ಯತೆಯಾಗಿಸಿಕೊಂಡಿದೆ ಎಂದು ವಿವರಿಸಿವೆ. ಈ ಯೋಜನೆಯಿಂದ ದೇಶದ ಸಮೃದ್ಧಿಯನ್ನು ಹೆಚ್ಚಿಸಲಿದ್ದು, ಬೀಜಿಂಗ್ನ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗೆ ತಕ್ಕಂತಿದೆ ಎಂದಿದೆ. ಚೀನಾದ ಕಮುನಿಸ್ಟ್ ಪಕ್ಷವು ೨೦೨೧ರಲ್ಲಿ ಬುಡುಗಡೆ ಮಾಡಿರುವ ಐದು ವರ್ಷಗಳ ಆರ್ಥಿಕ ಅಭಿವೃದ್ಧಿ ಯೋಜನೆಯಲ್ಲಿ ಈ ಆಣೆಕಟ್ಟು ಸ್ಥಾನ ಪಡೆದಿದೆ. ಟಿಬೆಟ್ನಲ್ಲಿ ಹಲವು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದು, ಅವುಗಳಲ್ಲಿ ಇದೊಂದು ಎನ್ನಲಾಗುತ್ತಿದೆ.
ಜೀವ ಪ್ರಬೇಧಗಳಿಗೆ ಆಪತ್ತು : ಆದರೆ, ವಿಶ್ವದ ಅತಿ ದೊಡ್ಡ ಆಣೆಕಟ್ಟು ನಿರ್ಮಾಣ ಚೀನಾದಲ್ಲೇ ಆತಂಕ ವ್ಯಕ್ತವಾಗಿದೆ. ಬ್ರಹ್ಮಪುತ್ರ ನದಿ ಹಿಮಾಲಯದ ಗಿರಿ ಕಂದರಗಳಲ್ಲಿAದ ಹರಿದು ಬರುತ್ತದೆ. ಲಕ್ಷಾಂತರ ಜೀವಪ್ರಭೇದ, ಕೋಟ್ಯಂತರ ಜನರ ಬುದುಕಿಗೆ ಆಸರೆಯಾಗಿರುವ ನದಿ. ಕಡಿದಾದ, ಆಳ ಕಣಿವೆ ಇರುವ, ಭೂಕಂಪ ಸಂಭವನೀಯ ಪ್ರದೇಶದಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಅಗೆಯುವುದು ಭೂಕುಸಿತದಂಥ ಅವಗಢಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಅಮೇರಿಕದ ಗ್ರಾö್ಯಂಡ್ ಕ್ಯಾನ್ಯನ್ಗಿಂತಲೂ ಮೂರು ಪಟ್ಟು ಆಳವಾದ ಹಿಮಾಲದ ಕಣಿವೆಗಳಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಬೇಕಾದ ಅಗಾಧ ಎಂಜಿನಿಯರಿAಗ್ ಕೌಶಲ ಮತ್ತಿತರ ಅಗತ್ಯಗಳನ್ನು ಪೂರೈಸುವುದು ಹೇಗೆ? ಎನ್ನುವ ಪ್ರಶ್ನೆಗಳು ಹಟ್ಟಿಕೊಂಡಿವೆ.
ಒAದು ವೇಳೆ ಭೂಕಂಪ ತಡೆಯುವ ರೀತಿಯಲ್ಲಿ ಆಣೆಕಟ್ಟು ನಿರ್ಮಿಸಿದರೂ ಅದರಿಂದ ಉಂಟಾಗುವ ಗುಡ್ಡಗಳ ಕುಸಿತ, ಮಣ್ಣು-ಕಲ್ಲಿನ ಅನಿಯಂತ್ರಿತ ಹರಿಯುವಿಕೆ ತಡೆಯುವುದು ಸಾಧ್ಯವೇ? ಇದು ಯೋಜನೆಗೆ ಸವಾಲೊಡ್ಡಲಿದೆ ಎಂದು ಸಿಚೌನ್ ಪ್ರಾಂತೀಯ ಭೂವಿಜ್ಞಾನ ಬ್ಯೂರೋದ ಎಂಜಿನಿಯರ್ ಒಬ್ಬರು ೨೦೨೨ರಲ್ಲೇ ಎಚ್ಚರಿಕೆ ನೀಡಿದ್ದರು. ಯಾರ್ಲಂಗ್ ಸಂಗ್ಪೋ ಟೆಇಬೆಟ್ನ ಅತಿ ಉದ್ದದ ನದಿ. ಟಿಬೆಟ್ನಲ್ಲಿ ಚೀನಾ ಈಗಾಗಲೇ ಹಲವು ಆಣೆಕಟ್ಟುಗಳನ್ನು ನಿರ್ಮಿಸಿದೆ. ೨೦೨೪ರ ಆರಂಭದಲ್ಲಿ ಆಣೆಕಟ್ಟೊಂದರ ನಿರ್ಮಾಣದಿಂದ ಜನರಿಗೆ ತೊಂದರೆಯಾಗಿ, ಹಲವು ಬೌದ್ಧ ವಿಹಾರಗಳು ಮುಳುಗಿದ್ದವು. ಅದರ ವಿರುದ್ಧ ಪ್ರತಿಭಟಿಸಿದ್ದ ಟಿಬೆಟ್ ಜನರನ್ನು ಬಂಧಿಸಿದ್ದ ಚೀನಾ ಸರ್ಕಾರ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿತ್ತು. ತ್ರೀ ಜಾರ್ಜಸ್ ಡ್ಯಾಮ್ ನಿರ್ಮಾಣದಿಂದ ಟಿಬೆಟ್ನ ಒಂದು ಲಕ್ಷ ಮಂದಿ ನಿರ್ವಸಿತರಾಗಿದ್ದರು. ಈಗ ಚೀನಾ ಕಟ್ಟಲು ಹೊರಟಿರುವ ವಿಶ್ವದ ಅತಿ ದೊಡ್ಡ ಆಣೆಕಟ್ಟಿನ ವ್ಯಾಪ್ತಿಯಲ್ಲಿ ಹೆಚ್ಚು ಜನವಸತಿ ಇರುವ ಪ್ರದೇಶಗಳೂ ಸೇರಿವೆ. ಹೀಗಾಗಿ ಅತಿ ಹೆಚ್ಚು ಮಂದಿ ನಿರ್ವಸಿತರಾಗಬೇಕಾಗುತ್ತದೆ ಎನ್ನುವುದು `ಟಿಬೆಟ್ ವಾಚ್' ಎಂಬ ಲಂಡನ್ ಮೂಲದ ಸರ್ಕಾರೇತರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವಿನಾಶಕಾರಿ ಯೋಜನೆ : ಬ್ರಹ್ಮಪುತ್ರದ ನೀರಿನಲ್ಲಿ ಭಾರತ ಮತ್ತು ಬಂಗ್ಲಾ ದೇಶಗಳಿಗೂ ಪಾಲು ಇದೆ. ಬ್ರಹ್ಮಪುತ್ರ ಸೇರಿದಂತೆ ಈ ಭಾಗದ ನದಿಗಳ ನೀರಿನ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಚೀನಾವು ಭಾರತದ ಆರ್ಥಿಕತೆಯ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಪ್ರತ್ನಿಸುತ್ತಿದೆ ಎಂದು ಆಸ್ಟೆçÃಲಿಯಾ ಮೂಲಕ ಚಿಂತಕರ ಚಾವಡಿ `ಲೊವಿ ಇನ್ಸ್ಟಿಟ್ಯೂಟ್' ೨೦೨೦ರ ತನ್ನ ವರದಿಯಲ್ಲಿ ಅಭಿಪ್ರಯ ಪಟ್ಟಿvತ್ತು. ತನ್ನ ಆಣೆಕಟ್ಟು ಯೋಜನೆಯಿಂದ ಭಾರತ, ಬಂಗ್ಲಾದೇಶ ಸೇರಿದಂತೆ ಯಾರಿಗೂ ತೊಂದರೆಯಾಗದು ಎಂದು ಚೀನಾ ಹೇಳಿಕೊಂಡಿದೆ. ಆದರೆ, ಯೋಜನೆ ಭಾರತ ಮತ್ತು ಬಂಗ್ಲಾ ದೇಶದ ಪಾಲಿಗೆ ವಿನಾಶಕಾರಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಯಾರ್ಲಂಗ್ ಸಂಗ್ಪೋ ನದಿಯ ಮೇಲ್ಭಾಗದಲ್ಲಿ ಚೀನಾ ಹಲವು ಆಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಿದೆ. ಈಗ ನದಿಯ ಕೆಳಭಾಗದಲ್ಲಿ ಭಾರೀ ಆಣೆಕಟ್ಟು ನಿರ್ಮಿಸಿದರೆ, ಇಡೀ ನದಿಯ ನೀರಿನ ಮೇಲೆ ಚೀನಾ ಹಿಡಿತ ಸಾಧಿಸಲಿದೆ. ಇದರಿಂದ ಭಾರತ ಮತ್ತು ಬಂಗ್ಲಾ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಉಭಯ ರಾಷ್ಟçಗಳ ನಡುವಿನ ದ್ವಿಪಕ್ಷೀಯ ಸಂಬAಧ ಬಿಗಡಾಯಿಸಿದ ಸಂದರ್ಭಗಳಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಲು ಈ ಆಣೆಕಟ್ಟು ಒಂದು ಸಾಧನವನ್ನಾಗಿ ಚೀನಾ ಬಳಸಬಹುದು ಎಂಬ ಅಭಿಪ್ರಯ ರಾಜತಾಂತ್ರಿಕ ತಜ್ಞರು ವ್ಯಕ್ತಪಡಿಸಿದ್ದಾರೆ.
ನೀರಿನ ಹರಿವು ಸ್ಥಗಿತಗೊಳಿಸುವ ಸಂಚು : ಈಶಾನ್ಯ ಭಾರತ ಮತ್ತು ಬಂಗ್ಲಾ ದೇಶದ ಪಾಲಿಗೆ ಬ್ರಹ್ಮಪುತ್ರ ಜೀವ ನದಿ. ಭಾರತದ ಸಿಹಿ ನೀರಿನ ಸಂಪನ್ಮೂಲದ ಪೈಕಿ ಶೇ.೩೦ರಷ್ಟು ಬ್ರಹ್ಮಪುತ್ರ ನದಿಯ ಪಾಲಿದೆ. ¨sರತದ ಗಡಿ ಭಾಗದಲ್ಲಿ ಚೀನಾ ಆಣೆಕ್ಟು ನಿರ್ಮಿಸಿದರೆ, ಭಾರತ ಮತ್ತು ಬಂಗ್ಲಾ ದೇಶಗಳತ್ತ ನದಿ ನೀರಿನ ಹರಿವು ಕುಂಠಿತವಾಗಿ, ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ನಿಂತು ಎರಡೂ ರಾಷ್ಟçಗಳಿಗೂ ನೀರಿನ ಕೊರತೆ ಕಾಡಬಹುದು. ಇದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನೆಡೆಯಾಗಿ, ಆರ್ಥಿಕಕತೆಯ ಮೇಲೆ ಪರಿಣಾಮವಲ್ಲದೇ, ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಬಹುದು.
ಕೆಲವು ವರ್ಷಗಳಿಂದೀಚೆಗೆ ಪ್ರತಿ ಮಳೆಗಾಲದಲ್ಲಿ ಬ್ರಹ್ಮಪುತ್ರ ನದಿಯು ಉಕ್ಕೇರಿ ಆಸ್ಸಾಮ್, ಅರುಣಾಚಲ ಪ್ರದೇಶ, ಮೇಘಾಲಯದಂತಹ ನದಿಯ ಅಚ್ಚುಕಟ್ಟು ಪ್ರದೇಶದ ರಾಜ್ಯಗಳು ಪ್ರವಾಹಕ್ಕೆ ಒಳಗಾಗುತ್ತಿವೆ. ಮುಂಗಾರು ಅವಧಿಯಲ್ಲಿ ಚೀನಾವು ಆಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟರೆ, ಭಾರತದಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಈಶಾನ್ಯ ರಾಜ್ಯಗಳು ನೆರೆಯಿಂದ ತತ್ತರಿಸಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಆಣೆಕಟ್ಟು ನಿರ್ಮಿಸಲು ಗುರುತಿಸಿರುವ ಜಾಗ, ಭೂಕಂಪನ ಸಂಭವನೀಯತೆ ಪ್ರದೇಶ (ಭೂಪದರ ತಟ್ಟೆಗಳು (ಟೆಕ್ಟೋನಿಕ್ ಪ್ಲೇಟ್ಸ್) ರೇಖೆಗಳು ಇಲ್ಲಿ ಹಾದು ಹೋಗಿವೆ) ಎಂದು ಹೇಳಲಾಗಿದೆ. ಕಡಿದಾದ, ಆಳವಾದ ಕಂದಕಗಳಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕೊರೆಯುವುದು, ನಿರ್ಮಾಣ ಕಾಮಗಾರಿ ನಡೆಸುವುದು ಯಾವತ್ತು ಸವಾಲಿನ ಕೆಲಸ. ಇದು ಭೂಕಂಪನ, ಭೂಕುಸಿತದಂತಹ ವಿಪತ್ತಿಗೆ ಕಾರಣವಾಗಬಹುದು ಎಂದು ಚೀನಾ ವಿಜ್ಞಾನಿಗಳೇ ಎಚ್ಚರಿಕೆಸಿದ್ದಾರೆ. ಹಿಮಾಲಯದಲ್ಲಿ ಸಂಭವಿಸುವ ಯಾವುದೇ ವಿಪತ್ತು ಭಾರತದ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲದ ಮೇಘಸ್ಪೋಟ, ಭೂಕುಸಿತ ಸಾಮಾನ್ಯವಾಗಿದೆ. ಇದರಿಂದ ದಿಢೀರ್ ಪ್ರವಾಹ ಉಂಟಾದ ನಿದರ್ಶನಗಳೂ ಇವೆ. ಹೀಗಿರುವಾಗ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಥವಾ ಅನಂತರ ಯಾವುದೇ ಅವಘಡ ಜರುಗಿದರೂ ಅರುಣಾಚಲ ಪ್ರದೇಶ, ಆಸ್ಸಾಮ್ ಮೇಲೆ ಅದರ ಪರಿಣಾಮ ಆಗದೇ ಇರದು.
`ನನ್ನ ಹಕ್ಕು' ಎಂದಿರುವ ಚೀನಾ : ಬ್ರಹ್ಮಪುತ್ರ ನದಿಯು ಭಾರತದ ಅರುಣಾಚಲ ಪ್ರದೇಶ ಮತ್ತು ಆಸ್ಸಾಮ್ ರಾಜ್ಯಗಳ ಮೂಲಕ ಹರಿಯುತ್ತದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಭಾರತದೊಂದಿಗೆ ಹಲವು ಬಾರಿ ವಾಗ್ವಾದ ನಡೆಸಿರುವದನ್ನು ಇಲ್ಲಿ ಗಮನಿಸಬಹುದು. ಚೀನಾ ಬ್ರಹ್ಮಪುತ್ರ ನದಿಯ ಮೇಲೆ ಅತಿ ದೊಡ್ಡ ಆಣೆಕಟ್ಟು ನಿರ್ಮಾಣದ ಬಗ್ಗೆ ೨೦೨೦ರಲ್ಲಿಯೇ ಭಾರತವು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಜತೆಗೆ, ಬ್ರಹ್ಮಪುತ್ರದ ಉಪನದಿಗೆ ದೊಡ್ಡ ಆಣೆಕಟ್ಟು ನಿರ್ಮಾಣ ಆರಂಭಿಸಿತು. ಭಾರತದ ಆಕ್ಷೇಪಣೆಗೆ ಉತ್ತರಿಸಿದ್ದ ಚೀನಾ, ಯಾರ್ಲಂಗ್ ಸಗ್ಪೋ ನದಿಗೆ ಆಣೆಕಟ್ಟು ನಿರ್ಮಿಸುವುದಕ್ಕೆ ತನಗೆ ಹಕ್ಕು ಇದ್ದು, ಅದರಿಂದ ಉಂಟಗುವ ಪರಿಣಾಮಗಳ ಸಂಪೂರ್ಣ ಅರಿವೂ ಇದೆ ಎಂದು ಸಮರ್ಥಿಸಿಕೊಂಡಿತ್ತು. ಬ್ರಹ್ಮಪುತ್ರ ನದಿಯ ನೀರಿನ ಮ್ಟ, ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಸಂಬAಧ ಎರಡೂ ದೇಶಗಳ ನಡುವೆ ೨೦೦೬ರಲ್ಲಿ ಒಪ್ಪಂದ ಆಗಿದೆ. ೨೦೨೩ಕ್ಕೆ ಅದು ಅಂತ್ಯಗೊAಡಿದ್ದು, ಡಿ.೧೮ರಂದು ನಡೆದಿದ್ದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಆಣೆಕಟ್ಟೆಯ ನಿರ್ಮಾಣವು ಪ್ರಕೃತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನದಿಯ ಜೀವವೈವಿಧ್ಯಕ್ಕೆ ಧಕ್ಕೆ ತರುವುದಲ್ಲದೇ, ಹಿಮಾಲಯದ ಸೂಕ್ಷö್ಮ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೊಡ್ಡ ಆಣೆಕಟ್ಟು ಟಿಬೆಟ್ನ ಭೂಪ್ರದೇಶದ ಸ್ವರೂಪವನ್ನೇ ಬದಲಾಯಿಸಲಿದೆ. ಭಾರೀ ಸಂಖ್ಯೆಯ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಮಣ್ಣಿನ ಸವಳಿಕೆ ಹೆಚ್ಚಾಗಿ ಹೂಳಿನ ಸಮಸ್ಯೆ ಕಾಡುತ್ತದೆ. ಆಣೆಕಟ್ಟೆಯ ಕೆಳ ಪ್ರದೇಶಗಳಲ್ಲಿರುವ ವಿವಿಧ ಪ್ರಾಣಿಗಳ ಆವಾಸ ಸ್ಥಾನಗಳ ಮೇಲೆ ದುಷ್ಪರಿಣಾಮ ಬೀರುವುದಂತೂ ನಿಜ.
-ಎಸ್. ಆರ್. ಮಣೂರ.
ಹಿರಿಯ ಪತ್ರಕರ್ತರು ಕಲಬುರಗಿ
ಸುನೀತಾ ಆನಂದ ಬೀದರ ಜಿಲ್ಲೆಯ ಮೊದಲ ಮಹಿಳಾ ಛಾಯಗ್ರಾಹಕಿಗೆ ಗೌರವ ಸನ್ಮಾನ.
ಬೀದರ ಜಿಲ್ಲೆ ಹೆಮ್ಮೆ ಛಾಯಾಗ್ರಹಕಿ ಸುನೀತಾ ಆನಂದ
ಬೀದರ್ ; ಇಂದಿನ ಮೊಬೈಲ್ ಯುಗದಲ್ಲಿ ಛಾಯಾಗ್ರಾಹಕಿಯಾಗಿ ಜಿಲ್ಲೆಯಲ್ಲಿ ತಮ್ಮ ಶೈಲಿಯಲ್ಲಿ ವಿಡಿಯೋ ಗ್ರಾಫರ್ ಆಗಿ ಸೇವೆಯನ್ನು ಸಲ್ಲಿಸುತ್ತಾ ಇನ್ನೊಂದು ಕಡೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಅಕ್ಷಯ ವೆಲ್ಫೇರ್ ಸೊಸೈಟಿಯನ್ನು ಹುಟ್ಟು ಹಾಕಿ ಸಮಾಜ ಸೇವೆ ಮಾಡುತ್ತ ಕುಟುಂಬದ ನಿರ್ವಹಣೆ ಮಾಡುತ್ತಿರುವ ಶ್ರೀಮತಿ ಸುನೀತಾ ಆನಂದ ಇಂದು ಮಾದರಿಯ ಗೃಹಿಣಿ ಎನ್ನುವುದರಲ್ಲಿ ಎರಡು ಮಾತಿಲ್ಲ.. ಒಂದು ಕಾಲದಲ್ಲಿ ಛಾಯಗ್ರಹಣ ವೃತ್ತಿ ಲಾಭದಾಯಕ ವೃತ್ತಿಯಾಗಿತ್ತು, ಸ್ಟುಡಿಯೋ ಮಾಲೀಕರು ಮತ್ತು ಅಲ್ಲಿ ನೌಕರಿ ಮಾಡುವ ಛಾಯಾಗ್ರಾಹಕರು ವೃತ್ತಿ ನಂಬಿ ಜೀವನ ಸಾಗಿಸುತಿದ್ದರು. ಆದರೆ ಪ್ರಸ್ತುತ ಸಂಧರ್ಭದಲ್ಲಿ ಸ್ಮಾರ್ಟ್ಫೋನ್ ಯುಗದಲ್ಲಿ ಅಕ್ಷರಸಹ ಸ್ಮೈಲ್ ಪ್ಲೀಸ್ ಎಂದು ಬೇರೊಬ್ಬರ ಮುಖದಲ್ಲಿ ಸದಾ ನಗುವನ್ನು ಮೂಡಿಸುವ ಛಾಯಗ್ರಾಕರ ಬದುಕು ಅತ್ಯಂತ ದುಸ್ತರವಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಪೂಜ್ಯ ಡಾ ನಾಡೋಜ ಬಸವಲಿಂಗ ಪಟ್ಟದ್ದೆವರು ಜ್ಯೋತಿ ಬೆಳಗಿಸುವ ಮೂಲಕ ನೇರವೆರಿಸಿದರು.
ಛಾಯಗ್ರಾಹಕರು ಅತ್ಯಂತ ತಾಳ್ಮೆಯ ವ್ಯಕ್ತಿಗಳು, ನಮ್ಮೆಲರ ಸಂತೋಷದ ಕ್ಷಣಗಳನ್ನು ಕ್ಲಿಕೀಸಿ ನಮಗಿಂತ ಹೆಚ್ಚು ಖುಷಿಯನ್ನು ಸಂಭ್ರಮಿಸುವರು.
ಮುಖ್ಯ ಅತಿಥಿಯಾಗಿ ಬೀದರ ಸಂಸದ ಯುವ ನಾಯಕರು ಸಾಗರ ಖಂಡ್ರೆ ಆಗಮಿಸಿದರು.
ಅವರ ಫೋಟೋ ಹಾಗೂ ವಿಡಿಯೋ ಗ್ರಾಫಿಯ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಿರುವ ಸಂಘ ಸಂಸ್ಥೆಗಳ ಕಾರ್ಯ ಅಭಿನಂದನೀಯ. ಈ ನಿಟ್ಟಿನಲ್ಲಿ ಸುನೀತಾ ಆನಂದ ಅವರಿಗೆ ಭಾಲ್ಕಿ ಯ ಸಂಸ್ಥೆಯಾದ ಕರ್ನಾಟಕ *ಛಾಯಾಗ್ರಾಹಕರ ಸಂಘ ಮತ್ತು ಶ್ರೀ ಭಾಲ್ಕೆಶ್ವರ ಫೋಟೋಗ್ರಾಫರ್ ಅಸೋಷಿಯೇನರವರು ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭದಲ್ಲಿ ಸುಮಾರು ಹತ್ತು ವರುಷದಿಂದ ಬೀದರ ಮೊದಲ ಮಹಿಳಾ ಛಾಯಾಗ್ರಾಹಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುನಿತಾ ಆನಂದರವರಿಗೆ ಸನ್ಮಾನ ಗೌರವ ನೀಡಿರುವುದು ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು. ಸುನೀತಾ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದು ಸಮಾಜದ ಎಲ್ಲಾ ಮಹಿಳೆಯರಿಗೆ ಇದು ಮಾದರಿಯಾಗಿದೆ. ಪೂಜ್ಯ ಶ್ರೀ ನಾಡೋಜ ಡಾ!!ಬಸವಲಿಂಗ ಪಟ್ಟದೇವರು ಅಧ್ಯಕ್ಷರು ಅನುಭವ ಮಂಟಪ ಬಸವ ಕಲ್ಯಾಣ, ಶ್ರೀ ಸಾಗರ ಖಂಡ್ರೆ ಸಂಸದರು ಲೋಕಸಭಾ ಕ್ಷೇತ್ರ ಬೀದರ್, ಶ್ರೀಮತಿ. ಶಶಿಕಲಾ ಅಶೋಕ ಸಿಂದನಕೆರಾ ಅಧ್ಯಕ್ಷರು ನಗರ ಸಭೆ ಭಾಲ್ಕಿ,. ಶ್ರೀ ಎಚ್. ಎಸ್. ನಾಗೇಶ್ ಅಧ್ಯಕ್ಷರು ಕೆ. ಪಿ. ಎ. ಬೆಂಗಳೂರು. ಶ್ರೀ ಮಂಜುನಾಥ ಮೆತ್ರೆ. ಅಧ್ಯಕ್ಷರು ಕೆ. ಪಿ. ಎ. ಭಾಲ್ಕಿ, ಶ್ರೀ ಸಂತೋಷ ಸೋನಾಲೆ ಕಾರ್ಯದರ್ಶಿಕೆ. ಪಿ. ಎ. ಭಾಲ್ಕಿ, ಶ್ರೀ ಪವನ್ ಸಿಂಗ್ ಠಾಕೂರ್ ಅಧ್ಯಕ್ಷರು ಕೆ. ಪಿ. ಎ. ಬೀದರ್, ಶ್ರೀ ಮಂಜುನಾಥ ಹತ್ಗುಂದಿ ನಿರೀಕ್ಷಕರು ಕಾರ್ಮಿಕ ಇಲಾಖೆ ಭಾಲ್ಕಿ, ಜಿಲ್ಲಾ ಹಾಗೂ ತಾಲ್ಲೂಕು ಛಾಯಾಗ್ರಾಹಕರು ಅಪಾರ ಸಂಖ್ಯೆಯಲ್ಲಿ ಸೇರಿದರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಓಂಕಾರ ಪಾಟೀಲ, ಸಂಗಮೇಶ ಜಾoತೆ ವೀರಭದ್ರಪ್ಪ ಉಪ್ಪಿನ ಡಾ. ಎಂ. ಜಿ. ದೇಶಪಾಂಡೆ, ಅರವಿಂದ ಕುಲಕರ್ಣಿ ವರದಿಗಾರ ಆನಂದ ಮುಂತಾದವರು ಹರುಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೊರಿದ್ದಾರೆ. ಸ್ವಾಗತವನ್ನು ಶ್ರೀಮತಿ ಆಶಾರಾಣಿ ಸೊನಾಳೆ ಮಾಡಿದರೆ. ರಿಪ್ಸನ ಕೋಟೆ ಪ್ರಾಸ್ತಾವಿಕ ಮಾತನಾಡಿದರು.
Thursday, 23 January 2025
ಪೂಜ್ಯ ಡಾ ಅಕ್ಕ ಗಂಗಾಂಬಿಕೆಯ ನಡೆ ಸಂಶಯಾಸ್ಪದ !
ಪೂಜ್ಯ ಡಾ ಅಕ್ಕ ಗಂಗಾಂಬಿಕೆಯ ಸಂಶಯಾಸ್ಪದ ನಡೆ ಮುಂಬರುವ ದಿನಗಳಲ್ಲಿ ಸೇಡಂನಲ್ಲಿ ಆಚರಿಸುತ್ತಿರುವ "ಭಾರತೀಯ ಸಂಸ್ಕೃತಿ ಉತ್ಸವ" ಅಕ್ಕಾ ಗಂಗಾಂಬಿಕೆ ಕಲಬುರ್ಗಿಯಲ್ಲಿ ರವಿವಾರ ವಿರೋಧ ಮಾಡಿ ಭಾಗವಹಿಸುವುದು ಬೇಡ ಎಂದು ದೊಡ್ಡ ಭಾಷಣ ಮಾಡಿ ಸೋಮವಾರ ಬೀದರದಲ್ಲಿ ಸೇಡಂ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದರು ಇದಕ್ಕೆ ಲಿಂಗಾಯತ ಸಮಾಜವು ಸಂಶಯಾಸ್ಪದವಾಗಿ ನೋಡುವಂತೆ ಮಾಡಿಕೊಟ್ಟಿದೆ. ಹೀಗಾಗಿ ಇದಕ್ಕೆ ಸಮಾಜದಲ್ಲಿ ಯಾವುದೇ ರೀತಿಯ ಆಸ್ಪದ ನೀಡಬಾರದು ಎಂಬುದನ್ನು ಯಾರು ಮರೆಯಬಾರದು. ಜನರು ಸಂಘಟಿತರಾಗಿ ಎಚ್ಚೆತುಕೊಳ್ಳಬೇಕು.
ಅಕ್ಕ ಗಂಗಾಂಬಿಕೆ ಇವಾಗ ಕರ್ನಾಟಕ ರಾಜ್ಯದಲ್ಲಿ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ. ದಿನಾಂಕ 19 ಜನವರಿ 2025ರಂದು ಬಹುತ್ವ ಸಂಸ್ಕೃತಿ ಭಾರತೋತ್ಸವ ಕಾರ್ಯಕ್ರಮ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ, ಬಸವ ತತ್ವ ಸಿದ್ದಾಂತಗಳ ಮೇಲೆ ಕೆಲವು ಹಿಂದೂ ಸಂಸ್ಥೆಗಳು ಅಪಪ್ರಚಾರ ಮಾಡುತ್ತಿದ್ದಾರೆ, ಬಸವ ತತ್ವ ಸಿದ್ದಾಂತ ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ, ಅದರ ಮುಂದುವರೆದ ಭಾಗ ಸೇಡಂ ಪಟ್ಟಣದಲ್ಲಿ ಆಚರಿಸುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವ ಆಗಿದೆ. ಆದರಿಂದ ಯಾರು ಆ ಉತ್ಸವದಲ್ಲಿ ಭಾಗವಹಿಸಬಾರದು ಎಂದು ದೊಡ್ಡ ಭಾಷಣೆ ಮಾಡಿದು ಯಾವ ಉದ್ದೇಶಕ್ಕಾಗಿ ಎಂಬುದು ಜನರ ಪ್ರಶ್ನೆಯಾಗಿದೆ. ಇಂದು ಗಂಗಾಂಬಿಕೆಯವರ ನಡೆಯನ್ನು ಸಂಶಯಕ್ಕೂ ಎಡೆ ಮಾಡಿಕೊಟ್ಟಿದೆ.
ಮರುದಿವಸ 20 ಜನವರಿ 2025 ರಂದು ಬೀದರ ನಗರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ನಿಮಿತ್ಯ ತಯಾರು ಮಾಡಿದ್ದ ವಾಹನಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಯಶಸ್ವಿಗಾಗಿ ಹಾರೈಸಿದ್ದಾರೆ. ಎರಡೇ ದಿನದಲ್ಲಿ ಭಿನ್ನ ಹೇಳಿಕೆ ಇದು ಒಬ್ಬ ಶರಣೆ ಅಕ್ಕ ಆಗಿದ್ದವರಿಗೆ ಶೋಭೆ ತರುವುದಿಲ್ಲ ಎಂಬುದು ಎಚ್ಚೆತುಕೊಳ್ಳಬೇಕು..
ಅಕ್ಕ ಗಂಗಾಂಬಿಕೆ ಶರಣೆ ಆಗಿ ಅಕ್ಕ ಅನ್ನಪೂರ್ಣ ಜೊತೆ ಸೇರಿ ಸಂಸ್ಥೆ ಕಟ್ಟಿ ಕೆಲವು ವರ್ಷ ನಂತರ ಮುನ್ನಿಸಿಕೊಂಡು ಬಸವಕಲ್ಯಾಣ ಶಿಫ್ಟ್ ಆಗಿ ಸರಕಾರಿ ಕಟ್ಟಡ ಹರಳಯ್ಯ ಗವಿ ಕಬ್ಜಾ:
ಇವರಿಗೆ ಬಸವ ತತ್ವ ಸಿದ್ದಾಂತ ಬದ್ಧತೆ ಇಲ್ಲ, ಕೇವಲ ಶೋಕಿಗಾಗಿ ಬಿಳಿ ಬಟ್ಟೆ ತೊಟ್ಟು ಪ್ರಚಾರ ಗಿಟ್ಟಿಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸಿ ಹಣ ಸಂಪಾದಿಸುವ ದಾರಿ ಆಗಿದೆ. ಲಿಂಗಾನಂದ ಮಹಾಸ್ವಾಮೀಜಿ ಮತ್ತು ಮಾತಾಜಿ ಮಾತೆ ಮಹಾದೇವಿ ಶಿಷ್ಯರಾದ ಅಕ್ಕ ಗಂಗಾಂಬಿಕೆ ಬಸವ ದಳ ಜೊತೆ ನಂಟು ಮುರಿದುಕೊಂಡು ತಮ್ಮ ಸೋದರ ಅತ್ತೆಯ ಮಗಳಾದ ಪೂಜ್ಯ ಅಕ್ಕಾ ಅನ್ನಪೂರ್ಣ ತಾಯಿ ಜೊತೆಗೂಡಿ ಬಸವ ಪ್ರತಿಷ್ಠಾನ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಕ್ಕಾ ಅನ್ನಪೂರ್ಣ ಶಿಕ್ಷಕಿಯಾಗಿದ್ದರು, ಅಕ್ಕ ಗಂಗಾಂಬಿಕೆ ಅಕ್ಕಮಹಾದೇವಿ ಕಾಲೇಜ್ ನಲ್ಲಿ ಲೆಕ್ಚರ್ ಆಗಿದ್ದಾರೆ, ಅಕ್ಕ ಅನ್ನಪೂರ್ಣ ತಮ್ಮ ನೌಕರಿ ರಾಜಿನಾಮೆ ಕೊಟ್ಟು ಸಂಪೂರ್ಣ ಬಸವ ತತ್ವ ಪ್ರಚಾರ ಮಾಡಲು ತಮ್ಮ ಜೀವನ ಅರ್ಪಿಸಿಕೊಂಡರು, ಆದರೆ ಅಕ್ಕ ಗಂಗಾಂಬಿಕೆ ಮಾತ್ರ ಕೈತುಂಬಾ ಸಂಬಳ ಕೊಡುವ ನೌಕರಿ ಬಿಡುವದು ಬೇಡ ಎಂದು ಬಿಡುವಿನಲ್ಲಿ ಮಾತ್ರ ಅಕ್ಕ ಅನ್ನಪೂರ್ಣ ಜೊತೆ ಬಸವ ತತ್ವ ಪ್ರಚಾರ ಮಾಡುವಲ್ಲಿ ಕೈಜೋಡಿಸುತ್ತಿದ್ದರು, ಇವರಿಗೆ ಅಕ್ಕಿಯ ಮೇಲು ಪ್ರೀತಿ ನೆಂಟರ ಮೇಲೆಯೂ ಪ್ರೀತಿ ಅಂದಂಗೆ ಆಯಿತು. ಸರಕಾರಿ ಸಂಬಳ ತೆಗೆದುಕೊಳ್ಳುವವರು ಯಾವುದೇ ಲಾಭದಾಯಕ ಸಂಸ್ಥೆ ಅಥವಾ ಏನ್ ಜಿ ಒ ಸ್ಥಾಪನೆ ಮಾಡುವದು ಅಪರಾಧ ಆಗಿದೆ ಯಾರಾದರೂ ಈ ಬಗ್ಗೆ ಪ್ರಕರಣ ದಾಖಲಿಸಿದರೆ ಖಂಡಿತವಾಗಿ ಸಂಕಷ್ಟಕ್ಕೆ ಸಿಲುಕಬಹುದು. ಮಾತೇ ಮಹಾದೇವಿ ಜೊತೆ ಹೊರ ಬಂದ ಮೇಲೆ ಮಾತಾಜಿಯವರ ಶರಣ ಉದ್ಯಾನವನ್ನು ಇಬ್ಬರು ಸೇರಿ ಕಬಳಿಸಿಕೊಂಡರು, ನಿಜವಾಗಿಯೂ ಅದು ಕಾಯ್ದಿಟ್ಟ ಸರಕಾರಿ ಉದ್ಯಾನವನ ಇದೆ. ಇಬ್ಬರು ಸೇರಿ ಕೆಲವೇ ವರ್ಷಗಳಲ್ಲಿ ಶಿಷ್ಯಂದಿರ ಬಳಗ ಹಾಗೂ ಶ್ರೀಮಂತರಿಂದ ಹಣ ದಾನದ ರೂಪದಲ್ಲಿ ಪಡೆದು ಸಂಸ್ಥೆ ಹೆಮ್ಮರವಾಗಿ ಬೆಳೆಸಿ ನೂರಾರು ಕೋಟಿ ಆಸ್ತಿ ಮಾಡಿದ್ದರು, ಹಲವಾರು ಏಕ್ಕರೆ ಜಮೀನಿನಲ್ಲಿ ಬಸವ ಗಿರಿ ಅನ್ನುವ ಕಟ್ಟಡ ನಿರ್ಮಾಣ ಮಾಡಿದರು, ಜಮೀನು ಖರೀದಿ ರಿಯಲ್ ಎಸ್ಟೇಟ್ ಉದ್ಯೋಗ ಪ್ರಾರಂಭ ಆಯಿತು. ಅಕ್ಕಾ ಅನ್ನಪೂರ್ಣ ಅವರ ಪ್ರವಚನ, ಸಾಹಿತ್ಯ ಬರೆಯುವ ಪುಸ್ತಕಗಳ ಮುಖಾಂತರ ನಾಡಿನ ತುಂಬಾ ಹೆಸರಾಯಿತು, ಆವಾಗ ಅಕ್ಕ ಗಂಗಾಂಬಿಕೆ ಹೊಟ್ಟೆ ಕಿಚ್ಚು ಪ್ರಾರಂಭವಾಯಿತು , ಕೋಟಿ ಕೋಟಿ ಆಸ್ತಿ ಆದ ಮೇಲೆ ಇವರ ಮಧ್ಯ ಆಸ್ತಿ ಕಾಳಗ ಪ್ರಾರಂಭವಾಯಿತು, ಇದಕ್ಕೆ ಶಿಷ್ಯರ ಭಾಗ ಎರಡು ತುಂಡಾಗಿ ಜಗಳಕ್ಕೆ ಮತ್ತಿಷ್ಟು ಪೆಟ್ರೋಲ್ ಸುರಿದರೂ. ಅಕ್ಕಾ ಗಂಗಾಂಬಿಕೆ ಕೆಲವು ಕಿಡಿಗೇಡಿಗಳ ಮಾತಿಗೆ ಬಲಿಯಾಗಿ ಅಥವಾ ಬಸವಕಲ್ಯಾಣದಲ್ಲಿ ಹರಳಯ್ಯ ಗವಿಯ ಮೇಲೆ ಕಣ್ಣು ಬಿದ್ದು ಅದನ್ನು ಕಬಳಿಸುವ ಹುನ್ನಾರ ಮಾಡಿ ತಮ್ಮ ವಾಸವನ್ನು ಬಸವಕಲ್ಯಾಣಕ್ಕೆ ಸ್ಥಳಾಂತರಿಸಿ ಕೊಂಡರು, ಹರಳಯ್ಯ ಸಮಾಜದ ಸಂಸ್ಥೆಯಲ್ಲಿ ಇವರು ತಮ್ಮ ಸ್ವಂತ ತಾಯಿ ಸಮೇತ ವಾಸಿಸುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಮತ್ತೆ ತಾಯಿ ಮಗಳು ಸೇರಿ ಒಂದು ಹೊಸ ಟ್ರಸ್ಟ್ ಮಾಡಿದ್ದಾರೆ, ಅದರಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ ಸೇರಿಸಿಕೊಂಡಿಲ್ಲ.
ಅಕ್ಕ ಅನ್ನಪೂರ್ಣ ತಾಯಿ ಪೂಜ್ಯ ಶ್ರೀ ಪ್ರಭುದೇವರನ್ನು ಉತ್ತರ ಅಧಿಕಾರಿ ನೇಮಿಸಿದ್ದು, ಜಗಳ ಮತ್ತಿಷ್ಟು ಉಲಬಣ:
ಅಕ್ಕ ಅನ್ನಪೂರ್ಣ ತಾಯಿ ಪ್ರಭುದೇವ ಅವರನ್ನು ತನ್ನ ಉತ್ತರ ಅಧಿಕಾರಿಯಾಗಿ ನೇಮಿಸಿ ಅವರಿಗೆ ನೌಕರಿ ಬಿಡಿಸಿ ಜಂಗಮ ದೀಕ್ಷೆ ಕೊಟ್ಟರು. ಇದಕ್ಕೆ ಅಕ್ಕ ಗಂಗಾಂಬಿಕೆ ಕೆರಳಿದರು, ಕ್ಯಾತೆ ತೆಗೆಯಲು ಪ್ರಾರಂಭ ಮಾಡಿದರು, ಪ್ರಭುದೇವ ಜಂಗಮ ಜಾತಿಯವರು ಹಾಗೂ ನಮ್ಮ ಸಂಸ್ಥೆ ಲಿಂಗಾಯತ ಮಹಿಳೆಯರ ಸಂಸ್ಥೆ ಪುರುಷರಿಗೆ, ಜಂಗಮರಿಗೆ ಅವಕಾಶ ಬೇಡ ಎಂದು ಜಗಳ ದೊಡ್ಡ ಮಟ್ಟಕ್ಕೆ ಬೆಳೆಯಿತು. ಸಂಸ್ಥೆಯಲ್ಲಿ ತಿಂದು ಉಂಡು ಕಬಳಿಸಿ ಹಣ ಸಂಪಾದನೆ ಮಾಡಿ ದಪ್ಪಗೆ ಆದ ಶಿಷ್ಯರು ಇಬ್ಭಾಗವಾಗಿ ಎರಡು ಕಡೆ ಸೇರಿ ಸಾರ್ವಜನಿಕವಾಗಿ ಜಗಳ ಕೇಳಿ ಬಂತು. ಬಸವಣ್ಣನವರ ಹೆಸರ ಮೇಲೆ ಕಟ್ಟಿಕೊಂಡ ಸಂಸ್ಥೆಯ ಪದಾಧಿಕಾರಿಗಳು ಶ್ರೀಮಂತ ಮುಖಂಡರು ಗಂಗಾಂಬಿಕೆ ಜೊತೆ ಕೈಜೋಡಿಸಿದರು, ಅಕ್ಕ ಅನ್ನಪೂರ್ಣ ಅವರು ಬಹಳ ನಿಷ್ಠುರ ಆಗಿದ್ದರು, ಇಂತಹ ವ್ಯಕ್ತಿಗಳ ನಡಾವಳಿ ಕಂಡು ಹಾಗೂ ಸಂಸ್ಥೆಯ ಹಣ ನುಂಗಿದಕ್ಕೆ ಸಂಸ್ಥೆಯಿಂದ ದೂರ ಮಾಡಿದ್ದರು, ಅವರೆಲ್ಲರೂ ದುಷ್ಮನ ಕಾ ದುಷ್ಮನ್ ದೋಸ್ತ ಎಂದು ಕೂಡಿಕೊಂಡರು. ಬಸವ ಪ್ರತಿಷ್ಠಾನ ಕೆಲವೇ ವರ್ಷಗಳಲ್ಲಿ ಇಷ್ಟು ದೊಡ್ಡದಾಗಿ ಬೆಳೆದಿದ್ದು ಎಲ್ಲರಿಗೂ ಹೊಟ್ಟೆ ಕಿಚ್ಚಾಗಿತ್ತು. ಸಂಸ್ಥೆಯ ಶ್ರೀಮಂತ ಶಿಷ್ಯರು ಹಣ ಹೂಡಿಕೆ ಮಾಡಿ ಅಕ್ಕ ಅನ್ನಪೂರ್ಣ ಅವರ ಹೆಸರ ಮೇಲೆ ಜಮೀನು ಖರೀದಿ ಮಾಡಿ ಬಡಾವಣೆಗಳನ್ನು ನಿರ್ಮಾಣ ಮಾಡಿ ಹಣ ಸಂಪಾದಿಸುವ ಕೆಲಸ ಮಾಡುತ್ತಿದ್ದರೂ, ಅಕ್ಕ ಅನ್ನಪೂರ್ಣ ಹತ್ತಿರ ಹಣ ಪಡೆದು ಕೆಲವರು ಉದ್ಯೋಗ ವ್ಯವಹಾರಕ್ಕೆ ದೂರಬಳಕೆ ಮಾಡಿಕೊಂಡರು, ಹಣಕಾಸು ವ್ಯವಹಾರದಲ್ಲಿ ವೈಮನಸ್ಸು ಆಗಿತ್ತು. ಎಲ್ಲರೂ ಸೇರಿ ಅಕ್ಕ ಅನ್ನಪೂರ್ಣ ಅಕ್ಕ ಗಂಗಾಂಬಿಕೆ ಜಗಳ ಜೋರು ಮಾಡಿಸಿದ್ದರು.
ಅಕ್ಕ ಅನ್ನಪೂರ್ಣ ತಾಯಿಯ ಕ್ಯಾನ್ಸರ್ ಆಗಿ ಆರೋಗ್ಯ ತೀರಾ ಕೆಟ್ಟಿತು:
ಅಕ್ಕ ಅನ್ನಪೂರ್ಣ ಅವರ ಆರೋಗ್ಯ ಕೆಟ್ಟಿತು, ನಾನು ಸಾಯುತ್ತೇನೆ ಅನ್ನುವ ಅಳಕು ಹುಟ್ಟಿತು, ಆದರಿಂದ ಅವರು ಎಲ್ಲರಿಗೂ ವಾಗ್ದಾನದಂತೆ ಪ್ಲಾಟ್ ಜಮೀನು ಎಲ್ಲರ ಹೆಸರಿನ ಮೇಲೆ ಮಾಡಿಕೊಟ್ಟರು, ಹಾಗೂ ಅಕ್ಕ ಗಂಗಾಂಬಿಕೆ ಮತ್ತು ಪ್ರಭುದೇವರಿಗೆ ತಮ್ಮ ಸಂಸ್ಥೆ ಹಂಚಿಕೆ ಮಾಡಿಕೊಟ್ಟರು. ಸಂಪೂರ್ಣ ಆಸ್ತಿ ನನಗೆ ಬೇಕು, ಪ್ರಭೂದೇವರನ್ನು ನಮ್ಮ ಸಂಸ್ಥೆಯಿಂದ ಹೊರ ಹಾಕಬೇಕು ಎಂದು ಅಕ್ಕ ಗಂಗಾಂಬಿಕೆ ಕ್ಯಾನ್ಸರ್ ಪೀಡಿತ ಅಕ್ಕ ಅನ್ನಪೂರ್ಣ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು, ಮತ್ತೆ ಬೇರೆಯವರ ಕುಮ್ಮಕ್ಕಿನಿಂದ ಅಕ್ಕ ಅನ್ನಪೂರ್ಣ, ಪ್ರಭುದೇವರು ಮತ್ತು ಸಂಗಡಿಗರ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಆಸ್ತಿ ಹಣ ಅಂತಸ್ತು ಮೋಹದಲ್ಲಿ ಇಬ್ಬರು ಜಂಗಮ ಶರಣ ದೀಕ್ಷೆ ಪಡೆದು ಸನ್ಯಾಸಿ ಆಗಿದ್ದು ನಗೆ ಪಾಟಲಕ್ಕೆ ಗುರಿ ಆಗಿ ಸಾರ್ವಜನಿಕರ ನಿಂದನಗೆ ಗುರಿ ಆದರು. ಇವರ ಹೇಳುತ್ತಿರುವ ಪ್ರವಚನಕ್ಕೂ ಇವರು ಆಡುತ್ತಿರುವ ಬೀದಿ ರಂಪಾಟ ಜಗಳಕ್ಕೂ ಜನ ಬೇಸತ್ತು ಇವರು ನಿಜವಾಗಿಯೂ ಬಸವಣ್ಣನವರ ಅನುಯಾಯಿಗಳು ಎಂದು ಪ್ರಶ್ನೆ ಮಾಡುತ್ತಿದ್ದರು. ಅಕ್ಕ ಅನ್ನಪೂರ್ಣ ಅವರು ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಟ ಮಾಡುತ್ತಿದ್ದಾಗ ಕರುಣೆಯ ಇಲ್ಲದ ಕೆಲವು ಬೀದರ ನಗರದ ಸ್ವಯಂಘೋಷಿತ ಲಿಂಗಾಯತ ಪ್ರತಿಷ್ಠಿತ ಶ್ರೀಮಂತ ವ್ಯಕ್ತಿಗಳು ಗಂಗಾಂಬಿಕೆ ಬೆನ್ನಿಗೆ ನಿಂತು, ದಿನ ನಿತ್ಯ ಸಭೆಗಳನ್ನು ಮಾಡಿ ಪತ್ರಿಕೆ ಹೇಳಿಕೆಗಳು ಕೊಟ್ಟು, ಸಾಯುವ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ ಕೆಟ್ಟ ಹೆಸರು ತರಲು ಸಂಪೂರ್ಣ ಪ್ರಯತ್ನ ಮಾಡಿದ್ದರು, ಅನಾರೋಗ್ಯದಲ್ಲಿದ ಅಕ್ಕಳಿಗೆ ಮತ್ತಿಷ್ಟು ಕಿರುಕುಳ ಕೊಟ್ಟರು. ಜನ ಇದನ್ನು ಕಂಡು ಕ್ಯಾನ್ಸರ್ ಪೀಡಿತ ಒಬ್ಬ ಸನ್ಯಾಸಿ ಮಹಿಳೆಗೆ ಕಿರುಕುಳ ಕೊಡುವದು ನೋಡಿ ನೊಂದು ಹೋದರು. ಕ್ಯಾನ್ಸರ್ ಗುಣಮುಖ ಆಗಿ ಬಂದ ಮೇಲೆ ಅಕ್ಕ ಗಂಗಾಂಬಿಕೆ ಅವರ ಅನುಯಾಯಿಗಳು ಸೇರಿ ಅಕ್ಕ ಅನ್ನಪೂರ್ಣ ಅವರ ಆಶ್ರಮ ಕಬಳಿಸುವ ಪ್ರಯತ್ನ ಮಾಡಿದ್ದರು, ಅಲ್ಲಿಯೂ ಇಬ್ಬರ ಮಧ್ಯೆ ಜಗಳ ಬೈಯುವದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಲಿಂಗಾಯತ ಸಮಾಜದ ಹೆಸರು ಹಾಳು ಮಾಡಿದ್ದರು. ಸಾವಿಗಿಂತ ಮೊದಲು ಅಕ್ಕ ಅನ್ನಪೂರ್ಣ ತನ್ನ ಕೊನೆಯ ಇಚ್ಚೆಯಂತೆ ಕೂಡಲಸಂಗಮದಲ್ಲಿ ಖಾವಿ ಧರಿಸಿ ಮತ್ತೆ ಪ್ರಭುದೇವರಿಗೂ ಖಾವಿ ನೀಡಿ ಗುರು ಭೋದನೆ ಮಾಡಿದರು.
ಅಕ್ಕ ಅನ್ನಪೂರ್ಣ ಸಾವಿನಲ್ಲಿಯೂ ರಾಜಕೀಯ ಮತ್ತು ರಂಪಾಟ:
ಅಕ್ಕಾ ಸಾವಿನ ದಿವಸ ಕೂಡ ಪೂಜ್ಯರ ಮಠಾಧೀಶರ ಸಾರ್ವಜನಿಕರ ಎದುರೇ ರಂಪಾಟ ಆದವು. ಮರು ದಿವಸವೇ ಅಕ್ಕ ಗಂಗಾಂಬಿಕೆ ಶರಣ ಉದ್ಯಾನದಲ್ಲಿ ತಮ್ಮ ಬೆಂಬಲಿತ ಲಿಂಗಾಯತ ಮುಖಂಡರ, ಲಿಂಗಾಯತ ಶ್ರೀಮಂತರ ಹಿರಿಯರ ಸಭೆ ಕರೆದು, ಅನ್ನಪೂರ್ಣ ಅವರ ಸಂಪೂರ್ಣ ಆಸ್ತಿ ನನಗೆ ಬರಬೇಕು ಇದರ ಹೋರಾಟಕ್ಕಾಗಿ ಒಬ್ಬ ಲಿಂಗಾಯತ ಹಿರಿಯರನ್ನು ಸಂಚಾಲಕರಾಗಿ ನೇಮಿಸಿದರು. ಸಂಚಾಲಕರು ಅಕ್ಕ ಅನ್ನಪೂರ್ಣ ತಾಯಿಯವರ ಸಮಾಧಿ ಮೇಲೆ ಏನು ಕಟ್ಟಡ ಕಟ್ಟಬಾರದು ಎಂದು ಸಮಾಧಿ ಸ್ಥಳಕ್ಕೆ ಹೋಗಿ ಪ್ರಭುದೇವರು ಅವರ ಸಂಗಡಿಗರಿಗೆ ತಾಕೀತು ಮಾಡಿದರು. ಇದು ಎಂತಹ ವಿಪರ್ಯಾಸವೆಂದರೆ ಮಾತೆಗೆ ಸಾವಿನಲ್ಲಿಯೂ ರಾಜಕೀಯ ಮಾಡಿದು ನಾವು ಕಂಡಿದ್ದೇವೆ. ಇದೆಲ್ಲ ನೋಡಿದಾಗ ಇವರೆಲ್ಲ ಸನ್ಯಾಸ ದೀಕ್ಷೆ ಪಡೆದು ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವದು ಕೇವಲ ಮೋಜಿಗಾಗಿ ಹಣ ಅಂತಸ್ತಿಗಾಗಿ ಎಂದು ಜನ ಛಿಮಾರಿ ಹಾಕಿದ್ದರು.
ಬಸವ ಪರ ಸಂಘಟನೆಗಳು : ಪೂಜ್ಯ ಅಕ್ಕ ಗಂಗಾಂಬಿಕೆಯ ಸಭೆ ಹಾಗೂ ಸಮಾರಂಭ ಬಹಿಷ್ಕಾರ :
ಪೂಜ್ಯ ಅಕ್ಕ ಗಂಗಾಂಬಿಕೆಯ ವಿರೋಧ ಅನೇಕ ಬಸವ ಪರ ಸಂಘಟನೆಗಳು ಅವರ ಸಭೆ ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ವಚನ ವಿಜಯೋತ್ಸವದಲ್ಲಿ ಯಾರು ಭಾಗವಹಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಲಿಂಗಾಯತ ಸಮಾಜದ ಸಭೆಯಲ್ಲಿ ಆಹ್ವಾನಿಸಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎರಡು ದಿನದಿಂದ ನಾವು ನೋಡುತ್ತಿರುವ ದೃಶ್ಯವಾಗಿದೆ.
ಇಂದು ಕೂಡ ಇಂತವರು ಲಿಂಗಾಯತ ಧರ್ಮ ಹೆಸರ ಮೇಲೆ ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವದು ಕೇವಲ ದುಡ್ಡಿಗಾಗಿ ಮಾತ್ರ ಎಂಬುದಿ ಯಾರು ಮರೆಯುವಂತಿಲ್ಲ. ಅದು ಬಿಟ್ಟು ಯಾವುದೇ ಬದ್ಧತೆಯಿಲ್ಲ, ಯಾವುದೇ ಆಚರಣೆ ಇಲ್ಲ, ನುಡಿದಂತೆ ನಡೆದು ತೋರಿಸುವ ಗುಣಗಳು ಇಲ್ಲ, ಇಂದು ಎಲ್ಲಾ ವೇಷಧಾರಿಗಳು ಮಾತ್ರ ಸಮಾಜದಲ್ಲಿ ಬಸವಣ್ಣನವರ ಹೆಸರಿನ ಮೇಲೆ ಅವರವರ ಅಂಗಡಿಗಳು ತೆಗೆದುಕೊಂಡು ವ್ಯಾಪಾರ ಮಾಡಿಕೊಂಡು ಚನ್ನಾಗಿ ಸಂಪಾದನೆ ಮಾಡಿ ನಿಜವಾದ ಬಸವಣ್ಣನವರ ತತ್ವ ಸಿದ್ದಾಂತಕ್ಕೆ ತಿಲ್ಲಾಂಜಲಿ ಇಡುತ್ತಿರುವುದು ಲಿಂಗಾಯತ ಸಮಾಜವು ಎಂದಿಗೂ ಕ್ಷೇಮಿಸಲಾಗದ ಅಪರಾಧ.. ಮುಂದಿನ ದಿನಗಳಲ್ಲಿ ಶಿವಶರಣರ ಹಾಗೂ ವಚನ ಸಾಹಿತ್ಯ ಮತ್ತು ಬಸವಣ್ಣನವರ ತತ್ವ ಸಂದೇಶಗಳನ್ನು ಪ್ರಸಾರ. ಪ್ರಚಾರ ಮಾಡುವ ಸಮಾಜಮುಖಿ ಚಿಂತಕರಿಗೆ ಮಾತ್ರ ಅವಕಾಶವನ್ನು ನೀಡಬೇಕು ಸ್ವಾರ್ಥಿಗಳನ್ನು ನೇರವಾಗಿ ಧಿಕ್ಕರಿಸಿ ಸಮಾಜದ ಏಳಿಗೆಗಾಗಿ ಎಲ್ಲರು ಶ್ರಮಿಸಬೇಕು ಎಂಬುದು ಶೋಧವಾಣಿ ಆಶಯ..
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!
ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...
.jpg)
-
ಹೈದರಾಬಾದ್ : ಇಂದು ಬೆಳಿಗ್ಗೆ ಬೀದರನಲ್ಲಿ ನಡೆದ ಎಟಿಎಂ ದರೋಡೆಕೋರರೆ ನಗರದ ಅಫ್ಜಲಗಂಜನಲ್ಲಿರುವ ರೋಷನ ಟ್ರಾವೆಲ್ ಕಛೆರಿಯಲ್ಲಿ ಪೊಲೀಸ್ ಮತ್ತು ದರೋಡೆಕೋರ ಮಧ್ಯೆ ಗುಂಡಿನ ...
-
ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್ನ ಎಸ್ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ. ...
-
ಶೋಧವಾಣಿ ಜಾಲಲೋಕ ಹೈದರಾಬಾದ್ : ಸಂಘಟಿತ ಹೋರಾಟ ಇಂದಿನ ದಿನಮಾನದ ಜರೂರು ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ...