ads

Search This Blog

Thursday, 26 December 2024

1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ್ ಶತಮಾನೊತ್ಸವ


ವೀರಸೌಧದಲ್ಲಿ ಗಾಂಧೀ ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಳಗಾವಿ :  ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೊತ್ಸವದ ಅಂಗವಾಗಿ ನಗರದ ಟಿಳಕವಾಡಿಯಲ್ಲಿನ ವೀರಸೌಧದಲ್ಲಿ ಗುರುವಾರ (ಡಿ.26) ಮಹಾತ್ಮಾ ಗಾಂಧೀಜಿಯವರ ನೂತನ ಪ್ರತಿಮೆಯನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ‌ ಅವರು ಅನಾವರಣಗೊಳಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.


ತದನಂತರ ವೀರಸೌಧದ ಆವರಣದಲ್ಲಿನ ಗಾಂಧೀ ಸ್ಮಾರಕ ಭವನದಲ್ಲಿನ ನವೀಕೃತ ಪೋಟೋ ಗ್ಯಾಲರಿಯನ್ನು‌ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು  ಉದ್ಘಾಟಿಸಿದರು.

ಇದೇ ವೇಳೆ ವೀರಸೌಧ(ಕಾಂಗ್ರೆಸ್ ಬಾವಿ) ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಸಸಿ ನೆಟ್ಟು ನೀರೆರೆದರು.

ಈ ಸಂದರ್ಭದಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ್, ಶರಣಬಸಪ್ಪ ದರ್ಶನಾಪುರ,  ಕೆ.ಎಚ್.ಮುನಿಯಪ್ಪ, ಶಾಸಕರಾದ ಆಸಿಫ್ (ರಾಜು) ಸೇಠ್, ಪರಿಷತ್ ಸದಸ್ಯ‌ ಚನ್ನರಾಜ್ ಹಟ್ಟಿಹೊಳಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಆರ್.ವಿ.ದೇಶಪಾಂಡೆ, ಸರಕಾರದ ಮುಖ್ಯ ಸಚೇತಕ ಅಶೋಕ‌‌ ಪಟ್ಟಣ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ವಾರ್ತಾ ಇಲಾಖೆಯ ಕಾರ್ಯದರ್ಶಿ ಕಾವೇರಿ ಬಿ.ಬಿ., ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಒಂ ಸಿಇಓ ರಾಹುಲ್ ಶಿಂಧೆ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಉಪ ನಿರ್ದೆಶಕರಾದ ಗುರುನಾಥ ಕಡಬೂರ ಮತ್ತಿತರರು ಉಪಸ್ಥಿತರಿದ್ದರು.

ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಭವನ, ಫೋಟೋ ಗ್ಯಾಲರಿ ಉದ್ಘಾಟನೆ ಸ್ಮಾರಕ ಭವನ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ

ಬೆಳಗಾವಿ :  "ಗಾಂಧಿ ಭಾರತ" ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗುರುವಾರ (ಡಿ.26) ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಭವನ‌ ಮತ್ತು ಛಾಯಾಚಿತ್ರ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.


ಸ್ಮಾರಕ ಭವನ ಅಂದಾಜು 15 ಗುಂಟೆ ಜಾಗೆಯಲ್ಲಿ 1.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸ್ಥಳದಲ್ಲಿ ಸ್ಮಾರಕ ಭವನ, ದೇಶಪಾಂಡೆ ಅವರ ಪುತ್ಥಳಿ, ಫೋಟೋ ಗ್ಯಾಲರಿ,  ಆವರಣದ ಕಾಂಪೌಂಡ್, ತಂತಿಬೇಲಿ, ಪೇವರ್ಸ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ.



ಈ ಸಂದರ್ಭದಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಎಚ್.ಕೆ ಪಾಟೀಲ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು ವೀರಪ್ಪ ಮೊಯ್ಲಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್(ರಾಜು)ಸೇಠ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ , ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ. ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಜಂಟಿ ನಿರ್ದೇಶಕ ಕೆ. ಎಚ್ ಚನ್ನೂರು, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಜರಿದ್ದರು.


ಸ್ವಾತಂತ್ರ್ಯ ಹೋರಾಟದಲ್ಲಿ ಗಂಗಾಧರ್ ರಾವ್ ದೇಶಪಾಂಡೆ ಪಾತ್ರ:



ಕರ್ನಾಟಕ ಸಿಂಹ ಎಂದೇ ಖ್ಯಾತಿ ಪಡೆದಿದ್ದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಹೆಮ್ಮೆಯ ಸುಪುತ್ರ, ಕೆಚ್ಚೆದೆಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಅವರೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲು ಮತ್ತು ಗಾಂಧೀಜಿ ಅಧ್ಯಕ್ಷತೆ ವಹಿಸಲು ಕಾರಣೀಕರ್ತರು.


ಗಂಗಾಧರರಾವ್ ಅವರ ಮುತ್ಸದ್ದೀತನ, ಸಮರ್ಥ ನಾಯಕತ್ವದ ಫಲವಾಗಿ ಬೆಳಗಾವಿ ಇತಿಹಾಸದಲ್ಲಿ ದಾಖಲಾಯಿತು. ಅಂದು ಕಾಂಗ್ರೆಸ್ ಪಕ್ಷದಲ್ಲಿ ಜವಾಹರಲಾಲ್ ನೆಹರು ಅವರಿಗೆ ಸರಿಸಮಾನವಾದ ಅಧಿಕಾರ ಹೊಂದಿದ್ದರು. ಗಂಗಾಧರರಾವ್ ಅವರು ಮನಸ್ಸು ಮಾಡಿದ್ದರೆ ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದ್ದರು. ಆದರೆ, ನನ್ನ ಹೋರಾಟ ಮತ್ತು ಸೇವೆ ದೇಶದ ಸ್ವಾತಂತ್ರ್ಯಕ್ಕೆ ಮಾತ್ರ ಸಿಮೀತ ಎಂದು ಹೇಳಿ ಆಧ್ಯಾತ್ಮಿಕತೆ ಕಡೆಗೆ ಸಾಗಿದ ನಿಸ್ವಾರ್ಥಿ.


ವೈಯಕ್ತಿಕ ವಿವರ:



ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಶ್ರೀಮಂತ ಮನೆತನದ ಬಾಲಕೃಷ್ಣ ಮತ್ತು ರಾಧಾಬಾಯಿ ದಂಪತಿಗಳ‌ ಉದರದಲ್ಲಿ 1871ರ ಮಾರ್ಚ 31ರಂದು ಜನಿಸಿದ ಗಂಗಾಧರರಾವ್ ದೇಶಪಾಂಡೆ ಅವರು, ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿ ಸರ್ದಾರ್ಸ್ ಹೈಸ್ಕೂಲ್ ನಲ್ಲಿ ಪಡೆದಿದ್ದಾರೆ. ಪುಣೆ ಡೆಕ್ಕನ್ ಕಾಲೇಜಿನಲ್ಲಿ ಪದವಿ ಮತ್ತು ಬಿಎ ಎಎಲ್ ಬಿ ಪೂರ್ಣಗೊಳಿಸಿದ್ದಾರೆ. ಪತ್ನಿ ಲಕ್ಷ್ಮೀಬಾಯಿ, ಪುತ್ರ ಬಾಲಕೃಷ್ಣ. 1960ರ ಜುಲೈ‌ 30ರಂದು ಗಂಗಾಧರಾವ್ ಅವರು ನಿಧನರಾದರು.


1922ರಲ್ಲಿ ಚರಕ ಸಂಘ, 1937ರಲ್ಲಿ ಹುದಲಿಯಲ್ಲಿ ಗಾಂಧಿಸೇವಾ ಸಂಘ ಸ್ಥಾಪಿಸಿದ್ದರು. ಈಗಲೂ‌ ಖಾದಿ ಗ್ರಾಮೋದ್ಯೋಗ ನೂರಾರು ಜನರಿಗೆ ಉದ್ಯೋಗ ಕೊಟ್ಟಿದೆ. 1920ರಲ್ಲಿ ಬೆಳಗಾವಿಯಲ್ಲಿ ಮುನ್ಸಿಪಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಗಂಗಾಧರಾವ್ ಅವರು, ಗೋಪಾಲಕೃಷ್ಣ ಗೋಕಲೆ, ಬಾಲಗಂಗಾಧರ ಟಿಳಕರ ಅನುಯಾಯಿಯಾಗಿದ್ದರು. ಅವರು ಕಾಲವಾದ ಬಳಿಕ‌ ಮಹಾತ್ಮಾ ಗಾಂಧೀಜಿ ಸಂಪರ್ಕಕ್ಕೆ ಬರುತ್ತಾರೆ. ಗಾಂಧೀಜಿ ಐವರು ಅತ್ಯಾಪ್ತರಲ್ಲಿ ಇವರು ಒಬ್ಬರಾಗುತ್ತಾರೆ. ಅಪ್ಪಟ ಗಾಂಧಿವಾದಿಯಾಗಿದ್ದ ಗಂಗಾಧರರಾವ್ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಶ್ರೀಮಂತಿಕೆ‌ ಇದ್ದರೂ ಸರಳ ಜೀವನ ನಡೆಸಿದ ಹೆಗ್ಗಳಿಕೆ ಇವರದ್ದು. 


ಗಾಂಧೀಜಿ ಮನವೊಲಿಸಿದ ದೇಶಪಾಂಡೆ:



ಮಹಾತ್ಮ ಗಾಂಧೀಜಿ ಹಿಂದಿನ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದರು.‌ ನಾನು ಅಧ್ಯಕ್ಷ ಇರಲಿ, ಬಿಡಲಿ. ಜನ ನನ್ನ‌ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ, ಗಂಗಾಧರರಾವ್ ಅವರು‌ ಮಾತ್ರ ಬಿಡಲಿಲ್ಲ‌. ಗಾಂಧೀಜಿ ಮನವೊಲಿಸಿ ಅಧ್ಯಕ್ಷರಾಗುವಂತೆ ಮಾಡಿದ್ದು ಇತಿಹಾಸ. ಬೆಳಗಾವಿ ಅಧಿವೇಶನದಲ್ಲೂ ಜವಾಹರಲಾಲ್ ನೆಹರು ಮತ್ತು ಗಂಗಾಧರಾವ್ ದೇಶಪಾಂಡೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.


ಹುಟ್ಟೂರಿಗೂ ಗಾಂಧೀಜಿ ಕರೆಸಿದ್ದರು:



ತಮ್ಮ ಹುಟ್ಟೂರು ಹುದಲಿಗೂ ಗಾಂಧೀಜಿ‌ ಅವರನ್ನು ಗಂಗಾಧರಾವ್ ಕರೆಸಿದ್ದರು. ಏಳು‌ ದಿನ ಅಲ್ಲಿಯೇ ಬಾಪು ವಾಸ್ತವ್ಯ ಹೂಡಿದ್ದರು. ಗಾಂಧಿ ಸೇವಾ ಸಂಘದ ಸಮ್ಮೇಳನ ಏರ್ಪಡಿಸಲಾಗಿತ್ತು. ಗಾಂಧೀಜಿ‌ ಅವರ ಜೊತೆಗೆ ಡಾ.ಬಾಬು ರಾಜೇಂದ್ರಪ್ರಸಾದ, ಅಬ್ದುಲ್ ಗಫಾರ್‌ಖಾನ್ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಶೌಕತ್ ಅಲಿ, ಸರೋಜಿನಿ ನಾಯ್ಡು, ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಜಿ. ನಾರಾಯಣ ಸೇರಿ ಅನೇಕ‌ ನಾಯಕರ ದಂಡೇ ಹುದಲಿಗೆ ಬಂದಿತ್ತು.

ಇನ್ನು ಭಾಷಾವಾರು ಪ್ರಾಂತ ರಚನೆ ವೇಳೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತಾ ಗಂಗಾಧರರಾವ್ ದೇಶಪಾಂಡೆ ಧ್ವನಿ ಎತ್ತಿದ್ದರು.

Tuesday, 24 December 2024

ಯಲದಗುಂಡಿ ಶ್ರೀ ಪರಮೇಶ್ವರ ಜಾತ್ರಾ ಮಹೋತ್ಸವ - ಜಗತ್ತು ಪರಮೇಶ್ವರನ ಪ್ರವಾಸಿ ತಾಣ - ಹಾರಕೂಡ ಶ್ರೀ

ಬಸವಕಲ್ಯಾಣ : ಈ ಜಗತ್ತು ಸೃಷ್ಟಿಕರ್ತ ಪರಮೇಶ್ವರನ ಪ್ರವಾಸಿ ತಾಣವಾಗಿದ್ದು, ನಾವೆಲ್ಲ ಕೆಲ ದಿನಗಳವರೆಗೆ ಸೌಂದರ್ಯವನ್ನು ಅನುಭವಿಸಿ ಮತ್ತೆ ಹಿಂತಿರುಗಲು ಬಂದ ಪ್ರವಾಸಿಗರು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.


 ತಾಲೂಕಿನ ಯಲದಗುಂಡಿ ಗ್ರಾಮದ ಶ್ರೀ ಪರಮೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಪ್ರಕೃತಿ ಸಹಜವಾಗಿ ಜನಿಸಿದ ಪ್ರತಿ ಮನುಷ್ಯ ಭವಚಕ್ರದಲ್ಲಿ ಸಿಲುಕಿ ನರಳದೆ ಸುಖ ಯಾತ್ರಿಕನಾಗಿ ಜೀವನ ಪಯಣ ಸಾಗಿಸಲು, ಮೋಹದ ಪರದೆ ಕಳಚಲು ಭಗವದ್ ದರ್ಶನ ಪಡೆಯಲು ನಿತ್ಯ ಸಂತುಷ್ಟನಾಗಿರುವಂತಹ ಕುಶಲ ಪ್ರಜ್ಞೆ ಬೆಳೆಸಿಕೊಳ್ಳಬೇಕು.

 ದೇವನ ಅದ್ಭುತ ಚಿತ್ತಾರವನ್ನು ಕಂಡು ಆನಂದಿಸಬೇಕೆ ವಿನ: ತನ್ನದಾಗಬೇಕೆಂಬ ಹಪಾಹಪಿತನ ಇರಬಾರದು. ದೇವರ ಛತ್ರ ಮುಂದಿನ ಪೀಳಿಗೆಗೆ ವ್ಯವಸ್ಥಿತವಾಗಿ ಬಿಟ್ಟು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಲೇಬೇಕಾದ ಸಂಗತಿ.

 ನಾವೆಲ್ಲ ಬಂದು ಹೋಗುವ ನೆಂಟರು ಎನ್ನುವುದಕ್ಕೆ ಪರಮೇಶ್ವರನ ಜಾತ್ರೆಯೇ ದೊಡ್ಡ ನಿದರ್ಶನ, ಎಲ್ಲರ ಜೀವನ ಯಾತ್ರೆ ಸಿರಿಸೌಖ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

 ತಾಲೂಕಿನ ಮಾನ್ಯ ಶಾಸಕರಾದ ಶರಣು ಸಲಗರ ಮಾತನಾಡಿ ಜಾತ್ರೆಗಳು ಮಾಡುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ಕೊಡುವುದು ಅವಶ್ಯಕವಾಗಿದೆ.

 ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳ ಜೊತೆಗೆ ಧಾರ್ಮಿಕ ಹಾಗೂ ನೀತಿ ಪ್ರದಾನವಾದ  ನಾಟಕಗಳು ಮಾಡುವುದರಿಂದ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಬಹುದು ಎಂದು ನುಡಿದರು. ಹಿರೇನಾಗಾಂವನ ಜಯಶಾಂತಲಿಂಗ ಮಹಾಸ್ವಾಮಿಗಳು, ನೀರಾವರಿ ನಿಗಮ ಮಂಡಳಿ ಬೆಂಗಳೂರಿನ ನಿವೃತ್ತ ವ್ಯವಸ್ಥಾಪಕ  ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ, ಮುಖಂಡರಾದ ಶಿವಕುಮಾರ ಸೆಟಗಾರ, ಹುಮನಾಬಾದಿನ ಪಿಎಸ್ಐ  ಸುರೇಶ ಚೌಹಾಣ ಮಾತನಾಡಿದರು.

 ಬಸ್ವತತ್ವ ಪ್ರಚಾರಕರಾದ ಬಸವರಾಜ ಪಂಡಿತ, ಶಿಕ್ಷಕರಾದ ಮಲ್ಲಿನಾಥ ಹಿರೇಮಠ ಹಾರಕೂಡ,  ಮುಖಂಡರಾದ ಬಾಬು ಹೊನ್ನಾನಾಯಕ, ಸಂಜು ಸುಗರೆ, ಸಂತೋಷ ಪಾಟೀಲ ಹಾರಕೂಡ, ಸಿದ್ರಾಮಪ್ಪ ಗುದಗೆ, ಸಿದ್ರಾಮಪ್ಪ ಕವಳೆ, ರತಿಕಾಂತ ಕೊಹಿನೂರ, ಸದಾನಂದ ಪಾಟೀಲ, ನಾಗೇಶ ಮಹಾಜನ ಮುಂತಾದವರು ಉಪಸ್ಥಿತರಿದ್ದರು. ಮಲ್ಲಪ್ಪ ಕೋಟೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ನನಗೆ ಆದರ್ಶ – ಡಾ. ಬಿ.ಟಿ. ಲಲಿತಾ ನಾಯಕ್

ಬೆಂಗಳೂರು : ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಅವರುಗಳೇ ನನಗೆ ಆದರ್ಶ ಎಂದು ಹಿರಿಯ ಸಾಹಿತಿ, ಚಿಂತಕರು ಹಾಗೂ ಮಾಜಿ ಸಚಿವರಾದ ಡಾ. ಬಿ. ಲಲಿತಾ ನಾಯಕ್ ಅವರು ತಿಳಿಸಿದರು.



ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿಯ ವತಿಯಿಂದ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್ ಮಳಾವ್ - 03(ಸಜ್ಜನರ ಸಲ್ಲಾಪ -03) ಮೀನಾರೋ ಪಾಮಣೋ(ತಿಂಗಳ ಅತಿಥಿ) ಸಮಾರಂಭದ ತಿಂಗಳ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಬಾಲ್ಯದ ದಿನಗಳಲ್ಲಿಯೇ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಸಂಸಾರಿಕ ತೊಂದರೆಯಿಂದ 8ನೇ ತರಗತಿಗೆ ಶಾಲೆ ಬಿಟ್ಟು ಸಂಸಾರದ ಕೆಲ ಸಂಗತಿಗಳನ್ನೇ ಬರಹ ರೂಪದಲ್ಲಿ ತರಲಾಯಿತು. ಬಹುಮುಖ್ಯವಾಗಿ ವೈಚಾರಿಕ ನೆಲಗಟ್ಟಿನಲ್ಲಿ ಚಿಂತಿಸುತ್ತಾ ಈ ಕುರಿತಾಗಿ ಹೆಚ್ಚು ಬರಹಗಳನ್ನು ಬರೆಯಲು ಉತ್ಸುಕಳಾದೆ ಎಂದು ತಿಳಿಸಿದರು.

ನನ್ನ ಬರಹಕ್ಕೆ ನನ್ನ ತಂದೆಯ ಒತ್ತಾಸೆ ಹಾಗೂ ಮೊದಲ ವೇದಿಕೆಯಾಗಿದ್ದು ಲಂಕೇಶ್ ಹಾಗೂ ಇತರೆ ಪತ್ರಿಕೆಗಳು ಇದ್ದವು ಎಂಬುದನ್ನು ಮರೆಯುವಂತಿಲ್ಲ. ರಾಜಕೀಯ ಕ್ಷೇತ್ರಕ್ಕೆ ಬಂದು ಕೆಲವರ ಪಿತೂರಿಗಳಿಂದ ಅಧಿಕಾರ ಕಳೆದುಕೊಂಡೆ. ನಜೀರ್ ಸಾಭ್ ಅವರು ನನ್ನನ್ನು ಎಂ.ಎಲ್.ಸಿ ಮಾಡಲು ಕಾರಣರಾದರೂ ಆ ನಂತರ ಸಚಿವೆಯಾದೆ. ಈ ಸಂದರ್ಭದಲ್ಲೂ ಕೂಡ ನನಗೆ ಸಾಹಿತ್ಯ ರಚನೆ ಬಗ್ಗೆಯೇ ಹೆಚ್ಚಿನ ತುಡಿತವಿತ್ತು. ಜೊತೆಗೆ ನನ್ನ ಸತ್ಯ ನಿಷ್ಠೆ, ಸರಳ ಜೀವನ ಇವುಗಳು ಸಚಿವೆಯಾಗಿ ಹೆಚ್ಚು ದಿನ ಮುಂದುವರೆಯದಂತೆ ಮಾಡಿದವು. ಆದರೂ ಧೃತಿಗೆಡಲಿಲ್ಲ, ಹಲವು ಬಗೆಯಲ್ಲಿ ಸಮಾಜ ಸೇವೆಗೆ ತೊಡಗಿಸಿಕೊಂಡಿರುವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಜಾರಾ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್ ಗೋವಿಂದಸ್ವಾಮಿ ಅವರು ಮಾತನಾಡಿ, ಕಳೆದ ಆರು ತಿಂಗಳಿಂದ ಅಕಾಡೆಮಿಯು ನಿರಂತರ 28ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಡೆಸಿದ ಕಾರ್ಯ ಚಟುವಟಿಕೆ ವಿವರಿಸುತ್ತಾ ಪ್ರಸ್ತುತ ಬಂಜಾರ ವಿಶ್ವಕೋಶ (ಎನ್‍ಸೈಕ್ಲೋಪೀಡಿಯಾ) ರಚಿಸುವ ಅಕಾಡೆಮಿ ತೊಡಗಿದ್ದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿರಚಿಸಲಾಗಿದೆ. ಕಾರ್ಯದಲ್ಲಿ ಪ್ರಥಮ ಸಾಹಿತಿ ಹಾಗೂ ಕಲಾವಿದರ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣವಾಗುತ್ತಿವೆ ಎಂದು ತಿಳಿಸಿದರು.
 
ರಾಜ್ಯದ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಹಾಗೂ ಬಂಜಾರ ಯುವಕ ಯುವತಿಯರಿಗೆ ಕಸೂತಿ, ತರಬೇತಿ ಶಿಬಿರ ಯಶಸ್ವಿ ಆಯೋಜಿಸಲಾಗಿದೆ ಹಾಗೂ ವಿಜಯಪುರದಲ್ಲಿ ಹತ್ತು ದಿನಗಳ ಬಂಜಾರ ಆಭರಣ ತಯಾರಿಕೆ ಕಾರ್ಯಾಗಾರ ನಡೆಸಲಾಗಿದೆ ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ನಾಡಿನ ಸಾಹಿತಿಗಳು ಚಿಂತಕರು ಪ್ರಗತಿಪರರು, ಸಮುದಾಯದ ಎಲೆಮರೆ ಕಾಯಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಕರೆಸಿ ತಿಂಗಳ ಅತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇವುಗಳ ಜೊತೆಗೆ ಅಕಾಡೆಮಿಯು ಬಂಜಾರ ಸಮುದಾಯದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡುವ, ಕೊಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಮಾನ್ಯ ಪ್ರಧಾನ ಮಂತ್ರಿ ಅವರನ್ನು ಬಂಜಾರ ಭಾಷೆಯನ್ನೂ ಪ್ರಸಾರ ಭಾರತೀಯ ಅಕಾಶವಾಣಿ, ದೂರದರ್ಶನ ಹಾಗೂ ಇತರೆ ಕಡೆ ಬೆಳಸಲು ಅವಕಾಶ ಹಾಗೂ ಬಂಜಾರ ಭಾಷೆಗೆ ಸಂವಿಧಾನಿಕ ಸ್ಥಾನ ಮಾನಕ್ಕೆ ಕೋರಲಾಗಿದೆ. ಜೊತೆಗೆ ಬಂಜಾರ ಮ್ಯೂಸಿಯಂ ಹಾಗೂ ಮಾದರಿ ತಾಂಡ ಅಲ್ಲದೆ ಲಿಪಿ ಇಲ್ಲದ ಬಂಜಾರ ಭಾಷೆಯನ್ನು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿಯೂ ಮತ್ತು ರಾಷ್ಟ್ರಮಟ್ಟದಲ್ಲಿ ನಾಗರೀಕ ಲಿಪಿಯಲ್ಲಿ ಬರೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಂಗ್ಲ ಭಾಷೆ  ಬಳಕೆ ಇದೆ. ಇದನ್ನೇ ಅನೇಕ ಬಂಜಾರ ಭಾಷಾ ತಜ್ಞರು ಅಖೈರು ಗೊಳಿಸಲು ತಮ್ಮ ಸಮರ್ಥನೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಕಾಡೆಮಿ ಹೆಚ್ಚಿನ ಸಂಶೋಧನೆ ಮಾಡಲಿದೆ ಮತ್ತು ಅಖೈರು ಗೊಳಿಸಲಿದೆ ಎಂದರು.

ಹಿರಿಯ ಸಾಂಸ್ಕøತಿಕ ಚಿಂತಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ವಿಶ್ರಾಂತ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಲಲಿತನಾಯಕ್ ಸಾಹಿತಿಯಾಗಿ ಗುರುತಿಸಿಕೊಂಡು ಆನಂತರ ರಾಜಕಾರಣಿಯಾದವರು. ಅನುವಾದಕಿ ಕೂಡ ಆಗಿದ್ದರು ಬಿ. ಟಿ. ಲಲಿತಾ ನಾಯಕ ಅವರು ಒಬ್ಬರು ರಾಜಕಾರಣಿ, ಸಾಹಿತಿ, ಪತ್ರಕರ್ತೆ ಅಂತ ತಿಳಿದುಕೊಂಡರೆ ಅಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ಸಾರ್ವಜನಿಕ ಹಿತಕ್ಕಾಗಿ ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೋ ಆ ಎಲ್ಲಾ ಕ್ಷೇತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ ಅವರು ಮೊದಲ ಬಾರಿ ಸಚಿವರಾಗಿದ್ದಾಗ ಬಹಳ ದೊಡ್ಡ ಸಂಚು ನಡೆದು ಅದನ್ನು ಕಳೆದುಕೊಳ್ಳಬೇಕಾಯಿತು. ಎಲ್ಲವನ್ನೂ ಕೂಡ ಸಾರ್ವಜನಿಕ ಹಿತಾಶಕ್ತಿಯಲ್ಲಿಯೇ ತೆಗೆದುಕೊಂಡವರು. ನನಗೆ ಆಶ್ಚರ್ಯ ಆಗಿರುವುದು ಏನೆಂದರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅವರ ಹೆಸರು ಕಾಣಿಸಿಕೊಂಡಾಗ, ಅವರಿಗೆ 10 ವರ್ಷದ ಹಿಂದೆಯೇ ರಾಜ್ಯೋತ್ಸವ ಪ್ರಶಸ್ತಿ ಬಂದಿರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಇಲ್ಲಿಯವರೆಗೆ ಬರದಿರುವುದು ಶೋಚನೀಯ, ಪ್ರಸಕ್ತ ಸಾಲಿನಲ್ಲಿ ಬಂಜಾರ ಅಕಾಡೆಮಿಯ ಅಧ್ಯಕ್ಷರ ಹಾಗೂ ಇತರರ ಶಿಫಾರಸ್ಸು, ತಜ್ಞರ ಸಮಿತಿ ಶಿಫಾರಸ್ಸಿನಿಂದ ಪ್ರಶಸ್ತಿ ಸಿಕ್ಕಿದದಕ್ಕಾಗಿ ಅಭಿನಂದಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೆ. ಎಲ್. ಮುಕುಂದ್ ರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ, ಶಿಕ್ಷಣ ತಜ್ಞ ಪೆÇ್ರ. ಪಾಂಡುನಾಯಕ್, ಪತ್ರಕರ್ತೆ ಮಂಜು ಶ್ರೀ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಉತ್ತಮ್ ರಾಥೋಡ್ ಹಾಗೂ ಇತರೆ ಸದಸ್ಯರು, ದಲಿತ ಕಾರ್ಮಿಕ ಮುಖಂಡರಾದ ಗವಿಕುಮಾರ್, ಸಾಹಿತಿ ಬಾಲುನಾಯಕ್ ಮುಂತಾದವರು ಉಪಸ್ಥಿತರಿದ್ದರು.

ನಿಗದಿತ ಅವಧಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿಗೊಳಿಸಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ :- ಡಿಸೆಂಬರ್.19 ರಿಂದ 24 ರವರೆಗೆ ದೇಶಾದ್ಯಂತ ಗುಡ್ ಗರ‍್ನನ್ಸ್ ಉತ್ತಮ ಆಡಳಿತ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ತಮ್ಮ ಹಂತದಲ್ಲಿಯೇ ನಿಗದಿತ ಅವಧಿ ಒಳಗಾಗಿ ಸಾರ್ವಜನಿಕರ ಅಹವಾಲುಗಳನ್ನು ವಿಲೇವಾರಿಗೊಳಿಸುವಂಎ ಜಿಲ್ಲಾಧಿಕಾರಿ ಶಿಲ್ಪಾ ಶಮಾ ತಿಳಿಸಿದರು.



 ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಹಮ್ಮಿಕೊಂಡ ಉತ್ಮತ ಆಡಳಿತ ಗುಡ್ ಗರ‍್ನನ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈಲ್ಲಾಡಳಿತದ ಜಿಲ್ಲಾ ಪಂಚಾಯತನ ವಿವಿಧ ಇಲಾಖೆಗಳು ತಳಮಟ್ಟದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕ್ರೀಯಾಶೀಲರಾಗಿರಬೇಕು. ಅರ್ಜಿಗಳು ಸಲ್ಲಿಯಾದ ತಕ್ಷಣವೇ ತಮ್ಮ ಮಟ್ಟದಲ್ಲಿ ಪರಿಶೀಲಿಸಿ ಪರಿಹರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲ ಸಹಾಯ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಒದಗಿಸಬೇಕೆಂದು ತಿಳಿಸಿದರು.
 ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಅಧಿಕಾರಿಗಳು ಸಕಾಲ ಹಾಗೂ ಐಪಿಜಿಆರ್‌ಎಸ್ ತಂತ್ರಾAಶದಲ್ಲಿ ಬಾಕಿಯಿರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ತಿಳಿಸಿದರು.
 ಬೀದರ ನಗರಸಭೆ 43 ಪ್ರಕರಣಗಳು ಬಾಕಿ ಇವೆ. ಸೇವಾ ಸಿಂಧು (ಎಸ್.ಸಿ./ಎಸ್.ಟಿ/ಓಬಿಸಿ) ಅಡಿ 181 ಪ್ರಕರಣಗಳು, ಸಹಕಾರ ಇಲಾಖೆಯ 25, ಕಾರ್ಮಿಕ ಇಲಾಖೆಯ 43, ಜಿಲ್ಲಾ ನೋಂದಣಿ 213, ಗ್ರಾಮಿಣ ಅಭಿವೃದ್ಧಿ ಪಂಚಾಯತರಾಜ್ 2, ಆರ್‌ಟಿಓ 15 ಸೇರಿದಂತೆ ಒಟ್ಟು 899 ವಿವಿಧ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
 ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೊಹಮ್ಮದ ಶಕೀಲ, ಬೀದರ ವಿಶ್ವವಿದ್ಯಾಲಯದ ರಜಿಸ್ಟಾçರ್ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿಗಳು ನೂತನ ತಾಂತ್ರಿಕತೆಗಳನ್ನು ಬಳಸಿಕೊಳ್ಳಬೇಕು-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

 ಬೀದರ :- ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿಗಳು ನೂತನ ತಾಂತ್ರಿಕತೆಗಳನ್ನು ಬಳಸುವುದರ ಜೊತೆಗೆ ಮಾರುಕಟ್ಟೆ ಸ್ಪರ್ಧೆ, ಕಡಿಮೆ ಉತ್ಪಾದನಾ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಉತ್ಪಾದನೆಗಳ ಬಗ್ಗೆ ಹೆಚ್ಚಿನ ಗಮನವಿಡಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಹೇಳಿದರು.


 ಅವರು ಮಂಗಳವಾರ ಬೀದರನ ನಾವಡಗೇರಿ ಚಿಕ್ಕಪೇಟೆ ಹತ್ತಿರವಿರುವ ಮಸ್ಟಿಫ್ ಸೆಲೆಕ್ಟ್ ಹೋಟೆಲ್‌ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ “ಎಂ.ಎಸ್.ಎ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು” ( RAMP) ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಯಾವುದೇ ಉದ್ಯಮಕ್ಕೆ ಕಚ್ಚಾ ವಸ್ತು ಮುಖ್ಯ, ಕಚ್ಚಾ ವಸ್ತು ದೊರೆಯುವ ಸ್ಥಳ ಅಂತರ ಹಾಗೂ ಸಾಗಾಟದ ವೆಚ್ಚ ಸಹ ಅತೀ ಮಹತ್ವವಾಗಿರುತ್ತದೆ. ಉತ್ಪಾದನಾ ವೆಚ್ಚಗಳನ್ನು ವಿವಿಧ ಹಂತಗಳಲ್ಲಿ ಕಡಿಮೆಗೊಳಿಸುವ ಬಗ್ಗೆ ಗಮನವಿರಬೇಕು. ಸಮಯದ ಉಳಿತಾಯ, ಕಾರ್ಮಿಕರ ಲಭ್ಯತೆ, ತಾಂತ್ರಿಕತೆಯ ವೆಚ್ಚಗಳನ್ನು ಸೇರಿ ಒಟ್ಟಾರೆಯಾಗಿ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಉತ್ತಮ ಉತ್ಪನ್ನಗಳನ್ನು ನೀಡಲು ಉದ್ಯಮಿ ಶ್ರಮಿಸಬೇಕೆಂದರು.
 ಸೂಕ್ಷö್ಮ, ಸಣ್ಣ, ಮಧ್ಯಮ ಕೈಗಾರಿಕಾ ಆರಂಭಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಾಲ ಹಾಗೂ ಕಡಿಮೆ ಬಡ್ಡಿ ಸಹಯಧನ ಇದೆ. ಗಡಿ ಹಾಗೂ ಸಣ್ಣ ಕೈಗಾರಿಕೆ ಘಟಕಗಳ ವಿಸ್ತರಣೆಗೆ ಆಧುನಿಕರ ತಾಂತ್ರಿಕ ಉನ್ನತೀಕರಣಕ್ಕೆ ವಿವಿಧ ಸೌಲಭ್ಯಗಳು ಲಭ್ಯವಿದ್ದು ಉದ್ಯಮಿಗಳು ಸದುಪಯೋಗಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.
 ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೊಳಿ ಮಾತನಾಡಿ, ಸಣ್ಣ ಕೈಗಾರಿಕೆಗಳಿಂದ ಸ್ಥಳೀಯ ಆರ್ಥಿಕತೆ ಬೆಳೆವಣಿಗೆಗೆ ಅನುಕೂಲವಾಗುತ್ತದೆ. ಸರಕಾರದ ಹೊಸ ಯೋಜನೆಗಳನ್ನು ಉದ್ಯಮಿಗಳು ಉಪಯೋಗಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಬೀದರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡ್ಟಿçÃಸ್ ಅಧ್ಯಕ್ಷರಾದ ಬಿ.ಜಿ.ಶೆಟಕಾರ, ಬೀದರ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಲಶೆಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ, ಕೆಮಿಕಲ್ ಮತ್ತು ಫಾರ್ಮಾಸ್ಯುಟಿಕಲ್ ಸಂಘದ ಅಧ್ಯಕ್ಷ ದೇವೇಂದ್ರಪ್ಪಾ, ವಿ.ಟಿ.ಪಿ.ಸಿ, ಕಲಬುರಗಿ ಶಾಖಾ ಕಛೇರಿಯ ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ, ಕಾಸಿಯಾ ಅಧ್ಯಕ್ಷರಾದ ಎಂ.ಜಿ.ರಾಜಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿವೇಕ ದೀಪಕ ವಾಲಿ ಅವರ ಕಾರ್ಯ ಶ್ಲಾಘನೀಯ -ರಘುನಾಥ ರೊಟ್ಟೆ

 ವಿವೇಕ ದೀಪಕ ವಾಲಿ ಫೌಂಡೆಶನ್‌ದಿ0ದ ೨೦೨೫ರ ಕ್ಯಾಲೆಂಡರ್ ಬಿಡುಗಡೆ

ಬೀದರ : ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜನಜೀವನ ರಕ್ಷಣೆ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಆಹೋರಾತ್ರಿ ಶ್ರಮಿಸಿದ ಕೋವಿಡ್ ಯುದ್ಧ ಸೇನಾನಿ ಪ್ರಶಸ್ತಿ ಪುರಸ್ಕೃತ, ಯುವ ಉದ್ಯಮಿ ವಿವೇಕ ದೀಪಕ ವಾಲಿ ಅವರ ಕಾರ್ಯ ಶ್ಲಾಘನೀಯ ಮತ್ತು ಸ್ವಾಗತಾರ್ಹವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮ್ಮ ಕುಲದೇವತಾ ಹೊನ್ನಿಕೇರಿ ಸಿದ್ದೇಶ್ವರ ದೇವರ ಹೆಸರಿನ ೨೦೨೫ರ ದಿನದರ್ಶಿಕೆ ಹೊರತಂದಿರುವುದು ಹರ್ಷದ ಸಂಗತಿಯಾಗಿದೆ ಎಂದು ಹಿರಿಯ ರಘುನಾಥ ರೊಟ್ಟೆ ಗುರೂಜಿ ಹಲ್ಲಾಳಿ ಹೇಳಿದರು. 

   ಅವರು ಇಂದು ಬೀದರ ಜಿಲ್ಲಾ ಕೆಂದ್ರದಿAದ ೧೨ ಕಿ. ಮೀ. ಅಂತರದಲ್ಲಿರುವ ಭಾಲ್ಕಿ ತಾಲ್ಲೂಕಿನ  ಸುಕ್ಷೇತ್ರ ಹೊನ್ನಿಕೇರಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ವಿವೇಕ ದೀಪಕ ವಾಲಿ ಎಂಟರಪ್ರೆöÊಜೆಸ್ ಮುದ್ರಿತ ಶ್ರೀ ಹೊನ್ನಿಕೇರಿ ಸಿದ್ದೇಶ್ವರ ನಾಮದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತಿದ್ದರು.

  ಇನ್ನೋರ್ವ ಹಿರಿಯ ನಾರಾಯಣರಾವ ಬಸವಂತರಾವ ಹುಲ್ಲ್ಯಾಳ, ದೈವಿ ಕಾರ್ಯಕ್ಕೆ ಪ್ರಶಂಸೆ ಮಾಡಿದರು. ವಿವೇಕ ದೀಪಕ ವಾಲಿ ಅಭಿಮಾನಿ ಬಳಗದ ಮುಖಂಡ ಪುಷ್ಪಕ ಭಗುಸಿಂಗ್ ಜಾಧವ ಮಾತನಾಡಿ ವಾಲಿರವರು ಯುವಕರ ಕಣ್ಮಣಿಯಾಗಿದ್ದಾರೆ ಅಪ್ಪಟ ದೇಶಭಕ್ತ, ರಾಷ್ಟçಪ್ರೇಮಿ, ಸಹೋದರತ್ವದ ಮನೋಭಾವನೆಯ ಚಿನ್ನದ ಕನ್ನಡಿಗರಾಗಿದ್ದು, ಈ ವರ್ಷವೂ ಸಹ ಹತ್ತು ಸಾವಿರ ದಿನದರ್ಶಿಕೆಗಳನ್ನು ಮುದ್ರಿಸಿ ಉಚಿತವಾಗಿ ನೀಡುತ್ತಿರುವುದು ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು. ರಮೇಶ ಮಿರ್ಜಾಪುರ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂರಕ್ಷಣೆಗೆ ಯುವ ಉತ್ಸಾಹಿ ತರುಣ ವಿವೇಕ ದೀಪಕ ವಾಲಿ ಅವರು ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ ಎಂದರು. ಪ್ರಧಾನ ಅರ್ಚಕರಾದ ಶಿವಾನಂದ ಸ್ವಾಮಿ ವಿಶೇಷ ಪೂಜೆ ಅರ್ಚನೆ, ಅಭಿಷೇಕ ಮಾಡಿ ಶುಭ ಹಾರೈಸಿದರು.

   ಈ ಸರಳ ಕಾರ್ಯಕ್ರಮದಲ್ಲಿ ಸಿದ್ಧಣ್ಣ ಯಳಸಂಗಿ, ದೀಪಕ ಅಷ್ಟಗಿಕರ್, ನಾಗಶೆಟ್ಟಿ ಧರಮಾಪುರ, ಆನಂದ ಕಂದಗೂಳೆ, ಮನೀಷ ಕುಲಕರ್ಣಿ, ಸಚಿನ ಎಂ.ಜೆ., ಆಕಾಶ ಕೋಡಗೆ, ಪುನೀತ, ಶಿವಪ್ರಸಾದ, ಕಾರ್ತಿಕ, ಸೌರವ ಜವಳಿ, ಸೇರಿದಂತೆ ಅನೇಕರಿದ್ದರು. 


ಬೀದರನ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ)ಕ್ಕೆ ರಾಷ್ಟ್ರಮಟ್ಟದ ಜಾನುವಾರು ತಳಿ ಸಂರಕ್ಷಣೆ ಪ್ರಶಸ್ತಿ

ಬೀದರ, :- ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯ ಅಂಗ ಸಂಸ್ಥೆಯಾದ ರಾಷ್ಟ್ರೀಯ ಜಾನುವಾರು ಅನುವಂಶಿಕ ಸಂಪನ್ಮೂಲಗಳ ಬ್ಯುರೋ (ನ್ಯಾಷನಲ್ ಬ್ಯುರೋ ಆಫ್ ಎನಿಮಲ್ ಜೆನೆಟಿಕ್ ರಿಸೊಸ್ರ್ಸ್), ಕರ್ನಾಲ್, ಹರಿಯಾಣದಲ್ಲಿ 2024ನೇ ಸಾಲಿನ ರಾಷ್ಟ್ರಮಟ್ಟದ ಜಾನುವಾರು ತಿಳಿ ಸಂರಕ್ಷಣೆ ಪ್ರಶಸ್ತಿಯನ್ನು ಬೀದರನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರವು ದೇವಣಿ ತಳಿ ಸಂರಕ್ಷಣೆಗಾಗಿ ಪಡೆದುಕೊಂಡಿದೆ ಎಂದು ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಕೆ.ಸಿ.ವೀರಣ್ಣ ತಿಳಿಸಿದರು.

23ನೇ ಡಿಸೆಂಬರ್.2024 ರಂದು ಕರ್ನಾಲ್, ಹರಿಯಾಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ (ರಾಷ್ಟ್ರೀಯ ಕೃಷಿಕರ ದಿನ) ಈ ಪ್ರಶಸ್ತಿಯನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಸಂಶೋಧನಾ ನಿರ್ದೇಶಕರಾದ ಡಾ. ಬಿ. ವಿ. ಶಿವಪ್ರಕಾಶ ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ. ಪ್ರಕಾಶಕುಮಾರ ರಾಠೋಡ ಅವರು ಸ್ವೀಕರಿಸಿದ್ದಾರೆಂದರು.




ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ), ಬೀದರವು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಸಂಶೋಧನೆ ಮತ್ತು ವಿಸ್ತರಣಾ ಘಟಕವಾಗಿದೆ. ಇದನ್ನು 1970ರಲ್ಲಿ 57 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ಜಾನುವಾರುಗಳಲ್ಲಿ ಜನಪ್ರಿಯ ದ್ವಿ-ಉದ್ದೇಶಿತ ತಳಿಯಾದ ದೇವಣಿ 300 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಈ ತಳಿಯು ಬರ ಸಾಮಥ್ರ್ಯ, ಶಾಖ ಸಹಿಷ್ಣುತೆ, ರೋಗ ನಿರೋಧಕತೆ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಿಕೆಗೆ ಹೆಸರುವಾಸಿಯಾಗಿದೆ. ಇದಲ್ಲದೆ, ದೇವಣಿ ತಳಿಯ ಎತ್ತುಗಳು ಭಾರೀ ಕೆಲಸಕ್ಕೆ ಒಳ್ಳೆಯದು ಮತ್ತು ವಿಶೇಷವಾಗಿ ಅರೆ-ತೀವ್ರ ಕೃಷಿಗೆ ಸೂಕ್ತವಾಗಿದೆ.
ಈ ಕೇಂದ್ರದಲ್ಲಿ ರೈತರು, ರೈತ ಮಹಿಳೆಯರು, ಪಶುವೈದ್ಯಾಧಿಕಾರಿಗಳು ಮತ್ತು ಇತರ ಕ್ಷೇತ್ರ ವೃತ್ತಿಪರರ ಅನುಕೂಲಕ್ಕಾಗಿ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕೇಂದ್ರವು ಕಳೆದ ಐದು ವರ್ಷಗಳಲ್ಲಿ 4000 ಕ್ಕೂ ಹೆಚ್ಚು ರೈತರಿಗೆ ಆನ್-ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಮೂಲಕ ತರಬೇತಿ ಮತ್ತು ಕ್ಷೇತ್ರ ಭೇಟಿಗಳನ್ನು ನಡೆಸಿದೆ. ಇದಲ್ಲದೆ, ಕರ್ನಾಟಕದ ವಿವಿಧ ಪಶುವೈದ್ಯಕೀಯ ಮಹಾವಿದ್ಯಾಲಯಗಳಿಂದ ಸುಮಾರು 800 ಬಿ.ವ್ಹಿ.ಎಸ್ಸಿ. ಮತ್ತು ಎ.ಎಚ್ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಲ್ಲಿ ತಮ್ಮ ವಿಸಿಐ ಪಠ್ಯಕ್ರಮದ ಭಾಗವಾಗಿ ಈ ಕೇಂದ್ರದಲ್ಲಿ ಇಂಟನ್ರ್ಶಿಪ್ ಕಾರ್ಯಕ್ರಮಕ್ಕೆ ಒಳಗಾಗಿದ್ದಾರೆ.
ಆಧುನಿಕ ವೈಜ್ಞಾನಿಕ ಜಾನುವಾರು ಪದ್ಧತಿಗಳ ಭಾಗವಾಗಿ, ಕೇಂದ್ರವು ಸಾಂಪ್ರದಾಯಿಕ ವಸತಿ ಮತ್ತು ಬಂಧನ ಮುಕ್ತ ಪದ್ಧತಿಯ ಮುಖಾಂತರ ವಸತಿ ಸೌಲಭ್ಯಗಳನ್ನು ಕಲ್ಪಿಸಿದೆ. ಕೇಂದ್ರವು ಹಸಿರು ಮೇವು, ಒಣ ಮೇವು, ಸಾಂದ್ರೀಕೃತ ಆಹಾರಗಳು ಮತ್ತು ನಿರ್ದಿಷ್ಟ ಖನಿಜ ಮಿಶ್ರಣದ ರೂಪದಲ್ಲಿ ವೈಜ್ಞಾನಿಕ ಆಹಾರ ಪದ್ಧತಿಗಳನ್ನು ಅನುಸರಿಸುತ್ತಿದೆ. ಜಾನುವಾರುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೇಂದ್ರವು ಸುಮಾರು 30 ಎಕರೆ ಹಸಿರು ಮೇವು ಉತ್ಪಾದನೆಯನ್ನು ಹೊಂದಿದೆ, ಇದರಲ್ಲಿ 8 ಎಕರೆ ಹುಲ್ಲುಗಾವಲಿನಲ್ಲಿ ವಿವಿಧ ಮೇವಿನ ಬೆಳೆಗಳಾದ ರೋಡ್ಸ್, ಪ್ಯಾರಾಗ್ರಾಸ್, ಗಿನಿ ಹುಲ್ಲು ಇತ್ಯಾದಿಗಳನ್ನು ಬೆಳೆಯಲಾಗಿದೆ. ಸಂಶೋಧನಾ ಕೇಂದ್ರವು ಸುಸಜ್ಜಿತ ಮೇವು ಸಂಗ್ರಹಾಲಯವನ್ನು ಹೊಂದಿದ್ದು, ರೈತ ಸಮುದಾಯದ ಪ್ರಯೋಜನಕ್ಕಾಗಿ ಮೇವಿನ 35 ವಿಭಿನ್ನ ಬೆಳೆಗಳನ್ನು ಒಳಗೊಂಡಿದೆ.
ಹೆಚ್ಚಿನ ಅನುವಂಶಿಕ ಅರ್ಹತೆ ಹೊಂದಿರುವ ಹೋರಿ ಕರುಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧ ಸರ್ಕಾರಿ ವೀರ್ಯ ಉತ್ಪಾದನಾ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತದೆ. ವಿವಿಧ ವೀರ್ಯ ಕೇಂದ್ರಗಳಲ್ಲಿ ಈ ಹೋರಿಗಳಿಂದ ಸುಮಾರು 2,80,000 ವೀರ್ಯ ಡೋಸ್ಗಳನ್ನು ಉತ್ಪಾದಿಸಲಾಗಿದೆ. ಇದಲ್ಲದೆ, ಕೇಂದ್ರವು ರೈತ ಸಮುದಾಯದ ಅನುಕೂಲಕ್ಕಾಗಿ ಮತ್ತು ದೇವಣಿ ತಳಿ ಸಂರಕ್ಷಣೆಯನ್ನು ಉತ್ತೇಜಿಸಲು ದೇವಣಿ ತಳಿಗಳ ಮಾರಾಟ/ಹರಾಜನ್ನು ಸಹ ನಡೆಸುತ್ತದೆ. ಕಳೆದ 10 ವರ್ಷಗಳ ಅವಧಿಯಲ್ಲಿ, ರೈತ ಸಮುದಾಯದ ಅನುಕೂಲಕ್ಕಾಗಿ 300ಕ್ಕೂ ಹೆಚ್ಚು ದೇವಣಿ ಜಾನುವಾರುಗಳನ್ನು ಹರಾಜು ಮಾಡಲಾಗಿದೆ. ಇದಲ್ಲದೆ ಈ ಕೇಂದ್ರವು “ಕರ್ನಾಟಕದ ಬೀದರ ಜಿಲ್ಲೆಯಲ್ಲಿ ದೇವಣಿ ಜಾನುವಾರುಗಳ ಕಾರ್ಯಕ್ಷಮತೆಯ ದಾಖಲೆ” ಯೋಜನೆಯನ್ನು ಜಾರಿಗೆ ತಂದಿದೆ. ಬೀದರ ಜಿಲ್ಲೆಯ ಔರಾದ್ ಮತ್ತು ಭಾಲ್ಕಿ ತಾಲೂಕಿನ 21 ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ದೇವಣಿ ತಳಿಗಳ ಅಧ್ಯಯನವನ್ನು ನಡೆಸಲಾಗಿದೆ. 500 ಕ್ಕೂ ಹೆಚ್ಚು ದೇವಣಿ ತಳಿ ಸಾಕಣೆ ರೈತರಿಂದ ಸುಮಾರು 5200 ಕ್ಕೂ ಹೆಚ್ಚು ದೇವಣಿ ಜಾನುವಾರುಗಳ ಮೂಲ ಡೇಟಾವನ್ನು (ಮಾಹಿತಿ) ಸಂಗ್ರಹಿಸಲಾಗಿದೆ.
ಕೇಂದ್ರವು ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ 8 ಕರುಗಳನ್ನು ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ. ಭವಿಷ್ಯದಲ್ಲಿ, ಈ ಕಾರ್ಯಕ್ರಮವನ್ನು ಕ್ಷೇತ್ರ ಪರಿಸ್ಥಿತಿಗಳಲ್ಲಿ ಕಾರ್ಯಗತಗೊಳಿಸಲು ಕೇಂದ್ರವು ಯೋಜಿಸುತ್ತಿದೆ. ಇದಲ್ಲದೇ, ವಿಶ್ವವಿದ್ಯಾಲಯದಲ್ಲಿ ದೇವಣಿ ತಳಿ ಪಾಲನೆ, ಕಾರ್ಯಕ್ಷಮತೆ, ಸಂರಕ್ಷಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸುಮಾರು 25 ಅಧ್ಯಯನಗಳನ್ನು ನಡೆಸಲಾಗಿದೆ.
ಕೇಂದ್ರವು ಹಾಲು, ಗೋಮೂತ್ರ, ಮೇವಿನ ಬೇರುಗಳು / ಕಾಂಡದ ತುಂಡುಗಳು, ಗೊಬ್ಬರ, ಎರೆಹುಳು ಗೊಬ್ಬರ, ಎರೆಹುಳು, ಹಸುವಿನ ಸಗಣಿ ಇತ್ಯಾದಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿದೆ. ಈ ಕೇಂದ್ರವು ವಿವಿಧ ಸಂಸ್ಥೆಗಳು/ವಿಶ್ವವಿದ್ಯಾಲಯಗಳು ಆಯೋಜಿಸುವ ಜಾನುವಾರು ಪ್ರದರ್ಶನಗಳು, ಕೃಷಿ ಮೇಳ, ಪಶು ಮೇಳ ಇತ್ಯಾದಿಗಳಲ್ಲಿ ದೇವಣಿ ತಳಿಯ ಬಗ್ಗೆ ಜಾಗೃತಿ ಮೂಡಿಸಲು ಭಾಗವಹಿಸುತ್ತದೆ ಮತ್ತು ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದೆ. ಈ ಸಂಸ್ಥೆಯು ಭಾರತ ಸರ್ಕಾರದ ಅಂಚೆ ಇಲಾಖೆಯ ಸಹಯೋಗದೊಂದಿಗೆ 2019 ರಲ್ಲಿ ದೇವಣಿ ತಳಿಯ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿದೆ.
ಈಗಾಗಲೇ, ಕೇಂದ್ರಕ್ಕೆ ಭೇಟಿ ನೀಡಿದ ಕೆಲವು ಪ್ರಮುಖ ಗಣ್ಯರೆಂದರೆ ಘನವೆತ್ತ, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಡಾ. ಬಿ. ಎನ್. ತ್ರಿಪಾಠಿ (ಐಸಿಎಆರ್), ಡಾ. ಆರ್. ಸಿ. ಅಗರವಾಲ್ (ಐಸಿಎಆರ್), ಡಾ. ರಾಘವೇಂದ್ರ ಭಟ್ (ಐಸಿಎಆರ್) ಮುಂತಾದವರು ಈ ಕೇಂದ್ರವು ವಿಶ್ವವಿದ್ಯಾಲಯ ಮತ್ತು ಸರ್ಕಾರದ ಬೆಂಬಲದೊಂದಿಗೆ ದೇವಣಿ ತಳಿಯ ಜಾನುವಾರುಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಶ್ರಮಿಸುವುದನ್ನು ಮುಂದುವರಿಸುತ್ತದೆ.
ಪಶುವೈದ್ಯಕೀಯ ಮತ್ತು ಪ್ರಾಣಿ ವಿಜಾÐನ ಕ್ಷೇತ್ರದಲ್ಲಿ ಈ ಗಮನಾರ್ಹ ಸಂಶೋಧನೆಗಾಗಿ ನಾನು ಈಗೀನ ಹಾಗೂ ಮೊದಲಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಯಶಸ್ಸು ವಿಜಾÐನಿಗಳ ತಂಡದ ಸಮರ್ಪಣೆ, ಪರಿಣಿತಿ ಮತ್ತು ಪ್ರವರ್ತಕ ಮನೋಭಾವವನ್ನು ಎತ್ತಿ ತೋರಿಸಿತ್ತದೆ. ಇದು ಜಾನುವಾರು ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಬದ್ಧತೆಯನ್ನು ಬಲಪಡಿಸುತ್ತದೆ. ಈ ಪ್ರಶಸ್ತಿಯು ಹೈನುಗಾರಿಕೆ ಉದ್ಯಮಕ್ಕೆ ಉಜ್ವಲ ಭವಿಷ್ಯದ ಭರವಸೆ ನೀಡುವುದರೊಂದಿಗೆ, ನಮ್ಮ ದೇಶಿ ತಳಿ ಸಂರಕ್ಷಣೆ ಮತ್ತು ಪ್ರಸರಣವನ್ನು ಕೈಗೊಳುವ ಸಾಮಥ್ರ್ಯವನ್ನು ಪ್ರದರ್ಶಿಸುತ್ತವೆ ಎಂದರು.
ಈ ಸಂಸ್ಥೆಯು ಭಾರತದಲ್ಲಿ ವಿವಿಧ ಜಾನುವಾರುಗಳ ತಳಿ ನೋಂದಣಿ, ಪ್ರಸರಣೆ, ಸಂಶೋಧನೆ, ವಿಸ್ತರಣೆಯಂತಹ ಚಟುವಟಿಕೆಗಳನ್ನು ಮಾಡುತ್ತಿದೆ. ಈಗಾಗಲೇ ನೋಂದಾಯಿಸಲಾದ ದೇಶಿ ತಳಿಗಳು ಹೀಗಿವೆ 53 ತಳಿ ಆಕಳು, 20 ತಳಿ ಎಮ್ಮೆಗಳು, 39 ತಳಿ ಮೇಕೆಗಳು, 45 ತಳಿ ಕುರಿಗಳು, 8 ತಳಿ ಕುದುರೆ & ಪೆÇೀನಿಗಳು, 9 ತಳಿ ಒಂಟೆಗಳು, 14 ತಳಿ ಹಂದಿಗಳು, 3 ತಳಿ ಕತ್ತೆಗಳು, 1 ತಳಿ ಯಾಕ್, 3 ತಳಿ ಬಾತುಕೋಳಿ ಮತ್ತು 1 ತಳಿ ಗೀಸ್ ಎಂದರು.

ಮುಂದಿನ ಎರಡು ವರ್ಷದಲ್ಲಿ ಕಲಬುರಗಿ ಹೆಲ್ತ್ ಹಬ್ -ಡಾ.ಶರಣಪ್ರಕಾಶ ಪಾಟೀಲ

 ಕಲಬುರಗಿ -ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅರೋಗ್ಯ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಸರ್ಕಾರ ಪಣ ತೊಟ್ಟಿದ್ದು, ಇದಕ್ಕೆ ಇಂದಿನ ಜಯದೇವ ಆಸ್ಪತ್ರೆ ಲೋಕಾರ್ಪಣೆ ಸಾಕ್ಷಿಯಾಗಿದೆ. ಮುಂದಿನ ೨ ವರ್ಷದಲ್ಲಿ ಕಲಬುರಗಿಯನ್ನು ಹೆಲ್ತ್ ಹಬ್ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.

ರವಿವಾರ ಕಲಬುರಗಿ ನಗರದ ನೂತನವಾಗಿ ನಿರ್ಮಿಸಿರುವ ೩೭೧ ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆಯನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೩೭೧ ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.

ಮುAದಿನ ಮೂರು ತಿಂಗಳಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುತ್ತಿದೆ. ಹಳೇ ಜಿಲ್ಲಾ ಆಸ್ಪತ್ರೆ ಕೆಡವಿ ಅಲ್ಲಿ ೧೦೦ ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ಜಿಮ್ಸ್ ಆವರಣದಲ್ಲಿಯೇ ೫೦ ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್, ಸುಟ್ಟು ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಗುಲಬರ್ಗಾ ವಿ.ವಿ.ಯಲ್ಲಿ ೧೦ ಎಕರೆ ಜಮೀನಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ ಕಲಬುರಗಿಯನ್ನು ಹೆಲ್ತ್ ಹಬ್ ಮಾಡುವ ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ಡಾ.ಶರಣಪ್ರಕಾಶ ಪಾಟೀಲ ವಿವರಿಸಿದರು.

ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಬಂದ ೩೭೧ ಕಾಯ್ದೆಯ ಜಾರಿಯ ಫಲವಾಗಿ ಇವೆಲ್ಲಾ ಅಭಿವೃದ್ದಿ ಕೆಲಸ ಜಿಲ್ಲೆ ಮತ್ತು ಪ್ರದೇಶದಲ್ಲಿ ಸಾಗಿದೆ. ಕಾಯ್ದೆ ಜಾರಿಯಿಂದ ಇಲ್ಲಿಯವರೆಗೆ ೮ ಸಾವಿರ ವೈದ್ಯಕೀಯ ಸೀಟ್ ಪ್ರವೇಶಾತಿ ನಮ್ಮ ಭಾಗದ ಮಕ್ಕಳಿಗೆ ಸಿಕ್ಕಿದೆ. ೮೦ ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ೧ ಲಕ್ಷ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ದೊರೆತಂತಾಗಿದೆ. ಕೆ.ಕೆ.ಆರ್.ಡಿ.ಬಿ. ಮಂಡಳಿಯಿAದ ಪ್ರದೇಶದ ಅಭಿವೃದ್ಧಿಗೆ ಇದೂವರೆಗೆ ೧೮ ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.

ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ ಪ್ರದೇಶದಲ್ಲ್ಲಿ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಇದು ಮೈಲಿಗಲ್ಲಾಗಿದೆ. ಹಿಂದೆಲ್ಲ ಹೃದ್ರೋಗ ಸಮಸ್ಯೆ ಎದುರಾದಲ್ಲಿ ಬೀದರದವರು ಹೈದ್ರಾಬಾದ್‌ಗೆ, ಕಲಬುರಗಿಯವರು ಸೋಲಾಪೂರ್ ಹೋಗಬೇಕಿತ್ತು. ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣದಿಂದ ಈ ತಾಪತ್ರಯ ತಪ್ಪಲಿದೆ. ಈ ಭಾಶಗದಲ್ಲಿ ಬೇರೆ ಭಾಗಕ್ಕೆ ಹೋಲಿಸಿದಾಗ ತಾಯಿ-ಶಿಶು ಮರಣ ಪ್ರಮಾಣ ತುಸು ಹೆಚ್ಚಿಸದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ನಾವು ಹಿಂದುಳಿದಿದ್ದು, ಇಂತಹ ಉನ್ನತ ಆರೋಗ್ಯ-ಶಿಕ್ಷಣ ಸಂಸ್ಥೆಗಳು ಅದರ ನಿವಾರಣೆಗೆ ಅನುಕೂಲವಾಗಲಿವೆ ಎಂದರು.

ಕಲ್ಯಾಣ ಪ್ರದೇಶಕ್ಕೆ ಕೆ.ಕೆ.ಆರ್.ಡಿ.ಬಿ. ಬದ್ದ: ಜೇವರ್ಗಿ ಶಾಸಕ ಮತ್ತು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ್ ಮಾತನಾಡಿ, ಮಂಡಳಿಯ ೩೦೨ ಕೋಟಿ ರೂ. ನೆರವಿನಿಂದ ಕಲಬುರಗಿ ಜಯದೇವ ಆಸ್ಪತ್ರೆ ನಿರ್ಮಿಸಲಾಗಿದೆ. ಇದಲ್ಲದೆ ತಾಯಿ-ಮಗು ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಸುಟ್ಟು ಗಾಯಗಳ ಘಟಕದ ನಿರ್ಮಾಣಕ್ಕೂ ಅನುದಾನ ನೀಡಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಕಿ ಆರೋಗ್ಯ ಇಲಾಖೆಗೆ ಸಂಬAಧಿಸಿದAತೆ ೮೫೭ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಇದರಲ್ಲಿ ಕ.ಕ.ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮತ್ತು ಮೇಲ್ದರ್ಜೇ, ಅಂಬುಲೆನ್ಸ್ ವಾಹನ ಸೌಕರ್ಯ ಕಲ್ಪಿಸಲು ೩೧೯ ಕೋಟಿ ರೂ. ಹಣ ಮಂಡಳಿ ನೀಡಲಿದೆ. ಪ್ರದೇಶದಲಿಲ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸುಧಾರಣೆ ಅಕ್ಷರ ಮತ್ತು ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ತೊಗರಿಗೆ ಪರಿಹಾರ ಕೊಡಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ, ೩೭೧ ಹಾಸಿಗೆಯ ಆಸ್ಪತ್ರೆ ತಮ್ಮ ಕ್ಷೇತ್ರದಲ್ಲಿ ಉದ್ಘಾಟನೆಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ವಿಚಿತ್ರ ರೋಗದಿಂದ ಸುಮಾರು ೨ ಲಕ್ಷ ಹೆಕ್ಟೇರ್ ತೊಗರಿ ಬೆಳೆ ನಾಶವಾಗಿದೆ. ಕಳೆದ ವರ್ಷ ತೊಗರಿ ನೆಟೆ ರೋಗಕ್ಕೆ ತಾವೇ ೧೪೧ ಕೋಟಿ ರೂ. ಪರಿಹಾರ ನೀಡಿದ್ದು, ಈ ವರ್ಷದ ವಿಚಿತ್ರ ರೋಗಕ್ಕೆ ಪರಿಹಾರ ಘೋಷಿಸಿ ರೈತರ ನೆರವಿಗೆ ಧಾವಿಸಬೇಕೆಂದು ಸಿ.ಎಂ. ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವಿಂದ್ರನಾಥ ಪ್ರಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಬೆಂಗಳೂರಿನ ಮುಖ್ಯ ಶಾಖೆ ಮತ್ತು ಉಪ ಕೇಂದ್ರ ಹಾಗೂ ಮೈಸೂರು ಶಾಖೆಯಲ್ಲಿ ೧,೭೫೦ ಹಾಸಿಗೆ ಜೊತೆಗೆ ಕಲಬುರಗಿಯ ಈ ಆಸ್ಪತ್ರೆ ೩೭೧ ಹಾಸಿಗೆ ಸೇರಿದಂತೆ ಒಟ್ಟಾರೆ ಆಸ್ಪತ್ರೆಯ ಹಾಸಿಗೆ ಸಂಖ್ಯೆ ೨,೦೦೦ ದಾಟಿದೆ. ದೇಶದ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಮತ್ತು ಆಗ್ನೇಯ ಏಷ್ಯಾದ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಜಯದೇವ ಆಸ್ಪತ್ರೆ ಗುರುತಿಸಿಕೊಂಡಿದ್ದು, ಇಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.೩೦ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕಲ್ಯಾಣ ಭಾಗದ ಅರೋಗ್ಯ ಮುಕುಟ "ಜಯದೇವ": ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯನ್ನು ಮೆಡಿಕಲ್ ಹಬ್ ಮಾಡುವ ರಾಜ್ಯ ಸರ್ಕಾರದ ಉದ್ದೇಶಕ್ಕೆ ನೂತನ ಜಯದೇವ ಆಸ್ಪತ್ರೆ ಮುಕುಟವಾಗಿ ಎದ್ದು ನಿಂತಿದೆ. ೩೨೭.೧೭ ಕೋಟಿ ರೂ. ಮೊತ್ತದ ಈ ಯೋಜನೆಗೆ ೩೦೨ ಕೋಟಿ ರೂ. ನೀಡುವ ಮೂಲಕ ಪ್ರದೇಶದ ಅರೋಗ್ಯ ಆವಿಷ್ಕಾರಕ್ಕೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಮುಂಚೂಣಿಯಲ್ಲಿ ನಿಂತಿದೆ.

ನೂತನ ಆಸ್ಪತ್ರೆಯಲ್ಲಿ ಕಾರ್ಡಿಯೋಲಾಜಿ, ಕಾರ್ಡಿಯಾ ಥೋರಾಸಿಕ್ ಸರ್ಜರಿ, ವಿಶೇಷವಾಗಿ ವಸ್ಕುಲರ್ ಸರ್ಜರಿ, ಮಕ್ಕಳ ಹೃದ್ರೋಗ ವಿಭಾಗ, ರೇಡಿಯೋಲಾಜಿ ವಿಭಾಗ ಒಳಗೊಂಡಿದೆ. ೩ ಕ್ಯಾತಲ್ಯಾಬ್, ೩ ಅಪರೇಷನ್ ಥಿಯೇಟರ್, ೧ ಹೈಬ್ರಿಡ್ ಓ.ಟಿ. ಇರಲಿದೆ. ಸಿ.ಟಿ.ಸ್ಕ್ಯಾನ್, ಎಕ್ಸ್ರೇ, ೧.೫ಟಿ ಇ.ಎಂ.ಆರ್.ಐ., ಅಲ್ಟಾçಸೋನೋಗ್ರಾಫಿ, ಹೈಟೆಕ್ ಪೆಥಾಲೋಜಿ ಬ್ಲಡ್ ಬ್ಯಾಂಕ್ ಸೇವೆಗಳು ರೋಗಿಗಳಿಗೆ ಲಭ್ಯವಿರಲಿದೆ. ೧೦೫ ಐ.ಸಿ.ಸಿ.ಯು ಬೆಡ್, ೧೨೦ ಜನರಲ್ ಬೆಡ್ (ಸೆಮಿ ಸ್ಪೆಷಲ್ ವಾರ್ಡ್, ಸ್ಪೆಷಲ್ ವಾರ್ಡ್, ಡೀಲಕ್ಸ್ ವಾರ್ಡ್), ೧೨ ರಿಕವರಿ ಬೆಡ್, ೧೨ ಪೋಸ್ಟ್ ಆಪರೇಟಿವ್ ಬೆಡ್ ಸೇರಿದಂತೆ ೩೭೧ಜೆ ಕಾಯ್ದೆ ದಶಮಾನೋತ್ಸವದ ಸವಿನೆನಪಿಗೆ ಕಲಬುರಗಿಯಲ್ಲಿ ಈ ಶಾಖಾ ಆಸ್ಪತ್ರೆ ೩೭೧ ಹಾಸಿಗೆ ಆಸ್ಪತ್ರೆಯೆಂದು ಘೋಷಿಸಿದ್ದು, ಒಟ್ಟಾರೆ ೩೭೧ ಹಾಸಿಗೆ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.


ಉದ್ಯೋಗ,ಮತ್ತು ಶಿಕ್ಷಣದಲ್ಲಿ ಮಾತ್ರ ಬೆಳವಣೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕು


ಕಲಬುರಗಿ : ಜಿಲ್ಲೆಯಾದ್ಯಂತ ಉದ್ಯೋಗ  ಮತ್ತು ಶಿಕ್ಷಣದಲ್ಲಿ ಮಾತ್ರ ಬೆಳವಣೆಯಾಗುತ್ತಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಯನ್ನು ಕಾಣುತ್ತಿಲ್ಲ ಪ್ರ‍್ರತ್ಯೇಕ ಕಲ್ಯಾಣ ಕರ್ನಾಟಕ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಬೇಕು   ಎಂದು  ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ್ ಜಿ. ಪಾಟೀಲ್ ಅವರು ಹೇಳಿದರು.

 ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಹಯೋಗದಲ್ಲಿ "ಎಂ.ಎಸ್.ಎA.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು" ( ಆರ್‌ಎಎಂಪಿ ) ಯೋಜನೆಯಡಿಯಲ್ಲಿ  ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಉದ್ಫಾಟಿಸಿ ಮಾತನಾಡಿದರು.


ಪಿ.ಎಂ. ಮಿತ್ರ ಅಡಿಯಲ್ಲಿ ಟೇಕ್ಸಟೈಲ್ ಪಾರ್ಕ  ಸ್ಥಾಪಿಸಬೇಕಾಗಿತ್ತು.ಒಂದೂವರೆಗೆ ವರ್ಷ ಅಯಿತ್ತು ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಣುತ್ತಿಲ್ಲ  ಕೈಗಾರಿಕಾ ಜಾಗೃತಿ ಕಾರ್ಯಕ್ರಮಗಳು ಮಾಡಿದರೆ ಸಾಲದು  ಎಂದರು.

ಮುಂದಿನ ನಮ್ಮ ಕೈಗಾರಿಕೆ ವಲಯದಲ್ಲಿ ಆಗಲಿ ವಾಣಿಜ್ಯ ವಲಯದಲ್ಲಿ ಒತ್ತನ್ನ ಕೊಡಬೇಕು ಯಾವ ರೀತಿ ದೇಶಕ್ಕೆ  ರೈತರು ಬೆಳವಣೆಯಾಗುತ್ತಾರೆ ಅದೇ ರೀತಿಯಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆವಣಿಯಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸುರೇಖಾ ಮುನೋಳ್ಳಿ ಮಾತನಾಡಿ, ಕಲಬುರಗಿ ಜಿಲ್ಲೆಯಿಂದ ಸ್ಥಳೀಯ ತಯಾರಿಸಿದ ವಸ್ತುಗಳನ್ನು ಮತ್ತು ಸ್ಥಳೀಯವಾಗಿ ಬೆಳೆಯುವ ಉತ್ಪಾದನೆಗಳು ರಫ್ತು ಮಾಡಲು ಮತ್ತು ಅದನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಕೈಗಾರಿಕೆ ಉದ್ದಿಮೆದಾರರು ಶ್ರಮಿಸಬೇಕಾಗುತ್ತದೆ ಎಂದರು.

ಕಲಬುರಗಿ ಶಾಖಾ ಕಛೇರಿ ವಿ.ಟಿ.ಪಿ.ಸಿ. ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ ಅವರು ಮಾತನಾಡಿ, ವಿಟಿಪಿಸಿ ಯ ಶಾಖಾ ಕಛೇರಿಯನ್ನು ಸರ್ಕಾರವು ಸ್ಥಾಪಿಸು ತ್ತ್ತಿದೆ, ಇತ್ತೀಚೆಗೆ ಕಲ್ಯಾಣ ಕರ್ನಾಟಕ ಕಂದಾಯ ಭಾಗದ ಶಾಖಾ ಕಛೇರಿಯ ಕಲಬುರಗಿಯಲ್ಲಿ ಪ್ರಾರಂಭಿಸಿದೆ ಈ ಭಾಗದ ಜನರಿಗೆ ವಿಶೇಷವಾಗಿ ರಫ್ತುದಾರರಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಕೈಗಾರಿಕಾ ಉಪನಿರ್ದೇಶಕ ಅಬ್ದುಲ್ ಅಜೀಮ್ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಆರ್‌ಎಎಂಪಿ ಯೋಜನೆ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಕಾಸಿಯಾ ಅಧ್ಯಕ್ಷರಾದ ಎಂ.ಜಿ. ರಾಜಗೋಪಾಲ್ ವಹಿಸಿ ಎಂ.ಎಸ್.ಎA.ಇ. ಕೈಗಾರಿಕೆಗಳು ತಮ್ಮ ಲಾಭವನ್ನು ಹೆಚ್ಚಿಸಲು ರಫ್ತುಗಳು  ರಫ್ತುಗೆ ಒತ್ತು ನೀಡಬೇಕೆಂದು  ಪ್ರಾಸ್ತಾವಿಕವಾಗಿ ಮಾತನಾಡಿದರು.

ಲೀನ್ ಯೋಜನೆ ಬಗ್ಗೆ ಡಾ ಜಗದೀಶ ಅವರು  ವಿಶೇಷ ಉಪನ್ಯಾಸ ನೀಡಿದರು.  ಝಡ್.ಇ.ಡಿ, ಬಗ್ಗೆ ಈರಪ್ಪಾ ಉಪನ್ಯಾಸ ನೀಡಿದರು. ರಫ್ತು ಬಗ್ಗೆ ಸತೀಶ ಕೋಟಾ ಅವರು ಉಪನ್ಯಾಸ ನೀಡಿದರು. ಈ ಕಾರ್ಯಾಗಾರದಲ್ಲಿ  ಗೌರವ ಪ್ರಧಾನ ಸುರೇಶ ಎನ್ ಸಾಗರ್, ಕಲಬುರಗಿ  ಗ್ರಾಮೀಣ ಜಂಟಿಕಾರ್ಯದರ್ಶಿ ಸತೀಶ್ ಎನ್., ಜಿಲ್ಲಾಭಿವೃದ್ಧಿ ಸಮಿತಿ ಉಪಸಮಿತಿ ಅಧ್ಯಕ್ಷ ಚನ್ನಬಸ್ಸಯ್ಯ ಜಿ. ನಂದಿಕೋಲ್ ಸೇರಿದಂತೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘ ಗುಲಬರ್ಗ ದಾಲಾ ಮಿಲ್ಲರ್ಸ್, ಅಸೋಸಿಯೇಷನ್, ಗುಲಬರ್ಗ ಇಂಡಿಸ್ಟಿçÃಯಲ್ ಎಸ್ಟೇಟ್ ಮ್ಯಾನುಫ್ಯಾಕ್ಚರ್ಸ್, ಅಸೋಸಿಯೇಷನ್, ಗುಲಬರ್ಗ ಕೈಗಾರಿಕಾ ವಸಾಹತು ಮಾಲೀಕರ ಸಂಘ, ಕಲಬುರಗಿ ಲೇಡಿಸ್ ಅಸೋಸಿಯೇಷನ್ ಮ್ಯಾನುಫ್ಯಾಕ್ಚರ್ಸ್ ಮ್ಯಾನುಫ್ಯಾಕ್ಚರ್ಸ ಪಾರ್ಕ್ದಲ್ಲಿ ಭಾಗವಹಿಸಿದ್ದರು.



 

 





ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ: ಪ್ರಾದೇಶಿಕ ಅಸಮಾನತೆ ನಿವಾರಣೆ ನಮ್ಮ ಗುರಿ,ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಬದ್ಧ -ಸಿದ್ದರಾಮಯ್ಯ

ಕಲಬುರಗಿ-ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ, ಮೈಸೂರು ಭಾಗ ಎನ್ನದೆ ಯಾವುದೇ ಪ್ರದೇಶಕ್ಕೆ ತಾರತಮ್ಯ ಮಾಡದೇ ಪ್ರಾದೇಶಿಕ ಅಸಮಾನತೆ ನಿವಾರಿಸುವ ಗುರಿ ಹೊಂದಲಾಗಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮ0ದಿರದ ಎದುರುಗಡೆ ಸುಮಾರು ೩೨೭.೧೭ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ೩೭೧ ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಡಾ.ಡಿ.ಎಂ.ನ0ಜು0ಡಪ್ಪ ಅವರು ೨೦೦೨ರಲ್ಲಿ ನೀಡಿದ ವರದಿಯಲ್ಲಿ ಅಂದಿನ ೧೭೫ ತಾಲೂಕುಗಳ ಪೈಕಿ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ೩೯ ತಾಲೂಕುಗಳು ಸೇರಿವೆ. ನಂಜುAಡಪ್ಪ ಅವರ ವರದಿಯಂತೆ ಹಿಂದುಳಿವಿಕೆ ಹೋಗಲಾಡಿಸಲು ಇದೂವರೆಗೆ ೩೫,೦೦೦ ಕೋಟಿ ರೂ. ಅನುದಾನ ನೀಡಿದ್ದರು ನಿರೀಕ್ಷಿತ ಮಟ್ಟದಲ್ಲಿ ಹಿಂದುಳೀತ ತಾಲೂಕಿನಲ್ಲಿ ಪ್ರಗತಿ ಕಂಡಿಲ್ಲ. ಹೀಗಾಗಿ ಆರ್ಥಿಕ ತಜ್ಞ ಪ್ರೊ.ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ ನಮ್ಮ ಸರ್ಕಾರ ಉನ್ನತ ಸಮಿತಿ ರಚಿಸಿದ್ದು, ಅದರ ವರದಿಯನ್ನಾಧರಿಸಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದೇನೆ. ಆರೋಗ್ಯ ಮತು ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಬೆಳೆದಲ್ಲಿ ಪ್ರದೇಶದಲ್ಲಿ ಅಭಿವೃದ್ಧಿ ಕಾಣಿಸಲು ಸಾಧ್ಯ ಎಂದು ಪುನರುಚ್ಚಿಸಿದ್ದ ಸಿ.ಎಂ., ಗುಲಬರ್ಗಾ ವಿ.ವಿ. ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉಪನ್ಯಾಸಕರ ಭರ್ತಿಗೆ ಕ್ರಮ ವಹಿಸಲಾಗುವುದು ಎಂದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ: ೩೭೧ಜೆ ಕಾಯ್ದೆ ಅನ್ವಯ ಈ ಭಾಗದಲ್ಲಿ ಖಾಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಡಾ.ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಪ್ರಯತ್ನದಿಂದ ಜಾರಿಗೆ ಬಂದ ೩೭೧ಜೆ ಕಾಯ್ದೆ ಅನುಷ್ಠಾನಕ್ಕೆ ತರಲು ೨೦೧೩ರಲ್ಲಿ ತಮ್ಮ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹೆಚ್.ಕೆ.ಪಾಟೀಲ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿ ನೀತಿ ನಿಯಮಗಳನ್ನು ಜಾರಿಗೆ  ತಂದು ಈ ಭಾಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಿದೆ. ಪರಿಣಾಮ ಇದೂವರೆಗೆ ೮೦ ಸಾವಿರ ಜನರಿಗೆ ನೌಕರಿ ದೊರೆತಿದೆ. ಸಾವಿರಾರು ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಸಾವಿರಾರು ಕೋಟಿ ಹಣ ಪ್ರದೇಶಕ್ಕೆ ಹರಿದು ಬರುತ್ತಿದೆ ಎಂದರು.

ಕಲಬುರಗಿಯಲ್ಲಿ ನಿಮ್ಹಾನ್ಸ್ ಶಾಖೆ ಸ್ಥಾಪನೆ: ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಯ ಸುಂದರ ಕಟ್ಟಡ ತಲೆ ಎತ್ತಿ ನಿಂತಿರುವುದು ಸಂತಸ ತಂದಿದೆ. ಚಿಕಿತ್ಸೆ ಪಡೆಯುವದಕ್ಕಿಂತ ಕಾಯಿಲೆ ಬಾರದಂತೆ ಎಚ್ಚರಿಕೆ ವಹಿಸುವುದು ಅವಶ್ಯಕ. ಹೀಗಾಗಿ ಈ ನೂತನ ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆ ಇದ್ದಲ್ಲಿ ಬೇರೆ ಕಾಯಿಲೆಗಳು ಬರಲ್ಲ ಎಂದ ವೈದ್ಯರಿಗೆ ನಿರ್ದೇಶನ ನೀಡಿದ ಸಿ.ಎಂ. ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆಯಂತೆೆ ಕಲಬುರಗಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಶಾಖೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಡಯಬಟಾಲೋಜಿ ಘಟಕವನ್ನು ತೆರೆಯಲಾಗುವುದು ಎಂದು ಘೋಷಿಸಿದರು.

ತೊಗರಿಗೆ ಹಾನಿ, ಪರಿಹಾರದ ಭರವಸೆ: ಕಲಬುರಗಿ ಸೇರಿ ಕೆಲವಡೆ ವಿಚಿತ್ರ ರೋಗದಿಂದ ತೊಗರಿ ಬೆಳೆ ಹಾನಿಯಾಗಿದ್ದು ತಮ್ಮ ಗಮನಕ್ಕೆ ಬಂದಿದೆ. ಈಗಾಗಲೆ ಅಧ್ಯಯನಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ವರದಿ ಆಧರಿಸಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುಲಬರ್ಗಾ ವಿ.ವಿ.ಗೆ ಕಾಯಕಲ್ಪ ನೀಡಿ: ಇದಕ್ಕೂ ಮುನ್ನ ರಾಜ್ಯಸಭೆಯ  ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದ ಅವರು, ಕೆಲವರು ಬಡ ಜನರನ್ನು ಶಿಕ್ಷಣ ಮತ್ತು ಆರೋಗ್ಯ ಸವಲತ್ತಿನಿಂದ ದೂರ ಇಡಲು ಬಯಸುತ್ತಿರುವುದು ಬೇಸರ ತಂದಿದೆ ಎಂದರು.

ಗುಲಬರ್ಗಾ ವಿ.ವಿ. ತುಂಬಾ ಹಳೇಯದಾಗಿದ್ದು, ಸುಣ್ಣ-ಬಣ್ಣ ಕಂಡಿಲ್ಲ. ಹುದ್ದೆ ಭರ್ತಿಯಾಗಿಲ್ಲ. ಹೊಸ ಕೋರ್ಸ್ ಇಲ್ಲ. ಈ ಬಗ್ಗೆ ಗಮನಹರಿಸಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡುವುದರ ಜೊತೆಗೆ ಉಪನ್ಯಾಸಕರ ಭರ್ತಿಗೆ ವಿಶೇಷ ಆಸಕ್ತಿ ತೋರಬೇಕು ಎಂದರು.

ಕಲಬುರಗಿಯಲ್ಲಿ ೩೭೧ಕಾಯ್ದೆ ದಶಮಾನೋತ್ಸವ ಸವಿನೆನಪಿನಲ್ಲಿ ಇಂದಿಲ್ಲಿ ೩೭೧ ಹಾಸಿಗೆ ಸಾಮರ್ಥ್ಯದ ಜಯದೇವ ಆಸ್ಪತ್ರೆ ಲೋಕಾರ್ಪಣೆ ಮಾಡಿದ್ದು ಅತೀವ ಸಂತಸ ತಂದಿದೆ. ಕಟ್ಟಡ ಆಯ್ತು, ಕ್ಯಾತಲ್ಯಾಬ್ ಬಂದೈತು. ವೈದ್ಯರು ಬಂದರು. ಇದೀಗ ಇದರ ನಿರ್ವಹಣೆ ಬಹಳ ಮುಖ್ಯವಾಗಿದೆ. ಉತ್ತಮ ಆರೋಗ್ಯ ಸೇವೆ ನೀಡಬೇಕಾದರೆ ಸ್ವಚ್ಛತೆ ಇಲ್ಲಿ ಎದ್ದು ಕಾಣುವಂತಾಗಬೇಕು ಎಂದು ವೈದ್ಯರಿಗೆ ಸೂಚಿಸಿದ ಅವರು, ನಿಮ್ಹಾನ್ಸ್ ಆಸ್ಪತ್ರೆಯ ಶಾಖೆ ಮತ್ತು ಇನ್ಸಟಿಟ್ಯೂಟ್ ಆಫ್ ಡಯಬಟಾಲೋಜಿ ಘಟಕವನ್ನು ಇಲ್ಲಿ ತೆರೆಯುವ ಮೂಲಕ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸಿ.ಎಂ. ಅವರಲ್ಲಿ ಕೇಳಿಕೊಂಡರು.

ಇದಕ್ಕು ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆ ಉದ್ಘಾಟಿಸಿ ಕ್ಯಾತಲ್ಯಾಬ್, ಓ.ಟಿ. ಥಿಯೇಟರ್ ಸೇರಿದಂತೆ ಇಡೀ ಆಸ್ಪತ್ರೆ ವೀಕ್ಷಿಸಿದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ. ಸುಧಾಕರ್, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ, ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಜೇವರ್ಗಿ ಶಾಸಕ ಮತ್ತು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ್, ಅಫಜಲಪುರ ಶಾಸಕ ಮತ್ತು ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಎಂ.ವೈ. ಪಾಟೀಲ, ಮುಖ್ಯಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮ ಸಲಹೆಗಾರ ಬಿ.ಆರ್. ಪಾಟೀಲ, ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರುಗಳಾದ ಬಸವರಾಜ ಮತ್ತಿಮಡು, ಚೆನ್ನಾರೆಡ್ಡಿ ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ಡಾ. ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ, ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಅರವಿಂದ ಅರಳಿ, ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಬ್ದುಲ್ ರಶೀದ ಅವರು ಭಾಗವಹಿಸಿದ್ದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಐ.ಜಿ.ಪಿ ಅಜಯ್ ಹಿಲೋರಿ, ಕೆ.ಕೆ.ಅರ್.ಡಿ.ಬಿ. ಕಾರ್ಯದರ್ಶಿ ಎಂ. ಸುಂದರೇಶ ಬಾಬು, ಡಿ.ಸಿ. ಬಿ. ಫೌಜಿಯಾ ತರನ್ನುಮ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಜಾತಾ ರಾಠೋಡ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಆಕಾಶ ಎಸ್., ಮಹಾನಗರ ಪಾಲಿಕೆ ಆಯುಕ್ತ ಪ್ರಭಾರಿ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಉಪಸ್ಥಿತರಿದ್ದರು. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವಿಂದ್ರನಾಥ ಪ್ರಸ್ತಾವಿಕವಾಗಿ ಮಾತನಾಡಿದರು.


ಪೊಲೀಸ್ ಎನ್ ಕೌಂಟರ್ ನಲ್ಲಿ ಇಬ್ಬರು ಬ್ಯಾಂಕ್ ದರೋಡೆಕೋರರ ಹತ್ಯೆ

 ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಿನ್ಹಾಟ್ ಶಾಖೆಯಲ್ಲಿ ಇತ್ತೀಚಿಗೆ ನಡೆದಿದ್ದ ದರೋಡೆಯಲ್ಲಿ ಭಾಗಿಯಾಗಿದ್ದ ಇಬ್ಬರು ಕ್ರಿಮಿನಲ್ ಗಳನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಲಖನೌ ಹಾಗೂ ಘಾಜಿಪುರ ಪೊಲೀಸರು ಪ್ರತ್ಯೇಕ ಎನ್ ಎನ್ ಕೌಂಟರ್ ನಲ್ಲಿ ದರೋಡೆಕೋರರನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.


26 ವರ್ಷದ ಸೋಬಿಂದ್ ಕುಮಾರ್ ಎಂಬಾತನನ್ನು ಕಿಸಾನ್ ಪಾಥ್ ಬಳಿ ಲಖನೌ ಪೊಲೀಸರು ಎನ್ ಕೌಂಟರ್ ಮಾಡಿದ್ದರೆ 28 ವರ್ಷದ ಮತ್ತೋರ್ವ ಆರೋಪಿ ಸನ್ನಿ ದಯಾಳ್ ಎಂಬಾತನನ್ನು ಘಾಜಿಪುರ ಪೊಲೀಸರು ಹತ್ಯೆ ಮಾಡಿದ್ದಾರೆ.

ಬಿಹಾರ ಮೂಲದ ಸೋಬಿಂದ್ ಕುಮಾರ್ ಬ್ಯಾಂಕ್ ದರೋಡೆಯಲ್ಲಿ ಪೊಲೀಸರಿಗೆ ಬೇಕಾಗಿದ್ದ. ಸೋಮವಾರ ಸುಳಿವಿನ ಆಧಾರದ ಮೇಲೆ ಆತನು ಸಂಚರಿಸುತ್ತಿದ್ದ ವಾಹನವನ್ನು ತಡೆದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ಪ್ರತಿದಾಳಿ ನಡೆಸಿದಾಗ ಗುಂಡೇಟಿನಿಂದ ಗಾಯಗೊಂಡು ಆತ ಸಾವನ್ನಪ್ಪಿರುವುದಾಗಿ ಚಿನ್ಹಾಟ್ ಸಹಾಯಕ ಪೊಲೀಸ್ ಕಮಿಷನರ್ ರಾಧಾ ರಮಣ್ ಸಿಂಗ್ ತಿಳಿಸಿದ್ದಾರೆ.

ಗಾಜಿಪುರ ಬಳಿ ನಡೆದ ಮತ್ತೊಂದು ಎನ್ ಕೌಂಟರ್ ನಲ್ಲಿ ದಯಾಳ್ ನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ದಯಾಳ್ ಕುರಿತು ಮಾಹಿತಿ ನೀಡಿದ್ದವರಿಗೆ ರೂ. 25,000 ಬಹುಮಾನವನ್ನು ಘೋಷಿಸಲಾಗಿತ್ತು. ಕುತುಬ್‌ಪುರ ಬಳಿ ಆತನನ್ನು ಹಿಡಿಯಲು ಪ್ರಯತ್ನಿಸಿದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಬಳಿಕ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ, ನಂತರ ಗಾಜಿಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ಡಿಜಿಪಿ ಹೇಳಿದರು.


ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ನೇಮಕ

 ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರನ್ನು ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ 1993ರ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನೇಮಕ ಮಾಡಿದರು.


ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್

ನಿವೃತ್ತ ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ NHRC ಅಧ್ಯಕ್ಷರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದೆ. 1993ರ ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4ರ ಉಪ-ವಿಭಾಗ (1) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಭಾರತದ ಅಧ್ಯಕ್ಷರಾದ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ (ನಿವೃತ್ತ) ಅವರನ್ನು ನೇಮಕ ಮಾಡಿದರು.

ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣ್ಯಂ ಅವರು 30 ಜೂನ್ 1958ರಂದು ಜನಿಸಿದರು. ಚೆನ್ನೈನ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. 1983ರ ಫೆಬ್ರವರಿ 16ರಂದು ಬಾರ್‌ನ ಸದಸ್ಯರಾಗಿದ್ದು ಮದ್ರಾಸ್ ಹೈಕೋರ್ಟ್‌ನಲ್ಲಿ ಸುಮಾರು 23 ವರ್ಷಗಳ ಕಾಲ ಅಭ್ಯಾಸ ಮಾಡಿದರು.

2006ರ ಜುಲೈ 31ರಂದು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು 2009ರ ನವೆಂಬರ್ 9ರಂದು ಕಾಯಂ ನ್ಯಾಯಾಧೀಶರಾದರು. ನಂತರ 2016ರ ಏಪ್ರಿಲ್ 27ರಂದು ಅವರನ್ನು ಹೈದರಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. 2019ರ ಜನವರಿ 1ರಂದು ಆಂಧ್ರ ಪ್ರದೇಶ ಹೈಕೋರ್ಟ್ ರಚನೆಯಾದ ನಂತರ, ಅವರು ತೆಲಂಗಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಉಳಿದರು. 2019ರ ಜೂನ್ 22ರಂದು ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ನಂತರ 2019ರ ಸೆಪ್ಟೆಂಬರ್ 23ರಂದು ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದರು. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಅವರು 102 ತೀರ್ಪುಗಳನ್ನು ನೀಡಿದ್ದು 2023ರ ಜೂನ್ 29ರಂದು ನಿವೃತ್ತರಾದರು

ಶತಮಾನೋತ್ಸವ ನಡೆಸಿ ಹಣ ಪೋಲು ಮಾಡುತ್ತಿದ್ದಾರೆ - ಪ್ರಹ್ಲಾದ್ ಜೋಶಿ

 ಹುಬ್ಬಳ್ಳಿ: ಕಾಂಗ್ರೆಸ್ ಸಮಾವೇಶ ನಡೆಸಿ ಹಣ ಪೋಲು ಮಾಡುತ್ತಿದೆ. ಮಹಾತ್ಮ ಗಾಂಧೀಜಿಗೂ ಇಂದಿನ ಕಾಂಗ್ರೆಸ್‌ಗೂ ಏನು ಸಂಬಂಧ? ಈಗಿರುವ ಕಾಂಗ್ರೆಸ್ ನಲ್ಲಿ ಮೂಲಕ ಕಾಂಗ್ರೆಸ್ ಕಾಣುತ್ತಿಲ್ಲ. ಇದು ಇಂದಿರಾ ಗಾಂದಿ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು  ಹೇಳಿದ್ದಾರೆ.


ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಳಗಾವಿಯಲ್ಲಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಗೂ ಇಂದಿನ ಕಾಂಗ್ರೆಸ್‌ಗೂ ಏನು ಸಂಬಂಧ? ಮಹಾತ್ಮಾ ಗಾಂಧಿ ಕಾಂಗ್ರೆಸ್ ಮತ್ತು ಇಂದಿನ ಕಾಂಗ್ರೆಸ್ ನಡುವೆ ವ್ಯತ್ಯಾಸವಿದೆ. ಈಗಿನ ಕಾಂಗ್ರೆಸ್ ಮೂಲ ಕಾಂಗ್ರೆಸ್ ಅಲ್ಲ. ಈ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯದಲ್ಲಿ ನಂಬಿಕೆಯಿಲ್ಲ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸಿದೆ ಎಂದು ಹೇಳಿದರು.

ಸಿಟಿ ರವಿ ಪ್ರಕರಣ ಕುರಿತು ಮಾತನಾಡಿ. ವಿಧಾನ ಪರಿಷತ್‌ ಸದಸ್ಯ ಸಿ.ಟಿ. ಅವರನ್ನು ಕಾರಿನಲ್ಲಿ ಸುತ್ತಾಡಿಸಿದ್ದು ತನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡುತ್ತಾರೆ. ಅಂದರೆ, ಗೃಹ ಸಚಿವರನ್ನೇ ಕತ್ತಲಲ್ಲಿ ಇಟ್ಟು ಪೊಲೀಸರು ಹೀಗೆ ಮಾಡಿದ್ದಾರಾ? ಜಿಲ್ಲಾ ಉಸ್ತುವಾರಿ ಸಚಿವರು ಸಹ ಪೊಲೀಸರು ತಪ್ಪು ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಸೂತ್ರಧಾರರು ಯಾರು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕ್ರಿಸ್‌ಮಸ್‌-ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆದರೆ DCPಗಳೇ ಹೊಣೆ - ಗೃಹ ಸಚಿವ ಜಿ. ಪರಮೇಶ್ವರ

 ಬೆಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ  ಸೂಚನೆ ನೀಡಿದರು.


ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮದ ವೇಳೆ ಕಳೆದ ವರ್ಷ ಅಚ್ಚುಕಟ್ಟಾಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಅದೇ ರೀತಿ ಈ ವರ್ಷವೂ ಬಂದೋಬಸ್ತ್‌ ಕೈಗೊಳ್ಳಬೇಕು. ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳನ್ನೇ ಹೊಣೆ ಮಾಡಲಾಗುವುದು. ಈ ವಿಚಾರದಲ್ಲಿ ಯಾರು ಏನೇ ಹೇಳಿದರೂ ಕೇಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕ್ರಿಸ್‌ಮಸ್ ಆಚರಣೆ ಹಿನ್ನೆಲೆಯಲ್ಲಿ ಗುಪ್ತದಳ ಇಲಾಖೆಯೊಂದಿಗೆ ನಿರಂತರವಾಗಿ‌ ಸಂಪರ್ಕದಲ್ಲಿರಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಬೇಕು ಎಂದು ಹೇಳಿದರು‌.

ಅಗತ್ಯ ಬಂದೋಬಸ್ತ್ ಹಿನ್ನಲೆಯಲ್ಲಿ ನಗರ‌ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಜೆ ನೀಡುವುದು ಬೇಡ. ತೀರ ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡಿ. ಬಿಬಿಎಂಪಿ, ಬಿಎಂಟಿಸಿ ಬಿಎಂಆರ್‌ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಡ್ರಂಕ್ ಆ್ಯಂಡ್ ಡ್ರೈವ್, ಬೈಕ್ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳು ಹಾಗೂ ಹಳೇ‌ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಗರದಲ್ಲಿ ಹೊಸ ವರ್ಷ ಆಚರಣೆಗೆ 7 ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ, ಪೊಲೀಸರು ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲಾಗಿದೆ.‌ಎಲ್ಲರು ಸಂತೋಷದಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಿಸಲು ಸಹಕರಿಸಲಾಗುವುದು‌. ಟ್ರಾಫಿಕ್ ನಿರ್ವಹಣೆ ಸಮಸ್ಯೆ ಆಗದಂತೆ ಮೆಟ್ರೋ, ಆಟೋಗಳು, ಬಸ್​ಗಳ ಓಡಾಟ ಸೇರಿದಂತೆ ಹಲವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಎಂ.ಜಿ.ರಸ್ತೆ, ಬ್ರಿಗೇಡ್​ ರಸ್ತೆಯಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ಇಲ್ಲ. ಮಹಿಳಾ‌ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು

ಸಿ.ಟಿ.ರವಿ ಕೇಸ್: ಸಭಾಪತಿಗಳು ಅನುಮತಿ ನೀಡಿದರೆ ಸ್ಥಳ ಮಹಜರು -ಗೃಹ ಸಚಿವ ಡಾ.ಜಿ ಪರಮೇಶ್ವರ್

 ಬೆಂಗಳೂರು: ಸ್ಥಳ ಮಹಜರು ನಡೆಸಲು ಅನುಮತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಭಾಪತಿಗಳು ಅನುಮತಿ ಇಲ್ಲದೆ ಸದನದ ಮಹಜರು ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸೋಮವಾರ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳ ಮಹಜರಿಗೆ ಪೊಲೀಸರು ಅನುಮತಿ ಕೇಳಿದ್ದಾರೆ. ಪರಿಷತ್ ಅಧ್ಯಕ್ಷರ ಅನುಮತಿ ಇಲ್ಲದೆ ಮಾಡಲಾಗುವುದಿಲ್ಲ. ಪರಿಷತ್ತಿಗೆ ತನ್ನದೇ ಆದ ನಿಯಮಗಳಿದ್ದು, ಪೊಲೀಸರು ಆ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.



ಪರಿಷತ್ತಿನ ನಕಲಿ ವಿಡಿಯೋಗಳ ಕುರಿತು ಸಭಾಧ್ಯಕ್ಷರು ಪೊಲೀಸರಿಗೆ ಪತ್ರ ಬರೆದಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಪೊಲೀಸರು ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬಹುದು. ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿರುವುದರಿಂದ ಪ್ರತಿಯೊಂದ ಕ್ಕೂ ಸರ್ಕಾರವನ್ನು ಕೇಳಬೇಕಾಗಿಲ್ಲ. ಪೊಲೀಸ್ ಆಯುಕ್ತರೊಂದಿಗೆ ಸಮಾ ಲೋಚಿಸಿ ಸ್ಥಳದಲ್ಲೇ ನಿರ್ಧಾರಗಳನ್ನು ತೆಗೆದುಕೊಂಡು ಸರ್ಕಾರ ಕೇಳಿದರೆ ವರದಿ ಸಲ್ಲಿಸಬಹುದು ಎಂದು ಹೇಳಿದರು.

ಪೊಲೀಸರು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿರ್ದೇಶನದಂತೆ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಬಳಿ ಮಾಹಿತಿಗಳಿದ್ದರೆ ನೀಡಲಿ, ಪರಿಶೀಲನೆ ಮಾಡು ತ್ತೇವೆಂದು ತಿಳಿಸಿದರು.

ಇಂತಹ ಸನ್ನಿವೇಶಗಳಲ್ಲಿ ಪೊಲೀಸರು ಸಿಎಂಂ ಹಾಗೂ ಗೃಹ ಸಚಿವ ಸೂಚನೆಗಳನ್ನು ಅನುಸರಿಸುತ್ತಾರೆ. ಈ ವಿಚಾರಗಳಲ್ಲಿ ಪೊಲೀಸರು ಕೂಡ ಜವಾಬ್ದಾರರಾಗಿರುವುದರಿಂದ ಅವರು ಇತರರ ಮಾತನ್ನು ಕೇಳುವುದಿಲ್ಲ. ಇತರರ ಮಾತು ಕೇಳಿದ್ದೇ ಆದರೆ, ಅವರನ್ನು ಅವರು ಸಮರ್ಥಿಸಿಕೊಳ್ಳಬೇಕು ಎಂದರು.

ಒಳ ಮೀಸಲಾತಿ ಜಾರಿಯಾಗುವ ತನಕ ಮುಂಬಡ್ತಿ, ನೇಮಕಾತಿ ಆದೇಶ ನಿಲ್ಲಿಸಿ - ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟ ಎಚ್ಚರಿಕೆ

ದೇವನಹಳ್ಳಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ, ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಬದ್ದರಾಗಿ ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಒಳ ಮೀಸಲಾತಿ ಕೊಡಲು ತಾತ್ವಿಕ ಒಪ್ಪಿಗೆ ನೀಡಿದ್ದರೂ ಸುಮ್ಮನಿರುವುದು ಏಕೆ ಇದು ವಚನ ಭ್ರಷ್ಠ ಸರ್ಕಾರ ಎಂದು ಆಲ್ ಇಂಡಿಯಾ ಬಿ.ಎಸ್.ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.



  ಪಟ್ಟಣದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆಯಲಾಗಿದ್ದ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಠ ಜಾತಿಗಳಿಗೆ ಒಳ ಮೀಸಲಾತಿ ಜಾರಿಯಾಗುವ ತನಕ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಮುಂಬಡ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ತೀರ್ಮಾನದವರೆಗೂ ಹೊರಡಿಸಬಾರದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು.

 ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ಗುಂಪುಗಳಲ್ಲನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ತೀರ್ಮಾನದವರೆಗೆ ಹೊರಡಿಸಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ನಿರ್ದರಿಸಿದೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಪತ್ರಿಕಾ ಹೇಳಿಕೆಯಲ್ಲಿ ಸಹ ತಿಳಿಸಿದೆ, ಈ ಆದೇಶವನ್ನು ಸಮಾಜ ಕಲ್ಯಾಣ ಇಲಾಖೆ ತಡವಾಗಿ ಡಿ.ಪಿ.ಎ.ಆರ್ ಇಲಾಖೆಗೆ ರವಾನಿಸಿದೆ, ಎರಡು ವಾರಗಳ ನಂತರ ಡಿ.ಪಿ.ಎ.ಆರ್. ಇಲಾಖೆ, ಈ ಆದೇಶವನ್ನು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ.

 ಇದನ್ನು ಲೆಕ್ಕಿಸದ ಹಲವಾರು ಇಲಾಖೆಗಳು ನೇರ ನೇಮಕಾತಿ ಪ್ರಕ್ರಿಯೆ ಶುರು ಮಾಡಲು ಅಧಿಸೂಚನೆಯನ್ನು ಹೊರಡಿಸುತ್ತಿರುವುದು ಖಂಡನೀಯ, ಡಿಪಿಎ.ಆರ್. ಇಲಾಖೆ ಇಲಾಖೆ ಇದುವರೆಗೂ ವಿವಿಧ ಇಲಾಖೆಗಳು ನೇಮಕಾತಿ ಅಧಿಸೂಚನೆಗಳನ್ನು ಕೂಡಲೆ ಹಿಂಪಡೆದು ಒಳ ಮೀಸಲಾತಿ ಜಾರಿಯಾಗುವವರೆಗೆ ಯಾವುದೆ ನೇಮಕಾತಿ ಮುಂಬಡ್ತಿ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

 ಆಲ್ ಇಂಡಿಯಾ ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಮಾತನಾಡಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಪೀಠ ಆಯೋಗವನ್ನು ರಚಿಸಿದ್ದು, ಈ ನಿರ್ಣಯವನ್ನು ಪ್ರಕಟಿಸುವಾಗ ರಾಜ್ಯ ಸಚಿವ ಸಂಪುಟ ಒಳ ಮೀಸಲಾತಿ ಜಾರಿಯಾಗುವವರೆಗೆ ಹೊರಡಿಸಬಾರದೆಂದು ಎಚ್ಚರಿಕೆ ನೀಡಲಾಗುತ್ತಿದೆ, ಈ ಕ್ರಮಗಳನ್ನು ಅನುಸರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟದಿಂದ ರಾಜ್ಯಾಧ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
 ಈ ಸಮಯದಲ್ಲಿ ಮಾದಿಗ ಸಮುದಾಯದ ಒಕ್ಕೂಟದ ದ.ಸಂ.ಸ ಸಂಸ್ಥಾಪಕ ಡಾ|| ಎನ್. ಮೂರ್ತಿ, ರಾಜ್ಯಾಧ್ಯಕ್ಷ ಗುರುಮೂರ್ತಿ, ರಾಜ್ಯ ಪ್ರ. ಕಾರ್ಯದರ್ಶಿ ಜೆ.ಬಿ.ರಾಜು, ರಾಜ್ಯ ಕಾರ್ಯಾಧ್ಯಕ್ಷ ಕೇಶವಮೂರ್ತಿ, ಡಾ|| ಭೀಮರಾಜ್, ಎಂ.ಸಿ. ಶ್ರೀನಿವಾಸ್, ಜೆ.ಸಿ. ಪ್ರಕಾಶ್, ಆರ್. ಲೋಕೇಶ್, ಣಾಗರಾಜು, ಕಾಳಪ್ಪ, ತಾಲೂಕು ಅಧ್ಯಕ್ಷ ನಾಗರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ

ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ಜನವರಿ.27 ರಂದು ಪ್ರಕಟಿಸಲಾಗುವುದು.

================
ಬೀದರ :- ಬೀದರ ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ರಂತೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರವರು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ ರವರಿಗೆ ಹಸ್ತಾಂತರಿಸಿರುತ್ತಾರೆ. ಸದರಿ ಅಂತಿಮ ಅಂಕ ಪಟ್ಟಿ ಮತ್ತು ಅಭ್ಯರ್ಥಿಗಳ ವಿವರಗಳನ್ನು ನೀಡಿರುತ್ತಾರೆ. ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಗಳಿಕೆ ಮಾಡಿರುವ ಅಂಕಗಳ ಅನುಸಾರ ಬೀದರ ಜಿಲ್ಲೆಗೆ ಅಧಿಸೂಚನೆಯಲ್ಲಿ ನಿಗಧಿಯಾಗಿರುವ ಹುದ್ದೆಗಳ ಎದುರಾಗಿ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬೀದರ ಜಿಲ್ಲೆಯ ವೇಬಸೈಟ್  (https://bidar.nic.in) ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೇ ವಿವರ: 02-01-2025 ರಿಂದ 10-01-2025 ರವರೆಗೆ 1:3 ಅನುಪಾತದಲ್ಲಿನ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವುದು ಮತ್ತು ವಿಕಲ ಚೇತನ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವುದು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸುವುದು. ಹಾಗೂ ತಾತ್ಕಾಲಿಕ 1;1 ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ದಿನಾಂಕ: 15-01-2025 ರವರೆಗೆ ಪ್ರಕಟಿಸುವುದು. ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳನ್ನು ದಿನಾಂಕ: 16-01-2025 ರಿಂದ 23-01-2025 ರವರೆಗೆ ಆಹ್ವಾನಿಸುವುದು. ಹಾಗೂ ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ದಿನಾಂಕ: 27-01-2025 ರಂದು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Monday, 23 December 2024

ರಾಷ್ಟ್ರೀಯ ಅತ್ಯುತ್ತಮ ನಾಟಕ ಪ್ರಶಸ್ತಿ

ಬೆಂಗಳೂರು ನಗರ ಜಿಲ್ಲೆಯ ಪಿಎಂ ಶ್ರೀ ನವೋದಯ ವಿದ್ಯಾಲಯದ ಮಕ್ಕಳು ಅಭಿನಯಿಸಿದ ಭರತ ಭೂಮಿ ನನ್ನ ತಾಯಿ ಎಂಬ ನಾಟಕ ರಾಷ್ಟ್ರೀಯ ಮಟ್ಟದ ಉತ್ತಮ ನಾಟಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 

ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನಲ್ಲಿ ಇರುವ ಪಿಎಂಶ್ರೀ ನವೋದಯ ವಿದ್ಯಾಲಯದ ಮಕ್ಕಳು ರಂಗ ವಿಜಯ ತಂಡದ ಸಂಸ್ಥಾಪಕ ಹಾಗೂ ಖ್ಯಾತ ರಂಗಭೂಮಿ ನಿರ್ದೇಶಕ ಕಲಾ ಶ್ರೇಷ್ಠ ಮಾಲೂರು ವಿಜಿ ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ಭರತ ಭೂಮಿ ನನ್ನ ತಾಯಿ ಎಂಬ ನಾಟಕ ರಾಷ್ಟ್ರೀಯ ಅತ್ಯುತ್ತಮ ನಾಟಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 


ಒಂದು ತಿಂಗಳ ಕಾಲ ನವೋದಯ ವಿದ್ಯಾಲಯದಲ್ಲಿ ರಂಗ ತರಬೇತಿ ಶಿಬಿರವನ್ನು  ಯೋಜನೆ ಮಾಡಿ ಅದರಲ್ಲಿ ಸಿದ್ಧವಾದ ನಾಟಕ ಮೊದಲು ಕ್ಲಸ್ಟರ್ ಮಟ್ಟದಲ್ಲಿ ಮೊದಲ ತಂಡವಾಗಿ ಆಯ್ಕೆಯಾಯಿತು ಅದಾದ ನಂತರ ವಲಯ ಮಟ್ಟದಲ್ಲಿ ಐದು ರಾಜ್ಯಗಳ ನಾಟಕ ಸ್ಪರ್ಧೆಯಲ್ಲಿ ಪ್ರಥಮ ತಂಡವಾಗಿ ಹೊರಹೊಮ್ಮಿತು ನಂತರದಲ್ಲಿ ಹೈದರಾಬಾದಿನಲ್ಲಿ ನಡೆದ ನವೋದಯ ವಿದ್ಯಾಲಯದ ರಾಷ್ಟ್ರೀಯ ಏಕತಾ ಸಮ್ಮೇಳನದಲ್ಲಿ ದೇಶದ ಎಲ್ಲಾ ರಾಜ್ಯಗಳು ತಮ್ಮ ತಮ್ಮ ನಾಟಕಗಳನ್ನು ಅಲ್ಲಿ ಪ್ರದರ್ಶನ ಗೊಳಿಸಿತು ಆ ಪ್ರದರ್ಶನದಲ್ಲಿ ಉತ್ತಮ ಮೂರು ತಂಡಗಳನ್ನು ಆಯ್ಕೆ ಮಾಡಲಾಯಿತು ಅದರಲ್ಲಿ ಈ ತಂಡದ ನಾಟಕ ಅತ್ಯುತ್ತಮ ರಾಷ್ಟ್ರೀಯ ನಾಟಕ ಎಂಬ ಪ್ರಶಸ್ತಿಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು.

ಈ ನಾಟಕ ಭಾರತದ ಇಂದಿನ ಪರಿಸ್ಥಿತಿಯನ್ನು ವಿವರಿಸುತ್ತಾ ರಾಮಾಯಣ, ಮಹಾಭಾರತದಲ್ಲಿ ಮಹಿಳೆಯರ ಬದುಕಿನ ಬವಣೆಯನ್ನು ಚಿತ್ರಿಸುತ್ತಾ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯ ಸಾಧನೆ, ಸ್ವಾತಂತ್ರ್ಯ ನಂತರದಲ್ಲಿ ಮಹಿಳೆಯರ ಸಾಧನೆ, ಎಲ್ಲವನ್ನು ವಿವರಿಸುತ್ತಾ ಪ್ರಸ್ತುತ ಭಾರತದಲ್ಲಿ ಆಗುತ್ತಿರುವ ಶೋಷಣೆಗಳನ್ನು ಎತ್ತಿ ಹೇಳುತ್ತಾ, ಮಹಿಳೆಗೆ ಉತ್ತಮ ಸ್ಥಾನಮಾನ ನೀಡಬೇಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ನಾಟಕ ಮುಗಿಯುತ್ತದೆ. 


ನಾಟಕದ ಹಿನ್ನೆಲೆಯಲ್ಲಿ ನೃತ್ಯ ಸಂಯೋಜನೆ ಹಾಗೂ ಸಹ  ನಿರ್ದೇಶನದಲ್ಲಿ  ರಕ್ಷಿತಾ ರಾಘವೇಂದ್ರ, ಪ್ರಸಾದನ ಮತ್ತು ವಸ್ತ್ರ ವಿನ್ಯಾಸ ಗೀತಾ ರಾಘವೇಂದ್ರ, ರಂಗ ಪರಿಕರ ಜಯಚಂದ್ರ ರಾಜೇನಹಳ್ಳಿ ಕೆಲಸ ನಿರ್ವಹಿಸಿದ್ದರು. ಕಲಾವಿದರಾಗಿ ಬಿ.ಆದ್ಯ,ಎನ್. ಧನುಶ್ರೀ, ಎಸ್. ಎಸ್. ಧಾತ್ರಿ, ಬಿ.ಎಂ. ಜೀವಿತ, ಖುಷ್ಬೂ ಪಾಟೇಲ್, ಆರ್. ಬಿ.ವೈಷ್ಣವಿ,‌ ಎನ್.ಅನುಶ್ರೀ,  ಎಸ್. ವಿಸ್ಮಿತ, ಆರ್. ನಿಶ್ಚಿತ,  ಆರ್. ತನ್ವಿ,

ಎಮ್.ಅಶ್ವಿನ್, ಪಿ. ಕೆ. ಭಾರ್ಗವ, ಜೆ.ಲಲಿತ್ , ಎಸ್. ಮಿಥಿಲೇಶ್, ಎಮ್.ನಮನ್, ಕೆ. ಜೆ.ಇಂದ್ರಜಿತ್ ಮುಂತಾದವರು ಅಭಿನಯಿಸಿದರು.  ಈ ಕಾರ್ಯಕ್ರಮಕ್ಕೆ ನವೋದಯ ವಿದ್ಯಾಲಯದ ಪ್ರಾಂಶುಪಾ ಲರಾದ ಉಮೇಶ್ ಚಂದ್ರ ಪ್ರಜಾಪತಿ, ಉಪ ಪ್ರಾಂಶುಪಾಲರಾದ ಸುಂದರ್ ಕುಮಾರ್, ನವೀನ್ ಕುಮಾರ್ ಕಾರ್ಯಕ್ರಮ ಸಂಯೋಜಕರಾಗಿ ಇಂಗ್ಲೀಷ್ ಆಧ್ಯಾಪಕರಾದ ಹರೀಶ್, ಸಂಗೀತ ಶಿಕ್ಷಕರಾದ ಸುಧೀರ್, ಚಿತ್ರಕಲಾ ಶಿಕ್ಷಕರಾದ ಬಾಬುರಾವ್, ಕಾಂತ ಮುಂತಾದವರು ಶ್ರಮಿಸಿದ್ದಾರೆ.

ಜನೆವರಿ ೧೧ ಮತ್ತು ೧೨ : ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ ಮತ್ತು ಭಜನೆ ಸ್ಪರ್ದೆ

ಬೀದರ್ : ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಮುಂಬರುವ ೨೦೨೫ರ ಜನೆವರಿ ೧೧ ಮತ್ತು ೧೨ ರಂದು ಬೀದರ ನಗರದ ಪೂಜ್ಯ ಶ್ರೀ ಡಾ|| ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮ0ದಿರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ ಮತ್ತು ಭಜನೆ ಸ್ಪರ್ದೆ ಕಾರ್ಯಕ್ರಮಗಳ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಖ್ಯಾತ ಉದ್ಯಮಿ, ಬಸವತತ್ವ ಚಿಂತಕರು, ಸಮಾಜ ಸೇವಕರು, ದಿ ಗ್ರೇನ್ ಐಂಡ್ ಸೀಡ್ಸ್ ಮರ್ಚಂಟ್ಸ್ ಅಸೋಶಿಯೆಶನ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ್ ಅವರನ್ನು ನೇಮಕ ಮಾಡಲಾಗಿರುವುದು.


ಒಕ್ಕೂಟದ ಕೇಂದ್ರ ಸಮಿತಿಯ ಗೌರವ ಅಧ್ಯಕ್ಷರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|| ಮಾತಾ ಬಿ. ಮಂಜಮ್ಮ ಜೋಗುತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸವರಾಜ ಧನ್ನೂರ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ನಿರ್ಣಯಿಸಲಾಗಿತ್ತು, ಅದರಂತೆ ಇಂದು ಅವರಿಗೆ ಸ್ವಾಗತಿಸಲಾಯಿತು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರ ನೇತೃತ್ವದಲ್ಲಿ ಧನ್ನೂರ ಅವರ ನಿವಾಸಕ್ಕೆ ತೆರಳಿ ಅವರ ಒಪ್ಪಿಗೆ ಪಡೆದು ಸನ್ಮಾನಿಸಿ, ಗೌರವಿಸಿ ಸ್ವಾಗತಿಸಲಾಯಿತು. ನಂತರ ಮಾನತಾಡಿದ ಬಸವರಾಜ ಧನ್ನೂರ ಅವರು ನಮ್ಮ ಭವ್ಯ ಭಾತರದ ಸಂಸ್ಕೃತಿ, ಪರಂಪರೆ, ಸಂಸ್ಕಾರ, ಜಾನಪದ, ತತ್ವಪದ ಹಾಡುಗಾರಿಕೆ  ಅಳಿಸಿಹೊಗುತ್ತಿರುವ ಸಂದರ್ಭ ದಲ್ಲಿ ಅವುಗಳಿಗೆ ಸಂರಕ್ಷಿಸಿ ಇಂದಿನ ಯುವ ಶಕ್ತಿ ಪಡೆಗೆ ಅರುಹಿ ಸುಂದರ ಸುಭದ್ರ ಸಮಾಜ ನಿರ್ಮಿಸುವಂತಾಗಲು ಒಕ್ಕೂಟದ ಈ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಲಿವೆ ಎಂದು ಹೇಳಿದರು.

ವಿಜಯಕುಮಾರ ಸೋನಾರೆ ಮಾತನಾಡಿ, ಏಳು ಜಿಲ್ಲೆಗಳ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತತ್ವಪದ, ಭಜನೆ ಮತ್ತು ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಭಜನೆ ಸ್ಪರ್ದೇಯಲ್ಲಿ ಕಡಕೋಳ ಮಡಿವಾಳಪ್ಪ, ಸಂತ ಶಿಶುನಾಳ ಶರೀಫರು ಕನಕದಾಸರು ಮತ್ತು ಪುರಂದರದಾಸರುಗಳು ರಚಿತ ಸಾಹಿತ್ಯದ ಹಾಡುಗಳನ್ನು ಮಾತ್ರ ಈ ಸ್ಪರ್ದೇಯಲ್ಲಿ ಕಲಾವಿದರು ಹಾಡಬೇಕು. ಸ್ಪರ್ದೇಯ ಪ್ರಥಮ ವಿಜೇತ ತಂಡಕ್ಕೆ ೫೦ ಸಾವಿರ ರೂಪಾಯಿ, ದ್ವೀತಿಯ ತಂಡಕ್ಕೆ ೨೫ ಸಾವಿರ ಮತ್ತು ತೃತಿಯ ಸ್ಥಾನ ಪಡೆಯುವ ತಂಡಕ್ಕೆ ೧೫ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸದ ಅವರು ಹಿಂದಿನಿ0ದಲೂ ಭಜನೆ ಪದಗಳು ಹಿರಿಯ ಕಲಾಜೀವಿಗಳು ಹಾಡುತ್ತಲೇ ಬಂದಿದ್ದಾರೆ. ಅವರುಗಳಲ್ಲಿ ಅದೇಷ್ಟೋ ಸಂಖ್ಯೆಯಲ್ಲಿ ಮರೆಯಾಗಿದ್ದಾರೆ. ಅಳಿದುಳಿದ ಕಲಾವಿದರಿಗೆ ಪ್ರೋತ್ಸಾಹ ನೀಡಿ ಇಂದಿನ ಯುವ ಕಲಾವಿದರು ಪ್ರೇರಣೆಗೊಂಡು ಭಜನೆ ಹಾಡುಗಳನ್ನು ಹಾಡುವಂತೆ ಮಾದರಿಯನ್ನಾಗಿ ಮಾಡುವ ಈ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಪೃಥ್ವಿರಾಜ್ ಎಸ್, ಸುನೀಲಕುಮಾರ ಕುಲಕರ್ಣಿ, ನಾಗಶೆಟ್ಟಿ ಧರಮಪೂರ್, ಸುನೀಲ ಭಾವಿಕಟ್ಟಿ,  ಸೇರಿದಂತೆ ಇತರರು ಇದ್ದರು.


ರೈತರಲ್ಲಿ ಹೊಸ ಅವಿಷ್ಕಾರಗಳ ಕಲ್ಪನೆ ಅಗತ್ಯ : ಭಾಂಡಗೆ

 ೨ನೇ ದಿನದ ತೋಟಗಾರಿಕೆ ಮೇಳ | ಫಲಶ್ರೇಷ್ಠ ರೈತರಿಗೆ ಸನ್ಮಾನ

ಬಾಗಲಕೋಟೆ : ರೈತರಿಗೆ ಅನೇಕ ರೀತಿಯ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ಕಲ್ಪನೆ ಕೊಟ್ಟು ಇಳುವರಿ ಹೆಚ್ಚಿನ ಪ್ರಮಾಣ ಪಡೆದು ಆರ್ಥಿಕವಾಗಿ ಬಲಿಷ್ಟವಾಗುವಂತೆ ಮಾಡುವ ಕೆಲಸ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಗಡೆ ಹೇಳಿದರು.

ತೋವಿವಿಯ ಉದ್ಯಾನಗಿರಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ೮ ಜಿಲ್ಲೆಯ ಫಲಶ್ರೇಷ್ಠ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು ವಿಜ್ಞಾನಿಗಳು ಅವಿಷ್ಕಾರ ಮಾಡಿ ಹೊರತಂದ ಅನೇಕ ವಿಧದ ತಳಿಗಳು, ಅವಿಷ್ಕಾರಗಳನ್ನು ನೋಡಿ ತಿಳಿದುಕೊಂಡು ಅವುಗಳ ಕಲ್ಪನೆ ಮೂಡಿದಾಗ ಮಾತ್ರ ತೋಟಗಾರಿಕೆ ಮೇಳ ಏರ್ಪಡಿಸಿದ್ದಕ್ಕೆ ಸಾರ್ಥಕ ಪಡೆದುಕೊಳ್ಳುತ್ತದೆ. ಇದರಿಂದ ರೈತನ ಸಮಗ್ರ ಬೇಸಾಯ ಪದ್ದತಿಯಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕೀಟಗಳನ್ನು ನಾಶ ಮಾಡಲು ಕೀಟನಾಶಕ ಔಷಧಿಗಳ ಸಿಂಪರಣೆ ಮಾಡುತ್ತೇವೆ. ಆದರೆ ಎಲ್ಲ ಕೀಟಗಳು ಬೆಳೆಗಳನ್ನು ನಾಶ ಮಾಡುವದಿಲ್ಲ. ೧೦೦ಕ್ಕೆ ೯೯ ರಷ್ಟು ಕೀಟಗಳು ರೈತ ಮಿತ್ರವಾಗಿರುತ್ತವೆ. ಪ್ರತಿಶತ ಒಂದು ರಷ್ಟು ಕೀಟಗಳು ಮಾತ್ರ ಬೆಳೆಗಳನ್ನು ನಾಶ ಮಾಡುತ್ತವೆ. ರೈತ ಏನೇಲ್ಲ ಸಾಧಿಸಬಹುದು ಎಂಬುದರ ವಿಶ್ವಾಸ ಮೂಡಿಸುವ ಕಾರ್ಯ ತೋಟಗಾರಿಕೆ ವಿಶ್ವವಿದ್ಯಾಲಯ ಮಾಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಇನ್ನು ಹೆಚ್ಚಿನ ಸಂಶೋಧನೆ ನಡೆಸಲಿ ಕೇಂದ್ರ ಸರಕಾರದಿಂದ ಏನೇನು ಬೇಕು ಅವುಗಳನ್ನು ಕೊಡಿಸುವ ಪ್ರಾಮಾಣಿಕ ಪ್ರಂiÀiತ್ನ ಮಾಡುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ ಬಯಲು ಸೀಮೆ ಎನಿಸಿರುವ ಬಾಗಲಕೋಟೆ ಜಿಲ್ಲೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ವಿಶ್ವವಿದ್ಯಾಲಯ ಈ ಭಾಗದ ಹೆಮ್ಮೆಯ ಕೊಡುಗೆಯಾಗಿದ್ದು, ಕೃಷಿಪ್ರಧಾನವಾಗಿರುವ ಬಾಗಲಕೋಟೆ ಹಾಗೂ ಉತ್ತರ ಕನ್ನಡ ಭಾಗದ ಅನೇಕ ಜಿಲ್ಲೆಗಳಲ್ಲಿ ಇನ್ನು ಮುಂದೆ ವಿಫುಲವಾಗಿ ತೋಟಗಾರಿಕೆ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ನೆಲದಲ್ಲಿ ಅಧಿಕ ಪ್ರಮಾಣದ ದಾಳಿಂಬೆ, ಮಾವು, ದ್ರಾಕ್ಷಿ, ಚಿಕ್ಕು ಹಣ್ಣುಗಳ ಬೆಳೆಗಳಿಗೆ ಹೇಳಿ ಮಾಡಿಸಿದ ನೆಲ ಇಲ್ಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯ ಹಿನ್ನೀರು ರೈತರಿಗೆ ವರದಾನವಾಗಿದೆ. ಈ ಭಾಗದಲ್ಲಿ ದಾಳಿಂಬೆ ಬೆಳೆಗೆ ವಿಫುಲ ಅವಕಾಶ ದೊರಕಿಸಿಕೊಡಬೇಕಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ತೋವಿವಿಯಲ್ಲಿ ಜಗತ್ತಿನಲ್ಲಿ ಬೆಳೆಯಬಹುದಾದ ಎಲ್ಲ ತರಹದ ಹೂ, ಹಣ್ಣುಗಳನ್ನು ಬೆಳೆಯುವಂತಾಗಿ ಈ ಭಾಗದ ರೈತ ಆರ್ಥಿಕವಾಗಿ ಪ್ರಭಲವಾಗಿ ಬೆಳೆಯವಂತಾಗಬೇಕು ಎಂದರು.

ಈ ಸಂದರ್ಬಧಲ್ಲಿ ತೋಟಗಾರಿಕೆ ಮೇಳದ ಮಾಹಿತಿಯನ್ನು ತ್ವರಿತವಾಗಿ ಪ್ರಕ್ರಿಯೆ ನೀಡುವ ಜಾಲತಾಣಗಳ ಕ್ಯೂಆರ್ ಕೋಡಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ, ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಡೀನ್ ಸ್ನಾತಕೋತ್ತರ ಡಾ.ಲಕ್ಷಿö್ಮÃನಾರಾಯಣ ಹೆಗಡೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ.ಆರ್.ಸಿ.ಜಗದೀಶ, ಬೆಂಗಳೂರಿನ ಕೃವಿವಿಯ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು, ಧಾರವಾಡ ಕೃವಿವಿಯ ವಿಸ್ತರಣಾ ನಿರ್ದೇಶಕ ಡಾ.ಬಸವರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫಲಶ್ರೇಷ್ಠ ರೈತರಿಗೆ ಸನ್ಮಾನ 

ಫಲಶ್ರೇಷ್ಠ ರೈತರಿಗೆ ಸನ್ಮಾನ : ಡಾ.ಎಸ್.ಪಿ.ಯೋಗಣ್ಣ (ಮೈಸೂರು), ಮಹಾದೇವಸ್ವಾಮಿ ಬಿ (ಚಾಮರಾಜನಗರ), ವಿ.ಆರ್.ರಾಮು (ಮಂಡ್ಯ), ಜಿ.ರವಿಕುಮಾರ (ಹಾಸನ), ಮಹಾಂತೇಶ ಪಟ್ಟಣಶೆಟ್ಟಿ (ಧಾರವಾಡ), ಅರವಿಂದ ಕಟಗಿ (ಗದಗ), ರಾಘವೇಂದ್ರ ಬಸವಂತ್ರಾಯ (ಯಾದಗಿರಿ), ದೊಡ್ಡಪ್ಪ ಅಡಿವೆಪ್ಪ ಹೂಲಿ (ಬೆಳಗಾವಿ).


ರೈತರ ಬೆಳೆಗೆ ಮೌಲ್ಯ ಕಟ್ಟಬಹುದು. ಶ್ರಮ ಅಮೂಲ್ಯವಾದದು. ರೈತನಿಗೆ ಸಕ್ಕರೆ ಕೊಡುವ ಮೂಲಕ ಅಕ್ಕರೆಯ ಅಭಿನಂದನೆ - ಶಿವರಾಜ ಅಂಡಗಿ


        ಕಲಬುರಗಿ  : ಇ0ದು ಡಿಸೆಂಬರ್ ೨೩ "ರಾಷ್ಟಿಯ ರೈತರ ದಿನಾಚರಣೆ" ನಿಮಿತ್ಯ ಜಗದ ಹಸಿವು ನೀಗಿಸುವ ಹಸಿದ ಹೊಟ್ಟಯ ಅನ್ನದಾತ, ಬೆವರಿನ ಶ್ರಮ ಮಣ್ಣಿನ ಮಮತೆಯ ಮಕ್ಕಳಾದ ರೈತರು ಹಗಲು-ಇರಳು, ಮಳೆ, ಬಿಸಿಲು ಗಾಳಿ ಚಳಿ ಎನ್ನದೇ ನಮ್ಮೆಲ್ಲರ ಆಹಾರ ಉತ್ಪಾದನೆ ಮಾಡುವ ಮೂಲಕ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈತರಿಗೆ ಸಕ್ಕರೆ ಕೊಡುವ ಮೂಲಕ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶೀಗಳಾದ ಶ್ರೀ ಶಿವರಾಜ ಅಂಡಗಿಯವರು ರೈತರಿಗೆ ಗೌರವಿಸಿ ಅಭಿನಂದಿಸಿದರು.


ಎರಡು ದಿನಗಳ ಹಿಂದೆ ಸಕ್ಕರೆಯ ನಾಡು ಅಕ್ಕರೆಯ ಬೀಡು ಮಂಡ್ಯ ಜಿಲ್ಲೆಯಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನಮಗೆಲ್ಲರಿಗೂ ಅಕ್ಕರೆಯ ಸಕ್ಕರೆಯ ಉಡಗೊರೆ ಕೊಟ್ಟು ಗೌರವಿಸಿದ್ದಾರೆಂದು ಸ್ಮರಿಸಿಕೊಳ್ಳುತ್ತಾ ಈ ವರ್ಷ ಎಲ್ಲಾ ಬೆಳೆಗಳು ಚೆನ್ನಾಗಿ ಬೆಳೆದು ಉತ್ತಮ ಬೆಲೆ ಬಂದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ರೈತ ಸಮುದಾಯಕ್ಕೆ ಸಂತೋಷ ಒದಗಿಸಲಿ ಎಂದು ಹಾರೈಸಿ ಶುಭಾಶಯ ಕೋರಿದ್ದಾರೆ.



ದಾನಿ ಬಾಬುರಾವ ಅವರಿಗೆ ಮಂಡ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ

 ಇದೇ ಡಿಸೆಂಬರ್ 20,21 ಮತ್ತು 22 ರಂದು ಸಕ್ಕರೆ ನಾಡು‌ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯ ನಿವೃತ್ತ ಮುಖ್ಯಗುರುಗಳಾದ ಶ್ರೀ ದಾನಿ ಬಾಬುರಾವ ಅವರನ್ನು‌ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ, ಕೃಷಿ ಸಚಿವ ಚಲುವರಾಯ ಸ್ವಾಮಿ, ಕಸಾಪ ರಾಜ್ಯಾಧ್ಯಕ್ಷ ನಾಡೋಜ‌ ಮಹೇಶ ಜೋಶಿ, ಬೀದರ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ವೇದಿಕೆಯಲ್ಲಿದ್ದರು.




ದಾನಿ ಬಾಬುರಾವ ಅವರಿಗೆ ಪರಿಷತ್ತಿನ ಗೌರವ ಸನ್ಮಾನ ದೊರೆತದ್ದಕ್ಕಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಗೌರವ ಕಾರ್ಯದರ್ಶಿಗಳಾದ ಪ್ರೊ.ಶಿವಕುಮಾರ ಕಟ್ಟೆ, ಟಿ.ಎಂ.ಮಚ್ಚೆ, ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ, ಡಾ.ಬಸವರಾಜ ಬಲ್ಲೂರ್, ಬೀದರ ತಾಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್.ಮನೋಹರ, ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗಿರಾ, ವೀರೇಶ್ ಸ್ವಾಮಿ, ಆಕಾಶ ಕೋಟೆ ಮುಂತಾದವರು ಅಭಿನಂದಿಸಿದ್ದಾರೆ. 

ದಾನಿ ಬಾಬುರಾವ ಅವರು ಹೆಚ್.ಕೆ.ಇ.ಸಂಸ್ಥೆಯ ಪ್ರೌಡ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಗುರುಗಳಾಗಿ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮಂಡ್ಯ ಸಮ್ಮೇಳನದಲ್ಲಿ ಗೌರವಿಸಲಾಗಿದೆ. 

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...